<p>ಒಮ್ಮೆ ಪ್ರೀತಿಸುವ, ಇನ್ನೊಮ್ಮೆ ಕೋಪಿಸಿಕೊಳ್ಳುವ ಯುವ ದಂಪತಿ, ಪ್ರೀತಿಯನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟು ಹುಡುಗಿ ಹಿಂದೆ ಅಲೆಯುವ ಹುಡುಗ, ಪದೇ ಪದೇ ಕೆಲಸ ಬದಲಿಸುವ ವ್ಯಕ್ತಿ, ತನಗೆ ಏನು ಬೇಕು ಎಂಬ ಸ್ಪಷ್ಟ ಅರಿವಿಲ್ಲದೇ ಹುಡುಕಾಟದಲ್ಲಿ ತೊಡಗಿದ ಉತ್ಸಾಹಿ ಯುವಕ, ಅವರು ಹೋಗುವೆಡೆಗಳಲ್ಲಿ `ನೀನೇ ಸಾಕಿದ ಗಿಣಿ..~ ಎಂದು ಹಾಡುತ್ತಾ ದುತ್ತನೆ ಎದುರಾಗುವ ಹುಚ್ಚ.<br /> <br /> ಇಷ್ಟು ಸೀಮಿತ ಪಾತ್ರಗಳನ್ನು ಇಟ್ಟುಕೊಂಡು `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ರೂಪಿಸಿದೆ ದರ್ಪಣ ತಂಡ. ಇದರಲ್ಲಿ ಮಹಾನಗರದ ಜಂಜಡದ ಬದುಕಿನಲ್ಲಿ ತಂದೆ ತಾಯಿಗಳಿಂದ ದೂರವಾಗಿ ಬದುಕುತ್ತಿರುವ ಸಣ್ಣಪ್ರಾಯದ ದಂಪತಿಯ ಕತೆ ಹೆಚ್ಚು ಆಪ್ತ ಎನಿಸುತ್ತದೆ. <br /> <br /> ಏಕತಾನತೆಯಿಂದ ಬೇಸತ್ತು ಥ್ರಿಲ್ಗಾಗಿ ಮಿಡಿದು ದುರಂತ ಅಂತ್ಯ ಕಾಣುವ ಈ ಕತೆಯೊಳಗೆ ಭಾವನೆಗಳ ಮಹಾಪೂರವೇ ಇದೆ. ಹುಡುಗಿಯನ್ನು ನೋಡುತ್ತಾ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವ ಯುವಕನ ಕತೆ ಹೊಸತೇನೂ ಅಲ್ಲ. <br /> <br /> ಆದರೆ ಒಂದು ಕಡೆ ನೆಲೆ ನಿಲ್ಲದೆ ನಿರಂತರವಾಗಿ ಉದ್ಯೋಗ ಬದಲಿಸುವ ವ್ಯಕ್ತಿ ನಮ್ಮ ನಡುವೆಯೂ ಇದ್ದಾನೆ ಎನಿಸದೇ ಇರದು. ಹೀಗೆ ಚಿಕ್ಕ ಕತೆಯನ್ನು ಉತ್ತಮ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ದಾಟಿಸಿದ್ದಾರೆ ನಿರ್ದೇಶಕ ಕೆ ಶ್ರೀ.<br /> <br /> ನಟ ನಂಜುಂಡ, ಸಂಗೀತ ನಿರ್ದೇಶಕ ಸಾಯಿಕಿರಣ್ ಮತ್ತು ನಿರ್ದೇಶಕ ಕೆ ಶ್ರೀ ಅವರ ಮೂವರ ತಂಡ ದರ್ಪಣ. `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ಅವರ ತಾಲೀಮಿನಂಥ ಸಿನಿಮಾ ಎನ್ನಬಹುದು.<br /> <br /> ಒಂದು ವರ್ಷದ ಹಿಂದೆ ಈ ತಂಡ ಒಂದು ಸಂಪೂರ್ಣ ಸಿನಿಮಾದ ಸ್ಕ್ರಿಪ್ಟ್ ಮಾಡಿದೆ. ಅದಕ್ಕೆ ನಿರ್ಮಾಪಕರು ಸಿಗದೇ ಹೋದಾಗ ಸಣ್ಣದೊಂದು ಕಿರುಚಿತ್ರ ಮಾಡಿ ತಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ತೋರಿಸಲು ನಿರ್ಧರಿಸಿದೆ. ನಿರ್ಮಾಪಕ ಗೆಳೆಯರ ಸಹಕಾರದಿಂದ ಇದೀಗ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದೆ. <br /> <br /> `ಈ ಕಿರುಚಿತ್ರದ ಕಾನ್ಸೆಪ್ಟ್ಗಿಂತಲೂ ನಮ್ಮ ಉದ್ದೇಶ ನಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ಹೇಳುವುದು~ ಎನ್ನುತ್ತಾರೆ ನಟ ನಂಜುಂಡ.<br /> <br /> ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿ ಗಮನಸೆಳೆದ ನಂಜುಂಡ ಅವರಿಗೆ ನಂತರದಲ್ಲಿ ಉತ್ತಮ ಅವಕಾಶಗಳು ಬರಲಿಲ್ಲ. ಅದಕ್ಕೆ ನೊಂದುಕೊಳ್ಳುವ ಅವರು ಪರಭಾಷೆಯಲ್ಲಿ ಅವಕಾಶ ಅರಸಿ ಹೋಗುತ್ತಿರುವುದಾಗಿ ಹೇಳುತ್ತಾರೆ.<br /> <br /> `ಮಿಸ್ಟರಿ~ಯಂಥ ಕತೆ ಹೊಂದಿರುವ 34 ನಿಮಿಷದ ಈ ಕಿರುಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ದರ್ಪಣ ತಂಡ ಚಿತ್ರೀಕರಣಕ್ಕೆ ತೆಗೆದುಕೊಂಡ ಕಾಲಾವಕಾಶ ಕೇವಲ 4 ದಿನಗಳು ಮಾತ್ರ. ಚಿತ್ರದಲ್ಲಿ ನಟಿಸಿರುವ ನಂಜುಂಡ, ನಾಜಿಯಾ, ಗಿರೀಶ್ ಭಟ್, ಸುರಭಿ ವಸಿಷ್ಠ, ವಿಜಯ್, ಮಾಲತೇಶ್, ಕಾರ್ತಿಕ್ ಪಾಂಡವಪುರ ಅವರ ಕೆಲಸದಲ್ಲಿ ಶ್ರದ್ಧೆ ಕಾಣುತ್ತದೆ. <br /> <br /> `ಲೈಫು ಇಷ್ಟೇನೆ~ ಚಿತ್ರದ ನಿರ್ದೇಶಕ ಪವನ್ ಅವರ ಹೋಮ್ ಥಿಯೇಟರ್ನಲ್ಲಿ ಕಿರುಚಿತ್ರ ಪ್ರದರ್ಶಿಸುವ ಹಂಬಲ ವ್ಯಕ್ತಪಡಿಸುವ ದಪರ್ಣ ತಂಡ `ಇದು ಕೇವಲ ನಮ್ಮ ತಂಡದ ತಾಲೀಮು. ಇದಕ್ಕಿಂತಲೂ ದೊಡ್ಡ ಕನಸು ನಮಗಿದೆ~ ಎನ್ನುವುದನ್ನು ಮರೆಯುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಮ್ಮೆ ಪ್ರೀತಿಸುವ, ಇನ್ನೊಮ್ಮೆ ಕೋಪಿಸಿಕೊಳ್ಳುವ ಯುವ ದಂಪತಿ, ಪ್ರೀತಿಯನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟು ಹುಡುಗಿ ಹಿಂದೆ ಅಲೆಯುವ ಹುಡುಗ, ಪದೇ ಪದೇ ಕೆಲಸ ಬದಲಿಸುವ ವ್ಯಕ್ತಿ, ತನಗೆ ಏನು ಬೇಕು ಎಂಬ ಸ್ಪಷ್ಟ ಅರಿವಿಲ್ಲದೇ ಹುಡುಕಾಟದಲ್ಲಿ ತೊಡಗಿದ ಉತ್ಸಾಹಿ ಯುವಕ, ಅವರು ಹೋಗುವೆಡೆಗಳಲ್ಲಿ `ನೀನೇ ಸಾಕಿದ ಗಿಣಿ..~ ಎಂದು ಹಾಡುತ್ತಾ ದುತ್ತನೆ ಎದುರಾಗುವ ಹುಚ್ಚ.<br /> <br /> ಇಷ್ಟು ಸೀಮಿತ ಪಾತ್ರಗಳನ್ನು ಇಟ್ಟುಕೊಂಡು `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ರೂಪಿಸಿದೆ ದರ್ಪಣ ತಂಡ. ಇದರಲ್ಲಿ ಮಹಾನಗರದ ಜಂಜಡದ ಬದುಕಿನಲ್ಲಿ ತಂದೆ ತಾಯಿಗಳಿಂದ ದೂರವಾಗಿ ಬದುಕುತ್ತಿರುವ ಸಣ್ಣಪ್ರಾಯದ ದಂಪತಿಯ ಕತೆ ಹೆಚ್ಚು ಆಪ್ತ ಎನಿಸುತ್ತದೆ. <br /> <br /> ಏಕತಾನತೆಯಿಂದ ಬೇಸತ್ತು ಥ್ರಿಲ್ಗಾಗಿ ಮಿಡಿದು ದುರಂತ ಅಂತ್ಯ ಕಾಣುವ ಈ ಕತೆಯೊಳಗೆ ಭಾವನೆಗಳ ಮಹಾಪೂರವೇ ಇದೆ. ಹುಡುಗಿಯನ್ನು ನೋಡುತ್ತಾ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವ ಯುವಕನ ಕತೆ ಹೊಸತೇನೂ ಅಲ್ಲ. <br /> <br /> ಆದರೆ ಒಂದು ಕಡೆ ನೆಲೆ ನಿಲ್ಲದೆ ನಿರಂತರವಾಗಿ ಉದ್ಯೋಗ ಬದಲಿಸುವ ವ್ಯಕ್ತಿ ನಮ್ಮ ನಡುವೆಯೂ ಇದ್ದಾನೆ ಎನಿಸದೇ ಇರದು. ಹೀಗೆ ಚಿಕ್ಕ ಕತೆಯನ್ನು ಉತ್ತಮ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ದಾಟಿಸಿದ್ದಾರೆ ನಿರ್ದೇಶಕ ಕೆ ಶ್ರೀ.<br /> <br /> ನಟ ನಂಜುಂಡ, ಸಂಗೀತ ನಿರ್ದೇಶಕ ಸಾಯಿಕಿರಣ್ ಮತ್ತು ನಿರ್ದೇಶಕ ಕೆ ಶ್ರೀ ಅವರ ಮೂವರ ತಂಡ ದರ್ಪಣ. `ನೀವೂ ಸರದಿಯಲ್ಲಿದ್ದೀರಿ..~ ಕಿರುಚಿತ್ರ ಅವರ ತಾಲೀಮಿನಂಥ ಸಿನಿಮಾ ಎನ್ನಬಹುದು.<br /> <br /> ಒಂದು ವರ್ಷದ ಹಿಂದೆ ಈ ತಂಡ ಒಂದು ಸಂಪೂರ್ಣ ಸಿನಿಮಾದ ಸ್ಕ್ರಿಪ್ಟ್ ಮಾಡಿದೆ. ಅದಕ್ಕೆ ನಿರ್ಮಾಪಕರು ಸಿಗದೇ ಹೋದಾಗ ಸಣ್ಣದೊಂದು ಕಿರುಚಿತ್ರ ಮಾಡಿ ತಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ತೋರಿಸಲು ನಿರ್ಧರಿಸಿದೆ. ನಿರ್ಮಾಪಕ ಗೆಳೆಯರ ಸಹಕಾರದಿಂದ ಇದೀಗ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದೆ. <br /> <br /> `ಈ ಕಿರುಚಿತ್ರದ ಕಾನ್ಸೆಪ್ಟ್ಗಿಂತಲೂ ನಮ್ಮ ಉದ್ದೇಶ ನಮಗೂ ಸಿನಿಮಾ ಮಾಡಲು ಬರುತ್ತದೆ ಎಂದು ಹೇಳುವುದು~ ಎನ್ನುತ್ತಾರೆ ನಟ ನಂಜುಂಡ.<br /> <br /> ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿ ಗಮನಸೆಳೆದ ನಂಜುಂಡ ಅವರಿಗೆ ನಂತರದಲ್ಲಿ ಉತ್ತಮ ಅವಕಾಶಗಳು ಬರಲಿಲ್ಲ. ಅದಕ್ಕೆ ನೊಂದುಕೊಳ್ಳುವ ಅವರು ಪರಭಾಷೆಯಲ್ಲಿ ಅವಕಾಶ ಅರಸಿ ಹೋಗುತ್ತಿರುವುದಾಗಿ ಹೇಳುತ್ತಾರೆ.<br /> <br /> `ಮಿಸ್ಟರಿ~ಯಂಥ ಕತೆ ಹೊಂದಿರುವ 34 ನಿಮಿಷದ ಈ ಕಿರುಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ದರ್ಪಣ ತಂಡ ಚಿತ್ರೀಕರಣಕ್ಕೆ ತೆಗೆದುಕೊಂಡ ಕಾಲಾವಕಾಶ ಕೇವಲ 4 ದಿನಗಳು ಮಾತ್ರ. ಚಿತ್ರದಲ್ಲಿ ನಟಿಸಿರುವ ನಂಜುಂಡ, ನಾಜಿಯಾ, ಗಿರೀಶ್ ಭಟ್, ಸುರಭಿ ವಸಿಷ್ಠ, ವಿಜಯ್, ಮಾಲತೇಶ್, ಕಾರ್ತಿಕ್ ಪಾಂಡವಪುರ ಅವರ ಕೆಲಸದಲ್ಲಿ ಶ್ರದ್ಧೆ ಕಾಣುತ್ತದೆ. <br /> <br /> `ಲೈಫು ಇಷ್ಟೇನೆ~ ಚಿತ್ರದ ನಿರ್ದೇಶಕ ಪವನ್ ಅವರ ಹೋಮ್ ಥಿಯೇಟರ್ನಲ್ಲಿ ಕಿರುಚಿತ್ರ ಪ್ರದರ್ಶಿಸುವ ಹಂಬಲ ವ್ಯಕ್ತಪಡಿಸುವ ದಪರ್ಣ ತಂಡ `ಇದು ಕೇವಲ ನಮ್ಮ ತಂಡದ ತಾಲೀಮು. ಇದಕ್ಕಿಂತಲೂ ದೊಡ್ಡ ಕನಸು ನಮಗಿದೆ~ ಎನ್ನುವುದನ್ನು ಮರೆಯುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>