<p>ಇತ್ತೀಚಿಗಷ್ಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಪುಂಡಲೀಕ ಹಾಲಂಬಿರವರು ಸಭೆ ಸಮಾರಂಭಗಳಲ್ಲಿ ಮೂರು ವರ್ಷಕ್ಕೊಂದು ಸಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತೇವೆ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೆಷ್ಟು ಸರಿ! <br /> <br /> ಜಾಗತೀಕರಣ ಹಾಗೂ ಪರಭಾಷೆಗಳ ಸ್ಪರ್ಧೆಯ ಎದುರು ಕಳೆಗುಂದುತ್ತಿರುವ ಕನ್ನಡವನ್ನು ಸದೃಢವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹತ್ವಪೂರ್ಣ ಸಂಸ್ಥೆಗಳು ಸಾಕಷ್ಟು ಶ್ರಮಿಸಬೇಕಿದೆ. <br /> <br /> ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ಕನ್ನಡಿಗರನ್ನು ಒಂದುಗೂಡಿಸುವ, ಕನ್ನಡತನವನ್ನು ಮೆರೆಸುವ, ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಜಗಜ್ಜಾಹಿರಾಗಿಸುವ ಉತ್ಸವಗಳು. ಇಂತಹ ಉತ್ಸವಗಳನ್ನು, ಹಬ್ಬಗಳನ್ನು ಕನ್ನಡಿಗರು ಮರೆಯದಂತೆ ಪ್ರತಿ ವರ್ಷವೂ ಬೃಹತ್ತಾಗಿ ಎಲ್ಲರೂ ಒಂದಾಗಿ ಆಚರಿಸಬೇಕಿದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ರಾಜ್ಯಾಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರು `ಮೂರು ವರ್ಷಕ್ಕೊಂದು ಸಮ್ಮೇಳನ~ ಎಂಬ ಹೇಳಿಕೆಗಳನ್ನು ಕೊಟ್ಟು ಎಲ್ಲರನ್ನೂ ದಂಗುಬಡಿಸುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ಮೂರೇ ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗುವ ಇವರು ಒಂದೇ ಒಂದು ಸಮ್ಮೇಳನವನ್ನು ನಡೆಸಿದರೆ ಇದರಿಂದ ಕನ್ನಡಿಗರಿಗಾಗುವ ಲಾಭ ಏನು?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚಿಗಷ್ಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಪುಂಡಲೀಕ ಹಾಲಂಬಿರವರು ಸಭೆ ಸಮಾರಂಭಗಳಲ್ಲಿ ಮೂರು ವರ್ಷಕ್ಕೊಂದು ಸಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತೇವೆ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೆಷ್ಟು ಸರಿ! <br /> <br /> ಜಾಗತೀಕರಣ ಹಾಗೂ ಪರಭಾಷೆಗಳ ಸ್ಪರ್ಧೆಯ ಎದುರು ಕಳೆಗುಂದುತ್ತಿರುವ ಕನ್ನಡವನ್ನು ಸದೃಢವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹತ್ವಪೂರ್ಣ ಸಂಸ್ಥೆಗಳು ಸಾಕಷ್ಟು ಶ್ರಮಿಸಬೇಕಿದೆ. <br /> <br /> ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ಕನ್ನಡಿಗರನ್ನು ಒಂದುಗೂಡಿಸುವ, ಕನ್ನಡತನವನ್ನು ಮೆರೆಸುವ, ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಜಗಜ್ಜಾಹಿರಾಗಿಸುವ ಉತ್ಸವಗಳು. ಇಂತಹ ಉತ್ಸವಗಳನ್ನು, ಹಬ್ಬಗಳನ್ನು ಕನ್ನಡಿಗರು ಮರೆಯದಂತೆ ಪ್ರತಿ ವರ್ಷವೂ ಬೃಹತ್ತಾಗಿ ಎಲ್ಲರೂ ಒಂದಾಗಿ ಆಚರಿಸಬೇಕಿದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ರಾಜ್ಯಾಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರು `ಮೂರು ವರ್ಷಕ್ಕೊಂದು ಸಮ್ಮೇಳನ~ ಎಂಬ ಹೇಳಿಕೆಗಳನ್ನು ಕೊಟ್ಟು ಎಲ್ಲರನ್ನೂ ದಂಗುಬಡಿಸುತ್ತಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ಮೂರೇ ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗುವ ಇವರು ಒಂದೇ ಒಂದು ಸಮ್ಮೇಳನವನ್ನು ನಡೆಸಿದರೆ ಇದರಿಂದ ಕನ್ನಡಿಗರಿಗಾಗುವ ಲಾಭ ಏನು?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>