<p><strong>ಕನಕಪುರ:</strong> ತಾಲ್ಲೂಕಿನ ಕಬ್ಬಾಳಮ್ಮ ದೇವಿಯ ದರ್ಶನಕ್ಕೆಂದು ಬಂದ ಒಂದೇ ಕುಟುಂಬದ 9 ಮಂದಿ ಭೀಕರ ಅಪಘಾತದಲ್ಲಿ ಸಾವನಪ್ಪಿದ ದಾರುಣ ಘಟನೆ ಭಾನುವಾರ ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.<br /> ಮೃತರು ಬೆಂಗಳೂರಿನ ಕೆಂಗೇರಿ ಉಪನಗರದ ಬಳಿಯ ನಾಗದೇವನಹಳ್ಳಿ, ಮಾಗಡಿ ತಾಲ್ಲೂಕಿನ ಹಾಗಲಕೋಟೆಯ ಗೊಲ್ಲರಹಟ್ಟಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ.<br /> <br /> ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ನಾಲ್ವರು ಪುರುಷರು ಮೃತಪಟ್ಟಿದ್ದು ಅವರನ್ನು ಬಳೆ ತಿಪ್ಪಯ್ಯ, ಚಿಕ್ಕಣ್ಣ, ಎಲಿಯಪ್ಪ, ರಾಜು, ಗಂಗಮ್ಮ, ಚಿಕ್ಕಮ್ಮ, ಮಂಜು, ವೀರಣ್ಣ ಮತ್ತು ಚಿಕ್ಕರಾಜು ಎಂದು ಗುರುತಿಸಲಾಗಿದೆ.<br /> <br /> ಭಾನುವಾರ ರಜೆಯಿದ್ದುದರಿಂದ ಕುಟುಂಬ ಸದಸ್ಯರೆಲ್ಲಾ ಟಾಟಾ ಏಸ್ ವಾಹನ ಮಾಡಿಕೊಂಡು ಬೆಳಿಗ್ಗೆಯೇ ಕಬ್ಬಾಳು ಗ್ರಾಮಕ್ಕೆ ಬಂದ್ದ್ದಿದರು. ದೇವಿಯ ದರ್ಶನ ಪಡೆದು ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದರು. <br /> <br /> ಈ ಸಂದರ್ಭದಲ್ಲಿ ಇಂದಿರಾನಗರದ ಬಳಿಯ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಸೇತುವೆ ಮೇಲಿಂದ ಪಲ್ಟಿ ಹೊಡೆದಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 15 ಮಂದಿಯಿದ್ದು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಒಬ್ಬರು ಹಾಗೂ ಆಸ್ಪತ್ರೆಮೃತಪಟ್ಟಿದ್ದಾರೆ.<br /> 14 ಜನರು ಗಂಭೀರವಾಗಿ ಗಾಯಗೊಂಡಿದ್ದು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. <br /> <br /> <strong> ಆಕ್ರಂದನ:</strong> ಘಟನೆಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿ ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನೆರವಾದರು. ಗಾಯಾಳುಗಳ ಚೀರಾಟದ ಆಕ್ರಂದನ ಮುಗಿಲು ಮುಟ್ಟಿತ್ತು. <br /> <br /> <strong>ಮತ್ತೊಂದು ಅಪಘಾತ:</strong> ಚಾಲಕನ ನಿಯಂತ್ರಣ ತಪ್ಪಿದ ಇಂಡಿಕಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಹಾರೋಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿ ದೇವರ ಕಗ್ಗಲಹಳ್ಳಿ ಮತ್ತು ರಸ್ತೆ ಜಕ್ಕಸಂದ್ರ ಮಧ್ಯದಲ್ಲಿ ಭಾನುವಾರ ಸಂಭವಿಸಿದೆ. <br /> <br /> ಮೃತಪಟ್ಟವರನ್ನು ಹಾಸನ ಜಿಲ್ಲೆಯ ಅರಸಿಕೆರೆ ಗ್ರಾಮದ ವಾಸಿ ಸಂತೋಷ್ಕುಮಾರ್ (22) ಮತ್ತು ಬೆಂಗಳೂರಿನ ಪುಟ್ಟೇನಹಳ್ಳಿ ವಾಸಿ ಪ್ರಶಾಂತ್ (28) ಎಂದು ಗುರುತಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ತಾಲ್ಲೂಕಿನ ಕಬ್ಬಾಳಮ್ಮ ದೇವಿಯ ದರ್ಶನಕ್ಕೆಂದು ಬಂದ ಒಂದೇ ಕುಟುಂಬದ 9 ಮಂದಿ ಭೀಕರ ಅಪಘಾತದಲ್ಲಿ ಸಾವನಪ್ಪಿದ ದಾರುಣ ಘಟನೆ ಭಾನುವಾರ ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.<br /> ಮೃತರು ಬೆಂಗಳೂರಿನ ಕೆಂಗೇರಿ ಉಪನಗರದ ಬಳಿಯ ನಾಗದೇವನಹಳ್ಳಿ, ಮಾಗಡಿ ತಾಲ್ಲೂಕಿನ ಹಾಗಲಕೋಟೆಯ ಗೊಲ್ಲರಹಟ್ಟಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ.<br /> <br /> ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ನಾಲ್ವರು ಪುರುಷರು ಮೃತಪಟ್ಟಿದ್ದು ಅವರನ್ನು ಬಳೆ ತಿಪ್ಪಯ್ಯ, ಚಿಕ್ಕಣ್ಣ, ಎಲಿಯಪ್ಪ, ರಾಜು, ಗಂಗಮ್ಮ, ಚಿಕ್ಕಮ್ಮ, ಮಂಜು, ವೀರಣ್ಣ ಮತ್ತು ಚಿಕ್ಕರಾಜು ಎಂದು ಗುರುತಿಸಲಾಗಿದೆ.<br /> <br /> ಭಾನುವಾರ ರಜೆಯಿದ್ದುದರಿಂದ ಕುಟುಂಬ ಸದಸ್ಯರೆಲ್ಲಾ ಟಾಟಾ ಏಸ್ ವಾಹನ ಮಾಡಿಕೊಂಡು ಬೆಳಿಗ್ಗೆಯೇ ಕಬ್ಬಾಳು ಗ್ರಾಮಕ್ಕೆ ಬಂದ್ದ್ದಿದರು. ದೇವಿಯ ದರ್ಶನ ಪಡೆದು ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದರು. <br /> <br /> ಈ ಸಂದರ್ಭದಲ್ಲಿ ಇಂದಿರಾನಗರದ ಬಳಿಯ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಸೇತುವೆ ಮೇಲಿಂದ ಪಲ್ಟಿ ಹೊಡೆದಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 15 ಮಂದಿಯಿದ್ದು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಒಬ್ಬರು ಹಾಗೂ ಆಸ್ಪತ್ರೆಮೃತಪಟ್ಟಿದ್ದಾರೆ.<br /> 14 ಜನರು ಗಂಭೀರವಾಗಿ ಗಾಯಗೊಂಡಿದ್ದು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. <br /> <br /> <strong> ಆಕ್ರಂದನ:</strong> ಘಟನೆಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿ ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನೆರವಾದರು. ಗಾಯಾಳುಗಳ ಚೀರಾಟದ ಆಕ್ರಂದನ ಮುಗಿಲು ಮುಟ್ಟಿತ್ತು. <br /> <br /> <strong>ಮತ್ತೊಂದು ಅಪಘಾತ:</strong> ಚಾಲಕನ ನಿಯಂತ್ರಣ ತಪ್ಪಿದ ಇಂಡಿಕಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಹಾರೋಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿ ದೇವರ ಕಗ್ಗಲಹಳ್ಳಿ ಮತ್ತು ರಸ್ತೆ ಜಕ್ಕಸಂದ್ರ ಮಧ್ಯದಲ್ಲಿ ಭಾನುವಾರ ಸಂಭವಿಸಿದೆ. <br /> <br /> ಮೃತಪಟ್ಟವರನ್ನು ಹಾಸನ ಜಿಲ್ಲೆಯ ಅರಸಿಕೆರೆ ಗ್ರಾಮದ ವಾಸಿ ಸಂತೋಷ್ಕುಮಾರ್ (22) ಮತ್ತು ಬೆಂಗಳೂರಿನ ಪುಟ್ಟೇನಹಳ್ಳಿ ವಾಸಿ ಪ್ರಶಾಂತ್ (28) ಎಂದು ಗುರುತಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>