<p><strong>ನವದೆಹಲಿ, (ಪಿಟಿಐ): </strong>ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿ ಕುರಿತಂತೆ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿರುವಾಗಲೇ ಪಕ್ಷದ ಹಿರಿಯ ಧುರೀಣ ಯಶವಂತ ಸಿನ್ಹ `ಪ್ರಧಾನಿ ಹುದ್ದೆಗೆ ಅರ್ಹರಾದ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ~ ಎಂದು ಗುರುವಾರ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.<br /> <br /> `ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರಲ್ಲಿ ಪ್ರಧಾನಿ ಹುದ್ದೆಗೆ ಯಾರು ಹೆಚ್ಚು ಸೂಕ್ತ ಅಭ್ಯರ್ಥಿ~ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನಾನೂ ಸೇರಿದಂತೆ ಆ ಹುದ್ದೆಗೆ ಅರ್ಹರಾದ ಅನೇಕರು ಪಕ್ಷದಲ್ಲಿದ್ದಾರೆ.<br /> <br /> ಆ ಹುದ್ದೆಗೆ ಯಾವಾಗ ಮತ್ತು ಯಾರನ್ನು ಬಿಂಬಿಸಬೇಕು ಎನ್ನುವುದನ್ನು ಪಕ್ಷ ಲೋಕಸಭಾ ಚುನಾವಣೆಗೂ ಮುನ್ನ ತೀರ್ಮಾನಿಸಲಿದೆ~ ಎಂದರು. <br /> <br /> `ನೀವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ~ ಎಂಬ ಪ್ರಶ್ನೆಗೆ ತಕ್ಷಣ ಅವರಿಂದ `ಯಾಕಾಗಬಾರದು...?~ ಎಂಬ ಮಾರುತ್ತರ ತೂರಿಬಂತು. <br /> <br /> `ಹೌದು, ನಾನೂ ಕೂಡ ಆಕಾಂಕ್ಷಿಯೇ. ನನ್ನ ಸಾಮರ್ಥ್ಯದ ಬಗ್ಗೆ ಅನುಮಾನವೇ?~ ಎಂದು ಅವರು ಮರು ಪ್ರಶ್ನಿಸಿದರು. `ಅಡ್ವಾಣಿ ಮತ್ತು ಮೋದಿ ಅವರ ನಡುವೆ ಭಿನ್ನಾಭಿಪ್ರಾಯ ಕೇವಲ ಮಾಧ್ಯಮಗಳು ಹುಟ್ಟು ಹಾಕಿರುವ ಕಥೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.<br /> <br /> ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆಗಳು ಕಾಂಗ್ರೆಸ್ನಲ್ಲಿ ಗರಿಗೆದರುತ್ತಿವೆ. ಇದೇ ತೆರನಾದ ಕಥೆಯನ್ನು ಮಾಧ್ಯಮಗಳು ನಮ್ಮ ಪಕ್ಷಕ್ಕೂ ಥಳಕು ಹಾಕಿವೆ~ ಎಂದರು.<br /> <br /> <strong>ಉಮಾ ಬೆಂಬಲ: </strong>ವಾರಣಾಸಿಯಲ್ಲಿ ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಪಕ್ಷದ ನಾಯಕಿ ಉಮಾ ಭಾರತಿ, ಪ್ರಸ್ತುತ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಇರುವುದು ಅಡ್ವಾಣಿ ಅವರಂಥ ನಾಯಕರಿಗೆ ಮಾತ್ರ ಎಂದು ಹೇಳಿದರು.<br /> <br /> ನವೆಂಬರ್ಗೆ 84ನೇ ವಸಂತಕ್ಕೆ ಕಾಲಿಡುತ್ತಿರುವ ಅಡ್ವಾಣಿ ಅವರಲ್ಲಿನ ಚೈತನ್ಯ ಮತ್ತು ಹುಮ್ಮಸ್ಸು ಮಾತ್ರ ಇನ್ನೂ 12ರ ಹರೆಯದ ಬಾಲಕನದ್ದು ಎನ್ನುವ ಮೂಲಕ ನಾಯಕತ್ವಕ್ಕೆ ವಯಸ್ಸು ಅಡ್ಡಿಯಾಗದು ಎಂಬುದನ್ನು ಸೂಚ್ಯವಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, (ಪಿಟಿಐ): </strong>ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿ ಕುರಿತಂತೆ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿರುವಾಗಲೇ ಪಕ್ಷದ ಹಿರಿಯ ಧುರೀಣ ಯಶವಂತ ಸಿನ್ಹ `ಪ್ರಧಾನಿ ಹುದ್ದೆಗೆ ಅರ್ಹರಾದ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ~ ಎಂದು ಗುರುವಾರ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.<br /> <br /> `ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರಲ್ಲಿ ಪ್ರಧಾನಿ ಹುದ್ದೆಗೆ ಯಾರು ಹೆಚ್ಚು ಸೂಕ್ತ ಅಭ್ಯರ್ಥಿ~ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನಾನೂ ಸೇರಿದಂತೆ ಆ ಹುದ್ದೆಗೆ ಅರ್ಹರಾದ ಅನೇಕರು ಪಕ್ಷದಲ್ಲಿದ್ದಾರೆ.<br /> <br /> ಆ ಹುದ್ದೆಗೆ ಯಾವಾಗ ಮತ್ತು ಯಾರನ್ನು ಬಿಂಬಿಸಬೇಕು ಎನ್ನುವುದನ್ನು ಪಕ್ಷ ಲೋಕಸಭಾ ಚುನಾವಣೆಗೂ ಮುನ್ನ ತೀರ್ಮಾನಿಸಲಿದೆ~ ಎಂದರು. <br /> <br /> `ನೀವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ~ ಎಂಬ ಪ್ರಶ್ನೆಗೆ ತಕ್ಷಣ ಅವರಿಂದ `ಯಾಕಾಗಬಾರದು...?~ ಎಂಬ ಮಾರುತ್ತರ ತೂರಿಬಂತು. <br /> <br /> `ಹೌದು, ನಾನೂ ಕೂಡ ಆಕಾಂಕ್ಷಿಯೇ. ನನ್ನ ಸಾಮರ್ಥ್ಯದ ಬಗ್ಗೆ ಅನುಮಾನವೇ?~ ಎಂದು ಅವರು ಮರು ಪ್ರಶ್ನಿಸಿದರು. `ಅಡ್ವಾಣಿ ಮತ್ತು ಮೋದಿ ಅವರ ನಡುವೆ ಭಿನ್ನಾಭಿಪ್ರಾಯ ಕೇವಲ ಮಾಧ್ಯಮಗಳು ಹುಟ್ಟು ಹಾಕಿರುವ ಕಥೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.<br /> <br /> ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆಗಳು ಕಾಂಗ್ರೆಸ್ನಲ್ಲಿ ಗರಿಗೆದರುತ್ತಿವೆ. ಇದೇ ತೆರನಾದ ಕಥೆಯನ್ನು ಮಾಧ್ಯಮಗಳು ನಮ್ಮ ಪಕ್ಷಕ್ಕೂ ಥಳಕು ಹಾಕಿವೆ~ ಎಂದರು.<br /> <br /> <strong>ಉಮಾ ಬೆಂಬಲ: </strong>ವಾರಣಾಸಿಯಲ್ಲಿ ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಪಕ್ಷದ ನಾಯಕಿ ಉಮಾ ಭಾರತಿ, ಪ್ರಸ್ತುತ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಇರುವುದು ಅಡ್ವಾಣಿ ಅವರಂಥ ನಾಯಕರಿಗೆ ಮಾತ್ರ ಎಂದು ಹೇಳಿದರು.<br /> <br /> ನವೆಂಬರ್ಗೆ 84ನೇ ವಸಂತಕ್ಕೆ ಕಾಲಿಡುತ್ತಿರುವ ಅಡ್ವಾಣಿ ಅವರಲ್ಲಿನ ಚೈತನ್ಯ ಮತ್ತು ಹುಮ್ಮಸ್ಸು ಮಾತ್ರ ಇನ್ನೂ 12ರ ಹರೆಯದ ಬಾಲಕನದ್ದು ಎನ್ನುವ ಮೂಲಕ ನಾಯಕತ್ವಕ್ಕೆ ವಯಸ್ಸು ಅಡ್ಡಿಯಾಗದು ಎಂಬುದನ್ನು ಸೂಚ್ಯವಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>