<p>ದಾವಣಗೆರೆ: ಯಾವ ದೇವರೂ ಪ್ರಾಣಿ ಬಲಿಯಿಂದ ಒಲಿಯುವುದಿಲ್ಲ. ಕೆಲವು ಪಟ್ಟಭದ್ರರ ಕುಯುಕ್ತಿಯಿಂದ ಈ ಅನಿಷ್ಟ ಪದ್ಧತಿ ಬೆಳೆದು ಬಂದಿದೆ. ಇದರಿಂದ ಕೆಳವರ್ಗದವರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. <br /> - ಇದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿನುಡಿ.<br /> <br /> ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಪ್ರಾಣಿ ಬಲಿ ವಿರೋಧಿಸಿ ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಪ್ರಾಣಿ ಬಲಿಯ ಜತೆಗೆ ಹಲವಾರು ಸಾಮಾಜಿಕ ಅನಿಷ್ಟಗಳೂ ಹುಟ್ಟಿಕೊಳ್ಳುತ್ತವೆ. ಬಲಿಯನ್ನು ವೈಯಕ್ತಿಕವಾಗಿ ಎಲ್ಲರೂ ವಿರೋಧಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ವಿರೋಧ ಬರುವುದಿಲ್ಲ. ರಾಜಕಾರಣಿಗಳೂ ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ವೈದಿಕರ ಹೋಮ-ಹವನಗಳಲ್ಲಿ ಅಗಾಧ ಪ್ರಮಾಣದ ಅಕ್ಕಿ, ಹಾಲು, ತುಪ್ಪವನ್ನು ವ್ಯರ್ಥಗೊಳಿಸುವುದು ಸಲ್ಲದು. ಪತ್ರೆಯಲ್ಲಿ ಪೂಜಿಸಿದರೂ ದೇವರು ಒಲಿಯುತ್ತಾನೆ. ಈ ಬಗ್ಗೆ ಜಾಗೃತಿಗೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ನುಡಿದರು.<br /> <br /> ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಮಾತನಾಡಿ, ಪ್ರಾಣಿಬಲಿ ಕೊಡುವಲ್ಲಿ ಸಹಜವಾದ ಭಕ್ತಿ ಇರುವುದಿಲ್ಲ. ಈ ಬಗ್ಗೆ ಆಯಾ ಸಮಾಜದ ನೇತಾರರಿಗೆ ಮನವರಿಕೆ ಮಾಡಬೇಕು. ಪ್ರಗತಿಪರ ಚಿಂತನೆ, ಜನಜಾಗೃತಿ ಒಟ್ಟಿಗೇ ಆಗಬೇಕು ಎಂದು ಹೇಳಿದರು. <br /> <br /> ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ನಿಲ್ಲಬೇಕು. ಇಂಥ ಪದ್ಧತಿ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.<br /> <br /> ಮುಖಂಡರಾದ ಟಿ. ದಾಸಕರಿಯಪ್ಪ, ಆವರಗೆರೆ ಚಂದ್ರು, ಚಿಂತಕ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಯಾವ ದೇವರೂ ಪ್ರಾಣಿ ಬಲಿಯಿಂದ ಒಲಿಯುವುದಿಲ್ಲ. ಕೆಲವು ಪಟ್ಟಭದ್ರರ ಕುಯುಕ್ತಿಯಿಂದ ಈ ಅನಿಷ್ಟ ಪದ್ಧತಿ ಬೆಳೆದು ಬಂದಿದೆ. ಇದರಿಂದ ಕೆಳವರ್ಗದವರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. <br /> - ಇದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿನುಡಿ.<br /> <br /> ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಪ್ರಾಣಿ ಬಲಿ ವಿರೋಧಿಸಿ ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಪ್ರಾಣಿ ಬಲಿಯ ಜತೆಗೆ ಹಲವಾರು ಸಾಮಾಜಿಕ ಅನಿಷ್ಟಗಳೂ ಹುಟ್ಟಿಕೊಳ್ಳುತ್ತವೆ. ಬಲಿಯನ್ನು ವೈಯಕ್ತಿಕವಾಗಿ ಎಲ್ಲರೂ ವಿರೋಧಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ವಿರೋಧ ಬರುವುದಿಲ್ಲ. ರಾಜಕಾರಣಿಗಳೂ ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ವೈದಿಕರ ಹೋಮ-ಹವನಗಳಲ್ಲಿ ಅಗಾಧ ಪ್ರಮಾಣದ ಅಕ್ಕಿ, ಹಾಲು, ತುಪ್ಪವನ್ನು ವ್ಯರ್ಥಗೊಳಿಸುವುದು ಸಲ್ಲದು. ಪತ್ರೆಯಲ್ಲಿ ಪೂಜಿಸಿದರೂ ದೇವರು ಒಲಿಯುತ್ತಾನೆ. ಈ ಬಗ್ಗೆ ಜಾಗೃತಿಗೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ನುಡಿದರು.<br /> <br /> ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಮಾತನಾಡಿ, ಪ್ರಾಣಿಬಲಿ ಕೊಡುವಲ್ಲಿ ಸಹಜವಾದ ಭಕ್ತಿ ಇರುವುದಿಲ್ಲ. ಈ ಬಗ್ಗೆ ಆಯಾ ಸಮಾಜದ ನೇತಾರರಿಗೆ ಮನವರಿಕೆ ಮಾಡಬೇಕು. ಪ್ರಗತಿಪರ ಚಿಂತನೆ, ಜನಜಾಗೃತಿ ಒಟ್ಟಿಗೇ ಆಗಬೇಕು ಎಂದು ಹೇಳಿದರು. <br /> <br /> ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ನಿಲ್ಲಬೇಕು. ಇಂಥ ಪದ್ಧತಿ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.<br /> <br /> ಮುಖಂಡರಾದ ಟಿ. ದಾಸಕರಿಯಪ್ಪ, ಆವರಗೆರೆ ಚಂದ್ರು, ಚಿಂತಕ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>