<p><strong>ನವದೆಹಲಿ(ಪಿಟಿಐ): </strong>ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಇತ್ತೀಚೆಗೆ ವಿವಾಹ ವಿರೋಧಿಸಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣವನ್ನು `ದುರದೃಷ್ಟಕರ' ಎಂದು ಬಣ್ಣಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ.</p>.<p>ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ಆರ್.ಪಿ.ಎನ್.ಸಿಂಗ್ ಅವರು `ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣಗಳ ತಡೆಗೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ' ಎಂದು ಹೇಳಿದರು.</p>.<p>ವಿಭಿನ್ನ `ಬಿರಾದಾರಿ'ಗೆ ಸೇರಿದವನನ್ನು ವಿವಾಹವಾಗಿದ್ದಕ್ಕೆ ಹತ್ಯೆಗೊಳಗಾದ ಅಬ್ದುಲ್ ಹಕಿಂ ಅವರ ಪತ್ನಿ ಮೆಹ್ವಿಷ್, ತನ್ನ ಪತಿಯನ್ನು ತನ್ನ ಕುಟುಂಬದ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.</p>.<p>ಆದರೆ ಪೊಲೀಸರ ಪ್ರಕಾರ, ಇದು ಅಂತರ್ ಜಾತಿ ವಿವಾಹ ವಿರೋಧಿಸಿದವರು ಮಾಡಿದ ಕೊಲೆಯಲ್ಲ. ಏಕೆಂದರೆ ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಯಾರ ಹೆಸರೂ ನಮೂದಾಗಿಲ್ಲ.</p>.<p><strong>ಘಟನೆ ಹಿನ್ನೆಲೆ:</strong> ಉತ್ತರ ಪ್ರದೇಶದ ಬಲಂದ್ಶಹರ್ ಜಿಲ್ಲೆಯ ಮೆಹ್ವಿಷ್ ಹಾಗೂ ಅಬ್ದುಲ್ ಹಕಿಂ ಎಂಬುವವರು 2010ರಲ್ಲಿ ವಿವಾಹವಾಗಿದ್ದರು. ಮೆಹ್ವಿಷ್ ಮತ್ತು ಹಕಿಂ ಇಬ್ಬರೂ ವಿಭಿನ್ನ `ಬಿರಾದಾರಿ' ಕುಟುಂಬಗಳಿಗೆ ಸೇರಿದವರು. ಹೀಗಾಗಿ ಇವರ ವಿವಾಹಕ್ಕೆ ಇಬ್ಬರ ಕುಟುಂಬದ ಸದಸ್ಯರ ವಿರೋಧವಿತ್ತು.</p>.<p>ಬೇರೆ `ಬಿರಾದಾರಿ'ಗೆ ಸೇರಿದ ಹುಡುಗಿಯನ್ನು ವಿವಾಹವಾದರೆ ಹಕಿಂನನ್ನು ಕೊಲ್ಲುವುದಾಗಿ ಗ್ರಾಮದ `ಜಾತಿ ಪಂಚಾಯಿತಿ'ಯವರು ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಜೋಡಿ ಮನೆಯಿಂದ ಓಡಿ ಬಂದು ಅಲಿಗಡದ ನ್ಯಾಯಾಲಯದಲ್ಲಿ ಮದುವೆಯಾಗಿ, ನಂತರ ದೆಹಲಿಯಲ್ಲಿ ವಾಸವಿದ್ದರು. ಇಷ್ಟೆಲ್ಲ ನಡೆದ ಮೇಲೂ ಸೂಕ್ತ ಸಮಯದಲ್ಲಿ ಈ ದಂಪತಿಗೆ `ಸಾವಿನ ಶಿಕ್ಷೆ' ನೀಡುವುದಾಗಿ ಜಾತಿ ಪಂಚಾಯಿತಿಯ ನಾಯಕರು ಪುನರುಚ್ಚರಿಸಿದ್ದರು.</p>.<p>ಕೆಲವು ತಿಂಗಳಗಳ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ವಾಹಿನಿಯೊಂದರಲ್ಲಿ ನಡೆಸಿಕೊಟ್ಟ ರಿಯಾಲಿಟಿ ಷೋ `ಸತ್ಯಮೇವ ಜಯತೇ'ಯಲ್ಲಿ ಈ ಹಕಿಂ ದಂಪತಿ ಪಾಲ್ಗೊಂಡು, ಅಂತರ್ಜಾತಿ/ ಅಂತರ್ ಧರ್ಮೀಯ ವಿವಾಹ ಹಾಗೂ ಅದನ್ನು ವಿರೋಧಿಸಿ ನಡೆಯುತ್ತಿರುವ ಹತ್ಯೆಗಳು, ಜಾತಿ ಪಂಚಾಯಿತಿಗಳ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದರು.</p>.<p>ಕೆಲವು ತಿಂಗಳಗಳ ಹಿಂದೆ ಹಕಿಂ-ಮೆಹ್ವಿಷ್ ದಂಪತಿ ಹಳ್ಳಿಗೆ ಹಿಂದಿರುಗಿದ್ದರು. ದಂಪತಿ ತಮಗೆ ಹತ್ಯೆಯ ಬೆದರಿಕೆ ಇದೆ ಎಂದು 48 ಬಾರಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸರು ಅದನ್ನು ತಿರಸ್ಕರಿಸ್ದ್ದಿದರು.</p>.<p>`ಕಳೆದ ಗುರುವಾರ ನನ್ನ ಗಂಡ ಔಷಧದ ತರುವ ಸಲುವಾಗಿ ಅಂಗಡಿಗೆ ಹೋದಾಗ ನನ್ನ ಸೋದರ ಸಂಬಂಧಿಗಳು ಆತ ಮೇಲೆ ಎರಗಿದರು. ಸಲ್ಮಾನ್, ಹಕಿಂ ಮೇಲೆ ಗುಂಡು ಹಾರಿಸಿ ಕೊಂದ' ಎಂದು ಮೆಹ್ವಿಷ್ ಹೇಳಿದ್ದಾರೆ.</p>.<p>`ಈಗ ನನ್ನ ಮತ್ತು ನನ್ನ ಮಗಳನ್ನೂ ಕೊಲ್ಲಲು ಜಾತಿ ಪಂಚಾಯಿತಿಯವರು ಆದೇಶ ಹೊರಡಿಸಿದ್ದಾರೆ' ಎಂದು ಮೆಹ್ವಿಷ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಇತ್ತೀಚೆಗೆ ವಿವಾಹ ವಿರೋಧಿಸಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣವನ್ನು `ದುರದೃಷ್ಟಕರ' ಎಂದು ಬಣ್ಣಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ.</p>.<p>ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ರಾಜ್ಯ ಸಚಿವ ಆರ್.ಪಿ.ಎನ್.ಸಿಂಗ್ ಅವರು `ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣಗಳ ತಡೆಗೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ' ಎಂದು ಹೇಳಿದರು.</p>.<p>ವಿಭಿನ್ನ `ಬಿರಾದಾರಿ'ಗೆ ಸೇರಿದವನನ್ನು ವಿವಾಹವಾಗಿದ್ದಕ್ಕೆ ಹತ್ಯೆಗೊಳಗಾದ ಅಬ್ದುಲ್ ಹಕಿಂ ಅವರ ಪತ್ನಿ ಮೆಹ್ವಿಷ್, ತನ್ನ ಪತಿಯನ್ನು ತನ್ನ ಕುಟುಂಬದ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.</p>.<p>ಆದರೆ ಪೊಲೀಸರ ಪ್ರಕಾರ, ಇದು ಅಂತರ್ ಜಾತಿ ವಿವಾಹ ವಿರೋಧಿಸಿದವರು ಮಾಡಿದ ಕೊಲೆಯಲ್ಲ. ಏಕೆಂದರೆ ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಯಾರ ಹೆಸರೂ ನಮೂದಾಗಿಲ್ಲ.</p>.<p><strong>ಘಟನೆ ಹಿನ್ನೆಲೆ:</strong> ಉತ್ತರ ಪ್ರದೇಶದ ಬಲಂದ್ಶಹರ್ ಜಿಲ್ಲೆಯ ಮೆಹ್ವಿಷ್ ಹಾಗೂ ಅಬ್ದುಲ್ ಹಕಿಂ ಎಂಬುವವರು 2010ರಲ್ಲಿ ವಿವಾಹವಾಗಿದ್ದರು. ಮೆಹ್ವಿಷ್ ಮತ್ತು ಹಕಿಂ ಇಬ್ಬರೂ ವಿಭಿನ್ನ `ಬಿರಾದಾರಿ' ಕುಟುಂಬಗಳಿಗೆ ಸೇರಿದವರು. ಹೀಗಾಗಿ ಇವರ ವಿವಾಹಕ್ಕೆ ಇಬ್ಬರ ಕುಟುಂಬದ ಸದಸ್ಯರ ವಿರೋಧವಿತ್ತು.</p>.<p>ಬೇರೆ `ಬಿರಾದಾರಿ'ಗೆ ಸೇರಿದ ಹುಡುಗಿಯನ್ನು ವಿವಾಹವಾದರೆ ಹಕಿಂನನ್ನು ಕೊಲ್ಲುವುದಾಗಿ ಗ್ರಾಮದ `ಜಾತಿ ಪಂಚಾಯಿತಿ'ಯವರು ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಜೋಡಿ ಮನೆಯಿಂದ ಓಡಿ ಬಂದು ಅಲಿಗಡದ ನ್ಯಾಯಾಲಯದಲ್ಲಿ ಮದುವೆಯಾಗಿ, ನಂತರ ದೆಹಲಿಯಲ್ಲಿ ವಾಸವಿದ್ದರು. ಇಷ್ಟೆಲ್ಲ ನಡೆದ ಮೇಲೂ ಸೂಕ್ತ ಸಮಯದಲ್ಲಿ ಈ ದಂಪತಿಗೆ `ಸಾವಿನ ಶಿಕ್ಷೆ' ನೀಡುವುದಾಗಿ ಜಾತಿ ಪಂಚಾಯಿತಿಯ ನಾಯಕರು ಪುನರುಚ್ಚರಿಸಿದ್ದರು.</p>.<p>ಕೆಲವು ತಿಂಗಳಗಳ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ವಾಹಿನಿಯೊಂದರಲ್ಲಿ ನಡೆಸಿಕೊಟ್ಟ ರಿಯಾಲಿಟಿ ಷೋ `ಸತ್ಯಮೇವ ಜಯತೇ'ಯಲ್ಲಿ ಈ ಹಕಿಂ ದಂಪತಿ ಪಾಲ್ಗೊಂಡು, ಅಂತರ್ಜಾತಿ/ ಅಂತರ್ ಧರ್ಮೀಯ ವಿವಾಹ ಹಾಗೂ ಅದನ್ನು ವಿರೋಧಿಸಿ ನಡೆಯುತ್ತಿರುವ ಹತ್ಯೆಗಳು, ಜಾತಿ ಪಂಚಾಯಿತಿಗಳ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದರು.</p>.<p>ಕೆಲವು ತಿಂಗಳಗಳ ಹಿಂದೆ ಹಕಿಂ-ಮೆಹ್ವಿಷ್ ದಂಪತಿ ಹಳ್ಳಿಗೆ ಹಿಂದಿರುಗಿದ್ದರು. ದಂಪತಿ ತಮಗೆ ಹತ್ಯೆಯ ಬೆದರಿಕೆ ಇದೆ ಎಂದು 48 ಬಾರಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸರು ಅದನ್ನು ತಿರಸ್ಕರಿಸ್ದ್ದಿದರು.</p>.<p>`ಕಳೆದ ಗುರುವಾರ ನನ್ನ ಗಂಡ ಔಷಧದ ತರುವ ಸಲುವಾಗಿ ಅಂಗಡಿಗೆ ಹೋದಾಗ ನನ್ನ ಸೋದರ ಸಂಬಂಧಿಗಳು ಆತ ಮೇಲೆ ಎರಗಿದರು. ಸಲ್ಮಾನ್, ಹಕಿಂ ಮೇಲೆ ಗುಂಡು ಹಾರಿಸಿ ಕೊಂದ' ಎಂದು ಮೆಹ್ವಿಷ್ ಹೇಳಿದ್ದಾರೆ.</p>.<p>`ಈಗ ನನ್ನ ಮತ್ತು ನನ್ನ ಮಗಳನ್ನೂ ಕೊಲ್ಲಲು ಜಾತಿ ಪಂಚಾಯಿತಿಯವರು ಆದೇಶ ಹೊರಡಿಸಿದ್ದಾರೆ' ಎಂದು ಮೆಹ್ವಿಷ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>