<p>ಬೆಂಗಳೂರು: ಹುಲಿ ಯೋಜನೆ ಜಾರಿಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು `ಪರಿಸರ ಸೂಕ್ಷ್ಮ ವಲಯ~ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಿದೆ. <br /> <br /> ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, `ಹುಲಿ ಯೋಜನೆ~ಯ ನಿರ್ದೇಶಕರೂ ಆಗಿರುವ ಬಿ.ಜೆ.ಹೊಸಮಠ ಅವರು ಕಳೆದ ಜೂನ್ 30ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗದ ಉಪ ಮಹಾನಿರೀಕ್ಷಕರಾದ ಪ್ರಕೃತಿ ಶ್ರೀವಾಸ್ತವ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. <br /> <br /> ಪ್ರಸ್ತಾವನೆ ಅಂಗೀಕರಿಸಿರುವ ಸಚಿವಾಲಯ ಇತ್ತೀಚೆಗಷ್ಟೇ ಈ ಘೋಷಣೆ ಮಾಡಿದ್ದು, ಕೇಂದ್ರದ ಗೆಜೆಟ್ನಲ್ಲಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ. ಈ ಕುರಿತ ಪತ್ರವನ್ನು ಸಚಿವಾಲಯವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವಾರದ ಹಿಂದೆಯೇ ರವಾನಿಸಿದೆ ಎಂದು ಅರಣ್ಯ ಭವನದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.<br /> <br /> ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತದಾದ್ಯಂತ ಇರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಸೂಕ್ಷ್ಮವಲಯಗಳನ್ನಾಗಿ ಮಾಡಬೇಕಿದೆ. ಆದರೆ ತಿಳಿವಳಿಕೆ ಕೊರತೆ ಇರುವ ಈ ಉದ್ಯಾನವನಗಳ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ `ಗೋವಾ ಪ್ರತಿಷ್ಠಾನ~ ಸಂಸ್ಥೆಯು ದೇಶದ ಅಭಯಾರಣ್ಯಗಳನ್ನು ಸೂಕ್ಷ್ಮ ವಲಯಗಳನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್ಗೆ 2004ರಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಡುಗಳು ಮತ್ತು ವನ್ಯಜೀವಿಗಳ ರಕ್ಷಣೆಯ ಉದ್ದೇಶದಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯ ಅರಣ್ಯಗಳನ್ನು `ಪರಿಸರ ಸೂಕ್ಷ್ಮ ವಲಯ~ಗಳನ್ನಾಗಿ ಘೊಷಣೆ ಮಾಡಬೇಕು ಎಂದು 4 ಡಿಸೆಂಬರ್, 2006ರಲ್ಲಿ ನೀಡಿದ ತೀರ್ಪು ನೀಡಿತ್ತು.<br /> <br /> ರಾಜ್ಯದ್ದೇ ವಿಳಂಬ: ಈ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಕೇಂದ್ರ ಪರಿಸರ ಸಚಿವಾಲಯವು `ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು, ಘೋಷಣೆಗೆ ಪೂರಕವಾಗಿ ಪ್ರಸ್ತಾವನೆ ಸಲ್ಲಿಸಬೇಕು~ ಎಂದು ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ, ಗೋವಾ ರಾಜ್ಯಗಳು ಇದಕ್ಕೆ ಸ್ಪಂದಿಸಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ.<br /> <br /> ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮತ್ತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ಸಚಿವಾಲಯದ ಮೂಲಕ ಉಳಿದ ರಾಜ್ಯಗಳಿಗೆ ಕಳುಹಿಸಿತು. ಆ ನಂತರವಷ್ಟೇ ಕರ್ನಾಟಕ ಸರ್ಕಾರ ಮೊದಲ ಪ್ರಯತ್ನವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೂ ಈ ಮಾನ್ಯತೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.<br /> <br /> ಏನು ಉಪಯೋಗ?: ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ನಿರ್ವಹಣಾ ಸಮಿತಿ ಸದಸ್ಯ ಸಂಜಯ್ ಗುಬ್ಬಿ, `ಈಗಾಗಲೇ ಇರುವ ರೆಸಾರ್ಟ್ಗಳು ಹಾಗೆಯೇ ಮುಂದುವರೆಯಲಿದೆ. ಆದರೆ ಇನ್ನು ಮುಂದೆ ರೆಸಾರ್ಟ್ಗಳ ಸ್ಥಾಪನೆ ಅಥವಾ ಕಾರ್ಖಾನೆಗಳ ಸ್ಥಾಪನೆ, ಗ್ರಾನೈಟ್ ಗಣಿಗಾರಿಕೆಗಳನ್ನು ನಿಯಂತ್ರಿಸಲಾಗುತ್ತದೆ~ ಎಂದರು.<br /> <br /> ಮೊದಲಿನ ಮಾರ್ಗದರ್ಶಿ ಸೂತ್ರದ ಪ್ರಕಾರ, ಈ ಸೂಕ್ಷ್ಮ ವಲಯ ಘೊಷಣೆ ಮಾಡಿದ ವ್ಯಾಪ್ತಿಯಿಂದ 10 ಕಿ.ಮೀ.ಗಳವರೆಗೆ ಯಾವುದೇ ಮಾನವ ಚಟುವಟಿಕೆಗಳನ್ನು ನಡೆಸಬಾರದು ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತಗೊಂಡ ಮಾರ್ಗದರ್ಶಿಗಳನ್ವಯ ಪ್ರದೇಶದಿಂದ ಪ್ರದೇಶಕ್ಕೆ ಮಾನವ ಚಟುವಟಿಕೆಗಳ ವ್ಯತ್ಯಾಸವನ್ನು ಗುರುತಿಸಿ 2, 4 ಕಿ.ಮೀ.ವರೆಗೆ ಸಡಿಲಿಕೆ ನೀಡಲಾಗಿದೆ.<br /> </p>.<table align="center" border="3" cellpadding="1" cellspacing="1" width="450"> <tbody> <tr> <td>ಎಲ್ಲ ಅಭಯಾರಣ್ಯಗಳು ಈ ಪಟ್ಟಿಗೆ</td> </tr> <tr> <td>ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಾದರಿಯಲ್ಲೇ ಇತರ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಸೇರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ನಾಗರಹೊಳೆ ಅಭಯಾರಣ್ಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಸಲ್ಲಿಸಲಿದ್ದೇವೆ. ಈ ಮಾನ್ಯತೆಯಿಂದ ತಮ್ಮ ಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಗ್ರಾಮಸ್ಥರು ಭಯ ಪಡಬೇಕಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಲಿದೆ. ಜನರ ಸುರಕ್ಷೆಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿಗಳನ್ನು, ಅದರಲ್ಲೂ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. <br /> -ಬಿ.ಕೆ.ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹುಲಿ ಯೋಜನೆ ಜಾರಿಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು `ಪರಿಸರ ಸೂಕ್ಷ್ಮ ವಲಯ~ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಿದೆ. <br /> <br /> ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, `ಹುಲಿ ಯೋಜನೆ~ಯ ನಿರ್ದೇಶಕರೂ ಆಗಿರುವ ಬಿ.ಜೆ.ಹೊಸಮಠ ಅವರು ಕಳೆದ ಜೂನ್ 30ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗದ ಉಪ ಮಹಾನಿರೀಕ್ಷಕರಾದ ಪ್ರಕೃತಿ ಶ್ರೀವಾಸ್ತವ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. <br /> <br /> ಪ್ರಸ್ತಾವನೆ ಅಂಗೀಕರಿಸಿರುವ ಸಚಿವಾಲಯ ಇತ್ತೀಚೆಗಷ್ಟೇ ಈ ಘೋಷಣೆ ಮಾಡಿದ್ದು, ಕೇಂದ್ರದ ಗೆಜೆಟ್ನಲ್ಲಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ. ಈ ಕುರಿತ ಪತ್ರವನ್ನು ಸಚಿವಾಲಯವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವಾರದ ಹಿಂದೆಯೇ ರವಾನಿಸಿದೆ ಎಂದು ಅರಣ್ಯ ಭವನದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.<br /> <br /> ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತದಾದ್ಯಂತ ಇರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಸೂಕ್ಷ್ಮವಲಯಗಳನ್ನಾಗಿ ಮಾಡಬೇಕಿದೆ. ಆದರೆ ತಿಳಿವಳಿಕೆ ಕೊರತೆ ಇರುವ ಈ ಉದ್ಯಾನವನಗಳ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ಈ ಪ್ರಕ್ರಿಯೆ ರಾಜ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ `ಗೋವಾ ಪ್ರತಿಷ್ಠಾನ~ ಸಂಸ್ಥೆಯು ದೇಶದ ಅಭಯಾರಣ್ಯಗಳನ್ನು ಸೂಕ್ಷ್ಮ ವಲಯಗಳನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್ಗೆ 2004ರಲ್ಲಿ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಾಡುಗಳು ಮತ್ತು ವನ್ಯಜೀವಿಗಳ ರಕ್ಷಣೆಯ ಉದ್ದೇಶದಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯ ಅರಣ್ಯಗಳನ್ನು `ಪರಿಸರ ಸೂಕ್ಷ್ಮ ವಲಯ~ಗಳನ್ನಾಗಿ ಘೊಷಣೆ ಮಾಡಬೇಕು ಎಂದು 4 ಡಿಸೆಂಬರ್, 2006ರಲ್ಲಿ ನೀಡಿದ ತೀರ್ಪು ನೀಡಿತ್ತು.<br /> <br /> ರಾಜ್ಯದ್ದೇ ವಿಳಂಬ: ಈ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಕೇಂದ್ರ ಪರಿಸರ ಸಚಿವಾಲಯವು `ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು, ಘೋಷಣೆಗೆ ಪೂರಕವಾಗಿ ಪ್ರಸ್ತಾವನೆ ಸಲ್ಲಿಸಬೇಕು~ ಎಂದು ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ, ಗೋವಾ ರಾಜ್ಯಗಳು ಇದಕ್ಕೆ ಸ್ಪಂದಿಸಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಆದರೆ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ.<br /> <br /> ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮತ್ತೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿ ಸಚಿವಾಲಯದ ಮೂಲಕ ಉಳಿದ ರಾಜ್ಯಗಳಿಗೆ ಕಳುಹಿಸಿತು. ಆ ನಂತರವಷ್ಟೇ ಕರ್ನಾಟಕ ಸರ್ಕಾರ ಮೊದಲ ಪ್ರಯತ್ನವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೂ ಈ ಮಾನ್ಯತೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು.<br /> <br /> ಏನು ಉಪಯೋಗ?: ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ನಿರ್ವಹಣಾ ಸಮಿತಿ ಸದಸ್ಯ ಸಂಜಯ್ ಗುಬ್ಬಿ, `ಈಗಾಗಲೇ ಇರುವ ರೆಸಾರ್ಟ್ಗಳು ಹಾಗೆಯೇ ಮುಂದುವರೆಯಲಿದೆ. ಆದರೆ ಇನ್ನು ಮುಂದೆ ರೆಸಾರ್ಟ್ಗಳ ಸ್ಥಾಪನೆ ಅಥವಾ ಕಾರ್ಖಾನೆಗಳ ಸ್ಥಾಪನೆ, ಗ್ರಾನೈಟ್ ಗಣಿಗಾರಿಕೆಗಳನ್ನು ನಿಯಂತ್ರಿಸಲಾಗುತ್ತದೆ~ ಎಂದರು.<br /> <br /> ಮೊದಲಿನ ಮಾರ್ಗದರ್ಶಿ ಸೂತ್ರದ ಪ್ರಕಾರ, ಈ ಸೂಕ್ಷ್ಮ ವಲಯ ಘೊಷಣೆ ಮಾಡಿದ ವ್ಯಾಪ್ತಿಯಿಂದ 10 ಕಿ.ಮೀ.ಗಳವರೆಗೆ ಯಾವುದೇ ಮಾನವ ಚಟುವಟಿಕೆಗಳನ್ನು ನಡೆಸಬಾರದು ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತಗೊಂಡ ಮಾರ್ಗದರ್ಶಿಗಳನ್ವಯ ಪ್ರದೇಶದಿಂದ ಪ್ರದೇಶಕ್ಕೆ ಮಾನವ ಚಟುವಟಿಕೆಗಳ ವ್ಯತ್ಯಾಸವನ್ನು ಗುರುತಿಸಿ 2, 4 ಕಿ.ಮೀ.ವರೆಗೆ ಸಡಿಲಿಕೆ ನೀಡಲಾಗಿದೆ.<br /> </p>.<table align="center" border="3" cellpadding="1" cellspacing="1" width="450"> <tbody> <tr> <td>ಎಲ್ಲ ಅಭಯಾರಣ್ಯಗಳು ಈ ಪಟ್ಟಿಗೆ</td> </tr> <tr> <td>ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಾದರಿಯಲ್ಲೇ ಇತರ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಸೇರಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ನಾಗರಹೊಳೆ ಅಭಯಾರಣ್ಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಸಲ್ಲಿಸಲಿದ್ದೇವೆ. ಈ ಮಾನ್ಯತೆಯಿಂದ ತಮ್ಮ ಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಗ್ರಾಮಸ್ಥರು ಭಯ ಪಡಬೇಕಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಲಿದೆ. ಜನರ ಸುರಕ್ಷೆಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿಗಳನ್ನು, ಅದರಲ್ಲೂ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. <br /> -ಬಿ.ಕೆ.ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>