<p><strong>ಶ್ರೀನಗರ (ಪಿಟಿಐ): </strong>ದಸ್ತಗೀರ್ ಸಾಹಿಬ್ ಪ್ರಾರ್ಥನಾ ಸ್ಥಳ ಅಗ್ನಿಗೆ ಆಹುತಿಯಾಗಿರುವುದಕ್ಕೆ ಆಕ್ರೋಶಗೊಂಡು ಪ್ರತ್ಯೇಕತಾವಾದಿ ಗುಂಪು ಮಂಗಳವಾರ ಇಲ್ಲಿ ಕರೆದಿದ್ದ ಬಂದ್ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.<br /> <br /> ಹುರಿಯತ್ ಕಾನ್ಫ್ರೆನ್ಸ್ ಹಾಗೂ ಜೆಕೆಎಲ್ಎಫ್ ಸೇರಿದಂತೆ ಹೆಚ್ಚಿನ ಎಲ್ಲಾ ಪ್ರತ್ಯೇಕತಾವಾದಿಗಳು ಈ ಬಂದ್ನಲ್ಲಿ ಭಾಗವಹಿಸಿದ್ದು, ಶಾಲೆ, ಕಾಲೇಜು, ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಅಲ್ಲದೆ ಕೆಲವು ಖಾಸಗಿ ವಾಹನಗಳ ಓಡಾಟವನ್ನು ಹೊರತುಪಡಿಸಿ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತ್ತು .<br /> <br /> <strong>ಪರಿಶೀಲನೆ: </strong> ಪ್ರಸಿದ್ಧ ಪ್ರಾರ್ಥನಾ ಸ್ಥಳ ದಸ್ತಗೀರ್ ಸಾಹಿಬ್ ಅಗ್ನಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿರುವ ಪ್ರಮುಖ ಪ್ರಾರ್ಥನಾ ಸ್ಥಳಗಳಲ್ಲಿ `ಅಗ್ನಿ ನಿರೋಧಕ ಕ್ರಮ~ ಅಳವಡಿಸಿರುವ ಬಗ್ಗೆ ತಪಾಸಣೆ ನಡೆಸಲು ಜಮ್ಮು ಕಾಶ್ಮೀರ ಸರ್ಕಾರ ತಜ್ಞರ ತಂಡವನ್ನು ನಿಯೋಜಿಸಲಿದೆ.<br /> <br /> `ಪ್ರಮುಖ ಪ್ರಾರ್ಥನಾ ಮಂದಿರಗಳಲ್ಲಿ ಸೂಕ್ತ ಅಗ್ನಿ ನಿರೋಧಕ ಕ್ರಮ ಅಳವಡಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಶೀಘ್ರದಲ್ಲೇ ತಪಾಸಣೆ ಕೈಗೊಳ್ಳಲಾಗುವುದು~ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಅಸ್ಗರ್ ಸಮೂನ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ ನಂತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.<br /> ಸೋಮವಾರ ಸಂಭವಿಸಿದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಸಮೂನ್ ನೇತೃತ್ವ ತಂಡ ತನಿಖೆ ನಡೆಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಪಿಟಿಐ): </strong>ದಸ್ತಗೀರ್ ಸಾಹಿಬ್ ಪ್ರಾರ್ಥನಾ ಸ್ಥಳ ಅಗ್ನಿಗೆ ಆಹುತಿಯಾಗಿರುವುದಕ್ಕೆ ಆಕ್ರೋಶಗೊಂಡು ಪ್ರತ್ಯೇಕತಾವಾದಿ ಗುಂಪು ಮಂಗಳವಾರ ಇಲ್ಲಿ ಕರೆದಿದ್ದ ಬಂದ್ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.<br /> <br /> ಹುರಿಯತ್ ಕಾನ್ಫ್ರೆನ್ಸ್ ಹಾಗೂ ಜೆಕೆಎಲ್ಎಫ್ ಸೇರಿದಂತೆ ಹೆಚ್ಚಿನ ಎಲ್ಲಾ ಪ್ರತ್ಯೇಕತಾವಾದಿಗಳು ಈ ಬಂದ್ನಲ್ಲಿ ಭಾಗವಹಿಸಿದ್ದು, ಶಾಲೆ, ಕಾಲೇಜು, ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಅಲ್ಲದೆ ಕೆಲವು ಖಾಸಗಿ ವಾಹನಗಳ ಓಡಾಟವನ್ನು ಹೊರತುಪಡಿಸಿ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತ್ತು .<br /> <br /> <strong>ಪರಿಶೀಲನೆ: </strong> ಪ್ರಸಿದ್ಧ ಪ್ರಾರ್ಥನಾ ಸ್ಥಳ ದಸ್ತಗೀರ್ ಸಾಹಿಬ್ ಅಗ್ನಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿರುವ ಪ್ರಮುಖ ಪ್ರಾರ್ಥನಾ ಸ್ಥಳಗಳಲ್ಲಿ `ಅಗ್ನಿ ನಿರೋಧಕ ಕ್ರಮ~ ಅಳವಡಿಸಿರುವ ಬಗ್ಗೆ ತಪಾಸಣೆ ನಡೆಸಲು ಜಮ್ಮು ಕಾಶ್ಮೀರ ಸರ್ಕಾರ ತಜ್ಞರ ತಂಡವನ್ನು ನಿಯೋಜಿಸಲಿದೆ.<br /> <br /> `ಪ್ರಮುಖ ಪ್ರಾರ್ಥನಾ ಮಂದಿರಗಳಲ್ಲಿ ಸೂಕ್ತ ಅಗ್ನಿ ನಿರೋಧಕ ಕ್ರಮ ಅಳವಡಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಶೀಘ್ರದಲ್ಲೇ ತಪಾಸಣೆ ಕೈಗೊಳ್ಳಲಾಗುವುದು~ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಅಸ್ಗರ್ ಸಮೂನ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ ನಂತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.<br /> ಸೋಮವಾರ ಸಂಭವಿಸಿದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಸಮೂನ್ ನೇತೃತ್ವ ತಂಡ ತನಿಖೆ ನಡೆಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>