<p><strong>ನವದೆಹಲಿ:</strong> ಮೂಲಸೌಕರ್ಯ ವಲಯಕ್ಕೆ ಕೇಂದ್ರ ಬಜೆಟ್ನಲ್ಲಿ ಅಗತ್ಯ ಒತ್ತು ನೀಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಸುಮಾರು ರೂ 60,000 ಕೋಟಿ ತೆರಿಗೆ ಮುಕ್ತ ಬಾಂಡ್ಗಳನ್ನು ಹೆಚ್ಚಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ.</p>.<p>ಅಗತ್ಯ ಮೂಲಸೌಕರ್ಯಗಳ ಕೊರತೆ ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಈವರೆಗೆ ನಾವು ಹೂಡಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರ ಅನುಸರಿಸಿದ್ದೆವು. 2011-12 ನೇ ಸಾಲಿನಲ್ಲಿ ಹಣಕಾಸು ಮೂಲಸೌಕರ್ಯ ಯೋಜನೆಗಳಿಗೆ ರೂ 30,000 ಕೋಟಿ ತೆರಿಗೆ ಮುಕ್ತ ಬಾಂಡ್ ಘೋಷಿಸಿದ್ದೆವು. ಪ್ರಸಕ್ತ ವರ್ಷದಲ್ಲಿ ಈ ಮೊತ್ತವು ದ್ವಿಗುಣಗೊಳ್ಳುತ್ತಿದ್ದು, ರೂ 60,000 ಕೋಟಿಗೆ ಹೆಚ್ಚಿದೆ ಎಂದು ಮುಖರ್ಜಿ ಹೇಳಿದ್ದಾರೆ.<br /> ಹೊಸ ಐಐಎಂಗಳನ್ನು ಸ್ಥಾಪಿಸಲು ರೂ 150 ಕೋಟಿ ಹಾಗೂ ಹೊಸ ಐಐಟಿಗಳ ಆರಂಭಕ್ಕೆ ರೂ 25 ಕೋಟಿ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p><strong>ಅಂಗವಿಕಲರ ಪಿಂಚಣಿಯಲ್ಲಿ ಹೆಚ್ಚಳ</strong></p>.<p>ಬಡತನ ರೇಖೆಗಿಂತ ಕೆಳಗಿನ ಅಂಗವಿಕಲರಿಗೆ ಪಿಂಚಣಿಯನ್ನು ಶೇ 30 ಕ್ಕಿಂತಲೂ ಹೆಚ್ಚಿಸಲು ನಿರ್ಧರಿಸಲಾಗಿದೆ.</p>.<p>ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 471 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಲಾಗಿದೆ. <br /> ಕಳೆದ ವರ್ಷ ಈ ಮೊತ್ತವು 424 ಕೋಟಿ ರೂಪಾಯಿ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮೂಲಸೌಕರ್ಯ ವಲಯಕ್ಕೆ ಕೇಂದ್ರ ಬಜೆಟ್ನಲ್ಲಿ ಅಗತ್ಯ ಒತ್ತು ನೀಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಸುಮಾರು ರೂ 60,000 ಕೋಟಿ ತೆರಿಗೆ ಮುಕ್ತ ಬಾಂಡ್ಗಳನ್ನು ಹೆಚ್ಚಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ.</p>.<p>ಅಗತ್ಯ ಮೂಲಸೌಕರ್ಯಗಳ ಕೊರತೆ ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಈವರೆಗೆ ನಾವು ಹೂಡಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರ ಅನುಸರಿಸಿದ್ದೆವು. 2011-12 ನೇ ಸಾಲಿನಲ್ಲಿ ಹಣಕಾಸು ಮೂಲಸೌಕರ್ಯ ಯೋಜನೆಗಳಿಗೆ ರೂ 30,000 ಕೋಟಿ ತೆರಿಗೆ ಮುಕ್ತ ಬಾಂಡ್ ಘೋಷಿಸಿದ್ದೆವು. ಪ್ರಸಕ್ತ ವರ್ಷದಲ್ಲಿ ಈ ಮೊತ್ತವು ದ್ವಿಗುಣಗೊಳ್ಳುತ್ತಿದ್ದು, ರೂ 60,000 ಕೋಟಿಗೆ ಹೆಚ್ಚಿದೆ ಎಂದು ಮುಖರ್ಜಿ ಹೇಳಿದ್ದಾರೆ.<br /> ಹೊಸ ಐಐಎಂಗಳನ್ನು ಸ್ಥಾಪಿಸಲು ರೂ 150 ಕೋಟಿ ಹಾಗೂ ಹೊಸ ಐಐಟಿಗಳ ಆರಂಭಕ್ಕೆ ರೂ 25 ಕೋಟಿ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p><strong>ಅಂಗವಿಕಲರ ಪಿಂಚಣಿಯಲ್ಲಿ ಹೆಚ್ಚಳ</strong></p>.<p>ಬಡತನ ರೇಖೆಗಿಂತ ಕೆಳಗಿನ ಅಂಗವಿಕಲರಿಗೆ ಪಿಂಚಣಿಯನ್ನು ಶೇ 30 ಕ್ಕಿಂತಲೂ ಹೆಚ್ಚಿಸಲು ನಿರ್ಧರಿಸಲಾಗಿದೆ.</p>.<p>ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 471 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಲಾಗಿದೆ. <br /> ಕಳೆದ ವರ್ಷ ಈ ಮೊತ್ತವು 424 ಕೋಟಿ ರೂಪಾಯಿ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>