<p><strong>ಬೆಂಗಳೂರು:</strong> ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಿಂದುಳಿದ ಸಮುದಾಯಗಳ ವಿಶೇಷ ಅಭಿವೃದ್ಧಿ ಹಾಗೂ ಗುರುಪೀಠಗಳ ಶೈಕ್ಷಣಿಕ ಮೂಲಸೌಕರ್ಯಕ್ಕಾಗಿ ಶ್ರಮಿಸುತ್ತಿರುವ ಮಠಗಳಡಿ ಯೋಗಿ ನಾರೇಯಣ ಮಠಕ್ಕೆ ಒದಗಿಸಿರುವ ಅನುದಾನವನ್ನು ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅವರು ತಿರಸ್ಕರಿಸಿದ್ದಾರೆ. <br /> <br /> ಕೈವಾರ ಕ್ಷೇತ್ರದಲ್ಲಿ ತಾತಯ್ಯನವರ ಗುರುಪೀಠವಿದೆ. ಆದರೆ, ಮಠವು ಯಾವುದೇ ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿಲ್ಲ. ಮಠದ ಮೂಲ ಉದ್ದೇಶವೇ ತಾತಯ್ಯ ಅವರ ತತ್ವ ಬೋಧನೆಗಳನ್ನು ಪ್ರಚುರಪಡಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ಸರ್ಕಾರದ ಅನುದಾನ ಪಟ್ಟಿಯಲ್ಲಿ ಕೈವಾರ ಕ್ಷೇತ್ರವನ್ನು ಬಲಿಜ ಕೈವಾರ ತಾತಯ್ಯ ಕ್ಷೇತ್ರ ಎಂದು ಹೆಸರಿಸಲಾಗಿದೆ. ಎಲ್ಲ ಜಾತಿ, ಮತ, ಧರ್ಮದ ಜನರು ತಾತಯ್ಯ ತತ್ವಗಳನ್ನು ಅನುಸರಿಸುತ್ತಿದ್ದು, ಕೇವಲ ಬಲಿಜ ಜನಾಂಗಕ್ಕೆ ಮಠವನ್ನು ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪಿಸಿದ್ದಾರೆ.<br /> <br /> ಪೂಜಾ ಕೈಂಕರ್ಯ ಸೇರಿದಂತೆ ಒಟ್ಟು ಮಠದ ವ್ಯವಸ್ಥೆಯು ಭಕ್ತಾದಿಗಳ ದೇಣಿಗೆಯಿಂದ ನಡೆಯುತ್ತಿದ್ದು, ಸರ್ಕಾರದ ಯಾವುದೇ ಅನುದಾನ ಮತ್ತು ಆರ್ಥಿಕ ನೆರವಿನ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಿಂದುಳಿದ ಸಮುದಾಯಗಳ ವಿಶೇಷ ಅಭಿವೃದ್ಧಿ ಹಾಗೂ ಗುರುಪೀಠಗಳ ಶೈಕ್ಷಣಿಕ ಮೂಲಸೌಕರ್ಯಕ್ಕಾಗಿ ಶ್ರಮಿಸುತ್ತಿರುವ ಮಠಗಳಡಿ ಯೋಗಿ ನಾರೇಯಣ ಮಠಕ್ಕೆ ಒದಗಿಸಿರುವ ಅನುದಾನವನ್ನು ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅವರು ತಿರಸ್ಕರಿಸಿದ್ದಾರೆ. <br /> <br /> ಕೈವಾರ ಕ್ಷೇತ್ರದಲ್ಲಿ ತಾತಯ್ಯನವರ ಗುರುಪೀಠವಿದೆ. ಆದರೆ, ಮಠವು ಯಾವುದೇ ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿಲ್ಲ. ಮಠದ ಮೂಲ ಉದ್ದೇಶವೇ ತಾತಯ್ಯ ಅವರ ತತ್ವ ಬೋಧನೆಗಳನ್ನು ಪ್ರಚುರಪಡಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ಸರ್ಕಾರದ ಅನುದಾನ ಪಟ್ಟಿಯಲ್ಲಿ ಕೈವಾರ ಕ್ಷೇತ್ರವನ್ನು ಬಲಿಜ ಕೈವಾರ ತಾತಯ್ಯ ಕ್ಷೇತ್ರ ಎಂದು ಹೆಸರಿಸಲಾಗಿದೆ. ಎಲ್ಲ ಜಾತಿ, ಮತ, ಧರ್ಮದ ಜನರು ತಾತಯ್ಯ ತತ್ವಗಳನ್ನು ಅನುಸರಿಸುತ್ತಿದ್ದು, ಕೇವಲ ಬಲಿಜ ಜನಾಂಗಕ್ಕೆ ಮಠವನ್ನು ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪಿಸಿದ್ದಾರೆ.<br /> <br /> ಪೂಜಾ ಕೈಂಕರ್ಯ ಸೇರಿದಂತೆ ಒಟ್ಟು ಮಠದ ವ್ಯವಸ್ಥೆಯು ಭಕ್ತಾದಿಗಳ ದೇಣಿಗೆಯಿಂದ ನಡೆಯುತ್ತಿದ್ದು, ಸರ್ಕಾರದ ಯಾವುದೇ ಅನುದಾನ ಮತ್ತು ಆರ್ಥಿಕ ನೆರವಿನ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>