<p><strong>ತುಮಕೂರು: `</strong>ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನಿಂದ ಬಯಲುಸೀಮೆ ಬವಣೆ ತೀರುತ್ತದೆ ಎಂದರೆ ಅಂಥ ಯೋಜನೆಗೆ ನನ್ನ ವಿರೋಧ ಇಲ್ಲ. ನೇತ್ರಾವತಿ ನದಿಯನ್ನೇ ತಿರುಗಿಸುತ್ತೀರೆಂಬ ಆತಂಕದಿಂದ ಕರಾವಳಿಯಲ್ಲಿ ಪರಮಶಿವಯ್ಯ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.<br /> <br /> ಗುರುವಂದನೆ ಸ್ವೀಕರಿಸಲು ನಗರಕ್ಕೆ ಆಗಮಿಸಿದ್ದ ವಿಶ್ವೇಶ ತೀರ್ಥರನ್ನು ಶನಿವಾರ ಸಂಸದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ಭೇಟಿ ಮಾಡಿದ ನೀರಾವರಿ ಹೋರಾಟ ಸಮಿತಿ ಮುಖಂಡರು, `ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ನೀರನ್ನು ಮಳೆಗಾಲದಲ್ಲಿ ಮಾತ್ರ ಪೂರ್ವಕ್ಕೆ ಹರಿಸಲಾಗುವುದು. ನೇತ್ರಾವತಿ ನದಿಯನ್ನೇ ಪೂರ್ವಕ್ಕೆ ತಿರುಗಿಸುವ ಯಾವುದೇ ಪ್ರಸ್ತಾವ ಯೋಜನೆಯಲ್ಲಿ ಇಲ್ಲ~ ಎಂದು ಸ್ಪಷ್ಪಪಡಿಸಿದರು.<br /> <br /> ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಕರಾವಳಿ- ಬಯಲುಸೀಮೆ ಭಾಗದ ನೀರಾವರಿ ತಂತ್ರಜ್ಞರು, ಅಧಿಕಾರಿಗಳು, ಪರಿಸರ ಹೋರಾಟಗಾರರು ಮತ್ತು ನಾಗರಿಕ ಸಮಿತಿ ಸದಸ್ಯರ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಶೀಘ್ರ ಆಯೋಜಿಸಿದರೆ ಪರಸ್ಪರ ಚರ್ಚೆಗೆ ಅನುಕೂಲವಾಗುತ್ತದೆ ಎಂದು ಬಸವರಾಜ್ ಕೋರಿದರು. ಸಮಾಲೋಚನಾ ಸಭೆ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಸ್ವಾಮೀಜಿ ಭರವಸೆ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: `</strong>ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನಿಂದ ಬಯಲುಸೀಮೆ ಬವಣೆ ತೀರುತ್ತದೆ ಎಂದರೆ ಅಂಥ ಯೋಜನೆಗೆ ನನ್ನ ವಿರೋಧ ಇಲ್ಲ. ನೇತ್ರಾವತಿ ನದಿಯನ್ನೇ ತಿರುಗಿಸುತ್ತೀರೆಂಬ ಆತಂಕದಿಂದ ಕರಾವಳಿಯಲ್ಲಿ ಪರಮಶಿವಯ್ಯ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.<br /> <br /> ಗುರುವಂದನೆ ಸ್ವೀಕರಿಸಲು ನಗರಕ್ಕೆ ಆಗಮಿಸಿದ್ದ ವಿಶ್ವೇಶ ತೀರ್ಥರನ್ನು ಶನಿವಾರ ಸಂಸದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ಭೇಟಿ ಮಾಡಿದ ನೀರಾವರಿ ಹೋರಾಟ ಸಮಿತಿ ಮುಖಂಡರು, `ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ನೀರನ್ನು ಮಳೆಗಾಲದಲ್ಲಿ ಮಾತ್ರ ಪೂರ್ವಕ್ಕೆ ಹರಿಸಲಾಗುವುದು. ನೇತ್ರಾವತಿ ನದಿಯನ್ನೇ ಪೂರ್ವಕ್ಕೆ ತಿರುಗಿಸುವ ಯಾವುದೇ ಪ್ರಸ್ತಾವ ಯೋಜನೆಯಲ್ಲಿ ಇಲ್ಲ~ ಎಂದು ಸ್ಪಷ್ಪಪಡಿಸಿದರು.<br /> <br /> ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಕರಾವಳಿ- ಬಯಲುಸೀಮೆ ಭಾಗದ ನೀರಾವರಿ ತಂತ್ರಜ್ಞರು, ಅಧಿಕಾರಿಗಳು, ಪರಿಸರ ಹೋರಾಟಗಾರರು ಮತ್ತು ನಾಗರಿಕ ಸಮಿತಿ ಸದಸ್ಯರ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಶೀಘ್ರ ಆಯೋಜಿಸಿದರೆ ಪರಸ್ಪರ ಚರ್ಚೆಗೆ ಅನುಕೂಲವಾಗುತ್ತದೆ ಎಂದು ಬಸವರಾಜ್ ಕೋರಿದರು. ಸಮಾಲೋಚನಾ ಸಭೆ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಸ್ವಾಮೀಜಿ ಭರವಸೆ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>