<p>ಮಂಗಳೂರು: ಆಳವಾದ ಅಧ್ಯಯನ, ಪಾತ್ರಗಳ ಪರಕಾಯ ಪ್ರವೇಶದಂತಹ ಗುಣಗಳು ಸಾಹಿತಿಯಲ್ಲಿ ಅಡಗಿರದಿದ್ದರೆ ಉತ್ತಮ ಕೃತಿ ಹೊರಬರಲು ಸಾಧ್ಯವೇ ಇಲ್ಲ. ತಮ್ಮ ಕೃತಿಗಳು ಅದಕ್ಕಾಗಿಯೇ ಇಂದು ಮಹತ್ವ ಗಳಿಸಿಕೊಂಡಿವೆ ಎಂದು ಕೇಂದ್ರದ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ನುಡಿದರು.<br /> <br /> ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನ ಸಮಿತಿ ಮತ್ತು ಜನಶಕ್ತಿ ಸೇವಾ ಟ್ರಸ್ಟ್ಗಳು ಶುಕ್ರವಾರ ಪುರಭವನದಲ್ಲಿ ಹಮ್ಮಿಕೊಂಡ ಸಾಹಿತ್ಯಾವಲೋಕನದ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು.<br /> <br /> `ನಾನು ಜಗತ್ತಿನ ಹಲವು ಸಾಹಿತ್ಯ ಕೃತಿಗಳನ್ನು ಓದಿದ್ದೇನೆ. ಒಂದೊಂದು ಪಾತ್ರವನ್ನೂ ಸೃಷ್ಟಿಸಿ, ಬೆಳೆಸುವಾಗಲೂ ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಇದೀಗ ರಚಿಸುತ್ತಿರುವ `ಶ್ರೀಮುಡಿ ಪರಿಕ್ರಮ~ ಕೃತಿಯಲ್ಲೂ ದ್ರೌಪದಿಯ ಪಾತ್ರಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಳವಾದ ಆಧ್ಯಯನ ಮತ್ತು ಪಾತ್ರದ ಒಳಹೊಕ್ಕು ನಿರೂಪಿಸುವಂತಹ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ನುಡಿದರು.<br /> <br /> `ನಮಗೆ ಪ್ರತಿಸ್ಪರ್ಧಿ ಎಂದರೆ ಸಮಯ ಮಾತ್ರ. ಅದನ್ನು ಹೊಂದಿಸಿಕೊಂಡು ಹೋಗುವಲ್ಲಿಯೇ ಯಶಸ್ಸು ಅಡಗಿದೆ~ ಎಂದ ಅವರು, `ಜಡಭರತನ ಕನಸುಗಳು~ ಕೃತಿಯನ್ನು ಓದಿದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು ಎಂದು ನೆನಪಿಸಿಕೊಂಡರು.<br /> <br /> ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ನಾನು ಜಾತಿ ಕಟ್ಟಿಕೊಂಡು ಬೆಳೆದವನಲ್ಲ. ನನ್ನಲ್ಲಿ ನೆಲದ ಗುಣ ಕಾಣಬಹುದು. ಈ ಮಣ್ಣಿನಲ್ಲಿ ಹುಟ್ಟಿರದಿದ್ದರೆ ನಾನು ಕವಿಯಾಗುತ್ತಿರಲಿಲ್ಲ. ಕಷ್ಟದಲ್ಲಿ ಎದೆಗುಂದದೆ ಬದುಕುವ ಕಲೆಯನ್ನು ನನಗೆ ಈ ನೆಲ ಕಲಿಸಿಕೊಟ್ಟಿದೆ~ ಎಂದರು.<br /> <br /> ಉಪನ್ಯಾಸಕರಾದ ಪಿ.ಎಲ್.ಧರ್ಮ, ಗಣನಾಥ ಎಕ್ಕಾರು, ವಾಸುದೇವ ಬೆಳ್ಳೆ ಅವರು ಮೊಯಿಲಿ ಅವರಿಗೆ ಕೃತಿ ಕುರಿತು ಪ್ರಶ್ನೆಗಳನ್ನು ಕೇಳಿದರು. ಸಮಾರೋಪದಲ್ಲಿ ಪತ್ನಿ ಸಮೇತ ತಮಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಮೊಯಿಲಿ ಅವರು ನಯವಾಗಿಯೇ ನಿರಾಕರಿಸಿದರು. `ನನ್ನ ಸಾಹಿತ್ಯ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ನನ್ನ ಸನ್ಮಾನ ಬೇಡ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಆಳವಾದ ಅಧ್ಯಯನ, ಪಾತ್ರಗಳ ಪರಕಾಯ ಪ್ರವೇಶದಂತಹ ಗುಣಗಳು ಸಾಹಿತಿಯಲ್ಲಿ ಅಡಗಿರದಿದ್ದರೆ ಉತ್ತಮ ಕೃತಿ ಹೊರಬರಲು ಸಾಧ್ಯವೇ ಇಲ್ಲ. ತಮ್ಮ ಕೃತಿಗಳು ಅದಕ್ಕಾಗಿಯೇ ಇಂದು ಮಹತ್ವ ಗಳಿಸಿಕೊಂಡಿವೆ ಎಂದು ಕೇಂದ್ರದ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ನುಡಿದರು.<br /> <br /> ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನ ಸಮಿತಿ ಮತ್ತು ಜನಶಕ್ತಿ ಸೇವಾ ಟ್ರಸ್ಟ್ಗಳು ಶುಕ್ರವಾರ ಪುರಭವನದಲ್ಲಿ ಹಮ್ಮಿಕೊಂಡ ಸಾಹಿತ್ಯಾವಲೋಕನದ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು.<br /> <br /> `ನಾನು ಜಗತ್ತಿನ ಹಲವು ಸಾಹಿತ್ಯ ಕೃತಿಗಳನ್ನು ಓದಿದ್ದೇನೆ. ಒಂದೊಂದು ಪಾತ್ರವನ್ನೂ ಸೃಷ್ಟಿಸಿ, ಬೆಳೆಸುವಾಗಲೂ ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಇದೀಗ ರಚಿಸುತ್ತಿರುವ `ಶ್ರೀಮುಡಿ ಪರಿಕ್ರಮ~ ಕೃತಿಯಲ್ಲೂ ದ್ರೌಪದಿಯ ಪಾತ್ರಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಳವಾದ ಆಧ್ಯಯನ ಮತ್ತು ಪಾತ್ರದ ಒಳಹೊಕ್ಕು ನಿರೂಪಿಸುವಂತಹ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ನುಡಿದರು.<br /> <br /> `ನಮಗೆ ಪ್ರತಿಸ್ಪರ್ಧಿ ಎಂದರೆ ಸಮಯ ಮಾತ್ರ. ಅದನ್ನು ಹೊಂದಿಸಿಕೊಂಡು ಹೋಗುವಲ್ಲಿಯೇ ಯಶಸ್ಸು ಅಡಗಿದೆ~ ಎಂದ ಅವರು, `ಜಡಭರತನ ಕನಸುಗಳು~ ಕೃತಿಯನ್ನು ಓದಿದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು ಎಂದು ನೆನಪಿಸಿಕೊಂಡರು.<br /> <br /> ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ನಾನು ಜಾತಿ ಕಟ್ಟಿಕೊಂಡು ಬೆಳೆದವನಲ್ಲ. ನನ್ನಲ್ಲಿ ನೆಲದ ಗುಣ ಕಾಣಬಹುದು. ಈ ಮಣ್ಣಿನಲ್ಲಿ ಹುಟ್ಟಿರದಿದ್ದರೆ ನಾನು ಕವಿಯಾಗುತ್ತಿರಲಿಲ್ಲ. ಕಷ್ಟದಲ್ಲಿ ಎದೆಗುಂದದೆ ಬದುಕುವ ಕಲೆಯನ್ನು ನನಗೆ ಈ ನೆಲ ಕಲಿಸಿಕೊಟ್ಟಿದೆ~ ಎಂದರು.<br /> <br /> ಉಪನ್ಯಾಸಕರಾದ ಪಿ.ಎಲ್.ಧರ್ಮ, ಗಣನಾಥ ಎಕ್ಕಾರು, ವಾಸುದೇವ ಬೆಳ್ಳೆ ಅವರು ಮೊಯಿಲಿ ಅವರಿಗೆ ಕೃತಿ ಕುರಿತು ಪ್ರಶ್ನೆಗಳನ್ನು ಕೇಳಿದರು. ಸಮಾರೋಪದಲ್ಲಿ ಪತ್ನಿ ಸಮೇತ ತಮಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಮೊಯಿಲಿ ಅವರು ನಯವಾಗಿಯೇ ನಿರಾಕರಿಸಿದರು. `ನನ್ನ ಸಾಹಿತ್ಯ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ನನ್ನ ಸನ್ಮಾನ ಬೇಡ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>