<p><strong>ಮಲೇಬೆನ್ನೂರು: </strong>ಗ್ರಾಮದ ಹೊರವಲಯದಲ್ಲಿನ ರಾಜ್ಯ ಹೆದ್ದಾರಿ-25ರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳು ಗುರುವಾರ ಪರಸ್ಪರ ಡಿಕ್ಕಿ ಹೊಡೆದ ಕಾರಣ 31 ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.</p>.<p>ಹರಿಹರದ ಕಡೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ವೇಗವಾಗಿ ಬಸ್ಸನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಿದೆ. ಅಪಘಾತ ತಪ್ಪಿಸುವ ವೇಳೆ ಎದುರುಗಡೆಯಿಂದ ಬಂದ ಬಸ್ಗೆ ಡಿಕ್ಕಿ ಹೊಡೆದಿದೆ.</p>.<p>ಬ್ರೇಕ್ ಹಾಕಿದ ರಭಸಕ್ಕೆ ಎರಡೂ ಬಸ್ನಲ್ಲಿದ್ದ ಒಟ್ಟು 31 ಜನರಿಗೆ ತೀವ್ರವಾಗಿ ಪೆಟ್ಟುಬಿದ್ದಿದೆ. ಬಹುತೇಕರಿಗೆ ಹಲ್ಲು ಮುರಿದಿವೆ, ಮೂಗಿಗೆ ಪೆಟ್ಟು ಬ್ದ್ದಿದಿದೆ.</p>.<p>ತುರ್ತು ಚಿಕಿತ್ಸಾ ವಾಹನ ಆಗಮಿಸಿ ಗಾಯಗೊಂಡವರನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿತು. 3 ಪ್ರಯಾಣಿಕರಿಗೆ ಕೈ ಕಾಲು ಮೂಳೆ ಮುರಿದಿದ್ದು ದಾವಣಗೆರೆಗೆ ಕಳುಹಿಸಲಾಯ್ತು.</p>.<p>ಬಸ್ಗಳು ಹೊಸಪೇಟೆಯಿಂದ ಧರ್ಮಸ್ಥಳಕ್ಕೆ ಹಾಗೂ ಸಕಲೇಶಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ಪ್ರಯಾಣಿಕರಿಂದ ತುಂಬಿದ್ದವು.</p>.<p>ಗಾಯಗೊಂಡವರನ್ನು ಹಾಗೂ ಉಳಿದ ಪ್ರಯಾಣಿಕರನ್ನು ಬೇರೆ ಬಸ್ಗಳಲ್ಲಿ ಕಳುಹಿಸಿಕೊಟ್ಟರು. ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.</p>.<p>ಸುಮಾರು ಒಂದು ಗಂಟೆಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸಿದವು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿದ್ದರು. ತನಿಖೆ ಮುಂದುವರಿದಿದೆ.</p>.<p><strong>ಆಟೋ ನಿಷೇಧಕ್ಕೆ ಆಗ್ರಹ:</strong> ಪ್ರತಿನಿತ್ಯ ಹರಿಹರಕ್ಕೆ ತ್ರಿಚಕ್ರ ವಾಹನ ಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿವೆ. ಸಾರಿಗೆ ಇಲಾಖೆ ನಿರ್ಲಕ್ಷದಿಂದ ಅಪಘಾತ ಸಂಭವಿಸುತ್ತಿದೆ ಎಂದು ಬಸ್ ಚಾಲಕರು ಆಟೋ ನಿಷೇಧ ಮಾಡಲು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಗ್ರಾಮದ ಹೊರವಲಯದಲ್ಲಿನ ರಾಜ್ಯ ಹೆದ್ದಾರಿ-25ರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳು ಗುರುವಾರ ಪರಸ್ಪರ ಡಿಕ್ಕಿ ಹೊಡೆದ ಕಾರಣ 31 ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.</p>.<p>ಹರಿಹರದ ಕಡೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ವೇಗವಾಗಿ ಬಸ್ಸನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಿದೆ. ಅಪಘಾತ ತಪ್ಪಿಸುವ ವೇಳೆ ಎದುರುಗಡೆಯಿಂದ ಬಂದ ಬಸ್ಗೆ ಡಿಕ್ಕಿ ಹೊಡೆದಿದೆ.</p>.<p>ಬ್ರೇಕ್ ಹಾಕಿದ ರಭಸಕ್ಕೆ ಎರಡೂ ಬಸ್ನಲ್ಲಿದ್ದ ಒಟ್ಟು 31 ಜನರಿಗೆ ತೀವ್ರವಾಗಿ ಪೆಟ್ಟುಬಿದ್ದಿದೆ. ಬಹುತೇಕರಿಗೆ ಹಲ್ಲು ಮುರಿದಿವೆ, ಮೂಗಿಗೆ ಪೆಟ್ಟು ಬ್ದ್ದಿದಿದೆ.</p>.<p>ತುರ್ತು ಚಿಕಿತ್ಸಾ ವಾಹನ ಆಗಮಿಸಿ ಗಾಯಗೊಂಡವರನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿತು. 3 ಪ್ರಯಾಣಿಕರಿಗೆ ಕೈ ಕಾಲು ಮೂಳೆ ಮುರಿದಿದ್ದು ದಾವಣಗೆರೆಗೆ ಕಳುಹಿಸಲಾಯ್ತು.</p>.<p>ಬಸ್ಗಳು ಹೊಸಪೇಟೆಯಿಂದ ಧರ್ಮಸ್ಥಳಕ್ಕೆ ಹಾಗೂ ಸಕಲೇಶಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ಪ್ರಯಾಣಿಕರಿಂದ ತುಂಬಿದ್ದವು.</p>.<p>ಗಾಯಗೊಂಡವರನ್ನು ಹಾಗೂ ಉಳಿದ ಪ್ರಯಾಣಿಕರನ್ನು ಬೇರೆ ಬಸ್ಗಳಲ್ಲಿ ಕಳುಹಿಸಿಕೊಟ್ಟರು. ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.</p>.<p>ಸುಮಾರು ಒಂದು ಗಂಟೆಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸಿದವು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿದ್ದರು. ತನಿಖೆ ಮುಂದುವರಿದಿದೆ.</p>.<p><strong>ಆಟೋ ನಿಷೇಧಕ್ಕೆ ಆಗ್ರಹ:</strong> ಪ್ರತಿನಿತ್ಯ ಹರಿಹರಕ್ಕೆ ತ್ರಿಚಕ್ರ ವಾಹನ ಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿವೆ. ಸಾರಿಗೆ ಇಲಾಖೆ ನಿರ್ಲಕ್ಷದಿಂದ ಅಪಘಾತ ಸಂಭವಿಸುತ್ತಿದೆ ಎಂದು ಬಸ್ ಚಾಲಕರು ಆಟೋ ನಿಷೇಧ ಮಾಡಲು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>