<p><strong>ಬೆಂಗಳೂರು: </strong>ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ನವೆಂಬರ್ ತಿಂಗಳ ಬಸ್ ದಿನದ ಅಂಗವಾಗಿ ಏರ್ಪಡಿಸಿದ್ದ `ಉತ್ತಮ ಬಸ್ ದಿನ ಭಿತ್ತಿಪತ್ರ ಹಾಗೂ ಘೋಷಣೆ~ ಎಂಬ ಸ್ಪರ್ಧೆಯಲ್ಲಿ ಅನಿರುದ್ದ ತಿವಾರಿ, ಪಿ. ಸಂಕೀರ್ತ್, ಎನ್.ಪಿ. ಸಾಯಿ ಗಣೇಶ್ ಹಾಗೂ ಎಂ.ಎ. ಶಶಾಂಕ್ ಜಂಟಿಯಾಗಿ ರೂಪಿಸಿದ ಭಿತ್ತಿಪತ್ರಕ್ಕೆ ಉತ್ತಮ ಬಹುಮಾನ ಲಭಿಸಿದ್ದು, ಈ ತಂಡ ಒಟ್ಟು 15 ಸಾವಿರ ರೂಪಾಯಿ ನಗದು ಬಹುಮಾನ ಗೆದ್ದುಕೊಂಡಿದೆ.<br /> <br /> `ನಿಮ್ಮ ವಾಹನಕ್ಕಿಂದು ವಿರಾಮ, ಬಿಎಂಟಿಸಿಯೊಂದಿಗೆ ಆರಾಮ, ಮಾಲಿನ್ಯಕ್ಕೆ ಹೇಳಿ ವಿದಾಯ~ ಎಂಬುದು ಬಹುಮಾನಿತ ಘೋಷಣೆಯಾಗಿದೆ.ಅಲ್ಲದೆ, ಅಭಿಲಾಷ್ ಗೋಪಿನಾಥ್, ಶಶಾಂಕ್ ಶಾಸ್ತ್ರಿ, ಕೇಶವಮೂರ್ತಿ, ರಾಘವೇಂದ್ರಸಿಂಗ್ ಹಾಗೂ ಅಖಿಲ್ ಗಿರಿಜನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಈ ಐವರಿಗೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.<br /> <br /> `ಸುಸ್ಥಿರ ಸಾರಿಗೆ~ ಸಂದೇಶವನ್ನು ಸಾರುವ ಪ್ರಮುಖ ಉದ್ದೇಶದಿಂದ ಬಿಎಂಟಿಸಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಗೆ ಕಳಿಸಿದ ಭಿತ್ತಿಪತ್ರಗಳನ್ನು ಎರಡು ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಅಂತಿಮವಾಗಿ ಉತ್ತಮ ಭಿತ್ತಿ ಪತ್ರಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.<br /> <br /> ನಗರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಅವರು ಉತ್ತಮ ಭಿತ್ತಿಪತ್ರವನ್ನು ಅನಾವರಣಗೊಳಿಸುವುದರ ಜತೆಗೆ, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.<br /> <br /> ಆನಂತರ ಮಾತನಾಡಿದ ಅವರು, ನಗರದಲ್ಲಿ ವಾಹನ ದಟ್ಟಣೆ ಹಾಗೂ ಒತ್ತಡವನ್ನು ನಿಯಂತ್ರಿಸಲು ಸಾರ್ವಜನಿಕರು ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುವ ಮೂಲಕ ಬಸ್ ದಿನ ಪ್ರಚಾರಕ್ಕೆ ವ್ಯಾಪಕ ಬೆಂಬಲ ಸೂಚಿಸಬೇಕು ಎಂದು ಕರೆ ನೀಡಿದರು.<br /> <br /> ಭಿತ್ತಿಪತ್ರ ಸ್ಪರ್ಧೆಯ ವಿಜೇತರು ಮಾತನಾಡಿ, ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಭಿತ್ತಿಪತ್ರ ರೂಪಿಸುವ ಕಾರ್ಯ ವಹಿಸುವ ಬದಲಿಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.ಅಲ್ಲದೆ, ವಾರ್ಷಿಕ ಬಸ್ ದಿನ ಸ್ಪರ್ಧೆಯನ್ನು ಏರ್ಪಡಿಸುವಂತೆಯೂ ಸಲಹೆ ಮಾಡಿದರು.<br /> ನಗರ ಭೂ ಸಾರಿಗೆ ಇಲಾಖೆಯ ಆಯಕ್ತರಾದ ವಿ. ಮಂಜುಳಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ನವೆಂಬರ್ ತಿಂಗಳ ಬಸ್ ದಿನದ ಅಂಗವಾಗಿ ಏರ್ಪಡಿಸಿದ್ದ `ಉತ್ತಮ ಬಸ್ ದಿನ ಭಿತ್ತಿಪತ್ರ ಹಾಗೂ ಘೋಷಣೆ~ ಎಂಬ ಸ್ಪರ್ಧೆಯಲ್ಲಿ ಅನಿರುದ್ದ ತಿವಾರಿ, ಪಿ. ಸಂಕೀರ್ತ್, ಎನ್.ಪಿ. ಸಾಯಿ ಗಣೇಶ್ ಹಾಗೂ ಎಂ.ಎ. ಶಶಾಂಕ್ ಜಂಟಿಯಾಗಿ ರೂಪಿಸಿದ ಭಿತ್ತಿಪತ್ರಕ್ಕೆ ಉತ್ತಮ ಬಹುಮಾನ ಲಭಿಸಿದ್ದು, ಈ ತಂಡ ಒಟ್ಟು 15 ಸಾವಿರ ರೂಪಾಯಿ ನಗದು ಬಹುಮಾನ ಗೆದ್ದುಕೊಂಡಿದೆ.<br /> <br /> `ನಿಮ್ಮ ವಾಹನಕ್ಕಿಂದು ವಿರಾಮ, ಬಿಎಂಟಿಸಿಯೊಂದಿಗೆ ಆರಾಮ, ಮಾಲಿನ್ಯಕ್ಕೆ ಹೇಳಿ ವಿದಾಯ~ ಎಂಬುದು ಬಹುಮಾನಿತ ಘೋಷಣೆಯಾಗಿದೆ.ಅಲ್ಲದೆ, ಅಭಿಲಾಷ್ ಗೋಪಿನಾಥ್, ಶಶಾಂಕ್ ಶಾಸ್ತ್ರಿ, ಕೇಶವಮೂರ್ತಿ, ರಾಘವೇಂದ್ರಸಿಂಗ್ ಹಾಗೂ ಅಖಿಲ್ ಗಿರಿಜನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಈ ಐವರಿಗೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.<br /> <br /> `ಸುಸ್ಥಿರ ಸಾರಿಗೆ~ ಸಂದೇಶವನ್ನು ಸಾರುವ ಪ್ರಮುಖ ಉದ್ದೇಶದಿಂದ ಬಿಎಂಟಿಸಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಗೆ ಕಳಿಸಿದ ಭಿತ್ತಿಪತ್ರಗಳನ್ನು ಎರಡು ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಅಂತಿಮವಾಗಿ ಉತ್ತಮ ಭಿತ್ತಿ ಪತ್ರಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.<br /> <br /> ನಗರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಅವರು ಉತ್ತಮ ಭಿತ್ತಿಪತ್ರವನ್ನು ಅನಾವರಣಗೊಳಿಸುವುದರ ಜತೆಗೆ, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.<br /> <br /> ಆನಂತರ ಮಾತನಾಡಿದ ಅವರು, ನಗರದಲ್ಲಿ ವಾಹನ ದಟ್ಟಣೆ ಹಾಗೂ ಒತ್ತಡವನ್ನು ನಿಯಂತ್ರಿಸಲು ಸಾರ್ವಜನಿಕರು ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುವ ಮೂಲಕ ಬಸ್ ದಿನ ಪ್ರಚಾರಕ್ಕೆ ವ್ಯಾಪಕ ಬೆಂಬಲ ಸೂಚಿಸಬೇಕು ಎಂದು ಕರೆ ನೀಡಿದರು.<br /> <br /> ಭಿತ್ತಿಪತ್ರ ಸ್ಪರ್ಧೆಯ ವಿಜೇತರು ಮಾತನಾಡಿ, ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಭಿತ್ತಿಪತ್ರ ರೂಪಿಸುವ ಕಾರ್ಯ ವಹಿಸುವ ಬದಲಿಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.ಅಲ್ಲದೆ, ವಾರ್ಷಿಕ ಬಸ್ ದಿನ ಸ್ಪರ್ಧೆಯನ್ನು ಏರ್ಪಡಿಸುವಂತೆಯೂ ಸಲಹೆ ಮಾಡಿದರು.<br /> ನಗರ ಭೂ ಸಾರಿಗೆ ಇಲಾಖೆಯ ಆಯಕ್ತರಾದ ವಿ. ಮಂಜುಳಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>