<p>ರಾಯಬಾಗ: `ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳನ್ನು ಸಂಪೂರ್ಣವಾಗಿ ನವೀಕರಿಸ ಲಾಗುವುದು. ಈ ನಿಟ್ಟಿನಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ರಾಯಬಾಗ -ಬೆಕ್ಕೇರಿ ರಸ್ತೆ ಸುಧಾರಣೆ ಕಾಮಗಾರಿ ಪ್ರಾರಂಭ ವಾಗಿದೆ. ತೋಟದ ರಸ್ತೆಗಳಿಗೂ ಸಹ ಆದ್ಯತೆ ನೀಡಲಾಗುವುದು. ಈ ರಸ್ತೆಯ ಹಳ್ಳಕ್ಕೆ ಸಂತುಬಾಯಿ ದೇವಸ್ಥಾನದ ಬಳಿ ಬಾಂದಾರ ಹಾಗೂ ಸೇತುವೆ ನಿರ್ಮಿಸಲಾಗುವುದು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. <br /> <br /> ಚಿಕ್ಕ ನೀರಾವರಿ ಇಲಾಖೆಯಿಂದ ನಬಾರ್ಡ ಯೋಜನೆಯಡಿ 40 ಲಕ್ಷ ವೆಚ್ಚದಲ್ಲಿ ಸಂತುಬಾಯಿ ದೇವಸ್ಥಾನದ ಬಳಿ ರಾಯಬಾಗ- ಬೆಕ್ಕೇರಿ ರಸ್ತೆಗೆ ಭಾನುವಾರ ಬಾಂದಾರ ಮತ್ತು ರಸ್ತೆ ಸೇತುವೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.<br /> <br /> ಚಿಕ್ಕ ನೀರಾವರಿ ಎಂಜಿನಿಯರ ಐ.ಎಸ್. ಹತ್ತಿ, ಈ ಬಾಂದಾರದಿಂದ ಸುತ್ತಮುತ್ತಲಿನ ರೈತರ 100 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. <br /> <br /> ರಾಯಬಾಗ-ಹಾರೂಗೇರಿಯ ಮುಖ್ಯ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣಕ್ಕಾಗಿ ಒಂದು ಕೋಟಿ ಮಂಜೂರಾಗಿದ್ದು ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ ಎಂದು ತಿಳಿಸಿದರು. <br /> <br /> ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೊಳವೆ ಬಾವಿ ಗಳ ಆಳ ಮಾಡಲು ಮತ್ತು ಮೋಟರ್ಗಳನ್ನು ಅಳವಡಿಸಲು ಮತ್ತೆ ರೂ. 25ಲಕ್ಷ ಬಿಡುಗಡೆಯಾಗಿವೆ ಎಂದರು.<br /> <br /> ತಾ.ಪಂ. ಅಧ್ಯಕ್ಷ ಲಕ್ಷ್ಮಣ ಗವಾನಿ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪುರೆ, ಸುರೇಶ ಮಾಳಿ, ಸದಾ ಹಳಿಂಗಳಿ, ಶಿವಲಿಂಗ ಕುಲಗೋಡ, ಮಾರುತಿ ಕುಲಗೋಡ, ಶಂಕರ ಗೋಕಾಕ, ದುಂಡಪ್ಪ ಮೇತ್ರಿ, ಅಜ್ಜಪ್ಪ ಕುಲಗೋಡ, ಬಾಬು ಮೇತ್ರಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಬಾಗ: `ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳನ್ನು ಸಂಪೂರ್ಣವಾಗಿ ನವೀಕರಿಸ ಲಾಗುವುದು. ಈ ನಿಟ್ಟಿನಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ರಾಯಬಾಗ -ಬೆಕ್ಕೇರಿ ರಸ್ತೆ ಸುಧಾರಣೆ ಕಾಮಗಾರಿ ಪ್ರಾರಂಭ ವಾಗಿದೆ. ತೋಟದ ರಸ್ತೆಗಳಿಗೂ ಸಹ ಆದ್ಯತೆ ನೀಡಲಾಗುವುದು. ಈ ರಸ್ತೆಯ ಹಳ್ಳಕ್ಕೆ ಸಂತುಬಾಯಿ ದೇವಸ್ಥಾನದ ಬಳಿ ಬಾಂದಾರ ಹಾಗೂ ಸೇತುವೆ ನಿರ್ಮಿಸಲಾಗುವುದು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. <br /> <br /> ಚಿಕ್ಕ ನೀರಾವರಿ ಇಲಾಖೆಯಿಂದ ನಬಾರ್ಡ ಯೋಜನೆಯಡಿ 40 ಲಕ್ಷ ವೆಚ್ಚದಲ್ಲಿ ಸಂತುಬಾಯಿ ದೇವಸ್ಥಾನದ ಬಳಿ ರಾಯಬಾಗ- ಬೆಕ್ಕೇರಿ ರಸ್ತೆಗೆ ಭಾನುವಾರ ಬಾಂದಾರ ಮತ್ತು ರಸ್ತೆ ಸೇತುವೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.<br /> <br /> ಚಿಕ್ಕ ನೀರಾವರಿ ಎಂಜಿನಿಯರ ಐ.ಎಸ್. ಹತ್ತಿ, ಈ ಬಾಂದಾರದಿಂದ ಸುತ್ತಮುತ್ತಲಿನ ರೈತರ 100 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. <br /> <br /> ರಾಯಬಾಗ-ಹಾರೂಗೇರಿಯ ಮುಖ್ಯ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣಕ್ಕಾಗಿ ಒಂದು ಕೋಟಿ ಮಂಜೂರಾಗಿದ್ದು ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ ಎಂದು ತಿಳಿಸಿದರು. <br /> <br /> ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೊಳವೆ ಬಾವಿ ಗಳ ಆಳ ಮಾಡಲು ಮತ್ತು ಮೋಟರ್ಗಳನ್ನು ಅಳವಡಿಸಲು ಮತ್ತೆ ರೂ. 25ಲಕ್ಷ ಬಿಡುಗಡೆಯಾಗಿವೆ ಎಂದರು.<br /> <br /> ತಾ.ಪಂ. ಅಧ್ಯಕ್ಷ ಲಕ್ಷ್ಮಣ ಗವಾನಿ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪುರೆ, ಸುರೇಶ ಮಾಳಿ, ಸದಾ ಹಳಿಂಗಳಿ, ಶಿವಲಿಂಗ ಕುಲಗೋಡ, ಮಾರುತಿ ಕುಲಗೋಡ, ಶಂಕರ ಗೋಕಾಕ, ದುಂಡಪ್ಪ ಮೇತ್ರಿ, ಅಜ್ಜಪ್ಪ ಕುಲಗೋಡ, ಬಾಬು ಮೇತ್ರಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>