<p><strong>ಕಿಸ್ತಾವರ್ (ಜಮ್ಮು ಮತ್ತು ಕಾಶ್ಮೀರ) (ಐಎಎನ್ಎಸ್):</strong> ದೆಹಲಿ ಹೈಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟದ ಹೊಣೆ ಹೊತ್ತು ಇ-ಮೇಲ್ ಕಳುಹಿಸಿದ ಮೂವರು ಆರೋಪಿಗಳು ಹಾಗೂ ಇತರ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ ನಂತರ ಇಲ್ಲಿಯ ಸೈಬರ್ ಕೆಫೆ, ಇಂಟರ್ನೆಟ್ ಮತ್ತು ಬ್ರೌಸಿಂಗ್ ಕೇಂದ್ರಗಳ ವ್ಯಾಪಾರ, ವಹಿವಾಟು ಗಣನೀಯವಾಗಿ ಕುಸಿದಿದೆ. <br /> <br /> ಇದು ಸೈಬರ್ ಕೆಫೆಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ನೂರಾರು ಯುವಕರು ಭೇಟಿ ನೀಡುತ್ತಿದ್ದ ಗ್ಲೋಬಲ್ ಇಂಟರ್ನೆಟ್ ಕೆಫೆಯ ಬಾಗಿಲು ಮುಚ್ಚಿದೆ. ಇಲ್ಲಿಂದಲೇ ಆರೋಪಿಗಳು ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದರು ಎನ್ನಲಾಗಿದೆ. ಈ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ತೀವ್ರ ಇಳಿಮುಖವಾಗಿದೆ.<br /> <br /> ಅದರ ಮಾಲೀಕ ಖ್ವಾಜಾ ಮಹಮ್ಮದ್ ಅಜೀಜ್, `ನಾನು ಈಗಾಗಲೇ ಸಾಕಷ್ಟು ಉಡುಗಿ ಹೋಗಿದ್ದೇನೆ~ ಎಂದು ಸುದ್ದಿಗಾರರ ಬಳಿ ಮಾತನಾಡಲು ನಿರಾಕರಿಸಿದರು. ಐದು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ ವಶದಲ್ಲಿದ್ದ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಉಳಿದಂತೆ ನಗರದ ಅನೇಕ ಸೈಬರ್ ಕೆಫೆ, ಇಂಟರ್ನೆಟ್ ಕೇಂದ್ರಗಳು ಬಾಗಿಲು ಮುಚ್ಚಿವೆ.<br /> <br /> ಘಟನೆಯ ನಂತರ ಭದ್ರತಾ ಸಂಸ್ಥೆಗಳು ಇಂಟರ್ನೆಟ್ ಕೇಂದ್ರ ಮತ್ತು ಸೈಬರ್ ಕೆಫೆಗಳಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿವೆ. ಈ ಕೇಂದ್ರಗಳ ಮಾಲೀಕರು ಕಡ್ಡಾಯವಾಗಿ ಪೊಲೀಸ್ ಠಾಣೆಗಳಲ್ಲಿ ಹೆಸರು ನೋಂದಾಯಿಸಬೇಕು ಮತ್ತು ಸಿಸಿಟಿವಿ ಅಳವಡಿಸಬೇಕು ಎಂದು ಆದೇಶ ನೀಡಿದ್ದಾರೆ. ಇದು ತಮ್ಮಿಂದಾಗದ ಕೆಲಸ ಎಂದು ಮಾಲೀಕರು ಅಂಗಡಿಗಳ ಬಾಗಿಲು ಮುಚ್ಚಿದ್ದಾರೆ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಸ್ತಾವರ್ (ಜಮ್ಮು ಮತ್ತು ಕಾಶ್ಮೀರ) (ಐಎಎನ್ಎಸ್):</strong> ದೆಹಲಿ ಹೈಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟದ ಹೊಣೆ ಹೊತ್ತು ಇ-ಮೇಲ್ ಕಳುಹಿಸಿದ ಮೂವರು ಆರೋಪಿಗಳು ಹಾಗೂ ಇತರ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ ನಂತರ ಇಲ್ಲಿಯ ಸೈಬರ್ ಕೆಫೆ, ಇಂಟರ್ನೆಟ್ ಮತ್ತು ಬ್ರೌಸಿಂಗ್ ಕೇಂದ್ರಗಳ ವ್ಯಾಪಾರ, ವಹಿವಾಟು ಗಣನೀಯವಾಗಿ ಕುಸಿದಿದೆ. <br /> <br /> ಇದು ಸೈಬರ್ ಕೆಫೆಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ನೂರಾರು ಯುವಕರು ಭೇಟಿ ನೀಡುತ್ತಿದ್ದ ಗ್ಲೋಬಲ್ ಇಂಟರ್ನೆಟ್ ಕೆಫೆಯ ಬಾಗಿಲು ಮುಚ್ಚಿದೆ. ಇಲ್ಲಿಂದಲೇ ಆರೋಪಿಗಳು ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದರು ಎನ್ನಲಾಗಿದೆ. ಈ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದ ನಂತರ ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ತೀವ್ರ ಇಳಿಮುಖವಾಗಿದೆ.<br /> <br /> ಅದರ ಮಾಲೀಕ ಖ್ವಾಜಾ ಮಹಮ್ಮದ್ ಅಜೀಜ್, `ನಾನು ಈಗಾಗಲೇ ಸಾಕಷ್ಟು ಉಡುಗಿ ಹೋಗಿದ್ದೇನೆ~ ಎಂದು ಸುದ್ದಿಗಾರರ ಬಳಿ ಮಾತನಾಡಲು ನಿರಾಕರಿಸಿದರು. ಐದು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ ವಶದಲ್ಲಿದ್ದ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಉಳಿದಂತೆ ನಗರದ ಅನೇಕ ಸೈಬರ್ ಕೆಫೆ, ಇಂಟರ್ನೆಟ್ ಕೇಂದ್ರಗಳು ಬಾಗಿಲು ಮುಚ್ಚಿವೆ.<br /> <br /> ಘಟನೆಯ ನಂತರ ಭದ್ರತಾ ಸಂಸ್ಥೆಗಳು ಇಂಟರ್ನೆಟ್ ಕೇಂದ್ರ ಮತ್ತು ಸೈಬರ್ ಕೆಫೆಗಳಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿವೆ. ಈ ಕೇಂದ್ರಗಳ ಮಾಲೀಕರು ಕಡ್ಡಾಯವಾಗಿ ಪೊಲೀಸ್ ಠಾಣೆಗಳಲ್ಲಿ ಹೆಸರು ನೋಂದಾಯಿಸಬೇಕು ಮತ್ತು ಸಿಸಿಟಿವಿ ಅಳವಡಿಸಬೇಕು ಎಂದು ಆದೇಶ ನೀಡಿದ್ದಾರೆ. ಇದು ತಮ್ಮಿಂದಾಗದ ಕೆಲಸ ಎಂದು ಮಾಲೀಕರು ಅಂಗಡಿಗಳ ಬಾಗಿಲು ಮುಚ್ಚಿದ್ದಾರೆ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>