<p><strong>ಅರಸೀಕೆರೆ: </strong>ತಾಲ್ಲೂಕಿನಲ್ಲಿ ಕಳೆದ 20 ದಿನಗಳಿಂದ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿವೆ. ರೈತರ ಮೊಗದಲ್ಲಿ ಆತಂಕದ ಛಾಯೆ ಆವರಿಸಿದೆ. ಕಳೆದ 5 ವರ್ಷಗಳಿಂದ ವರುಣನ ಅವಕೃಪೆಗೆ ಒಳಗಾಗಿ ಸತತ ಬರದಿಂದ ತತ್ತರಿಸಿರುವ ತಾಲ್ಲೂಕಿನ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.<br /> <br /> ಕಳೆದ ಒಂದು ತಿಂಗಳಿನಿಂದ ಮಳೆ ಪ್ರಮಾಣ ಕುಸಿಯುತ್ತ ಬಂದಿದೆ. ಪ್ರಸ್ತುತ ಆಗಸ್ಟ್ ತಿಂಗಳಲ್ಲಿ ಒಟ್ಟಾರೆ ತಾಲ್ಲೂಕಿನಲ್ಲಿ ಶೇ 80ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.<br /> <br /> ರಾಗಿ ಬಿತ್ತನೆಗೆ ಬೇಕಾದ ಮಳೆ ಮಾಯವಾಗಿ ಬಿರುಬಿಸಿಲು ಹೆಚ್ಚುತ್ತಿದೆ. ತೇವಾಂಶ ಕೊರತೆಯಿಂದ ರೈತರ ಪ್ರಮುಖ ಆಹಾರ ಬೆಳೆ ಹಾಗೂ ಜಾನುವಾರುಗಳ ಮೇವಿನ ಬೆಳೆ ರಾಗಿ, ಸಾವೆ, ನವಣೆ, ಕೆಂಪು ಜೋಳದ ಬೆಳೆಗಳು ಬಾಡುತ್ತಿವೆ.<br /> <br /> ಈ ವರ್ಷ ಮುಂಗಾರಿನಲ್ಲಿ ಸಮೃದ್ಧ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನಾ ವರದಿಯಿಂದ ರೈತ ಸಮುದಾಯದಲ್ಲಿ ಆಶಾ ಭಾವನೆ ಮೂಡಿತ್ತು. ಬರಗಾಲದಿಂದ ಈ ವರ್ಷ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. 65,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು.<br /> <br /> ತಾಲ್ಲೂಕಿನಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಹದ ಮಳೆಯಾದ ಪರಿಣಾಮವಾಗಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದರು.<br /> <br /> ಪಂಪ್ಸೆಟ್ ಹೊಂದಿರುವವರು ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.<br /> ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. <br /> <br /> ಆದರೆ, ಕಳೆದ 20 ದಿನಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ವಾಡಿಕೆಗಿಂತ ಕಡಿಮೆ ಮಳೆ ಯಾಗಿದೆಯಾದರೂ ಸಮನಾಂತರವಾಗಿ ಬಿದ್ದಿಲ್ಲ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ 18.9 ಮಿ.ಮೀ, ಆ.1ರಿಂದ 8ರವರೆಗೆ ಬಿದ್ದಿರುವ ಮಳೆ 1.7 ಮಿ.ಮೀ.ನಷ್ಟು ಮಾತ್ರ.<br /> <br /> ಈಗ ಮಳೆ ಬಾರದೆ ಇದ್ದರೆ ಬೆಳೆ ಹಾನಿಯಾಗುವ ಆಪಾಯ ಎದುರಾಗಿದೆ. ರೈತರು ಪ್ರತಿನಿತ್ಯ ಆಕಾಶದತ್ತ ಮುಖಮಾಡಿ ಮಳೆಯ ಬರುವಿಗಾಗಿ ಕಾಯುತ್ತಿದ್ದಾರೆ.<br /> <br /> ***<br /> ಇನ್ನೊಂದು ವಾರದೊಳಗೆ ಮಳೆ ಬಾರದೇ ಹೋದರೆ ಜಾನುವಾರು ಮೇವಿನ ಬೆಳೆಯಾದ ರಾಗಿ, ಹಿಂಗಾರು ಸಾವೆ ಹುಲ್ಲು ರೈತರ ಕೈ ಸೇರುವುದಿಲ್ಲ.<br /> <em><strong>-ನಂಜುಂಡಪ್ಪ, ರೈತ, ಹಾರನಹಳ್ಳಿ ಗ್ರಾಮ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ: </strong>ತಾಲ್ಲೂಕಿನಲ್ಲಿ ಕಳೆದ 20 ದಿನಗಳಿಂದ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿವೆ. ರೈತರ ಮೊಗದಲ್ಲಿ ಆತಂಕದ ಛಾಯೆ ಆವರಿಸಿದೆ. ಕಳೆದ 5 ವರ್ಷಗಳಿಂದ ವರುಣನ ಅವಕೃಪೆಗೆ ಒಳಗಾಗಿ ಸತತ ಬರದಿಂದ ತತ್ತರಿಸಿರುವ ತಾಲ್ಲೂಕಿನ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.<br /> <br /> ಕಳೆದ ಒಂದು ತಿಂಗಳಿನಿಂದ ಮಳೆ ಪ್ರಮಾಣ ಕುಸಿಯುತ್ತ ಬಂದಿದೆ. ಪ್ರಸ್ತುತ ಆಗಸ್ಟ್ ತಿಂಗಳಲ್ಲಿ ಒಟ್ಟಾರೆ ತಾಲ್ಲೂಕಿನಲ್ಲಿ ಶೇ 80ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.<br /> <br /> ರಾಗಿ ಬಿತ್ತನೆಗೆ ಬೇಕಾದ ಮಳೆ ಮಾಯವಾಗಿ ಬಿರುಬಿಸಿಲು ಹೆಚ್ಚುತ್ತಿದೆ. ತೇವಾಂಶ ಕೊರತೆಯಿಂದ ರೈತರ ಪ್ರಮುಖ ಆಹಾರ ಬೆಳೆ ಹಾಗೂ ಜಾನುವಾರುಗಳ ಮೇವಿನ ಬೆಳೆ ರಾಗಿ, ಸಾವೆ, ನವಣೆ, ಕೆಂಪು ಜೋಳದ ಬೆಳೆಗಳು ಬಾಡುತ್ತಿವೆ.<br /> <br /> ಈ ವರ್ಷ ಮುಂಗಾರಿನಲ್ಲಿ ಸಮೃದ್ಧ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನಾ ವರದಿಯಿಂದ ರೈತ ಸಮುದಾಯದಲ್ಲಿ ಆಶಾ ಭಾವನೆ ಮೂಡಿತ್ತು. ಬರಗಾಲದಿಂದ ಈ ವರ್ಷ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. 65,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು.<br /> <br /> ತಾಲ್ಲೂಕಿನಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಹದ ಮಳೆಯಾದ ಪರಿಣಾಮವಾಗಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದರು.<br /> <br /> ಪಂಪ್ಸೆಟ್ ಹೊಂದಿರುವವರು ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.<br /> ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. <br /> <br /> ಆದರೆ, ಕಳೆದ 20 ದಿನಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ವಾಡಿಕೆಗಿಂತ ಕಡಿಮೆ ಮಳೆ ಯಾಗಿದೆಯಾದರೂ ಸಮನಾಂತರವಾಗಿ ಬಿದ್ದಿಲ್ಲ. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ 18.9 ಮಿ.ಮೀ, ಆ.1ರಿಂದ 8ರವರೆಗೆ ಬಿದ್ದಿರುವ ಮಳೆ 1.7 ಮಿ.ಮೀ.ನಷ್ಟು ಮಾತ್ರ.<br /> <br /> ಈಗ ಮಳೆ ಬಾರದೆ ಇದ್ದರೆ ಬೆಳೆ ಹಾನಿಯಾಗುವ ಆಪಾಯ ಎದುರಾಗಿದೆ. ರೈತರು ಪ್ರತಿನಿತ್ಯ ಆಕಾಶದತ್ತ ಮುಖಮಾಡಿ ಮಳೆಯ ಬರುವಿಗಾಗಿ ಕಾಯುತ್ತಿದ್ದಾರೆ.<br /> <br /> ***<br /> ಇನ್ನೊಂದು ವಾರದೊಳಗೆ ಮಳೆ ಬಾರದೇ ಹೋದರೆ ಜಾನುವಾರು ಮೇವಿನ ಬೆಳೆಯಾದ ರಾಗಿ, ಹಿಂಗಾರು ಸಾವೆ ಹುಲ್ಲು ರೈತರ ಕೈ ಸೇರುವುದಿಲ್ಲ.<br /> <em><strong>-ನಂಜುಂಡಪ್ಪ, ರೈತ, ಹಾರನಹಳ್ಳಿ ಗ್ರಾಮ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>