<p><strong>ಸಂತೇಬೆನ್ನೂರು:</strong> ಜಿಲ್ಲೆಯಾದ್ಯಂತ ಈವರೆಗೆ ಕನಿಷ್ಟ ಬಿತ್ತನೆಯಾಗಿದೆ. ಉಳಿದಂತೆ ಬಾರದ ಮಳೆಗಾಗಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಂಡು ನಿತ್ಯ ರೈತರು ಮಳೆಗಾಗಿ ಹಾತೊರೆಯುತ್ತಿದ್ದಾರೆ.<br /> <br /> ಸುಮಾರು 8 ಸಾವಿರ ಹೆಕ್ಟೇರ್ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ 6,640 ಹೆಕ್ಟೇರ್ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ಜುಲೈ 15 ಅದರ ಬಿತ್ತನೆ ಪೂರೈಸಲು ಕೊನೆಯ ದಿನ. ಆನಂತರ ಬಿತ್ತನೆ ಕೈಗೊಂಡರೆ ಪೂರ್ಣ ಪ್ರಮಾಣದ ಫಸಲು ನಿರೀಕ್ಷೆ ಹುಸಿಯಾಗಲಿದೆ.<br /> <br /> ಉಳಿದಂತೆ ರಾಗಿ-1,000, ಶೇಂಗಾ-150, ಹೆಸರು-100, ಅವರೆ-100, ಅಲಸಂದೆ-50, ಹುರಳಿ-20, ಸೂರ್ಯಕಾಂತಿ-150 ಹೆಕ್ಟೇರ್ಗಳಲ್ಲಿ ಬೆಳೆಯಲಾಗುತ್ತಿದೆ.<br /> <br /> ತಿಂಗಳಾಂತ್ಯದಲ್ಲಿ ಮಳೆ ಬಾರದೆ ಹೋದರೆ ಕಡಿಮೆ ನೀರು ಬಯಸುವ ಬೆಳೆಗಳಿಗೆ ಮೊರೆ ಹೋಗುವುದು ಸೂಕ್ತ. ಈಗಾಗಲೇ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಂಡ ರೈತರು ಆತಂಕಕ್ಕೊಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಮದ್ ರಫಿ.<br /> <br /> ಮಳೆ ಕೊರತೆಯಿಂದಾಗಿ ಕಳೆದ 15 ದಿನಗಳ ಹಿಂದೆ ಬಿತ್ತಿದೆ ಪಾಪ್ಕಾರ್ನ್ ಜೋಳಕ್ಕೆ ಸುಳಿರೋಗ ಕಂಡುಬಂದಿದೆ. ಕಾರ್ಬೋಫಿರಾನ್ ಹರಳುಗಳನ್ನು ಪ್ರತಿ ಸಸಿ ಮೇಲೆ ಎರಡರಿಂದ ಮೂರು ಹರಳು ಉದುರಿಸುವ ಮೂಲಕ ಅಥವಾ ಮೊನೊಕ್ರೊಟೋಫಾಸ್ ಸಿಂಪಡಿಸಿ ತಡೆಗಟ್ಟಬೇಕು.<br /> <br /> <strong>ಬತ್ತಕ್ಕೆ ಕಾಂಡಕೊರಕ ಹುಳ</strong>: ನೀರಾವರಿ ಪ್ರದೇಶದ ಮಳೆಗಾಲದ ಬತ್ತದ ಬೆಳೆಗಾಗಿ ಸಸಿಮಡಿ ಮಾಡಲಾಗಿದೆ. ಹಲವೆಡೆ ಕಾಂಡಕೊರಕ ಹುಳಗಳ ಬಾಧೆ ಕಾಡುತ್ತಿದೆ. ಪ್ರೊಫೇನೋಫಾಸ್ ಔಷಧಿಯನ್ನು 1 ಲೀಟರ್ ನೀರಿಗೆ 2 ಎಂ.ಎಲ್. ಬೆರೆಸಿ ಸಿಂಪಡಿಸಿ ತಡೆಗಟ್ಟಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.<br /> <br /> ಮಳೆಯಿಲ್ಲದೇ ಬಿತ್ತನೆ ಮಾಡಲಾಗಿಲ್ಲವಾದ್ದರಿಂದ ಬರದ ಕರಿ ನೆರಳು ಆವರಿಸಿದೆ. ಹಾಗಾಗಿ, ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರಾದ ತಿಪ್ಪೇಶ್, ನಾಗರಾಜ್, ಚನ್ನಬಸಪ್ಪ ಆಗ್ರಹಿಸಿದ್ದಾರೆ.<br /> </p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು:</strong> ಜಿಲ್ಲೆಯಾದ್ಯಂತ ಈವರೆಗೆ ಕನಿಷ್ಟ ಬಿತ್ತನೆಯಾಗಿದೆ. ಉಳಿದಂತೆ ಬಾರದ ಮಳೆಗಾಗಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಂಡು ನಿತ್ಯ ರೈತರು ಮಳೆಗಾಗಿ ಹಾತೊರೆಯುತ್ತಿದ್ದಾರೆ.<br /> <br /> ಸುಮಾರು 8 ಸಾವಿರ ಹೆಕ್ಟೇರ್ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ 6,640 ಹೆಕ್ಟೇರ್ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ಜುಲೈ 15 ಅದರ ಬಿತ್ತನೆ ಪೂರೈಸಲು ಕೊನೆಯ ದಿನ. ಆನಂತರ ಬಿತ್ತನೆ ಕೈಗೊಂಡರೆ ಪೂರ್ಣ ಪ್ರಮಾಣದ ಫಸಲು ನಿರೀಕ್ಷೆ ಹುಸಿಯಾಗಲಿದೆ.<br /> <br /> ಉಳಿದಂತೆ ರಾಗಿ-1,000, ಶೇಂಗಾ-150, ಹೆಸರು-100, ಅವರೆ-100, ಅಲಸಂದೆ-50, ಹುರಳಿ-20, ಸೂರ್ಯಕಾಂತಿ-150 ಹೆಕ್ಟೇರ್ಗಳಲ್ಲಿ ಬೆಳೆಯಲಾಗುತ್ತಿದೆ.<br /> <br /> ತಿಂಗಳಾಂತ್ಯದಲ್ಲಿ ಮಳೆ ಬಾರದೆ ಹೋದರೆ ಕಡಿಮೆ ನೀರು ಬಯಸುವ ಬೆಳೆಗಳಿಗೆ ಮೊರೆ ಹೋಗುವುದು ಸೂಕ್ತ. ಈಗಾಗಲೇ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಂಡ ರೈತರು ಆತಂಕಕ್ಕೊಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಮದ್ ರಫಿ.<br /> <br /> ಮಳೆ ಕೊರತೆಯಿಂದಾಗಿ ಕಳೆದ 15 ದಿನಗಳ ಹಿಂದೆ ಬಿತ್ತಿದೆ ಪಾಪ್ಕಾರ್ನ್ ಜೋಳಕ್ಕೆ ಸುಳಿರೋಗ ಕಂಡುಬಂದಿದೆ. ಕಾರ್ಬೋಫಿರಾನ್ ಹರಳುಗಳನ್ನು ಪ್ರತಿ ಸಸಿ ಮೇಲೆ ಎರಡರಿಂದ ಮೂರು ಹರಳು ಉದುರಿಸುವ ಮೂಲಕ ಅಥವಾ ಮೊನೊಕ್ರೊಟೋಫಾಸ್ ಸಿಂಪಡಿಸಿ ತಡೆಗಟ್ಟಬೇಕು.<br /> <br /> <strong>ಬತ್ತಕ್ಕೆ ಕಾಂಡಕೊರಕ ಹುಳ</strong>: ನೀರಾವರಿ ಪ್ರದೇಶದ ಮಳೆಗಾಲದ ಬತ್ತದ ಬೆಳೆಗಾಗಿ ಸಸಿಮಡಿ ಮಾಡಲಾಗಿದೆ. ಹಲವೆಡೆ ಕಾಂಡಕೊರಕ ಹುಳಗಳ ಬಾಧೆ ಕಾಡುತ್ತಿದೆ. ಪ್ರೊಫೇನೋಫಾಸ್ ಔಷಧಿಯನ್ನು 1 ಲೀಟರ್ ನೀರಿಗೆ 2 ಎಂ.ಎಲ್. ಬೆರೆಸಿ ಸಿಂಪಡಿಸಿ ತಡೆಗಟ್ಟಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.<br /> <br /> ಮಳೆಯಿಲ್ಲದೇ ಬಿತ್ತನೆ ಮಾಡಲಾಗಿಲ್ಲವಾದ್ದರಿಂದ ಬರದ ಕರಿ ನೆರಳು ಆವರಿಸಿದೆ. ಹಾಗಾಗಿ, ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರಾದ ತಿಪ್ಪೇಶ್, ನಾಗರಾಜ್, ಚನ್ನಬಸಪ್ಪ ಆಗ್ರಹಿಸಿದ್ದಾರೆ.<br /> </p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>