<p><strong>ಗಂಗಾವತಿ</strong>: ಸ್ವಂತ ಉದ್ಯಮ, ವ್ಯವಹಾರಕ್ಕಾಗಿ ಬಡ ಕುಟುಂಬವನ್ನು ರಾತ್ರೋರಾತ್ರಿ ಬೀದಿಗೆ ತಳ್ಳಿ, ಅಧಿಕಾರ ದುರುಪಯೋಗ ಮಾಡಿಕೊಂಡ ಬಿ.ಎಸ್. ಯಡಿಯೂರಪ್ಪರ ಬಗ್ಗೆ ಇನ್ನೂ ಕನಿಕರವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೀರಶೈವ ಸಮುದಾಯವನ್ನು ಪ್ರಶ್ನಿಸಿದರು.<br /> <br /> ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ನ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಂಡ ಬಳಿಕ ಮಾತನಾಡಿದರು.<br /> <br /> ಸಮಾನತೆ, ಸಹಬಾಳ್ವೆಯಂಥ, ಶರಣರ ತತ್ವಾಧಾರ ಮೇಲೆ ಬೆಳೆದು ಬಂದಿರುವ ವೀರಶೈವ ಸಮಾಜದಲ್ಲಿ ಆ ತತ್ವ, ಆದರ್ಶಕ್ಕೆ ತದ್ವಿರುದ್ಧದಂತಿರುವ ಯಡಿಯೂರಪ್ಪ ಅಮಾನವೀಯತೆ ಮೈಗೂಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗದಲ್ಲಿ ಸಾಕಷ್ಟು ಆಸ್ತಿ ಮಾಡುವ ಮೂಲಕ ಅಭಿವೃದ್ಧಿಯಾಗಿದ್ದಾರೆ. ರೂ, 300 ಕೋಟಿ ಮೊತ್ತದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದಾರೆ. ಜನರನ್ನು ಹೆದರಿಸಿ ಬೆದರಿಸಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. </p>.<p>ಇದ್ದೊಂದು ಮನೆ ನೀಡಲು ನಿರಾಕರಿಸಿದ ಬಡ ಕುಟುಂಬವನ್ನು ಬೆಳ್ಳಂಬೆಳಗ್ಗೆ ಅಧಿಕಾರ ದುರುಪಯೋಗ ಮಾಡಿಕೊಂಡು ಆ ಮನೆಯ ಯಜಮಾನ, ಹೆಣ್ಣು ಮಕ್ಕಳನ್ನು ಚಳಿಯಲ್ಲಿ ಬೀದಿ ಪಾಲು ಮಾಡಿ ಬುಲ್ಡೋಜರ್ ಸಹಾಯದಿಂದ ಮನೆ ನೆಲಸಮ ಮಾಡಿದ್ದಾರೆ ಎಂದರು.<br /> <br /> ಅಧಿಕಾರ, ಸ್ವಾರ್ಥ, ಸ್ವಜನ ಪಕ್ಷಪಾತಿಯಂತಿರುವ ಹಾಗೂ ಅಮಾನವೀಯತೆಯೇ ಮೈತಳೆದಂತಿರುವ ಯಡಿಯೂರಪ್ಪ ಬಗ್ಗೆ ವಿಶಾಲ ಹೃದಯ ಹೊಂದಿರುವ ವೀರಶೈವ ಸಮಾಜ ಇನ್ನೂ ಯಾವ ಆಧಾರದಲ್ಲಿ ಕನಿಕರ ವ್ಯಕ್ತಪಡಿಸುತ್ತಿದೆ ಎಂದು ಎಚ್ಡಿಕೆ ಪ್ರಶ್ನಿಸಿದರು.<br /> <br /> ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಜಮೀರ ಅಹಮ್ಮದ್, ಬಂಡೆಪ್ಪ ಕಾಂಶಪೂರ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ, ಪ್ರಮುಖರಾದ, ಮಧು ಬಂಗಾರಪ್ಪ, ಮಂಜುನಾಥ ವಿಶ್ವಬ್ರಾಹ್ಮಣ, ಶರಣಪ್ಪ ಐವಡಿ, ಸುರೇಶ ಬಳಿಗೇರಮಠ ಮೊದಲಾದವರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಸ್ವಂತ ಉದ್ಯಮ, ವ್ಯವಹಾರಕ್ಕಾಗಿ ಬಡ ಕುಟುಂಬವನ್ನು ರಾತ್ರೋರಾತ್ರಿ ಬೀದಿಗೆ ತಳ್ಳಿ, ಅಧಿಕಾರ ದುರುಪಯೋಗ ಮಾಡಿಕೊಂಡ ಬಿ.ಎಸ್. ಯಡಿಯೂರಪ್ಪರ ಬಗ್ಗೆ ಇನ್ನೂ ಕನಿಕರವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೀರಶೈವ ಸಮುದಾಯವನ್ನು ಪ್ರಶ್ನಿಸಿದರು.<br /> <br /> ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ನ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಂಡ ಬಳಿಕ ಮಾತನಾಡಿದರು.<br /> <br /> ಸಮಾನತೆ, ಸಹಬಾಳ್ವೆಯಂಥ, ಶರಣರ ತತ್ವಾಧಾರ ಮೇಲೆ ಬೆಳೆದು ಬಂದಿರುವ ವೀರಶೈವ ಸಮಾಜದಲ್ಲಿ ಆ ತತ್ವ, ಆದರ್ಶಕ್ಕೆ ತದ್ವಿರುದ್ಧದಂತಿರುವ ಯಡಿಯೂರಪ್ಪ ಅಮಾನವೀಯತೆ ಮೈಗೂಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗದಲ್ಲಿ ಸಾಕಷ್ಟು ಆಸ್ತಿ ಮಾಡುವ ಮೂಲಕ ಅಭಿವೃದ್ಧಿಯಾಗಿದ್ದಾರೆ. ರೂ, 300 ಕೋಟಿ ಮೊತ್ತದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದಾರೆ. ಜನರನ್ನು ಹೆದರಿಸಿ ಬೆದರಿಸಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. </p>.<p>ಇದ್ದೊಂದು ಮನೆ ನೀಡಲು ನಿರಾಕರಿಸಿದ ಬಡ ಕುಟುಂಬವನ್ನು ಬೆಳ್ಳಂಬೆಳಗ್ಗೆ ಅಧಿಕಾರ ದುರುಪಯೋಗ ಮಾಡಿಕೊಂಡು ಆ ಮನೆಯ ಯಜಮಾನ, ಹೆಣ್ಣು ಮಕ್ಕಳನ್ನು ಚಳಿಯಲ್ಲಿ ಬೀದಿ ಪಾಲು ಮಾಡಿ ಬುಲ್ಡೋಜರ್ ಸಹಾಯದಿಂದ ಮನೆ ನೆಲಸಮ ಮಾಡಿದ್ದಾರೆ ಎಂದರು.<br /> <br /> ಅಧಿಕಾರ, ಸ್ವಾರ್ಥ, ಸ್ವಜನ ಪಕ್ಷಪಾತಿಯಂತಿರುವ ಹಾಗೂ ಅಮಾನವೀಯತೆಯೇ ಮೈತಳೆದಂತಿರುವ ಯಡಿಯೂರಪ್ಪ ಬಗ್ಗೆ ವಿಶಾಲ ಹೃದಯ ಹೊಂದಿರುವ ವೀರಶೈವ ಸಮಾಜ ಇನ್ನೂ ಯಾವ ಆಧಾರದಲ್ಲಿ ಕನಿಕರ ವ್ಯಕ್ತಪಡಿಸುತ್ತಿದೆ ಎಂದು ಎಚ್ಡಿಕೆ ಪ್ರಶ್ನಿಸಿದರು.<br /> <br /> ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಜಮೀರ ಅಹಮ್ಮದ್, ಬಂಡೆಪ್ಪ ಕಾಂಶಪೂರ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ, ಪ್ರಮುಖರಾದ, ಮಧು ಬಂಗಾರಪ್ಪ, ಮಂಜುನಾಥ ವಿಶ್ವಬ್ರಾಹ್ಮಣ, ಶರಣಪ್ಪ ಐವಡಿ, ಸುರೇಶ ಬಳಿಗೇರಮಠ ಮೊದಲಾದವರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>