<p><strong>ಭುವನೇಶ್ವರ/ಒಡಿಶಾ, (ಪಿಟಿಐ</strong>): ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಉಮರಕೋಟ್ ಕ್ಷೇತ್ರದ ಶಾಸಕ ಜಗಬಂಧು ಮಜ್ಹಿ ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಶಂಕಿತ ಮಾವೊವಾದಿ ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.<br /> <br /> ನಕ್ಸಲೀಯರ ಪ್ರಭಾವಿರುವ ರಾಯಗಡದ ನವರಂಗಪುರ ಜಿಲ್ಲೆಯ ಬೋಲಾ ಗ್ರಾಮದಲ್ಲಿ ನಡೆಯುತ್ತಿದ್ದ ಪಟ್ಟಾ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ. <br /> <br /> 39 ವರ್ಷದ ಜಗಬಂಧು ಅವರ ಮೇಲೆ ನಾಲ್ವರು ಅಪರಿಚಿತರ ಗುಂಪು ಹಠಾತ್ ಗುಂಡಿನ ದಾಳಿ ನಡೆಸಿತು. ದಾಳಿಯಲ್ಲಿ ಶಾಸಕ ಮತ್ತು ಅವರ ಭದ್ರತಾ ಸಿಬ್ಬಂದಿ ಪಿ.ಕೆ. ಪತ್ರೊ ಎಂಬುವವರು ಸಾವನ್ನಪ್ಪಿದರು.<br /> <br /> 2004ರಲ್ಲಿ ಅಪರಿಚಿತರು ನಡೆಸಿದ ದಾಳಿಯಲ್ಲಿ ಬದುಕುಳಿದಿದ್ದ ಅವರು ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ಉಮರ್ಕೋಟ್ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದು ಮಾವೊವಾದಿಗಳ ಕೃತ್ಯವಿರಬಹುದು ಎಂದು ಡಿಜಿಪಿ ಮನಮೋಹನ್ ಅವರು ಶಂಕಿಸಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ/ಒಡಿಶಾ, (ಪಿಟಿಐ</strong>): ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಉಮರಕೋಟ್ ಕ್ಷೇತ್ರದ ಶಾಸಕ ಜಗಬಂಧು ಮಜ್ಹಿ ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಶಂಕಿತ ಮಾವೊವಾದಿ ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.<br /> <br /> ನಕ್ಸಲೀಯರ ಪ್ರಭಾವಿರುವ ರಾಯಗಡದ ನವರಂಗಪುರ ಜಿಲ್ಲೆಯ ಬೋಲಾ ಗ್ರಾಮದಲ್ಲಿ ನಡೆಯುತ್ತಿದ್ದ ಪಟ್ಟಾ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ. <br /> <br /> 39 ವರ್ಷದ ಜಗಬಂಧು ಅವರ ಮೇಲೆ ನಾಲ್ವರು ಅಪರಿಚಿತರ ಗುಂಪು ಹಠಾತ್ ಗುಂಡಿನ ದಾಳಿ ನಡೆಸಿತು. ದಾಳಿಯಲ್ಲಿ ಶಾಸಕ ಮತ್ತು ಅವರ ಭದ್ರತಾ ಸಿಬ್ಬಂದಿ ಪಿ.ಕೆ. ಪತ್ರೊ ಎಂಬುವವರು ಸಾವನ್ನಪ್ಪಿದರು.<br /> <br /> 2004ರಲ್ಲಿ ಅಪರಿಚಿತರು ನಡೆಸಿದ ದಾಳಿಯಲ್ಲಿ ಬದುಕುಳಿದಿದ್ದ ಅವರು ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ಉಮರ್ಕೋಟ್ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದು ಮಾವೊವಾದಿಗಳ ಕೃತ್ಯವಿರಬಹುದು ಎಂದು ಡಿಜಿಪಿ ಮನಮೋಹನ್ ಅವರು ಶಂಕಿಸಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>