<p>ಸಾಮಾನ್ಯವಾಗಿ ಹೊಲದಲ್ಲಿ ಕೂರಿಗೆಯಿಂದ ಬಿತ್ತುವ ಪದ್ಧತಿ. ಕ್ರಮೇಣ ಟ್ರಾಕ್ಟರ್, ಟಿಲ್ಲರ್ಗಳಿಗೆ ಜೋಡಿಸುವ ಬಿತ್ತನೆ ಯಂತ್ರಗಳು ಬಂದವು. ಕಡಲೇಬೀಜ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ರಾಗಿಗಳನ್ನು ಇವುಗಳ ಸಹಾಯದಿಂದ ಬಿತ್ತಬಹುದಾಗಿದೆ. <br /> <br /> ಈ ಮೊದಲು ದೊಡ್ಡ ಯಂತ್ರ ಇತ್ತು. ಇದೇ ರೀತಿಯ ಚಿಕ್ಕ ಯಂತ್ರವನ್ನು ಮಧುಗಿರಿಯ ಕೃಷಿ ಉಪಕರಣ ತಜ್ಞ ಎಂ. ರಾಜೇಂದ್ರಕುಮಾರ್ ಅಭಿವೃದ್ಧಿಪಡಿಸಿದ್ದಾರೆ.<br /> <br /> ಸಣ್ಣ ಗಾತ್ರದ ಈ ಯಾಂತ್ರೀಕೃತ ಕೂರಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೀಜಗಳನ್ನು ಬಿತ್ತನೆ ಮಾಡಬಹುದು. ಅಲ್ಲದೆ ಬೀಜದ ಜತೆಜತೆಗೇ ನಿರ್ದಿಷ್ಟ ಪ್ರಮಾಣದ ಗೊಬ್ಬರವನ್ನೂ ಭೂಮಿಗೆ ಸೇರಿಸಬಹುದು.<br /> <br /> ಈ ಸಾಧನವನ್ನು ಟ್ರಾಕ್ಟರ್ಗೆ ಜೋಡಿಸಿದರೆ ಸಾಕು. ಇನ್ನೊಂದು ವಿಶೇಷ ಎಂದರೆ ಬೀಜ ಹಾಕಿದ ನಂತರ ಅದನ್ನು ಮುಚ್ಚಲು ಹರಗುವುದರ ಅವಶ್ಯಕತೆಯಿರುವುದಿಲ್ಲ. ಇದು ಹರಗುವ ಕೆಲಸವನ್ನು ಸಹ ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.<br /> <br /> ಈಗಾಗಲೆ ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಆಂಧ್ರದ ಮಡಕಶಿರಾ ತಾಲೂಕುಗಳಲ್ಲಿ ಈ ಯಾಂತ್ರೀಕೃತ ಕೂರಿಗೆಯನ್ನು ಅನೇಕ ರೈತರು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಇದರಲ್ಲಿ ಸಮಯದ ಉಳಿತಾಯವಾಗುತ್ತದೆ, ಬಿತ್ತನೆ ಆಳುಗಳ ಅವಶ್ಯಕತೆ ಇರುವುದಿಲ್ಲ ಎಂದು ರಾಜೇಂದ್ರ ಕುಮಾರ್ ಹೇಳುತ್ತಾರೆ. ಅವರ ಸಂಪರ್ಕ ಸಂಖ್ಯೆ 91642 34499, 90369 65401.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯವಾಗಿ ಹೊಲದಲ್ಲಿ ಕೂರಿಗೆಯಿಂದ ಬಿತ್ತುವ ಪದ್ಧತಿ. ಕ್ರಮೇಣ ಟ್ರಾಕ್ಟರ್, ಟಿಲ್ಲರ್ಗಳಿಗೆ ಜೋಡಿಸುವ ಬಿತ್ತನೆ ಯಂತ್ರಗಳು ಬಂದವು. ಕಡಲೇಬೀಜ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ರಾಗಿಗಳನ್ನು ಇವುಗಳ ಸಹಾಯದಿಂದ ಬಿತ್ತಬಹುದಾಗಿದೆ. <br /> <br /> ಈ ಮೊದಲು ದೊಡ್ಡ ಯಂತ್ರ ಇತ್ತು. ಇದೇ ರೀತಿಯ ಚಿಕ್ಕ ಯಂತ್ರವನ್ನು ಮಧುಗಿರಿಯ ಕೃಷಿ ಉಪಕರಣ ತಜ್ಞ ಎಂ. ರಾಜೇಂದ್ರಕುಮಾರ್ ಅಭಿವೃದ್ಧಿಪಡಿಸಿದ್ದಾರೆ.<br /> <br /> ಸಣ್ಣ ಗಾತ್ರದ ಈ ಯಾಂತ್ರೀಕೃತ ಕೂರಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೀಜಗಳನ್ನು ಬಿತ್ತನೆ ಮಾಡಬಹುದು. ಅಲ್ಲದೆ ಬೀಜದ ಜತೆಜತೆಗೇ ನಿರ್ದಿಷ್ಟ ಪ್ರಮಾಣದ ಗೊಬ್ಬರವನ್ನೂ ಭೂಮಿಗೆ ಸೇರಿಸಬಹುದು.<br /> <br /> ಈ ಸಾಧನವನ್ನು ಟ್ರಾಕ್ಟರ್ಗೆ ಜೋಡಿಸಿದರೆ ಸಾಕು. ಇನ್ನೊಂದು ವಿಶೇಷ ಎಂದರೆ ಬೀಜ ಹಾಕಿದ ನಂತರ ಅದನ್ನು ಮುಚ್ಚಲು ಹರಗುವುದರ ಅವಶ್ಯಕತೆಯಿರುವುದಿಲ್ಲ. ಇದು ಹರಗುವ ಕೆಲಸವನ್ನು ಸಹ ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.<br /> <br /> ಈಗಾಗಲೆ ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಆಂಧ್ರದ ಮಡಕಶಿರಾ ತಾಲೂಕುಗಳಲ್ಲಿ ಈ ಯಾಂತ್ರೀಕೃತ ಕೂರಿಗೆಯನ್ನು ಅನೇಕ ರೈತರು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಇದರಲ್ಲಿ ಸಮಯದ ಉಳಿತಾಯವಾಗುತ್ತದೆ, ಬಿತ್ತನೆ ಆಳುಗಳ ಅವಶ್ಯಕತೆ ಇರುವುದಿಲ್ಲ ಎಂದು ರಾಜೇಂದ್ರ ಕುಮಾರ್ ಹೇಳುತ್ತಾರೆ. ಅವರ ಸಂಪರ್ಕ ಸಂಖ್ಯೆ 91642 34499, 90369 65401.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>