<p><strong>ಬೀಳಗಿ:</strong> ಶಾಸಕ ಜೆ.ಟಿ. ಪಾಟೀಲ ಸಲಹೆಯಂತೆ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿಯಿಂದ ಎರಡು ದಿನಕ್ಕೊಮ್ಮೆ (ಒಂದು ದಿನ ಬಿಟ್ಟು ಒಂದು ದಿನ) ನೀರು ಪೂರೈಸಲು ಇಂದಿನಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಫಡಿಯಪ್ಪ ಕರಿಗಾರ ತಿಳಿಸಿದರು.<br /> <br /> ಇಲ್ಲಿನ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಟ್ಟಣದ ನೀರು ಪೂರೈಕೆ ವ್ಯವಸ್ಥೆ ಕುರಿತು ಅವರು ವಿವರಣೆ ನೀಡಿದರು.<br /> <br /> ಈ ಹಿಂದೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಈ ತೊಂದರೆ ತಪ್ಪಿಸಲು ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸರದಿ ಇದ್ದಾಗ 45 ನಿಮಿಷಗಳ ಕಾಲ ನೀರು ಸರಬರಾಜು ಮಾಡಲಾಗುವುದು ಎಂದರು.<br /> <br /> `ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ಗುಳಬಾಳ ಜಾಕ್ವೆಲ್ನಲ್ಲಿ ಈಗ 40 ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರುಗಳು ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯದಲ್ಲಿಯೇ ಅವುಗಳನ್ನು ತೆಗೆದು 75ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರ್ಗಳನ್ನು ಬಳಸಲಾಗುವುದು.<br /> <br /> ವಿದ್ಯುತ್ ಮೋಟಾರ್, ಪಂಪುಗಳು, ಏರ್ ವಾಲ್ವ್ಗಳಿಗಾಗಿ ರೂ 1ಕೋಟಿ 25ಲಕ್ಷ ವೆಚ್ಚ ತಗುಲಲಿದ್ದು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಇಲಾಖೆಗೆ ಆಡಳಿತಾತ್ಮಕ ಮಂಜೂರಿಗಾಗಿ ಕಳಿಸಲಾಗಿದೆ' ಎಂದು ಹೇಳಿದರು.<br /> <br /> `ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪ್ರತಿ ತಿಂಗಳು ಎರಡೂವರೆ ಲಕ್ಷ ರೂಪಾಯಿ ವಿದ್ಯುತ್ ವೆಚ್ಚ ತಗುಲುತ್ತಿದ್ದು ಅಧಿಕೃತವಾಗಿ ನಳದ ಸಂಪರ್ಕ ಪಡೆದುಕೊಂಡ ನಾಗರಿಕರಿಂದ ಸಂದಾಯವಾಗುತ್ತಿರುವುದು ರೂ1ಲಕ್ಷ 60ಸಾವಿರದಷ್ಟು ಮಾತ್ರ' ಎಂದು ಹೇಳಿದ ಅವರು `ಪಟ್ಟಣದಲ್ಲಿ ಅನಧಿಕೃತವಾದ ನಳದ ಸಂಪರ್ಕಗಳು ಬಹಳಷ್ಟಿದ್ದು ಅನಧಿಕೃತವಾಗಿ ನಳದ ಸಂಪರ್ಕ ಕಲ್ಪಿಸಿಕೊಂಡ ನಾಗರಿಕರು ಜೂನ್ ಕೊನೆಯೊಳಗಾಗಿ ಪಂಚಾಯ್ತಿಗೆ ಶುಲ್ಕ ಕಟ್ಟಿ ಅಧಿಕೃತಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.<br /> <br /> `ನೀರು ಅಮೂಲ್ಯ ಸಂಪತ್ತಾಗಿದ್ದು ನೀರನ್ನು ಬೇಕಾಬಿಟ್ಟಿ ಬಳಸದೇ ನಿಯಮಿತವಾಗಿ, ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಂಡು ಸಾಧ್ಯವಾದಷ್ಟೂ ಉಳಿತಾಯ ಮಾಡಬೇಕು' ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡ ಅವರು `ಪಟ್ಟಣದ ಅಭಿವೃದ್ಧಿಗಾಗಿ ರೂ 6ಕೋಟಿ ವಿಶೇಷ ಅನುದಾನಕ್ಕೆ ಕೇಳಿಕೊಳ್ಳಲಾಗಿದೆ' ಎಂದು ತಿಳಿಸಿದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ತಳೇವಾಡ, ಬಸನಗೌಡ ಪಾಟೀಲ, ಸಂತೋಷ ಜಂಬಗಿ, ಅಜೀಜಭಾಯಿ ಸರಕಾರ, ಸಿದ್ದು ಮಾದರ, ಬಾಬು ಬೀಳಗಿ, ಬಿ.ಆರ್. ಸೊನ್ನದ, ಶಂಕ್ರಪ್ಪ ಕಡ್ಲಿಮಟ್ಟಿ, ಎಂಜಿನಿಯರ್ ಜಿ.ಎಲ್. ಬಂಡಿವಡ್ಡರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ:</strong> ಶಾಸಕ ಜೆ.ಟಿ. ಪಾಟೀಲ ಸಲಹೆಯಂತೆ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿಯಿಂದ ಎರಡು ದಿನಕ್ಕೊಮ್ಮೆ (ಒಂದು ದಿನ ಬಿಟ್ಟು ಒಂದು ದಿನ) ನೀರು ಪೂರೈಸಲು ಇಂದಿನಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಫಡಿಯಪ್ಪ ಕರಿಗಾರ ತಿಳಿಸಿದರು.<br /> <br /> ಇಲ್ಲಿನ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಟ್ಟಣದ ನೀರು ಪೂರೈಕೆ ವ್ಯವಸ್ಥೆ ಕುರಿತು ಅವರು ವಿವರಣೆ ನೀಡಿದರು.<br /> <br /> ಈ ಹಿಂದೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಈ ತೊಂದರೆ ತಪ್ಪಿಸಲು ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸರದಿ ಇದ್ದಾಗ 45 ನಿಮಿಷಗಳ ಕಾಲ ನೀರು ಸರಬರಾಜು ಮಾಡಲಾಗುವುದು ಎಂದರು.<br /> <br /> `ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ಗುಳಬಾಳ ಜಾಕ್ವೆಲ್ನಲ್ಲಿ ಈಗ 40 ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರುಗಳು ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯದಲ್ಲಿಯೇ ಅವುಗಳನ್ನು ತೆಗೆದು 75ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರ್ಗಳನ್ನು ಬಳಸಲಾಗುವುದು.<br /> <br /> ವಿದ್ಯುತ್ ಮೋಟಾರ್, ಪಂಪುಗಳು, ಏರ್ ವಾಲ್ವ್ಗಳಿಗಾಗಿ ರೂ 1ಕೋಟಿ 25ಲಕ್ಷ ವೆಚ್ಚ ತಗುಲಲಿದ್ದು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಇಲಾಖೆಗೆ ಆಡಳಿತಾತ್ಮಕ ಮಂಜೂರಿಗಾಗಿ ಕಳಿಸಲಾಗಿದೆ' ಎಂದು ಹೇಳಿದರು.<br /> <br /> `ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪ್ರತಿ ತಿಂಗಳು ಎರಡೂವರೆ ಲಕ್ಷ ರೂಪಾಯಿ ವಿದ್ಯುತ್ ವೆಚ್ಚ ತಗುಲುತ್ತಿದ್ದು ಅಧಿಕೃತವಾಗಿ ನಳದ ಸಂಪರ್ಕ ಪಡೆದುಕೊಂಡ ನಾಗರಿಕರಿಂದ ಸಂದಾಯವಾಗುತ್ತಿರುವುದು ರೂ1ಲಕ್ಷ 60ಸಾವಿರದಷ್ಟು ಮಾತ್ರ' ಎಂದು ಹೇಳಿದ ಅವರು `ಪಟ್ಟಣದಲ್ಲಿ ಅನಧಿಕೃತವಾದ ನಳದ ಸಂಪರ್ಕಗಳು ಬಹಳಷ್ಟಿದ್ದು ಅನಧಿಕೃತವಾಗಿ ನಳದ ಸಂಪರ್ಕ ಕಲ್ಪಿಸಿಕೊಂಡ ನಾಗರಿಕರು ಜೂನ್ ಕೊನೆಯೊಳಗಾಗಿ ಪಂಚಾಯ್ತಿಗೆ ಶುಲ್ಕ ಕಟ್ಟಿ ಅಧಿಕೃತಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.<br /> <br /> `ನೀರು ಅಮೂಲ್ಯ ಸಂಪತ್ತಾಗಿದ್ದು ನೀರನ್ನು ಬೇಕಾಬಿಟ್ಟಿ ಬಳಸದೇ ನಿಯಮಿತವಾಗಿ, ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಂಡು ಸಾಧ್ಯವಾದಷ್ಟೂ ಉಳಿತಾಯ ಮಾಡಬೇಕು' ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡ ಅವರು `ಪಟ್ಟಣದ ಅಭಿವೃದ್ಧಿಗಾಗಿ ರೂ 6ಕೋಟಿ ವಿಶೇಷ ಅನುದಾನಕ್ಕೆ ಕೇಳಿಕೊಳ್ಳಲಾಗಿದೆ' ಎಂದು ತಿಳಿಸಿದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ತಳೇವಾಡ, ಬಸನಗೌಡ ಪಾಟೀಲ, ಸಂತೋಷ ಜಂಬಗಿ, ಅಜೀಜಭಾಯಿ ಸರಕಾರ, ಸಿದ್ದು ಮಾದರ, ಬಾಬು ಬೀಳಗಿ, ಬಿ.ಆರ್. ಸೊನ್ನದ, ಶಂಕ್ರಪ್ಪ ಕಡ್ಲಿಮಟ್ಟಿ, ಎಂಜಿನಿಯರ್ ಜಿ.ಎಲ್. ಬಂಡಿವಡ್ಡರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>