<p><strong>ದಾಂಡೇಲಿ</strong>: ನಗರದ ಹಳೆ ದಾಂಡೇಲಿ ಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟ ಕಾರ್ಯಕ್ರಮದ ಮೂರನೇ ದಿನ ಮೂಡಿಬಂದ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟ, ಜೇನುಕುರುಬರ ಕೋಲಾಟ, ಬೇಟೆ ನೃತ್ಯ ಜನರ ಆಸಕ್ತಿಯನ್ನು ಇಮ್ಮಡಿಗೊಳಿಸಿತು.<br /> <br /> ಅವಂಟಿಗ ್ಯೊ-ಪವಂಟಿಗ್ಯೊ, ಅಡೀಪೀಡಿ, ಅಂಟಿ ಸುಂಟಿ, ಅವಟಿಗೊ-ಪವಟಿಗೊ, ಔಂಟಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತವಿರುವ ಕಲೆಯಾಗಿದೆ. ಈ ಕುರಿತು ಸುಧಾಕರ್ ಪಿ. ಮತ್ತು ಡಾ.ಮೋಹನ್ ಚಂದ್ರಗುತ್ತಿ ವಿವರ ನೀಡಿದರು. ಬುಡಕಟ್ಟು ನೃತ್ಯ ಕಮ್ಮಟದಲ್ಲಿ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟವು ಅತ್ಯುತ್ತಮವಾಗಿ ಮೂಡಿಬಂದಿತು.<br /> <br /> ಮೈಸೂರಿನ ಹೆಗಡೆದೇವನ ಕೋಟೆಯ ಜೇನುಕುರುಬ ಸಮು ದಾಯದ ಕಲಾವಿದರಿಂದ ಜೇನು ಕುರುಬರ ಕೋಲಾಟ ಕಾರ್ಯಕ್ರಮವು ಅಂದ ಚೆಂದದಿ ನಡೆಯಿತು.<br /> <br /> ತಾಳ ಮತ್ತು ಲಯ ಬದ್ಧವಾದ ಕೋಲಾಟ ನೆರೆದಿದ್ದ ಅಪಾರ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿತ್ತು.</p>.<p><br /> ಜೇನು ಕುರುಬರ ಕೋಲಾಟ ಮತ್ತವರ ಸಂಸ್ಕೃತಿಯ ಬಗ್ಗೆ ಬುಡಕಟ್ಟು ಮುಖಂಡ ಸೋಮಣ್ಣ ಅವರು ವಿವರಿಸಿ ಜೇನುಕುರುಬರ ಪ್ರಸಕ್ತ ಜೀವನ ಸ್ಥಿತಿಯ ಬಗ್ಗೆ ಸಮಗ್ರ ಚಿತ್ರಣ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂಡೇಲಿ</strong>: ನಗರದ ಹಳೆ ದಾಂಡೇಲಿ ಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟ ಕಾರ್ಯಕ್ರಮದ ಮೂರನೇ ದಿನ ಮೂಡಿಬಂದ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟ, ಜೇನುಕುರುಬರ ಕೋಲಾಟ, ಬೇಟೆ ನೃತ್ಯ ಜನರ ಆಸಕ್ತಿಯನ್ನು ಇಮ್ಮಡಿಗೊಳಿಸಿತು.<br /> <br /> ಅವಂಟಿಗ ್ಯೊ-ಪವಂಟಿಗ್ಯೊ, ಅಡೀಪೀಡಿ, ಅಂಟಿ ಸುಂಟಿ, ಅವಟಿಗೊ-ಪವಟಿಗೊ, ಔಂಟಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತವಿರುವ ಕಲೆಯಾಗಿದೆ. ಈ ಕುರಿತು ಸುಧಾಕರ್ ಪಿ. ಮತ್ತು ಡಾ.ಮೋಹನ್ ಚಂದ್ರಗುತ್ತಿ ವಿವರ ನೀಡಿದರು. ಬುಡಕಟ್ಟು ನೃತ್ಯ ಕಮ್ಮಟದಲ್ಲಿ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟವು ಅತ್ಯುತ್ತಮವಾಗಿ ಮೂಡಿಬಂದಿತು.<br /> <br /> ಮೈಸೂರಿನ ಹೆಗಡೆದೇವನ ಕೋಟೆಯ ಜೇನುಕುರುಬ ಸಮು ದಾಯದ ಕಲಾವಿದರಿಂದ ಜೇನು ಕುರುಬರ ಕೋಲಾಟ ಕಾರ್ಯಕ್ರಮವು ಅಂದ ಚೆಂದದಿ ನಡೆಯಿತು.<br /> <br /> ತಾಳ ಮತ್ತು ಲಯ ಬದ್ಧವಾದ ಕೋಲಾಟ ನೆರೆದಿದ್ದ ಅಪಾರ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿತ್ತು.</p>.<p><br /> ಜೇನು ಕುರುಬರ ಕೋಲಾಟ ಮತ್ತವರ ಸಂಸ್ಕೃತಿಯ ಬಗ್ಗೆ ಬುಡಕಟ್ಟು ಮುಖಂಡ ಸೋಮಣ್ಣ ಅವರು ವಿವರಿಸಿ ಜೇನುಕುರುಬರ ಪ್ರಸಕ್ತ ಜೀವನ ಸ್ಥಿತಿಯ ಬಗ್ಗೆ ಸಮಗ್ರ ಚಿತ್ರಣ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>