<p><strong>ನೆಲಮಂಗಲ</strong>: ಮನಃಶಕ್ತಿ ವೃದ್ಧಿಯಾಗುವ ಮತ್ತು ಬುದ್ಧಿವಿಕಾಸಗೊಳ್ಳುವ ವಿದ್ಯಾಭ್ಯಾಸ ನಮ್ಮದಾಗಬೇಕು ಎಂದು ಅಂಕಣಕಾರ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.<br /> <br /> ಸ್ಥಳೀಯ ಪವಾಡ ಬಸವಣ್ಣದೇವರ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ದೀನ, ದಲಿತ ಅಶಕ್ತ ಜನ ಸಾಮಾನ್ಯರನ್ನು ಕಡೆಗಣಿಸುವುದು ಅತಿದೊಡ್ಡ ಪಾಪ ಎಂಬದು ವಿವೇಕರ ವಾಣಿಯಾಗಿತ್ತು ಎಂದರು.<br /> ಬೀದರ್ನಿಂದ ಆರಂಭವಾದ ವಿವೇಕ ಜ್ಯೋತಿ ಯಾತ್ರೆಯನ್ನು ಶನಿವಾರ ಬೆಳಗ್ಗೆ ತಾಲ್ಲೂಕಿನ ಯುವಕರು ಪ್ರಮುಖರು ಕುಣಿಗಲ್ ವೃತ್ತದ ಬಳಿ ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.<br /> <br /> ಕೆಂಗೇರಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದಾತ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಭಜನೆ ನಡೆಯಿತು. ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಬಾಳೇಕಾಯಿ ನಾಗರಾಜು , ಹನುಮಂತು, ಕೇಬಲ್ ಸುರೇಶ್, ನಿಸರ್ಗಭಾರತೀಯ ಸಿ.ಎಲ್.ಜಗದೀಶ್ ಪ್ರಸಾದ್, ಪ್ರಾಂಶುಪಾಲರಾದ ಎ.ಎಸ್.ರಾಮಾನಂದ್, ಎಚ್.ಬಿ.ಪ್ರಾಕಾಶ್, ವಕೀಲ ವಸಂತ್ಕುಮಾರ್, ಎ.ಜಿ. ಸಂತೋಷ್ ಕುಮಾರ್, ವಿವಿಧ ಆಶ್ರಮಗಳ ಅನೇಕ ಯಾತ್ರಿಗಳು, ಪಟ್ಟಣದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಭಾಗವಹಿಸಿದ್ದರು ವಿವೇಕಾನಂದ ಕಿರುಹೊತ್ತಿಗೆಯನ್ನು, ಪ್ರಸಾದವನ್ನು ಎಲ್ಲ ವಿದ್ಯಾರ್ಥಿಗಳಿಗು ವಿತರಿಸಲಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ</strong>: ಮನಃಶಕ್ತಿ ವೃದ್ಧಿಯಾಗುವ ಮತ್ತು ಬುದ್ಧಿವಿಕಾಸಗೊಳ್ಳುವ ವಿದ್ಯಾಭ್ಯಾಸ ನಮ್ಮದಾಗಬೇಕು ಎಂದು ಅಂಕಣಕಾರ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.<br /> <br /> ಸ್ಥಳೀಯ ಪವಾಡ ಬಸವಣ್ಣದೇವರ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ದೀನ, ದಲಿತ ಅಶಕ್ತ ಜನ ಸಾಮಾನ್ಯರನ್ನು ಕಡೆಗಣಿಸುವುದು ಅತಿದೊಡ್ಡ ಪಾಪ ಎಂಬದು ವಿವೇಕರ ವಾಣಿಯಾಗಿತ್ತು ಎಂದರು.<br /> ಬೀದರ್ನಿಂದ ಆರಂಭವಾದ ವಿವೇಕ ಜ್ಯೋತಿ ಯಾತ್ರೆಯನ್ನು ಶನಿವಾರ ಬೆಳಗ್ಗೆ ತಾಲ್ಲೂಕಿನ ಯುವಕರು ಪ್ರಮುಖರು ಕುಣಿಗಲ್ ವೃತ್ತದ ಬಳಿ ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.<br /> <br /> ಕೆಂಗೇರಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದಾತ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಭಜನೆ ನಡೆಯಿತು. ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಬಾಳೇಕಾಯಿ ನಾಗರಾಜು , ಹನುಮಂತು, ಕೇಬಲ್ ಸುರೇಶ್, ನಿಸರ್ಗಭಾರತೀಯ ಸಿ.ಎಲ್.ಜಗದೀಶ್ ಪ್ರಸಾದ್, ಪ್ರಾಂಶುಪಾಲರಾದ ಎ.ಎಸ್.ರಾಮಾನಂದ್, ಎಚ್.ಬಿ.ಪ್ರಾಕಾಶ್, ವಕೀಲ ವಸಂತ್ಕುಮಾರ್, ಎ.ಜಿ. ಸಂತೋಷ್ ಕುಮಾರ್, ವಿವಿಧ ಆಶ್ರಮಗಳ ಅನೇಕ ಯಾತ್ರಿಗಳು, ಪಟ್ಟಣದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಭಾಗವಹಿಸಿದ್ದರು ವಿವೇಕಾನಂದ ಕಿರುಹೊತ್ತಿಗೆಯನ್ನು, ಪ್ರಸಾದವನ್ನು ಎಲ್ಲ ವಿದ್ಯಾರ್ಥಿಗಳಿಗು ವಿತರಿಸಲಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>