<p><strong>ಬೆಂಗಳೂರು:</strong> ನಗರದ ಯುವ ಛಾಯಾಗ್ರಾಹಕಿ ಪ್ರಕೃತಿ ಪಿ. ಕುಮಾರ್ ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಪರಿಸರ ಇತಿಹಾಸ ವಿಭಾಗದ ಸದಸ್ಯತ್ವ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.<br /> <br /> ಮಲ್ಲೇಶ್ವರದ ಎಂ.ಇ.ಎಸ್. ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಕೃತಿ, ಸದ್ಯ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸದಸ್ಯೆ (ಅವರಿಗೀಗ 17 ವರ್ಷ) ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ರಾಜಿ ಮಾಡಿಕೊಳ್ಳದ ಈ ಸಂಸ್ಥೆ, ಅತ್ಯಂತ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಮಾತ್ರ ತನ್ನ ಸದಸ್ಯತ್ವ ನೀಡುತ್ತದೆ.<br /> <br /> ಛಾಯಾಗ್ರಹಣ ಮಾತ್ರವಲ್ಲದೆ ಕ್ರೀಡೆಯಲ್ಲೂ ಮುಂದಿರುವ ಪ್ರಕೃತಿ, ಅತ್ಯುತ್ತಮ ಅಥ್ಲೀಟ್ ಆಗಿ ಹೆಸರು ಮಾಡಿದ್ದಾರೆ. ಮಲ್ಲೇಶ್ವರದ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಕ್ರೀಡೆಯಲ್ಲಿ ಮೂರು ಸಲ ಸಮಗ್ರ ಪ್ರಶಸ್ತಿಯನ್ನು ಪಡೆದ ಶ್ರೇಯ ಅವರದಾಗಿದೆ.<br /> <br /> ಭರತನಾಟ್ಯ ಮತ್ತು ಕರ್ನಾಟಕ ಸಂಗೀತದಲ್ಲೂ ಅಭ್ಯಾಸ ಮಾಡುತ್ತಿದ್ದಾರೆ. 2009ರಿಂದಲೂ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ಪ್ರಕೃತಿ, ಇದುವರೆಗೆ 200ಕ್ಕೂ ಅಧಿಕ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕಾಡಿನಿಂದ ನಾಡಿಗೆ ಅವರು ಹೆಕ್ಕಿತಂದ ಅಪರೂಪದ ದೃಶ್ಯಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಛಾಯಾಚಿತ್ರ ಮೇಳಗಳಲ್ಲಿ ಪ್ರದರ್ಶನಗೊಂಡಿವೆ.<br /> <br /> ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಮತ್ತು ಭಾರತೀಯ ಫೋಟೋಗ್ರಾಫಿ ಒಕ್ಕೂಟದ ಸದಸ್ಯೆಯಾಗಿರುವ ಪ್ರಕೃತಿ, ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಎಚ್.ವಿ. ಪ್ರವೀಣಕುಮಾರ್ ಅವರ ಪುತ್ರಿ.<br /> <br /> `ನಾನು ಚಿಕ್ಕವಳಾಗಿದ್ದ ದಿನಗಳಿಂದಲೂ ನನ್ನ ಅಪ್ಪ-ಅಮ್ಮ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರು. ವನ್ಯ ಜೀವಿಗಳು, ಅವುಗಳ ಜೀವನ ನನ್ನ ಮನಸೂರೆಗೊಂಡಿದ್ದವು. ಅಪ್ಪ ಬೇರೆ ವನ್ಯಜೀವಿ ಛಾಯಾಗ್ರಾಹಕರಾದ ಕಾರಣ ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದೆ. ಅವುಗಳೇ ನನ್ನನ್ನು ಈ ಹಂತಕ್ಕೆ ಬೆಳೆಸಿವೆ' ಎಂದು ಹೇಳುತ್ತಾರೆ ಪ್ರಕೃತಿ.<br /> <br /> ತಡೋಬಾ (ಮಹಾರಾಷ್ಟ್ರ), ಬಂಡಿಪುರ, ದರೋಜಿ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು (ಕರ್ನಾಟಕ), ರೊಲ್ಲಪಡು (ಆಂಧ್ರಪ್ರದೇಶ) ಸೇರಿದಂತೆ ಹಲವು ಪಕ್ಷಿ ಹಾಗೂ ವನ್ಯಜೀವಿ ಧಾಮಗಳಲ್ಲಿ ಅವರು ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.<br /> <br /> `ಭಾರತ ವಿಶಿಷ್ಟ ಜೀವವೈವಿಧ್ಯದ ತಾಣ. ಈ ನೆಲದಲ್ಲಿ ಜನಿಸಲು ನಾನು ಅದೃಷ್ಟ ಹೊಂದಿದ್ದೇನೆ. ಹಲವು ಕಾಡುಗಳನ್ನು ಸುತ್ತಿರುವ ನಾನು ಸಾವಿರಾರು ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ. ನನ್ನ ಸ್ನೇಹಿತೆಯರು ವನ್ಯಜೀವಿಗಳ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ' ಎಂದು ವಿವರಿಸುತ್ತಾರೆ. `ಪ್ರಾಣಿ ಹಾಗೂ ಪಕ್ಷಿಗಳ ಆ್ಯಕ್ಷನ್ ಚಿತ್ರಗಳನ್ನು ತೆಗೆಯುವುದು ಬಲುಕಷ್ಟ. ಕಾಯುವ ತಾಳ್ಮೆಯೂ ನಮ್ಮಲ್ಲಿ ಇರಬೇಕು' ಎಂದು ಅಭಿಪ್ರಾಯ ಪಡುತ್ತಾರೆ.<br /> <br /> ಬೆಂಗಳೂರು, ಜೈಪುರ, ಜೋಧ್ಪುರ, ನವದೆಹಲಿ, ಇಂಧೋರ್, ಲಖನೌ, ಕೋಲ್ಕತ ಸೇರಿದಂತೆ ವಿವಿಧ ನಗರಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಯುವ ಛಾಯಾಗ್ರಾಹಕಿ ಪ್ರಕೃತಿ ಪಿ. ಕುಮಾರ್ ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಪರಿಸರ ಇತಿಹಾಸ ವಿಭಾಗದ ಸದಸ್ಯತ್ವ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.<br /> <br /> ಮಲ್ಲೇಶ್ವರದ ಎಂ.ಇ.ಎಸ್. ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಕೃತಿ, ಸದ್ಯ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸದಸ್ಯೆ (ಅವರಿಗೀಗ 17 ವರ್ಷ) ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ರಾಜಿ ಮಾಡಿಕೊಳ್ಳದ ಈ ಸಂಸ್ಥೆ, ಅತ್ಯಂತ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಮಾತ್ರ ತನ್ನ ಸದಸ್ಯತ್ವ ನೀಡುತ್ತದೆ.<br /> <br /> ಛಾಯಾಗ್ರಹಣ ಮಾತ್ರವಲ್ಲದೆ ಕ್ರೀಡೆಯಲ್ಲೂ ಮುಂದಿರುವ ಪ್ರಕೃತಿ, ಅತ್ಯುತ್ತಮ ಅಥ್ಲೀಟ್ ಆಗಿ ಹೆಸರು ಮಾಡಿದ್ದಾರೆ. ಮಲ್ಲೇಶ್ವರದ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಕ್ರೀಡೆಯಲ್ಲಿ ಮೂರು ಸಲ ಸಮಗ್ರ ಪ್ರಶಸ್ತಿಯನ್ನು ಪಡೆದ ಶ್ರೇಯ ಅವರದಾಗಿದೆ.<br /> <br /> ಭರತನಾಟ್ಯ ಮತ್ತು ಕರ್ನಾಟಕ ಸಂಗೀತದಲ್ಲೂ ಅಭ್ಯಾಸ ಮಾಡುತ್ತಿದ್ದಾರೆ. 2009ರಿಂದಲೂ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ಪ್ರಕೃತಿ, ಇದುವರೆಗೆ 200ಕ್ಕೂ ಅಧಿಕ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕಾಡಿನಿಂದ ನಾಡಿಗೆ ಅವರು ಹೆಕ್ಕಿತಂದ ಅಪರೂಪದ ದೃಶ್ಯಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಛಾಯಾಚಿತ್ರ ಮೇಳಗಳಲ್ಲಿ ಪ್ರದರ್ಶನಗೊಂಡಿವೆ.<br /> <br /> ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಮತ್ತು ಭಾರತೀಯ ಫೋಟೋಗ್ರಾಫಿ ಒಕ್ಕೂಟದ ಸದಸ್ಯೆಯಾಗಿರುವ ಪ್ರಕೃತಿ, ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಎಚ್.ವಿ. ಪ್ರವೀಣಕುಮಾರ್ ಅವರ ಪುತ್ರಿ.<br /> <br /> `ನಾನು ಚಿಕ್ಕವಳಾಗಿದ್ದ ದಿನಗಳಿಂದಲೂ ನನ್ನ ಅಪ್ಪ-ಅಮ್ಮ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರು. ವನ್ಯ ಜೀವಿಗಳು, ಅವುಗಳ ಜೀವನ ನನ್ನ ಮನಸೂರೆಗೊಂಡಿದ್ದವು. ಅಪ್ಪ ಬೇರೆ ವನ್ಯಜೀವಿ ಛಾಯಾಗ್ರಾಹಕರಾದ ಕಾರಣ ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದೆ. ಅವುಗಳೇ ನನ್ನನ್ನು ಈ ಹಂತಕ್ಕೆ ಬೆಳೆಸಿವೆ' ಎಂದು ಹೇಳುತ್ತಾರೆ ಪ್ರಕೃತಿ.<br /> <br /> ತಡೋಬಾ (ಮಹಾರಾಷ್ಟ್ರ), ಬಂಡಿಪುರ, ದರೋಜಿ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರು (ಕರ್ನಾಟಕ), ರೊಲ್ಲಪಡು (ಆಂಧ್ರಪ್ರದೇಶ) ಸೇರಿದಂತೆ ಹಲವು ಪಕ್ಷಿ ಹಾಗೂ ವನ್ಯಜೀವಿ ಧಾಮಗಳಲ್ಲಿ ಅವರು ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.<br /> <br /> `ಭಾರತ ವಿಶಿಷ್ಟ ಜೀವವೈವಿಧ್ಯದ ತಾಣ. ಈ ನೆಲದಲ್ಲಿ ಜನಿಸಲು ನಾನು ಅದೃಷ್ಟ ಹೊಂದಿದ್ದೇನೆ. ಹಲವು ಕಾಡುಗಳನ್ನು ಸುತ್ತಿರುವ ನಾನು ಸಾವಿರಾರು ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ. ನನ್ನ ಸ್ನೇಹಿತೆಯರು ವನ್ಯಜೀವಿಗಳ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ' ಎಂದು ವಿವರಿಸುತ್ತಾರೆ. `ಪ್ರಾಣಿ ಹಾಗೂ ಪಕ್ಷಿಗಳ ಆ್ಯಕ್ಷನ್ ಚಿತ್ರಗಳನ್ನು ತೆಗೆಯುವುದು ಬಲುಕಷ್ಟ. ಕಾಯುವ ತಾಳ್ಮೆಯೂ ನಮ್ಮಲ್ಲಿ ಇರಬೇಕು' ಎಂದು ಅಭಿಪ್ರಾಯ ಪಡುತ್ತಾರೆ.<br /> <br /> ಬೆಂಗಳೂರು, ಜೈಪುರ, ಜೋಧ್ಪುರ, ನವದೆಹಲಿ, ಇಂಧೋರ್, ಲಖನೌ, ಕೋಲ್ಕತ ಸೇರಿದಂತೆ ವಿವಿಧ ನಗರಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>