<p><strong>ಕೃಷ್ಣರಾಜಪುರ: </strong>ಚಿಕ್ಕದೇವಸಂದ್ರ ಗ್ರಾಮದ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರಕ್ಕೆ ಬೀಗ ಹಾಕಿ ಎರಡು ವರ್ಷಗಳಾದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.<br /> <br /> `ಬಿಬಿಎಂಪಿ ವ್ಯಾಪ್ತಿಯ ವಾರ್ಡ್ 53ಕ್ಕೆ ಸೇರಿದ ಚಿಕ್ಕದೇವಸಂದ್ರ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಗೊಂದಲದ ಗೂಡಾಗಿ ಪರಿಣಮಿಸಿ ಎರಡು ಪಕ್ಷಗಳ ಜಟಾಪಟಿಯಿಂದ ಬೀಗಮುದ್ರೆ ಹಾಕಲಾಗಿದೆ' ಎಂದು ನಿವಾಸಿ ರಮೇಶ್ ದೂರಿದರು.</p>.<p>ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಅವರು 2011ರ ಜೂನ್ 11ರಂದು `ಬೆಂಗಳೂರು ಒನ್' ಕೇಂದ್ರವನ್ನು ಉದ್ಘಾಟಿಸಿದ್ದರು. ಆಗಿನ ಶಾಸಕ ಎನ್.ಎಸ್.ನಂದೀಶ ರೆಡ್ಡಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಬೀಗ ಹಾಕಿಸಿದ್ದರು. ಜೂನ್ 22ರಂದು ಎನ್.ಎಸ್.ನಂದೀಶ ರೆಡ್ಡಿ ಕೇಂದ್ರಕ್ಕೆ ಚಾಲನೆ ನೀಡಿದ್ದರು.</p>.<p>ಸಮದಾಯ ಭವನಕ್ಕೆ ಮೀಸಲಿರಿಸಿದ ಜಾಗವನ್ನು `ಬೆಂಗಳೂರು ಒನ್' ಕೇಂದ್ರಕ್ಕೆ ಬಳಸಲಾಗಿದೆ ಎಂದು ದೂರಿ ದಲಿತ ಮುಖಂಡರು ಪ್ರತಿಭಟಿಸಿದ್ದರು. ಕೇಂದ್ರಕ್ಕೆ ಬೀಗ ಹಾಕಿ ಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು.<br /> <br /> `ಇದುವರೆಗೂ ಸಮುದಾಯ ಭವನದಲ್ಲಿ ಚಟುವಟಿಕೆಗಳು ನಡೆದಿಲ್ಲ. ಇನ್ನೊಂದೆಡೆ `ಬೆಂಗಳೂರು ಒನ್' ಕೇಂದ್ರ ಕಾರ್ಯಾರಂಭ ಮಾಡದೆ ಸ್ಥಗಿತಗೊಂಡಿದೆ' ಎಂದು ಅಂಗಡಿ ಮಾಲೀಕ ವೆಂಕಟೇಶಪ್ಪ ಬೇಸರ ವ್ಯಕ್ತಪಡಿಸಿದರು.`ನೂತನ ಶಾಸಕರು ಮತ್ತು ಬಿಬಿಎಂಪಿ ಸದಸ್ಯೆ ಈಗ ಒಂದೇ ಪಕ್ಷದವರು. ಅವರು ಈ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ: </strong>ಚಿಕ್ಕದೇವಸಂದ್ರ ಗ್ರಾಮದ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರಕ್ಕೆ ಬೀಗ ಹಾಕಿ ಎರಡು ವರ್ಷಗಳಾದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.<br /> <br /> `ಬಿಬಿಎಂಪಿ ವ್ಯಾಪ್ತಿಯ ವಾರ್ಡ್ 53ಕ್ಕೆ ಸೇರಿದ ಚಿಕ್ಕದೇವಸಂದ್ರ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಗೊಂದಲದ ಗೂಡಾಗಿ ಪರಿಣಮಿಸಿ ಎರಡು ಪಕ್ಷಗಳ ಜಟಾಪಟಿಯಿಂದ ಬೀಗಮುದ್ರೆ ಹಾಕಲಾಗಿದೆ' ಎಂದು ನಿವಾಸಿ ರಮೇಶ್ ದೂರಿದರು.</p>.<p>ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಅವರು 2011ರ ಜೂನ್ 11ರಂದು `ಬೆಂಗಳೂರು ಒನ್' ಕೇಂದ್ರವನ್ನು ಉದ್ಘಾಟಿಸಿದ್ದರು. ಆಗಿನ ಶಾಸಕ ಎನ್.ಎಸ್.ನಂದೀಶ ರೆಡ್ಡಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಬೀಗ ಹಾಕಿಸಿದ್ದರು. ಜೂನ್ 22ರಂದು ಎನ್.ಎಸ್.ನಂದೀಶ ರೆಡ್ಡಿ ಕೇಂದ್ರಕ್ಕೆ ಚಾಲನೆ ನೀಡಿದ್ದರು.</p>.<p>ಸಮದಾಯ ಭವನಕ್ಕೆ ಮೀಸಲಿರಿಸಿದ ಜಾಗವನ್ನು `ಬೆಂಗಳೂರು ಒನ್' ಕೇಂದ್ರಕ್ಕೆ ಬಳಸಲಾಗಿದೆ ಎಂದು ದೂರಿ ದಲಿತ ಮುಖಂಡರು ಪ್ರತಿಭಟಿಸಿದ್ದರು. ಕೇಂದ್ರಕ್ಕೆ ಬೀಗ ಹಾಕಿ ಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು.<br /> <br /> `ಇದುವರೆಗೂ ಸಮುದಾಯ ಭವನದಲ್ಲಿ ಚಟುವಟಿಕೆಗಳು ನಡೆದಿಲ್ಲ. ಇನ್ನೊಂದೆಡೆ `ಬೆಂಗಳೂರು ಒನ್' ಕೇಂದ್ರ ಕಾರ್ಯಾರಂಭ ಮಾಡದೆ ಸ್ಥಗಿತಗೊಂಡಿದೆ' ಎಂದು ಅಂಗಡಿ ಮಾಲೀಕ ವೆಂಕಟೇಶಪ್ಪ ಬೇಸರ ವ್ಯಕ್ತಪಡಿಸಿದರು.`ನೂತನ ಶಾಸಕರು ಮತ್ತು ಬಿಬಿಎಂಪಿ ಸದಸ್ಯೆ ಈಗ ಒಂದೇ ಪಕ್ಷದವರು. ಅವರು ಈ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>