<p><strong>ಜಗಳೂರು: </strong>ವಿನಾಶದ ಅಂಚಿನಲ್ಲಿರುವ ಅಪರೂಪ ಪ್ರಭೇದದ, ಗರ್ಭ ಧರಿಸಿದ್ದ `ಕೊಂಡುಕುರಿ~ಯೊಂದನ್ನು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಘೋಷಿತ `ಕೊಂಡುಕುರಿ ವನ್ಯಧಾಮ~ದಲ್ಲಿ ಮಂಗಳವಾರ ಬೇಟೆಯಾಡಿ ಕೊಲ್ಲಲಾಗಿದೆ.<br /> <br /> ಅರಣ್ಯ ಪ್ರದೇಶದ ರಕ್ಕಸಘಟ್ಟ ವಲಯದಲ್ಲಿ ಕೊಂಡುಕುರಿಯ ಚಲನವಲನವನ್ನು ಗಮನಿಸಿರುವ ಬೇಟೆಗಾರರು ಬಲೆ ಹಾಕಿ ಕೊಂಡುಕುರಿಯನ್ನು ಹಿಡಿದಿದ್ದಾರೆ. ಬಲೆಗೆ ಬಿದ್ದ ನಂತರ ಗಿಡಗಳ ಮರೆಯಲ್ಲಿ ಅವಿತಿದ್ದ ದುಷ್ಕರ್ಮಿಗಳು ಬಡಿಗೆಯಿಂದ ಕೊಂಡುಕುರಿಯ ತಲೆಗೆ ಹೊಡೆದು ಕೊಂದು ಹಾಕಿದ್ದಾರೆ. <br /> <br /> ಕೊಂದ ನಂತರ ಹೊತ್ತೊಯ್ಯುತ್ತಿದ್ದಾಗ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಭೂತಪ್ಪ ಹಾಗೂ ಸಿಬ್ಬಂದಿ ಹುಸೇನ್ ಹೊಸಕೇರಿ ಎದುರಿಗೆ ಬಂದಿದ್ದಾರೆ. ಸಿಬ್ಬಂದಿಯನ್ನು ಕಂಡ ಬೇಟೆಗಾರರು ಕೊಂಡುಕುರಿ ದೇಹವನ್ನು ಎಸೆದು ಪರಾರಿಯಾಗಿದ್ದಾರೆ. <br /> <br /> ಮಾಹಿತಿ ತಿಳಿಯುತ್ತಿದ್ದಂತೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಕೆಂಚಪ್ಪನವರ್ ಹಾಗೂ ವಲಯ ಅರಣ್ಯಾಧಿಕಾರಿ ರಾಜಾಸಾಬ್ ಸ್ಥಳಕ್ಕೆ ಭೇಟಿ ನೀಡಿದರು. ಕೊಂಡುಕುರಿ ದೇಹ ಹಾಗೂ ಬೇಟೆಗೆ ಬಳಸಲಾಗಿದ್ದ ಬಲೆಯೊಂದಿಗೆ ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದು ಕೊಂಡುಕುರಿಯ ಶವಪರೀಕ್ಷೆ ನಡೆಸಲಾಯಿತು. <br /> <br /> ಈ ಸಂದರ್ಭದಲ್ಲಿ ಕೊಂಡುಕುರಿ ಗರ್ಭಧರಿಸಿದ್ದು, ಹೊಟ್ಟೆಯಲ್ಲಿ ಎರಡು ಮರಿಗಳು ಇದ್ದವು. ತಲೆಗೆ ಬಲವಾದ ಏಟು ಬಿದ್ದಿದೆ ಎಂದು ಶವ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ಬುಡೇನ್ ಮಾಹಿತಿ ನೀಡಿದರು. <br /> ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಶಿಘ್ರವೇ ಬಂಧಿಸಲಾಗುವುದು ಎಂದು ಎಸಿಎಫ್ ಸುದ್ದಿಗಾರರಿಗೆ ತಿಳಿಸಿದರು.<br /> <strong><br /> ಅಳಿವಿನ ಅಂಚಿನಲ್ಲಿರುವ ಪ್ರಾಣಿ:</strong> 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಒಂದನೇ ಷೆಡ್ಯೂಲ್ನಲ್ಲಿ ಕೊಂಡುಕುರಿಗೆ ವಿಶೇಷ ಮಹತ್ವ ನೀಡಲಾಗಿದೆ. ಜಗತ್ತಿನಲ್ಲಿ ವಿನಾಶದ ಪ್ರಭೇದವಾಗಿರುವ ಕೊಂಡುಕುರಿ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಕಾರಣ ಕಳೆದ ವರ್ಷ ಸರ್ಕಾರ ಈ ಅರಣ್ಯವನ್ನು `ಕೊಂಡುಕುರಿ ವನ್ಯಜೀವಿಧಾಮ~ವನ್ನಾಗಿ ಘೋಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು: </strong>ವಿನಾಶದ ಅಂಚಿನಲ್ಲಿರುವ ಅಪರೂಪ ಪ್ರಭೇದದ, ಗರ್ಭ ಧರಿಸಿದ್ದ `ಕೊಂಡುಕುರಿ~ಯೊಂದನ್ನು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಘೋಷಿತ `ಕೊಂಡುಕುರಿ ವನ್ಯಧಾಮ~ದಲ್ಲಿ ಮಂಗಳವಾರ ಬೇಟೆಯಾಡಿ ಕೊಲ್ಲಲಾಗಿದೆ.<br /> <br /> ಅರಣ್ಯ ಪ್ರದೇಶದ ರಕ್ಕಸಘಟ್ಟ ವಲಯದಲ್ಲಿ ಕೊಂಡುಕುರಿಯ ಚಲನವಲನವನ್ನು ಗಮನಿಸಿರುವ ಬೇಟೆಗಾರರು ಬಲೆ ಹಾಕಿ ಕೊಂಡುಕುರಿಯನ್ನು ಹಿಡಿದಿದ್ದಾರೆ. ಬಲೆಗೆ ಬಿದ್ದ ನಂತರ ಗಿಡಗಳ ಮರೆಯಲ್ಲಿ ಅವಿತಿದ್ದ ದುಷ್ಕರ್ಮಿಗಳು ಬಡಿಗೆಯಿಂದ ಕೊಂಡುಕುರಿಯ ತಲೆಗೆ ಹೊಡೆದು ಕೊಂದು ಹಾಕಿದ್ದಾರೆ. <br /> <br /> ಕೊಂದ ನಂತರ ಹೊತ್ತೊಯ್ಯುತ್ತಿದ್ದಾಗ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಭೂತಪ್ಪ ಹಾಗೂ ಸಿಬ್ಬಂದಿ ಹುಸೇನ್ ಹೊಸಕೇರಿ ಎದುರಿಗೆ ಬಂದಿದ್ದಾರೆ. ಸಿಬ್ಬಂದಿಯನ್ನು ಕಂಡ ಬೇಟೆಗಾರರು ಕೊಂಡುಕುರಿ ದೇಹವನ್ನು ಎಸೆದು ಪರಾರಿಯಾಗಿದ್ದಾರೆ. <br /> <br /> ಮಾಹಿತಿ ತಿಳಿಯುತ್ತಿದ್ದಂತೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಕೆಂಚಪ್ಪನವರ್ ಹಾಗೂ ವಲಯ ಅರಣ್ಯಾಧಿಕಾರಿ ರಾಜಾಸಾಬ್ ಸ್ಥಳಕ್ಕೆ ಭೇಟಿ ನೀಡಿದರು. ಕೊಂಡುಕುರಿ ದೇಹ ಹಾಗೂ ಬೇಟೆಗೆ ಬಳಸಲಾಗಿದ್ದ ಬಲೆಯೊಂದಿಗೆ ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದು ಕೊಂಡುಕುರಿಯ ಶವಪರೀಕ್ಷೆ ನಡೆಸಲಾಯಿತು. <br /> <br /> ಈ ಸಂದರ್ಭದಲ್ಲಿ ಕೊಂಡುಕುರಿ ಗರ್ಭಧರಿಸಿದ್ದು, ಹೊಟ್ಟೆಯಲ್ಲಿ ಎರಡು ಮರಿಗಳು ಇದ್ದವು. ತಲೆಗೆ ಬಲವಾದ ಏಟು ಬಿದ್ದಿದೆ ಎಂದು ಶವ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ಬುಡೇನ್ ಮಾಹಿತಿ ನೀಡಿದರು. <br /> ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಶಿಘ್ರವೇ ಬಂಧಿಸಲಾಗುವುದು ಎಂದು ಎಸಿಎಫ್ ಸುದ್ದಿಗಾರರಿಗೆ ತಿಳಿಸಿದರು.<br /> <strong><br /> ಅಳಿವಿನ ಅಂಚಿನಲ್ಲಿರುವ ಪ್ರಾಣಿ:</strong> 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಒಂದನೇ ಷೆಡ್ಯೂಲ್ನಲ್ಲಿ ಕೊಂಡುಕುರಿಗೆ ವಿಶೇಷ ಮಹತ್ವ ನೀಡಲಾಗಿದೆ. ಜಗತ್ತಿನಲ್ಲಿ ವಿನಾಶದ ಪ್ರಭೇದವಾಗಿರುವ ಕೊಂಡುಕುರಿ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಕಾರಣ ಕಳೆದ ವರ್ಷ ಸರ್ಕಾರ ಈ ಅರಣ್ಯವನ್ನು `ಕೊಂಡುಕುರಿ ವನ್ಯಜೀವಿಧಾಮ~ವನ್ನಾಗಿ ಘೋಷಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>