<p><strong>ಚಂಡಿಗಡ (ಪಿಟಿಐ):</strong> ಸಾರ್ವಜನಿಕ ಹಣ ದುರುಪಯೋಗ, ಒಳಸಂಚು ಹಾಗೂ ವಂಚನೆಯ ಆರೋಪದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಹಾಗೂ ನಿವೃತ್ತ ಮುಖ್ಯ ವ್ಯವಸ್ಥಾಪಕ ಸೇರಿದಂತೆ ಬ್ಯಾಂಕ್ ನ ಕೆಲವು ನಿವೃತ್ತ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ತಂಡ ಭಾನುವಾರ ಪ್ರಕರಣವನ್ನು ದಾಖಲಿಸಿದೆ.<br /> <br /> ಎಸ್.ಎಂ. ಮಹಾಜನ್ (ನಿವೃತ್ತ ಮುಖ್ಯ ವ್ಯವಸ್ಥಾಪಕ), ಎನ್.ಕೆ. ಮೆಹತಾ (ನಿವೃತ್ತ ಉಪ ವ್ಯವಸ್ಥಾಪಕ), ಆರ್.ಕೆ. ಛಾಬ್, ಧೀರಜ್ ಸಿಂಗ್ ಹಾಗೂ ಮಮತಾ ಚೌಧರಿ ಬಂಧಿತ ಆರೋಪಿಗಳಾಗಿದ್ದಾರೆ. <br /> <br /> ~ಬ್ಯಾಂಕ್ ಅಧಿಕಾರಿಗಳು 2005-09 ರ ಅವಧಿಯಲ್ಲಿ ಸಾರ್ವಜನಿಕ ಹಣದ ದುರುಪಯೋಗ ಮಾಡಿಕೊಳ್ಳುವುದರೊಂದಿಗೆ ನಕಲಿ ಹಾಗೂ ಮುಚ್ಚಿದ ಕಂಪೆನಿಗಳಿಗೆ ಬ್ಯಾಂಕಿನಿಂದ ಸಾಲು ಮುಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಇವರೊಂದಿಗೆ ಬ್ಯಾಂಕ್ ನ ನಿವೃತ್ತ ಅಧಿಕಾರಿಗಳು ಹಾಗೂ ಉದ್ದೆಮಿಗಳು ಶಾಮೀಲಾಗಿರುತ್ತಾರೆ. ಇದರಿಂದ ಬ್ಯಾಂಕ್ ಗೆ ಒಟ್ಟು 3.95 ಕೋಟಿ ರೂ. ಹಣ ನಷ್ಟವಾಗಿರುತ್ತದೆ~ ಎಂದು ಸಿಬಿಐನ ಹಿರಿಯ ಅಧಿಕಾರಿಗಳ ತಂಡ ತಿಳಿಸಿದೆ. </p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಗೊಂಡಿದ್ದು, ಬ್ಯಾಂಕ್ ನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ~ ಎಂದು ಸಿಬಿಐ ಹಿರಿಯ ಅಧಿಕಾರಿ ಮಹೇಶ್ ಅಗರವಾಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡಿಗಡ (ಪಿಟಿಐ):</strong> ಸಾರ್ವಜನಿಕ ಹಣ ದುರುಪಯೋಗ, ಒಳಸಂಚು ಹಾಗೂ ವಂಚನೆಯ ಆರೋಪದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಹಾಗೂ ನಿವೃತ್ತ ಮುಖ್ಯ ವ್ಯವಸ್ಥಾಪಕ ಸೇರಿದಂತೆ ಬ್ಯಾಂಕ್ ನ ಕೆಲವು ನಿವೃತ್ತ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ತಂಡ ಭಾನುವಾರ ಪ್ರಕರಣವನ್ನು ದಾಖಲಿಸಿದೆ.<br /> <br /> ಎಸ್.ಎಂ. ಮಹಾಜನ್ (ನಿವೃತ್ತ ಮುಖ್ಯ ವ್ಯವಸ್ಥಾಪಕ), ಎನ್.ಕೆ. ಮೆಹತಾ (ನಿವೃತ್ತ ಉಪ ವ್ಯವಸ್ಥಾಪಕ), ಆರ್.ಕೆ. ಛಾಬ್, ಧೀರಜ್ ಸಿಂಗ್ ಹಾಗೂ ಮಮತಾ ಚೌಧರಿ ಬಂಧಿತ ಆರೋಪಿಗಳಾಗಿದ್ದಾರೆ. <br /> <br /> ~ಬ್ಯಾಂಕ್ ಅಧಿಕಾರಿಗಳು 2005-09 ರ ಅವಧಿಯಲ್ಲಿ ಸಾರ್ವಜನಿಕ ಹಣದ ದುರುಪಯೋಗ ಮಾಡಿಕೊಳ್ಳುವುದರೊಂದಿಗೆ ನಕಲಿ ಹಾಗೂ ಮುಚ್ಚಿದ ಕಂಪೆನಿಗಳಿಗೆ ಬ್ಯಾಂಕಿನಿಂದ ಸಾಲು ಮುಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಇವರೊಂದಿಗೆ ಬ್ಯಾಂಕ್ ನ ನಿವೃತ್ತ ಅಧಿಕಾರಿಗಳು ಹಾಗೂ ಉದ್ದೆಮಿಗಳು ಶಾಮೀಲಾಗಿರುತ್ತಾರೆ. ಇದರಿಂದ ಬ್ಯಾಂಕ್ ಗೆ ಒಟ್ಟು 3.95 ಕೋಟಿ ರೂ. ಹಣ ನಷ್ಟವಾಗಿರುತ್ತದೆ~ ಎಂದು ಸಿಬಿಐನ ಹಿರಿಯ ಅಧಿಕಾರಿಗಳ ತಂಡ ತಿಳಿಸಿದೆ. </p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಗೊಂಡಿದ್ದು, ಬ್ಯಾಂಕ್ ನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ~ ಎಂದು ಸಿಬಿಐ ಹಿರಿಯ ಅಧಿಕಾರಿ ಮಹೇಶ್ ಅಗರವಾಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>