<p><strong>ಬೆಂಗಳೂರು:</strong> ಆರಂಭದಲ್ಲಿ ಭಾರಿ ಪ್ರತಿರೋಧ ಎದುರಾದರೂ ಎಚ್ಚರಿಕೆಯ ಆಟವಾಡಿದ ಏಳನೇ ಶ್ರೇಯಾಂಕದ ಅಭಿಷೇಕ್ ಯಲಿಗಾರ್ ಇಲ್ಲಿ ಕೊನೆಗೊಂಡ ಎಂ.ಎಸ್. ರಾಮಯ್ಯ ಆನಂದ ಶರ್ಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು.<br /> <br /> ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಪಿಪಿಬಿಎನ ಅಭಿಷೇಕ್ 21-14, 21-12ರಲ್ಲಿ ತಮ್ಮದೇ ಕ್ಲಬ್ನ ಆದಿತ್ಯ ಆರ್. ಪ್ರಕಾಶ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.<br /> <br /> ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದಿತ್ಯ ಆರ್. ಪ್ರಕಾಶ್-ಕೃಷ್ಣಾ ಜೋಡಿ 21-16, 21-19ರಲ್ಲಿ ಆದರ್ಶ ಕುಮಾರ್-ವೆಂಕಟೇಶ್ ಪ್ರಸಾದ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು. <br /> <br /> ವಿನಯ್ ಸಿದ್ದರಾಜ್ ಇದೇ ಟೂರ್ನಿಯ ವೆಟರನ್ಸ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಆಟಗಾರ 21-18, 21-10ರಲ್ಲಿ ಜಯರಾಮ್ ಪೈ ಎದುರು ಗೆಲುವು ಸಾಧಿಸಿ ಚಾಂಪಿಯನ್ ಆದರು. <br /> <br /> ಇದೇ ವಿಭಾಗದ ಡಬಲ್ಸ್ನ ಅಂತಿಮ ಘಟ್ಟದ ಪಂದ್ಯದಲ್ಲಿ ಸಾಗರದ ಜಯರಾಮ್ ಪೈ-ವಸಂತ್ ಕುಮಾರ್ ಜೋಡಿ 21-12, 14-21, 21-16ರಲ್ಲಿ ಕೇದಾರನಾಥ್-ವಿನಯ್ ಸಿದ್ದರಾಜು ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆರಂಭದಲ್ಲಿ ಭಾರಿ ಪ್ರತಿರೋಧ ಎದುರಾದರೂ ಎಚ್ಚರಿಕೆಯ ಆಟವಾಡಿದ ಏಳನೇ ಶ್ರೇಯಾಂಕದ ಅಭಿಷೇಕ್ ಯಲಿಗಾರ್ ಇಲ್ಲಿ ಕೊನೆಗೊಂಡ ಎಂ.ಎಸ್. ರಾಮಯ್ಯ ಆನಂದ ಶರ್ಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಚಾಂಪಿಯನ್ ಆದರು.<br /> <br /> ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಪಿಪಿಬಿಎನ ಅಭಿಷೇಕ್ 21-14, 21-12ರಲ್ಲಿ ತಮ್ಮದೇ ಕ್ಲಬ್ನ ಆದಿತ್ಯ ಆರ್. ಪ್ರಕಾಶ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.<br /> <br /> ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದಿತ್ಯ ಆರ್. ಪ್ರಕಾಶ್-ಕೃಷ್ಣಾ ಜೋಡಿ 21-16, 21-19ರಲ್ಲಿ ಆದರ್ಶ ಕುಮಾರ್-ವೆಂಕಟೇಶ್ ಪ್ರಸಾದ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು. <br /> <br /> ವಿನಯ್ ಸಿದ್ದರಾಜ್ ಇದೇ ಟೂರ್ನಿಯ ವೆಟರನ್ಸ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಆಟಗಾರ 21-18, 21-10ರಲ್ಲಿ ಜಯರಾಮ್ ಪೈ ಎದುರು ಗೆಲುವು ಸಾಧಿಸಿ ಚಾಂಪಿಯನ್ ಆದರು. <br /> <br /> ಇದೇ ವಿಭಾಗದ ಡಬಲ್ಸ್ನ ಅಂತಿಮ ಘಟ್ಟದ ಪಂದ್ಯದಲ್ಲಿ ಸಾಗರದ ಜಯರಾಮ್ ಪೈ-ವಸಂತ್ ಕುಮಾರ್ ಜೋಡಿ 21-12, 14-21, 21-16ರಲ್ಲಿ ಕೇದಾರನಾಥ್-ವಿನಯ್ ಸಿದ್ದರಾಜು ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>