<p>ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ರಿಷಿಕೇಶ್ ಯಲಿಗಾರ್ ಇಲ್ಲಿ ನಡೆಯುತ್ತಿರುವ ಐಎಫ್ಸಿಐ ಅಖಿಲ ಭಾರತ ಮೇಜರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಹಂತಕ್ಕೆ ಪ್ರವೇಶಿಸಿದ್ದಾರೆ.<br /> <br /> ಇಲ್ಲಿನ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಋಷಿಕೇಶ್ 21-14, 21-19ರಲ್ಲಿ ಆಂಧ್ರ ಪ್ರದೇಶದ ಜೆ.ಬಿ.ಎಸ್. ವಿದ್ಯಾಧರ ಅವರನ್ನು ಮಣಿಸಿದರು.<br /> <br /> ಮಹಿಳೆಯರ ವಿಭಾಗದಲ್ಲಿ ಆತಿಥೇಯ ರಾಜ್ಯದ ಸಿಂಧು ಭಾರದ್ವಾಜ್ 21-13, 21-13ರಲ್ಲಿ ಚತ್ತೀಸಗಡದ ದೀಪಾಲಿ ಗುಪ್ತ ವಿರುದ್ಧ ಗೆಲುವು ಪಡೆದು ಪ್ರಧಾನ ಸುತ್ತು ಪ್ರವೇಶಿಸಿದರು. <br /> <br /> ಇದೇ ಟೂರ್ನಿಯ ಪುರುಷರ ವಿಭಾಗದ ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಎನ್.ಎನ್. ವಿನಾಯಕ್ 16-21, 21-19, 21-17ರಲ್ಲಿ ಆಂಧ್ರ ಪ್ರದೇಶದ ಅಜಯ್ ಕುಮಾರ ಮೇಲೂ, ಮಹಾರಾಷ್ಟ್ರದ ಸಾಗರ್ ಚೊಪ್ಡಾ 21-14, 14-21, 21-18ರಲ್ಲಿ ಆಸ್ಸಾಂನ ಹರಿಕಾ ಜ್ಯೋತಿ ನಿಯೋಜ್ ವಿರುದ್ಧವೂ, ವಿಜಯ್ ಕುಮಾರ್ ರೆಡ್ಡಿ 21-12, 21-14ರಲ್ಲಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಮೇಲೂ ಜಯ ಸಾಧಿಸಿದರು.<br /> <br /> ಆದಿತ್ಯ ಜೋಶಿ 17-21, 21-15, 21-14ರಲ್ಲಿ ಪ್ರೇಮ್ ಸಿಂಗ್ ಚವ್ಹಾಣ್ ವಿರುದ್ಧವೂ, ಆಂಧ್ರ ಪ್ರದೇಶದ ರೋಹಿತ್ ಯಾದವ್ 17-21, 21-9, 24-22ರಲ್ಲಿ ನೀಗಲ್ ಡಿಸೋಜಾ ಮೇಲೂ ಗೆಲುವು ಸಾಧಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ರಿಷಿಕೇಶ್ ಯಲಿಗಾರ್ ಇಲ್ಲಿ ನಡೆಯುತ್ತಿರುವ ಐಎಫ್ಸಿಐ ಅಖಿಲ ಭಾರತ ಮೇಜರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಹಂತಕ್ಕೆ ಪ್ರವೇಶಿಸಿದ್ದಾರೆ.<br /> <br /> ಇಲ್ಲಿನ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಋಷಿಕೇಶ್ 21-14, 21-19ರಲ್ಲಿ ಆಂಧ್ರ ಪ್ರದೇಶದ ಜೆ.ಬಿ.ಎಸ್. ವಿದ್ಯಾಧರ ಅವರನ್ನು ಮಣಿಸಿದರು.<br /> <br /> ಮಹಿಳೆಯರ ವಿಭಾಗದಲ್ಲಿ ಆತಿಥೇಯ ರಾಜ್ಯದ ಸಿಂಧು ಭಾರದ್ವಾಜ್ 21-13, 21-13ರಲ್ಲಿ ಚತ್ತೀಸಗಡದ ದೀಪಾಲಿ ಗುಪ್ತ ವಿರುದ್ಧ ಗೆಲುವು ಪಡೆದು ಪ್ರಧಾನ ಸುತ್ತು ಪ್ರವೇಶಿಸಿದರು. <br /> <br /> ಇದೇ ಟೂರ್ನಿಯ ಪುರುಷರ ವಿಭಾಗದ ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಎನ್.ಎನ್. ವಿನಾಯಕ್ 16-21, 21-19, 21-17ರಲ್ಲಿ ಆಂಧ್ರ ಪ್ರದೇಶದ ಅಜಯ್ ಕುಮಾರ ಮೇಲೂ, ಮಹಾರಾಷ್ಟ್ರದ ಸಾಗರ್ ಚೊಪ್ಡಾ 21-14, 14-21, 21-18ರಲ್ಲಿ ಆಸ್ಸಾಂನ ಹರಿಕಾ ಜ್ಯೋತಿ ನಿಯೋಜ್ ವಿರುದ್ಧವೂ, ವಿಜಯ್ ಕುಮಾರ್ ರೆಡ್ಡಿ 21-12, 21-14ರಲ್ಲಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಮೇಲೂ ಜಯ ಸಾಧಿಸಿದರು.<br /> <br /> ಆದಿತ್ಯ ಜೋಶಿ 17-21, 21-15, 21-14ರಲ್ಲಿ ಪ್ರೇಮ್ ಸಿಂಗ್ ಚವ್ಹಾಣ್ ವಿರುದ್ಧವೂ, ಆಂಧ್ರ ಪ್ರದೇಶದ ರೋಹಿತ್ ಯಾದವ್ 17-21, 21-9, 24-22ರಲ್ಲಿ ನೀಗಲ್ ಡಿಸೋಜಾ ಮೇಲೂ ಗೆಲುವು ಸಾಧಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>