<p><strong>ಬೆಂಗಳೂರು:</strong> ಅನೂಪ್ ಶ್ರೀಧರ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿ ಹೊರಬಿದ್ದರು. <br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್ನಲ್ಲಿ ಭಾನುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ಸೌರಭ್ ವರ್ಮಾ 21-15, 21-18 ರಲ್ಲಿ ಕರ್ನಾಟಕದ ಸ್ಪರ್ಧಿಯನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು.<br /> <br /> ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಎರಡನೇ ಸೆಟ್ನಲ್ಲಿ ಇಬ್ಬರೂ 18-18 ರಲ್ಲಿ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದು ಅನೂಪ್ಗೆ ಮುಳುವಾಗಿ ಪರಿಣಮಿಸಿತು. <br /> <br /> ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಮತ್ತು ಕರ್ನಾಟಕದ ಆದಿತ್ಯ ಪ್ರಕಾಶ್ 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆರನೇ ಶ್ರೇಯಾಂಕ ಪಡೆದಿರುವ ಅರವಿಂದ್ 21-16, 21-17 ರಲ್ಲಿ ಆಂಧ್ರ ಪ್ರದೇಶದ ಕೆ. ಅಜಯ್ ಕುಮಾರ್ ಅವರನ್ನು ಸೋಲಿಸಿದರು.<br /> <br /> ಆದಿತ್ಯ 21-18, 21-14 ರಲ್ಲಿ ಮಹಾರಾಷ್ಟ್ರದ ಸಾಗರ್ ಚೋಪ್ಡಾ ವಿರುದ್ಧ ಜಯ ಪಡೆದರು. ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಅಭಿಷೇಕ್ ಎಲಿಗಾರ್ ಎರಡನೇ ಸುತ್ತಿನಲ್ಲಿ 9-21, 12-21 ರಲ್ಲಿ ರೈಲ್ವೆಯ ವಿನಯ್ ಕುಮಾರ್ ಕೈಯಲ್ಲಿ ಪರಾಭವಗೊಂಡರು.<br /> <br /> ಎರಡನೇ ದಿನ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕೇರಳದ ದಯಾ ಎಲ್ಸಾ ಜೇಕಬ್ ಅಚ್ಚರಿಯ ಫಲಿತಾಂಶ ನೀಡಿದರು. ಅವರು 21-14, 21-10 ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಪಿಎಸ್ಪಿಬಿಯ ಅರುಂಧತಿ ಪಂತ್ವಾನೆ ವಿರುದ್ಧ ಜಯ ಪಡೆದರು. <br /> <br /> ಅಗ್ರಶ್ರೇಯಾಂಕದ ಆಟಗಾರ್ತಿ ಕೇರಳದ ಪಿ.ಸಿ. ತುಳಸಿ 21-19, 21-13 ರಲ್ಲಿ ಏರ್ ಇಂಡಿಯಾದ ಆರತಿ ಸಾರಾ ಸುನಿಲ್ ಅವರನ್ನು ಸೋಲಿಸಿ ದರು. ಕರ್ನಾಟಕದ ರುತ್ ಮಿಶಾ, ಜಾಕ್ವೆಲಿನ್ ರೋಸ್ ಕುನ್ನತ್, ಅರ್ಶೀನ್ ಸಯೀದಾ ಸಾದತ್ ಮತ್ತು ಸಿಂಧು ಭಾರದ್ವಾಜ್ ಸೋಲು ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅನೂಪ್ ಶ್ರೀಧರ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿ ಹೊರಬಿದ್ದರು. <br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್ನಲ್ಲಿ ಭಾನುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ಸೌರಭ್ ವರ್ಮಾ 21-15, 21-18 ರಲ್ಲಿ ಕರ್ನಾಟಕದ ಸ್ಪರ್ಧಿಯನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು.<br /> <br /> ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಎರಡನೇ ಸೆಟ್ನಲ್ಲಿ ಇಬ್ಬರೂ 18-18 ರಲ್ಲಿ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದು ಅನೂಪ್ಗೆ ಮುಳುವಾಗಿ ಪರಿಣಮಿಸಿತು. <br /> <br /> ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಮತ್ತು ಕರ್ನಾಟಕದ ಆದಿತ್ಯ ಪ್ರಕಾಶ್ 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆರನೇ ಶ್ರೇಯಾಂಕ ಪಡೆದಿರುವ ಅರವಿಂದ್ 21-16, 21-17 ರಲ್ಲಿ ಆಂಧ್ರ ಪ್ರದೇಶದ ಕೆ. ಅಜಯ್ ಕುಮಾರ್ ಅವರನ್ನು ಸೋಲಿಸಿದರು.<br /> <br /> ಆದಿತ್ಯ 21-18, 21-14 ರಲ್ಲಿ ಮಹಾರಾಷ್ಟ್ರದ ಸಾಗರ್ ಚೋಪ್ಡಾ ವಿರುದ್ಧ ಜಯ ಪಡೆದರು. ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಅಭಿಷೇಕ್ ಎಲಿಗಾರ್ ಎರಡನೇ ಸುತ್ತಿನಲ್ಲಿ 9-21, 12-21 ರಲ್ಲಿ ರೈಲ್ವೆಯ ವಿನಯ್ ಕುಮಾರ್ ಕೈಯಲ್ಲಿ ಪರಾಭವಗೊಂಡರು.<br /> <br /> ಎರಡನೇ ದಿನ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕೇರಳದ ದಯಾ ಎಲ್ಸಾ ಜೇಕಬ್ ಅಚ್ಚರಿಯ ಫಲಿತಾಂಶ ನೀಡಿದರು. ಅವರು 21-14, 21-10 ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಪಿಎಸ್ಪಿಬಿಯ ಅರುಂಧತಿ ಪಂತ್ವಾನೆ ವಿರುದ್ಧ ಜಯ ಪಡೆದರು. <br /> <br /> ಅಗ್ರಶ್ರೇಯಾಂಕದ ಆಟಗಾರ್ತಿ ಕೇರಳದ ಪಿ.ಸಿ. ತುಳಸಿ 21-19, 21-13 ರಲ್ಲಿ ಏರ್ ಇಂಡಿಯಾದ ಆರತಿ ಸಾರಾ ಸುನಿಲ್ ಅವರನ್ನು ಸೋಲಿಸಿ ದರು. ಕರ್ನಾಟಕದ ರುತ್ ಮಿಶಾ, ಜಾಕ್ವೆಲಿನ್ ರೋಸ್ ಕುನ್ನತ್, ಅರ್ಶೀನ್ ಸಯೀದಾ ಸಾದತ್ ಮತ್ತು ಸಿಂಧು ಭಾರದ್ವಾಜ್ ಸೋಲು ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>