<p>ಹುಮನಾಬಾದ್: ವಿಜಯದಶಮಿ ಪ್ರಯುಕ್ತ ಕಳೆದ ಒಂಭತ್ತು ದಿನಹಿಂದೆ ತಾಯಿ ಅಂಬಾಭವಾನಿ ಹೆಸರಲ್ಲಿ ಪ್ರತಿಷ್ಟಾಪಿಸಿದ್ದ ಘಟಸ್ಥಾಪನೆ ಭಕ್ತರ ಹರಕೆಯೊಂದಿಗೆ ಗುರುವಾರ ತೆರೆಕಂಡಿತು.<br /> <br /> ಅಮಾವಾಸ್ಯೆ ಮಾರನೆದಿನ ಘಟಸ್ಥಾಪಿಸುವ ಹಿನ್ನೆಲೆಯಲ್ಲಿ ಒಂದುವಾರ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣಗಳಿಂದ ಅಲಂಕರಿಸಿ, ಮನೆಯಲ್ಲಿನ ಚೂರುಪಾರು ಬಟೆಗಳೆಲ್ಲವನ್ನು ತೊಳೆದು ಒಂದೆಡೆ ಇಡಲಾಗುತ್ತದೆ.<br /> <br /> ಘಟನೆ ಸ್ಥಾಪನೆ ದಿನ ಎಲ್ಲ ಬಾಗಿಲುಗಳನ್ನು ಕಬ್ಬು, ತಳಿರು, ತೋರಣಗಳಿಂದ ಅಲಂಕರಿಸಲಾಗುತ್ತದೆ. ಘಟನೆ ಸ್ಥಾಪನೆಗೆ ಅಗತ್ಯವಿರುವ ಹುತ್ತದ ಮಣ್ಣನ್ನು ತಂದು ಒಂಭತ್ತು ನಮೂನೆಯ ಧಾನ್ಯ ಬೀಜಗಳನ್ನು ವಿಶೇಷ ಪೂಜೆ ಸಲ್ಲಿಸಿ, ಮಣ್ಣಲ್ಲಿ ಬೆರೆಸಲಾಗುತ್ತದೆ. ಒಂಭತ್ತುದಿನ ನಿರಂತರ ಹಗಲು - ರಾತ್ರಿ ಪೂಜೆ ಸಲ್ಲಿಸುವುದರ ಜೊತೆಗೆ ದೀಪವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಆರಂದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲೆ ಇರುತ್ತದೆ.<br /> <br /> ಅಂತಿಮ ದಿನ ವಿಶೇಷ ನೈವೇದ್ಯದೊಂದಿಗೆ ಅಂಬಾಭವಾನಿ ದೇವಸ್ಥಾನಕ್ಕೆ ತೆರಳಿ, ಹೊತ್ತ ವಿವಿಧ<br /> ಹರಕೆಗಳನ್ನು ತೀರಿಸುತ್ತಾರೆ. ಸಂಪ್ರದಾಯದಂತೆ ಮೇಲಿನ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ <br /> ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಾರೆ. ಅಂತೆಯೇ ಬನ್ನಿಬಂಗಾಯ ವಿನಿಮಯ ಮಾಡಿಕೊಳ್ಳುವ ಸಂಬಂಧ ನಗರದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಕ್ಷತಾತೀತವಾಗಿ ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿತ್ತು. <br /> <br /> ವಿಶೇಷ ಆಕರ್ಷಣೆ: ನಗರ ಬಾಲಾಜಿ ದೇವಸ್ಥಾನ ಬಳಿ ಪ್ರತಿವರ್ಷದಂತೆ ಈ ವರ್ಷವೂ ಸ್ಥಾಪಿಸಲಾಗಿದ್ದ ರಾವಳನ ಬೃಹತ್ ಪ್ರತಿಕೃತಿ ಮಕ್ಕಳು, ಹಿರಿಯರು ಪ್ರತಿಯೊಬ್ಬರ ಆಕರ್ಷಣೀಯ ಕೇಂದ್ರವಾಗಿತ್ತು. ಅದೇ ಕಾರಣಕ್ಕಾಗಿ ಬೆಳಿಗ್ಗೆಯಿಂದ ಸಂಜೆ 5ಗಂಟೆವರೆಗೂ ಬಾಲಾಜಿ ದೇವಸ್ಥಾನಬಳಿ ಭಾರೀ ಸಂಖ್ಯೆಯ ಜನ ನೆರೆದಿರುವುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಮನಾಬಾದ್: ವಿಜಯದಶಮಿ ಪ್ರಯುಕ್ತ ಕಳೆದ ಒಂಭತ್ತು ದಿನಹಿಂದೆ ತಾಯಿ ಅಂಬಾಭವಾನಿ ಹೆಸರಲ್ಲಿ ಪ್ರತಿಷ್ಟಾಪಿಸಿದ್ದ ಘಟಸ್ಥಾಪನೆ ಭಕ್ತರ ಹರಕೆಯೊಂದಿಗೆ ಗುರುವಾರ ತೆರೆಕಂಡಿತು.<br /> <br /> ಅಮಾವಾಸ್ಯೆ ಮಾರನೆದಿನ ಘಟಸ್ಥಾಪಿಸುವ ಹಿನ್ನೆಲೆಯಲ್ಲಿ ಒಂದುವಾರ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣಗಳಿಂದ ಅಲಂಕರಿಸಿ, ಮನೆಯಲ್ಲಿನ ಚೂರುಪಾರು ಬಟೆಗಳೆಲ್ಲವನ್ನು ತೊಳೆದು ಒಂದೆಡೆ ಇಡಲಾಗುತ್ತದೆ.<br /> <br /> ಘಟನೆ ಸ್ಥಾಪನೆ ದಿನ ಎಲ್ಲ ಬಾಗಿಲುಗಳನ್ನು ಕಬ್ಬು, ತಳಿರು, ತೋರಣಗಳಿಂದ ಅಲಂಕರಿಸಲಾಗುತ್ತದೆ. ಘಟನೆ ಸ್ಥಾಪನೆಗೆ ಅಗತ್ಯವಿರುವ ಹುತ್ತದ ಮಣ್ಣನ್ನು ತಂದು ಒಂಭತ್ತು ನಮೂನೆಯ ಧಾನ್ಯ ಬೀಜಗಳನ್ನು ವಿಶೇಷ ಪೂಜೆ ಸಲ್ಲಿಸಿ, ಮಣ್ಣಲ್ಲಿ ಬೆರೆಸಲಾಗುತ್ತದೆ. ಒಂಭತ್ತುದಿನ ನಿರಂತರ ಹಗಲು - ರಾತ್ರಿ ಪೂಜೆ ಸಲ್ಲಿಸುವುದರ ಜೊತೆಗೆ ದೀಪವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಆರಂದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲೆ ಇರುತ್ತದೆ.<br /> <br /> ಅಂತಿಮ ದಿನ ವಿಶೇಷ ನೈವೇದ್ಯದೊಂದಿಗೆ ಅಂಬಾಭವಾನಿ ದೇವಸ್ಥಾನಕ್ಕೆ ತೆರಳಿ, ಹೊತ್ತ ವಿವಿಧ<br /> ಹರಕೆಗಳನ್ನು ತೀರಿಸುತ್ತಾರೆ. ಸಂಪ್ರದಾಯದಂತೆ ಮೇಲಿನ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ <br /> ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಾರೆ. ಅಂತೆಯೇ ಬನ್ನಿಬಂಗಾಯ ವಿನಿಮಯ ಮಾಡಿಕೊಳ್ಳುವ ಸಂಬಂಧ ನಗರದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಕ್ಷತಾತೀತವಾಗಿ ಪರಸ್ಪರ ಬನ್ನಿಬಂಗಾರ ವಿನಿಮಯ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿತ್ತು. <br /> <br /> ವಿಶೇಷ ಆಕರ್ಷಣೆ: ನಗರ ಬಾಲಾಜಿ ದೇವಸ್ಥಾನ ಬಳಿ ಪ್ರತಿವರ್ಷದಂತೆ ಈ ವರ್ಷವೂ ಸ್ಥಾಪಿಸಲಾಗಿದ್ದ ರಾವಳನ ಬೃಹತ್ ಪ್ರತಿಕೃತಿ ಮಕ್ಕಳು, ಹಿರಿಯರು ಪ್ರತಿಯೊಬ್ಬರ ಆಕರ್ಷಣೀಯ ಕೇಂದ್ರವಾಗಿತ್ತು. ಅದೇ ಕಾರಣಕ್ಕಾಗಿ ಬೆಳಿಗ್ಗೆಯಿಂದ ಸಂಜೆ 5ಗಂಟೆವರೆಗೂ ಬಾಲಾಜಿ ದೇವಸ್ಥಾನಬಳಿ ಭಾರೀ ಸಂಖ್ಯೆಯ ಜನ ನೆರೆದಿರುವುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>