<p><strong>ಹಾವೇರಿ: </strong>`ವಿಶ್ವದಲ್ಲಿ ಖನಿಜ, ನೈಸರ್ಗಿಕ ಹಾಗೂ ಭೌತಿಕ ಸಂಪತ್ತನ್ನು ಕೊಳ್ಳೆ ಹೊಡೆಯಬಹುದು ಆದರೆ, ಭಾರತದ ಭಕ್ತಿ ಸಂಪತ್ತನ್ನು ಕೊಳ್ಳೆಹೊಡೆ ಯಲಾಗದು~ ಎಂದು ಚಿತ್ರದುರ್ಗದ ಶಿವಮೂರ್ತಿ ಮುರಘಾ ಶರಣರು ಹೇಳಿದರು. <br /> <br /> ನಗರದ ಹೊಸ ಮಠದ ಬಸವಕೇಂದ್ರದಲ್ಲಿ ಇತ್ತೀಚೆಗೆ ನಡೆದ ಮನೆ ಮನಗಳಿಗೂ ಶರಣರ ಸಂದೇಶ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. <br /> <br /> ತತ್ವಜ್ಞಾನಿಗಳು, ದಾರ್ಶನಿಕರು, ಸಂತರು, ಶಿವ ಶರಣರು ಭಕ್ತಿಯ ನಾಡನ್ನು ಕಟ್ಟಿದರೇ, ಗಾಂಧೀಜಿ ರಾಷ್ಟ್ರ ಭಕ್ತಿ, ಅಂಬೇಡ್ಕರ್ ಸಂವಿಧಾನ ಭಕ್ತಿ, ಮಧರ್ಥೆರಸಾ ಕರುಣಿಯ ಭಕ್ತಿ, ಬಸವಣ್ಣನ ಸಮಾನತೆ ಭಕ್ತಿಯ ನಾಡು ಕಟ್ಟಿ ಸಮಾಜದ ಒಳಿತಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.<br /> <br /> ಸಮಾರಂಭದ ಸಮ್ಮುಖ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿ, ಮನುಷ್ಯರಿಗೆ ಅದೃಷ್ಟ ಕೆಲವೊಂದು ಸಾರಿ ಕೈಕೊಡಬಹುದು ಆದರೆ, ಪರಿಶ್ರಮ ಆತನನ್ನು ಉತ್ತುಂಗಕ್ಕೆ ಕೊಂಡೊಯ್ಯ್ತ್ತದೆ ಎಂಬುವುದನ್ನು ಅರಿತು ಪ್ರತಿಯೊಬ್ಬರು ಪರಿಶ್ರಮ ದಿಂದ ಜೀವನ ನಡೆಸಬೇಕು ಎಂದರು.<br /> <br /> ಬಾವಿಯಲ್ಲಿನ ನೀರು ಕೆಲವರಿಗೆ ಮಾತ್ರ ದೊರೆತರೇ, ಹರಿಯುವ ನೀರು ಎಲ್ಲರಿಗೂ ದೊರೆಯುತ್ತದೆ. ಹೀಗೆ ಶಿವ ಶರಣರ ವಿಚಾರಗಳು ಹರಿಯುವ ನೀರಿದ್ದಂತೆ. ಈ ದಿಸೆಯಲ್ಲಿ ಶಿವ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.<br /> <br /> ಇದೇ ಸಂದರ್ಭದಲ್ಲಿ ವಿಧಾನ ಪರಿಸತ್ ಸದಸ್ಯ ಸೋಮಣ್ಣ ಬೇವಿನಮರದ ಅವರನ್ನು ಸನ್ಮಾನಿಸಿದ ಶ್ರೀಗಳು, ಬಸವಲಿಂಗ ನಾಮಾವಳಿ ಗ್ರಂಥ ಬಿಡುಗಡೆ ಮಾಡಿದರು. <br /> <br /> ಈ ಸಂದರ್ಭದಲ್ಲಿ ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಹಾಜರಿದ್ದರು.<br /> <br /> ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಬಸವರಾಜ ಅರಬಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯವತಿ ಕೋಡಬಾಳ ಪ್ರಾರ್ಥಿಸಿದರು. ನಾಗೇಂದ್ರ ಕಟಕೋಳ ಸ್ವಾಗತಿಸಿದರು. ಕೃಷ್ಣಾ ಜವಳಿ ನಿರೂಪಿಸಿ ದರು. ಶಿವಬಸಪ್ಪ ಮುದ್ದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>`ವಿಶ್ವದಲ್ಲಿ ಖನಿಜ, ನೈಸರ್ಗಿಕ ಹಾಗೂ ಭೌತಿಕ ಸಂಪತ್ತನ್ನು ಕೊಳ್ಳೆ ಹೊಡೆಯಬಹುದು ಆದರೆ, ಭಾರತದ ಭಕ್ತಿ ಸಂಪತ್ತನ್ನು ಕೊಳ್ಳೆಹೊಡೆ ಯಲಾಗದು~ ಎಂದು ಚಿತ್ರದುರ್ಗದ ಶಿವಮೂರ್ತಿ ಮುರಘಾ ಶರಣರು ಹೇಳಿದರು. <br /> <br /> ನಗರದ ಹೊಸ ಮಠದ ಬಸವಕೇಂದ್ರದಲ್ಲಿ ಇತ್ತೀಚೆಗೆ ನಡೆದ ಮನೆ ಮನಗಳಿಗೂ ಶರಣರ ಸಂದೇಶ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. <br /> <br /> ತತ್ವಜ್ಞಾನಿಗಳು, ದಾರ್ಶನಿಕರು, ಸಂತರು, ಶಿವ ಶರಣರು ಭಕ್ತಿಯ ನಾಡನ್ನು ಕಟ್ಟಿದರೇ, ಗಾಂಧೀಜಿ ರಾಷ್ಟ್ರ ಭಕ್ತಿ, ಅಂಬೇಡ್ಕರ್ ಸಂವಿಧಾನ ಭಕ್ತಿ, ಮಧರ್ಥೆರಸಾ ಕರುಣಿಯ ಭಕ್ತಿ, ಬಸವಣ್ಣನ ಸಮಾನತೆ ಭಕ್ತಿಯ ನಾಡು ಕಟ್ಟಿ ಸಮಾಜದ ಒಳಿತಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.<br /> <br /> ಸಮಾರಂಭದ ಸಮ್ಮುಖ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿ, ಮನುಷ್ಯರಿಗೆ ಅದೃಷ್ಟ ಕೆಲವೊಂದು ಸಾರಿ ಕೈಕೊಡಬಹುದು ಆದರೆ, ಪರಿಶ್ರಮ ಆತನನ್ನು ಉತ್ತುಂಗಕ್ಕೆ ಕೊಂಡೊಯ್ಯ್ತ್ತದೆ ಎಂಬುವುದನ್ನು ಅರಿತು ಪ್ರತಿಯೊಬ್ಬರು ಪರಿಶ್ರಮ ದಿಂದ ಜೀವನ ನಡೆಸಬೇಕು ಎಂದರು.<br /> <br /> ಬಾವಿಯಲ್ಲಿನ ನೀರು ಕೆಲವರಿಗೆ ಮಾತ್ರ ದೊರೆತರೇ, ಹರಿಯುವ ನೀರು ಎಲ್ಲರಿಗೂ ದೊರೆಯುತ್ತದೆ. ಹೀಗೆ ಶಿವ ಶರಣರ ವಿಚಾರಗಳು ಹರಿಯುವ ನೀರಿದ್ದಂತೆ. ಈ ದಿಸೆಯಲ್ಲಿ ಶಿವ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.<br /> <br /> ಇದೇ ಸಂದರ್ಭದಲ್ಲಿ ವಿಧಾನ ಪರಿಸತ್ ಸದಸ್ಯ ಸೋಮಣ್ಣ ಬೇವಿನಮರದ ಅವರನ್ನು ಸನ್ಮಾನಿಸಿದ ಶ್ರೀಗಳು, ಬಸವಲಿಂಗ ನಾಮಾವಳಿ ಗ್ರಂಥ ಬಿಡುಗಡೆ ಮಾಡಿದರು. <br /> <br /> ಈ ಸಂದರ್ಭದಲ್ಲಿ ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಹಾಜರಿದ್ದರು.<br /> <br /> ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಬಸವರಾಜ ಅರಬಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯವತಿ ಕೋಡಬಾಳ ಪ್ರಾರ್ಥಿಸಿದರು. ನಾಗೇಂದ್ರ ಕಟಕೋಳ ಸ್ವಾಗತಿಸಿದರು. ಕೃಷ್ಣಾ ಜವಳಿ ನಿರೂಪಿಸಿ ದರು. ಶಿವಬಸಪ್ಪ ಮುದ್ದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>