<p><strong>ವಿಶ್ವಸಂಸ್ಥೆ (ಪಿಟಿಐ): </strong>ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಶಪಥ ಮಾಡಿರುವ ವಿಶ್ವಸಂಸ್ಥೆಯು, ಉಗ್ರರ ಬೆದರಿಕೆಯನ್ನು ಎದುರಿಸಿ, ಹತ್ತಿಕ್ಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.<br /> <br /> 9/11ರ ಉಗ್ರರ ದಾಳಿಯ 10ನೇ ವರ್ಷಾಚರಣೆ ಸ್ಮರಣಾರ್ಥ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಜೋಸೆಫ್ ಡೇವಿಸ್, ಭಯೋತ್ಪಾದನೆಯ ಕ್ರೌರ್ಯವನ್ನು ಖಂಡಿಸಿದರಲ್ಲದೆ, ತಪ್ಪಿತಸ್ಥರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಲು ಸಹ ಸೂಚಿಸಿದ್ದಾರೆ.<br /> <br /> ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಸಂದೇಶ ನೀಡಿ, `ಮಾನವನ ಜೀವನದ ಮೇಲೆ ಭಯೋತ್ಪಾದನೆ ಸವಾರಿ ಮಾಡಲು ವಿಶ್ವ ಅವಕಾಶ ನೀಡದು~ ಎಂದಿದ್ದಾರಲ್ಲದೆ, ಈ ಅಮಾನವೀಯ ಚಟುವಟಿಕೆಯ ವಿರುದ್ಧ ಎಲ್ಲರೂ ಸೆಟೆದು ನಿಂತು ಹೋರಾಡಬೇಕೆಂದು ಕಿವಿಮಾತು ಹೇಳಿದ್ದಾರೆ.<br /> <br /> `ಜಗತ್ತಿನ ಜನಸಮುದಾಯ ಮತ್ತು ಸಂಸ್ಥೆಗಳಂತೆಯೇ ವಿಶ್ವಸಂಸ್ಥೆಯೂ ಉಗ್ರರ ದಾಳಿಯ ಗುರಿಗಳಲ್ಲಿ ಒಂದಾಗಿದ್ದು, ಎರಡು ದಿನಗಳ ಹಿಂದೆ ನೈಜೀರಿಯಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಹೀನ ಕೃತ್ಯವನ್ನು ಎಂದಿಗೂ ಯಾರೂ ಸಮರ್ಥಿಸಲು ಮತ್ತು ಕ್ಷಮಿಸಲು ಸಾಧ್ಯವಿಲ್ಲ~ ಎಂದು ಅವರು ನುಡಿದಿದ್ದಾರೆ.<br /> <br /> ಒಬಾಮ ಸ್ಪಷ್ಟನೆ (ವಾಷಿಂಗ್ಟನ್ ವರದಿ): 9/11ರ ದಾಳಿಯ 10ನೇ ವರ್ಷಾಚರಣೆ ಅಂಗವಾಗಿ ಶನಿವಾರ ಇಲ್ಲಿ ರೇಡಿಯೊ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, `ಕಳೆದ ಒಂದು ದಶಕದಿಂದ ದೇಶವು ಕ್ಲಿಷ್ಟ ಸನ್ನಿವೇಶದ್ಲ್ಲಲಿ ಉಗ್ರರ ಬೆದರಿಕೆಯನ್ನು ಎದುರಿಸಿಕೊಂಡು ಬಂದಿದ್ದು, ಅಲ್ಖೈದಾವನ್ನು ಮಣಿಸುವ ಹಾದಿಯಲ್ಲಿ ಹೋಮ್ಲ್ಯಾಂಡ್ ಭದ್ರತಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ~ ಎಂದು ತಿಳಿಸಿದ್ದಾರೆ.<br /> <br /> `ಮುಂದೆಯೂ ತನ್ನ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರಿಗೆ ಅಮೆರಿಕದ ಜನರ ಧೈರ್ಯ, ತಾಳ್ಮೆ, ಸಹಿಷ್ಣುತೆಯನ್ನು ಎದುರಿಸಲು ಯಾವುದೇ ಸರಿಸಮಾನ ಸಾಮರ್ಥ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲಿದೆ~ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.<br /> <br /> <strong>ಅಲ್ಖೈದಾ ದುರ್ಬಲ: </strong>ಇದಕ್ಕೂ ಮುನ್ನ ಮಾತನಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, `ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಅಲ್ಖೈದಾ ನಾಯಕತ್ವವನ್ನು ದುರ್ಬಲಗೊಳಿಸಲಾಗಿದ್ದು, ಆದರೂ ಇನ್ನೂ ಜಾಗತಿಕ ಮಟ್ಟದಲ್ಲಿ ದಾಳಿ ನಡೆಸುವ ಸಾಮರ್ಥವನ್ನು ಭಯೋತ್ಪಾದಕರು ಹೊಂದಿದ್ದಾರೆ~ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಮಧ್ಯೆ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಶನಿವಾರ ಇಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತಾ `ಪಾಕ್ ಮತ್ತು ಅಮೆರಿಕ ನಡುವಿನ ಸಂಬಂಧ ಬಹಳ ಮಹತ್ವದ್ದು, ಆದರೆ ಜಟಿಲವಾದುದು~ ಎಂದಿದ್ದಾರೆ.<br /> <br /> <strong>ಭಾರತೀಯರ ಸುಧಾರಣೆ<br /> ವಾಷಿಂಗ್ಟನ್ (ಐಎಎನ್ಎಸ್): </strong>9/11ರ ದಾಳಿಯಲ್ಲಿ ಮಧ್ಯಪ್ರಾಚ್ಯ ಉಗ್ರರ ಪಾತ್ರದಿಂದ ದಕ್ಷಿಣ ಏಷ್ಯಾ ಜನರನ್ನು ಅನುಮಾನದಿಂದ ನೋಡುತ್ತಿದ್ದ ಅಮೆರಿಕನ್ನರು ದಶಕದ ನಂತರ ಸಾಕಷ್ಟು ಬದಲಾವಣೆಗಳ ಕಾರಣ ನಂಬುವ ಸ್ಥಿತಿಯಲ್ಲಿದ್ದಾರೆ. <br /> <br /> ಇದಕ್ಕೆ ಉದಾಹರಣೆಯೆಂದರೆ ಈಗ ಭಾರತೀಯ ಸಮುದಾಯ ರಾಜಕೀಯವಾಗಿ ಸಕ್ರಿಯ ಆಗಿರುವುದು ಎಂದು ಭಾರತೀಯ ಸಂಜಾತ ಉದ್ಯೋಗಿಗಳ ಜಾಗತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಥಾಮಸ್ ಅಬ್ರಹಾಂ ಮತ್ತು ದಕ್ಷಿಣ ಏಷ್ಯಾ ಅಮೆರಿಕನ್ನರ ಒಕ್ಕೂಟ (ಸಾಲ್ಟ್)ದ ಕಾರ್ಯನಿವಾಹಕ ನಿರ್ದೇಶಕಿ ದೀಪಾ ಅಯ್ಯರ್ ಹೇಳುತ್ತಾರೆ.<br /> <br /> <br /> <strong>ಅಪಘಾತ ವಿಮಾನ ಸ್ಮರಣೆ </strong><br /> <strong>ಶ್ಯಾಂಕ್ಸ್ವಿಲೆ, ಅಮೆರಿಕ (ಎಎಫ್ಪಿ):</strong> 9/11ರಂದು ವಾಷಿಂಗ್ಟನ್ ಮೇಲೆ ದಾಳಿ ನಡೆಸಲು ಅಲ್ಖೈದಾ ಉಗ್ರರು ಅಪಹರಿಸಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನ- 93 ಮತ್ತು ಅದರಲ್ಲಿದ್ದ 40 ಪ್ರಯಾಣಿಕರನ್ನು ಸ್ಮರಿಸಿ, ಗೌರವಿಸಲಾಗುತ್ತಿದೆ. ಭಾನುವಾರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಭಾಗವಹಿಸಲಿದ್ದಾರೆ.<br /> <br /> <strong>ಭಯೋತ್ಪಾದನೆ ಪ್ರಕರಣ<br /> ವಾಷಿಂಗ್ಟನ್ (ಪಿಟಿಐ): </strong>9/11ರ ದಾಳಿ ನಂತರ ಅಮೆರಿಕ ನ್ಯಾಯಾಲಯಗಳಿಗೆ 345 ಭಯೋತ್ಪಾದನಾ ಪ್ರಕರಣಗಳು ಬಂದಿದ್ದು, ಇದರಲ್ಲಿ 196 ಇತ್ಯರ್ಥವಾಗಿ, 178ರಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಮಾರು 3,000 ಮಂದಿಯನ್ನು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಿದ್ದು, ಇವರಲ್ಲಿ 2,500 ಜನರನ್ನು ಶಿಕ್ಷಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ಪಿಟಿಐ): </strong>ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಶಪಥ ಮಾಡಿರುವ ವಿಶ್ವಸಂಸ್ಥೆಯು, ಉಗ್ರರ ಬೆದರಿಕೆಯನ್ನು ಎದುರಿಸಿ, ಹತ್ತಿಕ್ಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.<br /> <br /> 9/11ರ ಉಗ್ರರ ದಾಳಿಯ 10ನೇ ವರ್ಷಾಚರಣೆ ಸ್ಮರಣಾರ್ಥ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಜೋಸೆಫ್ ಡೇವಿಸ್, ಭಯೋತ್ಪಾದನೆಯ ಕ್ರೌರ್ಯವನ್ನು ಖಂಡಿಸಿದರಲ್ಲದೆ, ತಪ್ಪಿತಸ್ಥರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಲು ಸಹ ಸೂಚಿಸಿದ್ದಾರೆ.<br /> <br /> ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಸಂದೇಶ ನೀಡಿ, `ಮಾನವನ ಜೀವನದ ಮೇಲೆ ಭಯೋತ್ಪಾದನೆ ಸವಾರಿ ಮಾಡಲು ವಿಶ್ವ ಅವಕಾಶ ನೀಡದು~ ಎಂದಿದ್ದಾರಲ್ಲದೆ, ಈ ಅಮಾನವೀಯ ಚಟುವಟಿಕೆಯ ವಿರುದ್ಧ ಎಲ್ಲರೂ ಸೆಟೆದು ನಿಂತು ಹೋರಾಡಬೇಕೆಂದು ಕಿವಿಮಾತು ಹೇಳಿದ್ದಾರೆ.<br /> <br /> `ಜಗತ್ತಿನ ಜನಸಮುದಾಯ ಮತ್ತು ಸಂಸ್ಥೆಗಳಂತೆಯೇ ವಿಶ್ವಸಂಸ್ಥೆಯೂ ಉಗ್ರರ ದಾಳಿಯ ಗುರಿಗಳಲ್ಲಿ ಒಂದಾಗಿದ್ದು, ಎರಡು ದಿನಗಳ ಹಿಂದೆ ನೈಜೀರಿಯಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಹೀನ ಕೃತ್ಯವನ್ನು ಎಂದಿಗೂ ಯಾರೂ ಸಮರ್ಥಿಸಲು ಮತ್ತು ಕ್ಷಮಿಸಲು ಸಾಧ್ಯವಿಲ್ಲ~ ಎಂದು ಅವರು ನುಡಿದಿದ್ದಾರೆ.<br /> <br /> ಒಬಾಮ ಸ್ಪಷ್ಟನೆ (ವಾಷಿಂಗ್ಟನ್ ವರದಿ): 9/11ರ ದಾಳಿಯ 10ನೇ ವರ್ಷಾಚರಣೆ ಅಂಗವಾಗಿ ಶನಿವಾರ ಇಲ್ಲಿ ರೇಡಿಯೊ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, `ಕಳೆದ ಒಂದು ದಶಕದಿಂದ ದೇಶವು ಕ್ಲಿಷ್ಟ ಸನ್ನಿವೇಶದ್ಲ್ಲಲಿ ಉಗ್ರರ ಬೆದರಿಕೆಯನ್ನು ಎದುರಿಸಿಕೊಂಡು ಬಂದಿದ್ದು, ಅಲ್ಖೈದಾವನ್ನು ಮಣಿಸುವ ಹಾದಿಯಲ್ಲಿ ಹೋಮ್ಲ್ಯಾಂಡ್ ಭದ್ರತಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ~ ಎಂದು ತಿಳಿಸಿದ್ದಾರೆ.<br /> <br /> `ಮುಂದೆಯೂ ತನ್ನ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರಿಗೆ ಅಮೆರಿಕದ ಜನರ ಧೈರ್ಯ, ತಾಳ್ಮೆ, ಸಹಿಷ್ಣುತೆಯನ್ನು ಎದುರಿಸಲು ಯಾವುದೇ ಸರಿಸಮಾನ ಸಾಮರ್ಥ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲಿದೆ~ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.<br /> <br /> <strong>ಅಲ್ಖೈದಾ ದುರ್ಬಲ: </strong>ಇದಕ್ಕೂ ಮುನ್ನ ಮಾತನಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, `ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಅಲ್ಖೈದಾ ನಾಯಕತ್ವವನ್ನು ದುರ್ಬಲಗೊಳಿಸಲಾಗಿದ್ದು, ಆದರೂ ಇನ್ನೂ ಜಾಗತಿಕ ಮಟ್ಟದಲ್ಲಿ ದಾಳಿ ನಡೆಸುವ ಸಾಮರ್ಥವನ್ನು ಭಯೋತ್ಪಾದಕರು ಹೊಂದಿದ್ದಾರೆ~ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಮಧ್ಯೆ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಶನಿವಾರ ಇಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತಾ `ಪಾಕ್ ಮತ್ತು ಅಮೆರಿಕ ನಡುವಿನ ಸಂಬಂಧ ಬಹಳ ಮಹತ್ವದ್ದು, ಆದರೆ ಜಟಿಲವಾದುದು~ ಎಂದಿದ್ದಾರೆ.<br /> <br /> <strong>ಭಾರತೀಯರ ಸುಧಾರಣೆ<br /> ವಾಷಿಂಗ್ಟನ್ (ಐಎಎನ್ಎಸ್): </strong>9/11ರ ದಾಳಿಯಲ್ಲಿ ಮಧ್ಯಪ್ರಾಚ್ಯ ಉಗ್ರರ ಪಾತ್ರದಿಂದ ದಕ್ಷಿಣ ಏಷ್ಯಾ ಜನರನ್ನು ಅನುಮಾನದಿಂದ ನೋಡುತ್ತಿದ್ದ ಅಮೆರಿಕನ್ನರು ದಶಕದ ನಂತರ ಸಾಕಷ್ಟು ಬದಲಾವಣೆಗಳ ಕಾರಣ ನಂಬುವ ಸ್ಥಿತಿಯಲ್ಲಿದ್ದಾರೆ. <br /> <br /> ಇದಕ್ಕೆ ಉದಾಹರಣೆಯೆಂದರೆ ಈಗ ಭಾರತೀಯ ಸಮುದಾಯ ರಾಜಕೀಯವಾಗಿ ಸಕ್ರಿಯ ಆಗಿರುವುದು ಎಂದು ಭಾರತೀಯ ಸಂಜಾತ ಉದ್ಯೋಗಿಗಳ ಜಾಗತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಥಾಮಸ್ ಅಬ್ರಹಾಂ ಮತ್ತು ದಕ್ಷಿಣ ಏಷ್ಯಾ ಅಮೆರಿಕನ್ನರ ಒಕ್ಕೂಟ (ಸಾಲ್ಟ್)ದ ಕಾರ್ಯನಿವಾಹಕ ನಿರ್ದೇಶಕಿ ದೀಪಾ ಅಯ್ಯರ್ ಹೇಳುತ್ತಾರೆ.<br /> <br /> <br /> <strong>ಅಪಘಾತ ವಿಮಾನ ಸ್ಮರಣೆ </strong><br /> <strong>ಶ್ಯಾಂಕ್ಸ್ವಿಲೆ, ಅಮೆರಿಕ (ಎಎಫ್ಪಿ):</strong> 9/11ರಂದು ವಾಷಿಂಗ್ಟನ್ ಮೇಲೆ ದಾಳಿ ನಡೆಸಲು ಅಲ್ಖೈದಾ ಉಗ್ರರು ಅಪಹರಿಸಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನ- 93 ಮತ್ತು ಅದರಲ್ಲಿದ್ದ 40 ಪ್ರಯಾಣಿಕರನ್ನು ಸ್ಮರಿಸಿ, ಗೌರವಿಸಲಾಗುತ್ತಿದೆ. ಭಾನುವಾರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಭಾಗವಹಿಸಲಿದ್ದಾರೆ.<br /> <br /> <strong>ಭಯೋತ್ಪಾದನೆ ಪ್ರಕರಣ<br /> ವಾಷಿಂಗ್ಟನ್ (ಪಿಟಿಐ): </strong>9/11ರ ದಾಳಿ ನಂತರ ಅಮೆರಿಕ ನ್ಯಾಯಾಲಯಗಳಿಗೆ 345 ಭಯೋತ್ಪಾದನಾ ಪ್ರಕರಣಗಳು ಬಂದಿದ್ದು, ಇದರಲ್ಲಿ 196 ಇತ್ಯರ್ಥವಾಗಿ, 178ರಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಮಾರು 3,000 ಮಂದಿಯನ್ನು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಿದ್ದು, ಇವರಲ್ಲಿ 2,500 ಜನರನ್ನು ಶಿಕ್ಷಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>