<p><strong>ನೆಹರೂ - ಮಹೇಂದ್ರ ಚರ್ಚೆಯಲ್ಲಿ ಇಂದು ನಿರ್ಣಾಯಕ ಘಟ್ಟ</strong><br /> ನವದೆಹಲಿ, ಏ. 21 - ನೇಪಾಳದ ರಾಜ ಮಹೇಂದ್ರ ಮತ್ತು ಪ್ರಧಾನ ಮಂತ್ರಿ ನೆಹರೂರವರ ನಡುವಣ ಮಾತುಕತೆಯು ನಾಳೆ ನಿರ್ಣಾಯಕ ಘಟ್ಟವನ್ನು ಪ್ರವೇಶಿಸುವ ನಿರೀಕ್ಷೆಯಿದೆ.<br /> <br /> ನಾಳೆ ಅವರ ಮಾತುಕತೆಯ ನಾಲ್ಕನೆಯ ದಿನ. ಭಾರತ ಮತ್ತು ನೇಪಾಳಗಳ ನಡುವಣ ಸಂಬಂಧವನ್ನು ಬಲಗೊಳಿಸುವುದೇ ಈ ಮಾತುಕತೆಯ ಉದ್ದೇಶ. ಈವರೆಗಿನ ಮಾತುಕತೆಯು ಪರಸ್ಪರರ ಶಂಕೆಗಳನ್ನು ನಿವಾರಿಸಲೋಸುಗ ತೆರೆದ ಮನಸ್ಸಿನಿಂದ ನಡೆದಿದೆಯೆಂದು ತಿಳಿಸಿರುವ ಬಲ್ಲ ಮೂಲಗಳು ನಾಳೆಯ ಮಾತುಕತೆಗಳು ಫಲದಾಯಕವಾಗುವುದೆಂದು ನಿರೀಕ್ಷಿಸಿವೆ. ನಾಳೆಯ ಮಾತುಕತೆಗೆ ಮುಂಚೆ ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆಯುವುದು.<br /> <br /> ರಾಜ ಮಹೇಂದ್ರರು ಸೋಮವಾರ ಕಟ್ಮಂಡುವಿಗೆ ವಾಪಸಾಗಲಿದ್ದು, ಅಂದು ಈಗಿನ ಮಾತುಕತೆಗಳ ಬಗ್ಗೆ ಪ್ರಕಟಣೆಯೊಂದು ಹೊರಬೀಳುವ ನಿರೀಕ್ಷೆಯಿದೆ.<br /> <br /> <strong>ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವಹಿಸುವ ಪ್ರಶ್ನೆ</strong><br /> ಬೆಂಗಳೂರು, ಏ. 21 - `ಕೋಲಾರ ಚಿನ್ನದ ಗಣಿಗಳಿಂದ ನಷ್ಟವಾಗಿದೆ~, `ಆಡಳಿತ ದಕ್ಷತೆಯು ಕಮ್ಮಿಯಾಗಿದೆ~ ಎಂಬ ಕಾರಣಗಳಿಂದ ಗಣಿಗಳ ಆಡಳಿತವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗುವುದೆಂಬ ಹೇಳಿಕೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಂದು ನಿರಾಕರಿಸಿ, ಚಿನ್ನದ ಬೆಲೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಗನುಗುಣವಾಗಿ ಅದನ್ನು ಕೇಂದ್ರದ ವಶಕ್ಕೆ ನೀಡಲಾಗುವುದೆಂದರು.<br /> <br /> ಚಿನ್ನದ ಗಣಿಗಳ ಆಡಳಿತದ ವರದಿಯನ್ನು ನೋಡಿದಲ್ಲಿ ಅವುಗಳಿಂದ ನಷ್ಟವಾಗಿಲ್ಲ ಹಾಗೂ ದಕ್ಷತೆಯ ಅಭಾವವಾಗಿಲ್ಲ ಎನ್ನುವುದು ಸ್ಪಷ್ಟವಾಗಿಲ್ಲವೆಂದು ಅವರು ತಿಳಿಸಿ, ರಾಷ್ಟ್ರೀಕರಣವಾದ ನಂತರ ಪ್ರತಿ ದಿನ ಪುಡಿ ಮಾಡುವ ಅದಿರಿನ ಪ್ರಮಾಣ ಜಾಸ್ತಿಯಾಗಿದೆಯೆಂದರು. ಈ ಬಗ್ಗೆ ಅಂಕಿ ಅಂಶಗಳನ್ನೊಳಗೊಂಡ ಪ್ರಕಟಣೆಯನ್ನು ಒಂದೆರಡು ದಿನಗಳಲ್ಲೇ ಬಿಡುಗಡೆ ಮಾಡಲಾಗುವುದೆಂದು ಅವರು ತಿಳಿಸಿದರು.<br /> <br /> <strong>ಮೇ 7 ರಂದು ರಾಷ್ಟ್ರಪತಿ, ಉಪರಾಷ್ಟ್ರಪತಿಯ ಆಯ್ಕೆ<br /> </strong>ನವದೆಹಲಿ, ಏ. 21 - ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯ ಸ್ಥಾನಕ್ಕೆ ಉಮೇದುವಾರಿಕೆಗಳನ್ನು ಸಲ್ಲಿಸುವವರಲ್ಲಿ ಯಾರೂ ಉಮೇದುವಾರಿಕೆಗಳನ್ನು ವಾಪಸು ಪಡೆದಿಲ್ಲವಾದ ಕಾರಣ ಆ ಸ್ಥಾನಗಳಿಗೆ ಮೇ 7 ರಂದು ಮತದಾನ ನಡೆಯುವುದು. <br /> <br /> ಉಮೇದುವಾರಿಕೆಗಳನ್ನು ವಾಪಸು ಪಡೆಯಲು ಇಂದು ಕೊನೆಯ ದಿನವಾಗಿತ್ತು.<br /> ರಾಷ್ಟ್ರಪತಿ ಸ್ಥಾನಕ್ಕೆ ಡಾ. ರಾಧಾಕೃಷ್ಣನ್, ಚೌಧುರಿ ಹರಿರಾಂ ಮತ್ತು ಶ್ರೀ ತ್ರಿಶೂಲಿಯ ಅವರುಗಳು ಸ್ಪರ್ಧಿಸಿದ್ದಾರೆ.<br /> <br /> ಉಪರಾಷ್ಟ್ರಪತಿ ಸ್ಥಾನಕ್ಕೆ ಡಾ. ಜಕೀರ್ ಹುಸೇನ್ ಮತ್ತು ಶ್ರೀ ಎನ್. ಸಿ. ಸಾಮಂತ ಸಿನ್ಹ ಅವರುಗಳ ನಡುವೆ ಸ್ಪರ್ಧೆ ನಡೆಯಲಿದೆ.<br /> <br /> <strong>ಮರಣ ದಂಡನೆಯ ರದ್ದಿಗೆ ಸಚಿವರ ವಿರೋಧ</strong><br /> ನವದೆಹಲಿ, ಏ. 21 - ಮರಣ ದಂಡನೆಯನ್ನು ರದ್ದುಪಡಿಸಬೇಕೆಂಬ ಖಾಸಗಿ ಸದಸ್ಯರೊಬ್ಬರ ನಿರ್ಣಯವನ್ನು ಕೇಂದ್ರ ಗೃಹ ಶಾಖೆಯಲ್ಲಿ ಸಚಿವರಾದ ಶ್ರೀ ಬಿ. ಎನ್. ದಾತಾರ್ ಅವರು ಇಂದು ಲೋಕ ಸಭೆಯಲ್ಲಿ ವಿರೋಧಿಸಿ, ದೇಶದ ಈಗಿನ ಪರಿಸ್ಥಿತಿಯಲ್ಲಿ ಇಂಥ ಕ್ರಮ ವಿಪತ್ಕಾರಕವೆಂದರು.<br /> <br /> ಶ್ರೀ ರಘುನಾಥ್ಸಿಂಗ್ರವರ ನಿರ್ಣಯವೊಂದರ ಮೇಲೆ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿದ ಸಚಿವರು, ಪ್ರತಿ ವರ್ಷ ಭಾರತದಲ್ಲಿ ಸುಮಾರು ಹತ್ತು ಸಹಸ್ರ ಕೊಲೆಗಳಾಗುತ್ತಿವೆಯೆಂದೂ, ಮರಣ ದಂಡನೆಯನ್ನು ತೆಗೆದು ಬಿಟ್ಟರೆ ಕೊಲೆ ಪ್ರಕರಣಗಳು ಇನ್ನೂ ಹೆಚ್ಚಬಹುದೆಂದೂ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಹರೂ - ಮಹೇಂದ್ರ ಚರ್ಚೆಯಲ್ಲಿ ಇಂದು ನಿರ್ಣಾಯಕ ಘಟ್ಟ</strong><br /> ನವದೆಹಲಿ, ಏ. 21 - ನೇಪಾಳದ ರಾಜ ಮಹೇಂದ್ರ ಮತ್ತು ಪ್ರಧಾನ ಮಂತ್ರಿ ನೆಹರೂರವರ ನಡುವಣ ಮಾತುಕತೆಯು ನಾಳೆ ನಿರ್ಣಾಯಕ ಘಟ್ಟವನ್ನು ಪ್ರವೇಶಿಸುವ ನಿರೀಕ್ಷೆಯಿದೆ.<br /> <br /> ನಾಳೆ ಅವರ ಮಾತುಕತೆಯ ನಾಲ್ಕನೆಯ ದಿನ. ಭಾರತ ಮತ್ತು ನೇಪಾಳಗಳ ನಡುವಣ ಸಂಬಂಧವನ್ನು ಬಲಗೊಳಿಸುವುದೇ ಈ ಮಾತುಕತೆಯ ಉದ್ದೇಶ. ಈವರೆಗಿನ ಮಾತುಕತೆಯು ಪರಸ್ಪರರ ಶಂಕೆಗಳನ್ನು ನಿವಾರಿಸಲೋಸುಗ ತೆರೆದ ಮನಸ್ಸಿನಿಂದ ನಡೆದಿದೆಯೆಂದು ತಿಳಿಸಿರುವ ಬಲ್ಲ ಮೂಲಗಳು ನಾಳೆಯ ಮಾತುಕತೆಗಳು ಫಲದಾಯಕವಾಗುವುದೆಂದು ನಿರೀಕ್ಷಿಸಿವೆ. ನಾಳೆಯ ಮಾತುಕತೆಗೆ ಮುಂಚೆ ಉಭಯ ರಾಷ್ಟ್ರಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆಯುವುದು.<br /> <br /> ರಾಜ ಮಹೇಂದ್ರರು ಸೋಮವಾರ ಕಟ್ಮಂಡುವಿಗೆ ವಾಪಸಾಗಲಿದ್ದು, ಅಂದು ಈಗಿನ ಮಾತುಕತೆಗಳ ಬಗ್ಗೆ ಪ್ರಕಟಣೆಯೊಂದು ಹೊರಬೀಳುವ ನಿರೀಕ್ಷೆಯಿದೆ.<br /> <br /> <strong>ಚಿನ್ನದ ಗಣಿಗಳನ್ನು ಕೇಂದ್ರಕ್ಕೆ ವಹಿಸುವ ಪ್ರಶ್ನೆ</strong><br /> ಬೆಂಗಳೂರು, ಏ. 21 - `ಕೋಲಾರ ಚಿನ್ನದ ಗಣಿಗಳಿಂದ ನಷ್ಟವಾಗಿದೆ~, `ಆಡಳಿತ ದಕ್ಷತೆಯು ಕಮ್ಮಿಯಾಗಿದೆ~ ಎಂಬ ಕಾರಣಗಳಿಂದ ಗಣಿಗಳ ಆಡಳಿತವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗುವುದೆಂಬ ಹೇಳಿಕೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಂದು ನಿರಾಕರಿಸಿ, ಚಿನ್ನದ ಬೆಲೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಗನುಗುಣವಾಗಿ ಅದನ್ನು ಕೇಂದ್ರದ ವಶಕ್ಕೆ ನೀಡಲಾಗುವುದೆಂದರು.<br /> <br /> ಚಿನ್ನದ ಗಣಿಗಳ ಆಡಳಿತದ ವರದಿಯನ್ನು ನೋಡಿದಲ್ಲಿ ಅವುಗಳಿಂದ ನಷ್ಟವಾಗಿಲ್ಲ ಹಾಗೂ ದಕ್ಷತೆಯ ಅಭಾವವಾಗಿಲ್ಲ ಎನ್ನುವುದು ಸ್ಪಷ್ಟವಾಗಿಲ್ಲವೆಂದು ಅವರು ತಿಳಿಸಿ, ರಾಷ್ಟ್ರೀಕರಣವಾದ ನಂತರ ಪ್ರತಿ ದಿನ ಪುಡಿ ಮಾಡುವ ಅದಿರಿನ ಪ್ರಮಾಣ ಜಾಸ್ತಿಯಾಗಿದೆಯೆಂದರು. ಈ ಬಗ್ಗೆ ಅಂಕಿ ಅಂಶಗಳನ್ನೊಳಗೊಂಡ ಪ್ರಕಟಣೆಯನ್ನು ಒಂದೆರಡು ದಿನಗಳಲ್ಲೇ ಬಿಡುಗಡೆ ಮಾಡಲಾಗುವುದೆಂದು ಅವರು ತಿಳಿಸಿದರು.<br /> <br /> <strong>ಮೇ 7 ರಂದು ರಾಷ್ಟ್ರಪತಿ, ಉಪರಾಷ್ಟ್ರಪತಿಯ ಆಯ್ಕೆ<br /> </strong>ನವದೆಹಲಿ, ಏ. 21 - ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯ ಸ್ಥಾನಕ್ಕೆ ಉಮೇದುವಾರಿಕೆಗಳನ್ನು ಸಲ್ಲಿಸುವವರಲ್ಲಿ ಯಾರೂ ಉಮೇದುವಾರಿಕೆಗಳನ್ನು ವಾಪಸು ಪಡೆದಿಲ್ಲವಾದ ಕಾರಣ ಆ ಸ್ಥಾನಗಳಿಗೆ ಮೇ 7 ರಂದು ಮತದಾನ ನಡೆಯುವುದು. <br /> <br /> ಉಮೇದುವಾರಿಕೆಗಳನ್ನು ವಾಪಸು ಪಡೆಯಲು ಇಂದು ಕೊನೆಯ ದಿನವಾಗಿತ್ತು.<br /> ರಾಷ್ಟ್ರಪತಿ ಸ್ಥಾನಕ್ಕೆ ಡಾ. ರಾಧಾಕೃಷ್ಣನ್, ಚೌಧುರಿ ಹರಿರಾಂ ಮತ್ತು ಶ್ರೀ ತ್ರಿಶೂಲಿಯ ಅವರುಗಳು ಸ್ಪರ್ಧಿಸಿದ್ದಾರೆ.<br /> <br /> ಉಪರಾಷ್ಟ್ರಪತಿ ಸ್ಥಾನಕ್ಕೆ ಡಾ. ಜಕೀರ್ ಹುಸೇನ್ ಮತ್ತು ಶ್ರೀ ಎನ್. ಸಿ. ಸಾಮಂತ ಸಿನ್ಹ ಅವರುಗಳ ನಡುವೆ ಸ್ಪರ್ಧೆ ನಡೆಯಲಿದೆ.<br /> <br /> <strong>ಮರಣ ದಂಡನೆಯ ರದ್ದಿಗೆ ಸಚಿವರ ವಿರೋಧ</strong><br /> ನವದೆಹಲಿ, ಏ. 21 - ಮರಣ ದಂಡನೆಯನ್ನು ರದ್ದುಪಡಿಸಬೇಕೆಂಬ ಖಾಸಗಿ ಸದಸ್ಯರೊಬ್ಬರ ನಿರ್ಣಯವನ್ನು ಕೇಂದ್ರ ಗೃಹ ಶಾಖೆಯಲ್ಲಿ ಸಚಿವರಾದ ಶ್ರೀ ಬಿ. ಎನ್. ದಾತಾರ್ ಅವರು ಇಂದು ಲೋಕ ಸಭೆಯಲ್ಲಿ ವಿರೋಧಿಸಿ, ದೇಶದ ಈಗಿನ ಪರಿಸ್ಥಿತಿಯಲ್ಲಿ ಇಂಥ ಕ್ರಮ ವಿಪತ್ಕಾರಕವೆಂದರು.<br /> <br /> ಶ್ರೀ ರಘುನಾಥ್ಸಿಂಗ್ರವರ ನಿರ್ಣಯವೊಂದರ ಮೇಲೆ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿದ ಸಚಿವರು, ಪ್ರತಿ ವರ್ಷ ಭಾರತದಲ್ಲಿ ಸುಮಾರು ಹತ್ತು ಸಹಸ್ರ ಕೊಲೆಗಳಾಗುತ್ತಿವೆಯೆಂದೂ, ಮರಣ ದಂಡನೆಯನ್ನು ತೆಗೆದು ಬಿಟ್ಟರೆ ಕೊಲೆ ಪ್ರಕರಣಗಳು ಇನ್ನೂ ಹೆಚ್ಚಬಹುದೆಂದೂ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>