<p><strong>ಭಾರತ - ಚೀಣ ಸಶಸ್ತ್ರ ಘರ್ಷಣೆ ಅಸಂಭವ ನೆಹರೂ ಸ್ಪಷ್ಟೋಕ್ತಿ<br /> ಲಕ್ನೋ, ಜು. 28</strong> - `ಭಾರತ ಚೀಣ ನಡುವೆ ಸಶಸ್ತ್ರ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ~ ಎಂದು ಪ್ರಧಾನ ಮಂತ್ರಿ ನೆಹ್ರೂ ತಿಳಿಸಿದರು.<br /> <br /> ಉತ್ತರ ಪ್ರದೇಶದ ಕಾಂಗ್ರೆಸ್ಸಿಗರ ಸಭೆಯಲ್ಲಿ ಮಾತನಾಡಿದ ನೆಹರೂ, ಭಾರತೀಯರು ಸದಾ ಜಾಗೃತರಾಗಿದ್ದು, ಪಂಚವಾರ್ಷಿಕ ಯೋಜನೆಯನ್ನು ಅನ್ವಯಿಸಿ ಭಾರತವನ್ನು ಬಲಪಡಿಬೇಕೆಂದರು. <br /> <br /> ಪಂಡಿತ ನೆಹರೂ ಮುಂದುವರೆದು ಮಾತನಾಡುತ್ತಾ ಈಗಿನ ಕಾಲದಲ್ಲಿ ಮಾನವರಿಂದ ಯುದ್ಧವಾಗುವುದಿಲ್ಲ ಆದರೆ ಉಪಕರಣಗಳಿಂದ ನಡೆಯುತ್ತಿದೆ. ಒಂದು ರಾಷ್ಟ್ರದ ಶಕ್ತಿಯೇ ಆ ರಾಷ್ಟ್ರದ ಉಕ್ಕು ಹಾಗೂ ವಿದ್ಯುದುತ್ಪಾದನೆಯಿಂದ ಅಳೆಯಲ್ಪಡುತ್ತದೆ ಎಂದರು.</p>.<p><strong>ಮದುವೆ - ಹುಚ್ಚು<br /> ಬೆಂಗಳೂರು, ಜು. 28 </strong>- ಮೊದಲು ಮದುವೆಯಾಗಬೇಕೋ? ಮೊದಲು ಹುಚ್ಚು ಬಿಡಬೇಕೋ? ಈ ಸಮಸ್ಯೆ ವಿಧಾನ ಸಭೆಯ ಸದಸ್ಯರನ್ನು ಇಂದು ಹೆಚ್ಚು ಕಾಲ ಕಾಡುವ ಮೊದಲೇ `ಎರಡೂ ಒಟ್ಟಿಗೆ ಆಗುವ~ ಸಂಭವವಿದೆಯೆಂಬ ಭರವಸೆ ತಕ್ಕಮಟ್ಟಿಗೆ ಸಮಾಧಾನ ತಂದಿತು.<br /> <br /> ಪರಸ್ಪರ ಅವಲಂಬಿಗಳಾದ ಹಾಸನ - ಮಂಗಳೂರು ರೈಲ್ವೆ ರಸ್ತೆ ಮತ್ತು ಮಂಗಳೂರು ಬಂದರು ಯೋಜನೆಗಳನ್ನು ಒಟ್ಟಿಗೆ ಕಾರ್ಯಗತ ಮಾಡಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದ ಶ್ರೀ ಮಂಜಯ್ಯ ಶೆಟ್ಟಿಯವರು ಮದುವೆಯಾದ ಹೊರತು ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಟ್ಟ ಹೊರತು ಮದುವೆಯಾಗುವುದಿಲ್ಲ ಎನ್ನುವ ಗಾದೆಯಂತಾಗಿದೆ ಇದು ಎಂದರು.<br /> <br /> ಸಭಾಧ್ಯಕ್ಷ ಶ್ರೀ ಬಾಳಿಗಾ - ಎರಡೂ ಒಟ್ಟಿಗೇ ಆಗಬೇಕೆಂದು ನಿಮ್ಮ ಸಲಹೆಯೆ? (ದೀರ್ಘ ನಗು)<br /> <br /> ಶ್ರೀ ವೀರೇಂದ್ರ ಪಾಟೀಲ್:- ಬಹುಶಃ ಎರಡೂ ಒಟ್ಟಿಗೆ ಆಗುವ ಹಾಗೆ ಕಾಣುತ್ತೆ.</p>.<p><strong>ವಿಧಾನ ಸಭೆ ಸದಸ್ಯರೊಬ್ಬರಿಗೆ ಸಭೆ ಬಿಟ್ಟು ಹೋಗಲು ಆಜ್ಞೆ; ಗಂಭೀರ ವಾತಾವರಣ<br /> ಬೆಂಗಳೂರು, ಜು. 28 </strong>- ಇಂದು ವಿಧಾನ ಸಭೆಯಲ್ಲಿ ಸ್ವತಂತ್ರ ಸದಸ್ಯರೊಬ್ಬರು ಅವರು ಆಡಿದ ಕೆಲವು ಮಾತುಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿ ಸಭೆಯಿಂದ ಹೊರಗೆ ಹೋಗುವಂತೆ ಉಪಾಧ್ಯಕ್ಷರು ಅವರಿಗೆ ಆಜ್ಞೆ ಮಾಡಿದಾಗ ಸ್ವಲ್ಪ ಕಾಲ ಗಂಭೀರ ವಾತಾವರಣ ಉಂಟಾಯಿತು.<br /> <br /> ಅಪ್ರೋಪ್ರಿಯೇಷನ್ ಮಸೂದೆಯ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಶ್ರೀ ಸಿ. ಜೆ. ಮುಕ್ಕಣ್ಣನವರು ಮಾತನಾಡಲು ಅವಕಾಶಕ್ಕಾಗಿ ಹಲವು ಬಾರಿ ಎದ್ದು ನಿಂತರು. <br /> <br /> ತಾವು ಅನೇಕಸಲ ಎದ್ದು ನಿಂತರೂ ಅವಕಾಶ ಸಿಕ್ಕಲಿಲ್ಲವೆಂದು ಹೇಳಿ ಶ್ರೀ ಮುಕ್ಕಣ್ಣಪ್ಪನವರು ತಮಗೆ ಅವಕಾಶ ಕೊಡಲಾಗುವುದೋ ಇಲ್ಲವೋ ಎಂಬುದನ್ನು ಆಗ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ. ಆರ್. ಪಂಚಗವಾಯಿಯವರಿಂದ ತಿಳಿಯ ಬಯಸಿದರು. <br /> ಶ್ರೀ ಪಂಚಗವಾಯಿಯವರು `ನೋಡೋಣ ಕುಳಿತುಕೊಳ್ಳಿ~ ಎಂದು ಹೇಳಿ ಶ್ರೀ ಭಾಸ್ಕರ ಶೆಟ್ಟಿಯವರಿಗೆ ಮಾತನಾಡುವಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ - ಚೀಣ ಸಶಸ್ತ್ರ ಘರ್ಷಣೆ ಅಸಂಭವ ನೆಹರೂ ಸ್ಪಷ್ಟೋಕ್ತಿ<br /> ಲಕ್ನೋ, ಜು. 28</strong> - `ಭಾರತ ಚೀಣ ನಡುವೆ ಸಶಸ್ತ್ರ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ~ ಎಂದು ಪ್ರಧಾನ ಮಂತ್ರಿ ನೆಹ್ರೂ ತಿಳಿಸಿದರು.<br /> <br /> ಉತ್ತರ ಪ್ರದೇಶದ ಕಾಂಗ್ರೆಸ್ಸಿಗರ ಸಭೆಯಲ್ಲಿ ಮಾತನಾಡಿದ ನೆಹರೂ, ಭಾರತೀಯರು ಸದಾ ಜಾಗೃತರಾಗಿದ್ದು, ಪಂಚವಾರ್ಷಿಕ ಯೋಜನೆಯನ್ನು ಅನ್ವಯಿಸಿ ಭಾರತವನ್ನು ಬಲಪಡಿಬೇಕೆಂದರು. <br /> <br /> ಪಂಡಿತ ನೆಹರೂ ಮುಂದುವರೆದು ಮಾತನಾಡುತ್ತಾ ಈಗಿನ ಕಾಲದಲ್ಲಿ ಮಾನವರಿಂದ ಯುದ್ಧವಾಗುವುದಿಲ್ಲ ಆದರೆ ಉಪಕರಣಗಳಿಂದ ನಡೆಯುತ್ತಿದೆ. ಒಂದು ರಾಷ್ಟ್ರದ ಶಕ್ತಿಯೇ ಆ ರಾಷ್ಟ್ರದ ಉಕ್ಕು ಹಾಗೂ ವಿದ್ಯುದುತ್ಪಾದನೆಯಿಂದ ಅಳೆಯಲ್ಪಡುತ್ತದೆ ಎಂದರು.</p>.<p><strong>ಮದುವೆ - ಹುಚ್ಚು<br /> ಬೆಂಗಳೂರು, ಜು. 28 </strong>- ಮೊದಲು ಮದುವೆಯಾಗಬೇಕೋ? ಮೊದಲು ಹುಚ್ಚು ಬಿಡಬೇಕೋ? ಈ ಸಮಸ್ಯೆ ವಿಧಾನ ಸಭೆಯ ಸದಸ್ಯರನ್ನು ಇಂದು ಹೆಚ್ಚು ಕಾಲ ಕಾಡುವ ಮೊದಲೇ `ಎರಡೂ ಒಟ್ಟಿಗೆ ಆಗುವ~ ಸಂಭವವಿದೆಯೆಂಬ ಭರವಸೆ ತಕ್ಕಮಟ್ಟಿಗೆ ಸಮಾಧಾನ ತಂದಿತು.<br /> <br /> ಪರಸ್ಪರ ಅವಲಂಬಿಗಳಾದ ಹಾಸನ - ಮಂಗಳೂರು ರೈಲ್ವೆ ರಸ್ತೆ ಮತ್ತು ಮಂಗಳೂರು ಬಂದರು ಯೋಜನೆಗಳನ್ನು ಒಟ್ಟಿಗೆ ಕಾರ್ಯಗತ ಮಾಡಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದ ಶ್ರೀ ಮಂಜಯ್ಯ ಶೆಟ್ಟಿಯವರು ಮದುವೆಯಾದ ಹೊರತು ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಟ್ಟ ಹೊರತು ಮದುವೆಯಾಗುವುದಿಲ್ಲ ಎನ್ನುವ ಗಾದೆಯಂತಾಗಿದೆ ಇದು ಎಂದರು.<br /> <br /> ಸಭಾಧ್ಯಕ್ಷ ಶ್ರೀ ಬಾಳಿಗಾ - ಎರಡೂ ಒಟ್ಟಿಗೇ ಆಗಬೇಕೆಂದು ನಿಮ್ಮ ಸಲಹೆಯೆ? (ದೀರ್ಘ ನಗು)<br /> <br /> ಶ್ರೀ ವೀರೇಂದ್ರ ಪಾಟೀಲ್:- ಬಹುಶಃ ಎರಡೂ ಒಟ್ಟಿಗೆ ಆಗುವ ಹಾಗೆ ಕಾಣುತ್ತೆ.</p>.<p><strong>ವಿಧಾನ ಸಭೆ ಸದಸ್ಯರೊಬ್ಬರಿಗೆ ಸಭೆ ಬಿಟ್ಟು ಹೋಗಲು ಆಜ್ಞೆ; ಗಂಭೀರ ವಾತಾವರಣ<br /> ಬೆಂಗಳೂರು, ಜು. 28 </strong>- ಇಂದು ವಿಧಾನ ಸಭೆಯಲ್ಲಿ ಸ್ವತಂತ್ರ ಸದಸ್ಯರೊಬ್ಬರು ಅವರು ಆಡಿದ ಕೆಲವು ಮಾತುಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿ ಸಭೆಯಿಂದ ಹೊರಗೆ ಹೋಗುವಂತೆ ಉಪಾಧ್ಯಕ್ಷರು ಅವರಿಗೆ ಆಜ್ಞೆ ಮಾಡಿದಾಗ ಸ್ವಲ್ಪ ಕಾಲ ಗಂಭೀರ ವಾತಾವರಣ ಉಂಟಾಯಿತು.<br /> <br /> ಅಪ್ರೋಪ್ರಿಯೇಷನ್ ಮಸೂದೆಯ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಶ್ರೀ ಸಿ. ಜೆ. ಮುಕ್ಕಣ್ಣನವರು ಮಾತನಾಡಲು ಅವಕಾಶಕ್ಕಾಗಿ ಹಲವು ಬಾರಿ ಎದ್ದು ನಿಂತರು. <br /> <br /> ತಾವು ಅನೇಕಸಲ ಎದ್ದು ನಿಂತರೂ ಅವಕಾಶ ಸಿಕ್ಕಲಿಲ್ಲವೆಂದು ಹೇಳಿ ಶ್ರೀ ಮುಕ್ಕಣ್ಣಪ್ಪನವರು ತಮಗೆ ಅವಕಾಶ ಕೊಡಲಾಗುವುದೋ ಇಲ್ಲವೋ ಎಂಬುದನ್ನು ಆಗ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ. ಆರ್. ಪಂಚಗವಾಯಿಯವರಿಂದ ತಿಳಿಯ ಬಯಸಿದರು. <br /> ಶ್ರೀ ಪಂಚಗವಾಯಿಯವರು `ನೋಡೋಣ ಕುಳಿತುಕೊಳ್ಳಿ~ ಎಂದು ಹೇಳಿ ಶ್ರೀ ಭಾಸ್ಕರ ಶೆಟ್ಟಿಯವರಿಗೆ ಮಾತನಾಡುವಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>