<p><strong>ಭಾರತೀಯರ ಎವರೆಸ್ಟ್ ಆರೋಹಣ ಯತ್ನ ವಿಫಲ</strong><br /> ನವದೆಹಲಿ, ಜೂನ್ 2 - ಮೇಜರ್ ಜಾನ್ ಡಯಾಸ್ರವರ ನಾಯಕತ್ವದಲ್ಲಿನ ಎರಡನೇ ಭಾರತೀಯ ಎವರೆಸ್ಟ್ ಆರೋಹಣ ತಂಡವು 29028 ಅಡಿ ಎತ್ತರದ ಈ ಶಿಖರ ಮುಟ್ಟಲು ವಿಫಲವಾಗಿದೆ.<br /> <br /> 28600 ಅಡಿ ಎತ್ತರದವರೆಗೂ ಹತ್ತಿದ್ದು, ಶಿಖರಕ್ಕೆ ಇನ್ನೂ ನಾನೂರು ಅಡಿಗಳಷ್ಟೇ ಉಳಿದಿದ್ದಾಗ ಈ ತಂಡವು ಉಗ್ರ ಚಂಡಮಾರುತ ಮತ್ತು ತುಂಬಾ ಕೆಟ್ಟ ಹವೆಯ ದೆಸೆಯಿಂದ ಹಿಂದಿರುಗಬೇಕಾಯಿತು.<br /> <br /> ಶಿಖರವನ್ನು ಗೆಲ್ಲಲು ಅಂತಿಮ ಪ್ರಯತ್ನ ನಡೆಸುವುದಕ್ಕಾಗಿ ಈ ತಂಡವು ಪ್ರತಿಕೂಲ ಹವೆಯನ್ನೆದುರಿಸಿ ಸುಮಾರು 28000 ಅಡಿ ಎತ್ತರದಲ್ಲಿ ಮೂರು ರಾತ್ರಿಗಳನ್ನು ಕಳೆಯಿತು. ಪರ್ವತಾರೋಹಣ ಇತಿಹಾಸದಲ್ಲೇ ಅಪೂರ್ವವಾದಂಥ ಅನುಭವ ಇದು.</p>.<p><strong>ತುಮಕೂರು ಕ್ಷೇತ್ರದಲ್ಲಿ ಇಂದು ಮತದಾನ</strong><br /> ಬೆಂಗಳೂರು, ಜೂನ್ 2 - ರಾಜ್ಯದ ರೆವಿನ್ಯೂ ಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ರಾಜೀನಾಮೆಯಿತ್ತುದುದರಿಂದ ಖಾಲಿ ಬಿದ್ದ ಲೋಕಸಭೆಯ ಸ್ಥಾನಕ್ಕೆ ತುಮಕೂರು ಕ್ಷೇತ್ರದಿಂದ ನಾಳೆ ಮತದಾನ ನಡೆಯುವುದು. ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಇದೇ ಮೊದಲನೆಯದು.<br /> <br /> ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ, ಕೇಂದ್ರ ಸರಕಾರದ ಮಾಜಿ ಸಚಿವರೂ ಆದ ಶ್ರೀ ಅಜಿತ್ ಪ್ರಸಾದ್ ಜೈನ್ರವರೂ ಮತ್ತೆ ಇಬ್ಬರೂ ಸ್ಪರ್ಧಿಸಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರದಿಂದ `ಸ್ವತಂತ್ರ ಕಾಂಗ್ರೆಸ್~ ಸ್ಪರ್ಧಿಯಾಗಿದ್ದ ಶ್ರೀ ಎಂ. ಬುದ್ಧದಾಸ್ರವರು ಈಗ ಪಿ.ಎಸ್.ಪಿ. ಅಭ್ಯರ್ಥಿಯಾಗಿರುವರಲ್ಲದೆ, ಅದೇ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸೋತಿದ್ದ ಶ್ರೀ ಕೆ. ವಿ. ಸುಬ್ರಹ್ಮಣ್ಯಸ್ವಾಮಿಯವರು ಮತ್ತೆ ಜನಸಂಘದ ಉಮೇದುವಾರರಾಗಿದ್ದಾರೆ.</p>.<p><strong>`ಪ್ರಸಕ್ತ ಕನ್ನಡ ಚಳವಳಿ ತಮಿಳರ ವಿರುದ್ಧವಲ್ಲ~</strong><br /> ಬೆಂಗಳೂರು, ಜೂನ್ 2 - ನಗರದ ಕನ್ನಡ ಸಂಘಗಳ ಸಂಯುಕ್ತ ರಂಗವು ನಡೆಸುತ್ತಿರುವುದು ಕನ್ನಡಿಗರನ್ನು ಜಾಗೃತಗೊಳಿಸುವ ಚಳವಳಿಯೇ ಹೊರತು ತಮಿಳರ ವಿರುದ್ಧ ಚಳವಳಿಯಲ್ಲವೆಂದು ರಂಗದ ಪರವಾಗಿ ಇಂದು ಇಲ್ಲಿ ಸ್ಪಷ್ಟಪಡಿಸಲಾಯಿತು.<br /> <br /> ರಂಗದ ಸಲಹಾ ಮಂಡಲಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಅ. ನ. ಕೃಷ್ಣರಾಯರು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, `ಕನ್ನಡ ಕಲಾವಿದರ ಬಾಯಿಗೆ ಮಣ್ಣು ಹಾಕುವ~ ಕೆಲವು ಸಂಸ್ಥೆಗಳ ನೀತಿಯನ್ನು ಖಂಡಿಸಿ, ಇಂತಹ ಚಳವಳಿಗೆ ತಮಿಳು ಕಲಾವಿದರೇ ಬೆಂಬಲ ನೀಡಬೇಕಾದ್ದು ಅಗತ್ಯವೆಂದೂ, ಕನ್ನಡ ಚಳವಳಿಯನ್ನು ತಮ್ಮ ವಿರುದ್ಧ ಚಳವಳಿಯೆಂದು ತಮಿಳರು ಏಕೆ ಭಾವಿಸುತ್ತಾರೆಂಬುದು ತಮಗರ್ಥವಾಗುವುದಿಲ್ಲವೆಂದೂ ಹೇಳಿದರು.<br /> <br /> ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಓದಬೇಕು, ಕನ್ನಡ ಚಿತ್ರಗಳನ್ನು ನೋಡಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶವಿರಬೇಕು. ಅಂದರೆ ಅದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.<br /> <br /> ತಮಿಳರ ಸಂಗೀತವನ್ನು ನಾವು ಕೇಳಬೇಕು, ಹೊಗಳಬೇಕು, ಅವರು ಮಾತ್ರ ಕನ್ನಡಿಗರ ಸಂಗೀತವನ್ನು ಕೇಳಬಾರದೆಂಬುದು ನ್ಯಾಯವೇ? ಎಂದು ಅವರು ಪ್ರಶ್ನಿಸಿದರು.</p>.<p><strong>ಅಮೆರಿಕದಿಂದ ಭಾರತಕ್ಕೆ 2.5 ಲಕ್ಷ ಟನ್ ಗೋಧಿ</strong><br /> ವಾಷಿಂಗ್ಟನ್, ಜೂನ್ 2 - 158 ಲಕ್ಷ ಡಾಲರ್ ಬೆಲೆಯ 2,50,000 ಟನ್ ಅಮೆರಿಕದ ಗೋಧಿಯನ್ನು ಭಾರತವು ಕೊಳ್ಳುವುದಕ್ಕೆ ಪಬ್ಲಿಕ್ ಲಾ - 480ರ ಪ್ರಕಾರ ಅವಕಾಶ ಕಲ್ಪಿಸಲಾಗಿದೆ. 1960ರ ಮೇನಲ್ಲಿ ಸಹಿ ಹಾಕಿದ ಅಮೆರಿಕ - ಭಾರತ ದೀರ್ಘಾವಧಿ ನೆರವಿನ ಒಪ್ಪಂದದ ಪ್ರಕಾರ ಗೋಧಿ ಕೊಳ್ಳುವ ಅವಕಾಶ ಕಲ್ಪಿಸಲು ಅಧಿಕಾರ ನೀಡಲಾಗಿದೆ. 1962ನೆಯ ಜೂನ್ 8 ಮತ್ತು ಜುಲೈ 31ರ ಅವಧಿಯಲ್ಲಿ ಈ ಗೋಧಿಯನ್ನು ಸರಬರಾಜು ಮಾಡುವ ಕೆಲಸ ಆರಂಭವಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀಯರ ಎವರೆಸ್ಟ್ ಆರೋಹಣ ಯತ್ನ ವಿಫಲ</strong><br /> ನವದೆಹಲಿ, ಜೂನ್ 2 - ಮೇಜರ್ ಜಾನ್ ಡಯಾಸ್ರವರ ನಾಯಕತ್ವದಲ್ಲಿನ ಎರಡನೇ ಭಾರತೀಯ ಎವರೆಸ್ಟ್ ಆರೋಹಣ ತಂಡವು 29028 ಅಡಿ ಎತ್ತರದ ಈ ಶಿಖರ ಮುಟ್ಟಲು ವಿಫಲವಾಗಿದೆ.<br /> <br /> 28600 ಅಡಿ ಎತ್ತರದವರೆಗೂ ಹತ್ತಿದ್ದು, ಶಿಖರಕ್ಕೆ ಇನ್ನೂ ನಾನೂರು ಅಡಿಗಳಷ್ಟೇ ಉಳಿದಿದ್ದಾಗ ಈ ತಂಡವು ಉಗ್ರ ಚಂಡಮಾರುತ ಮತ್ತು ತುಂಬಾ ಕೆಟ್ಟ ಹವೆಯ ದೆಸೆಯಿಂದ ಹಿಂದಿರುಗಬೇಕಾಯಿತು.<br /> <br /> ಶಿಖರವನ್ನು ಗೆಲ್ಲಲು ಅಂತಿಮ ಪ್ರಯತ್ನ ನಡೆಸುವುದಕ್ಕಾಗಿ ಈ ತಂಡವು ಪ್ರತಿಕೂಲ ಹವೆಯನ್ನೆದುರಿಸಿ ಸುಮಾರು 28000 ಅಡಿ ಎತ್ತರದಲ್ಲಿ ಮೂರು ರಾತ್ರಿಗಳನ್ನು ಕಳೆಯಿತು. ಪರ್ವತಾರೋಹಣ ಇತಿಹಾಸದಲ್ಲೇ ಅಪೂರ್ವವಾದಂಥ ಅನುಭವ ಇದು.</p>.<p><strong>ತುಮಕೂರು ಕ್ಷೇತ್ರದಲ್ಲಿ ಇಂದು ಮತದಾನ</strong><br /> ಬೆಂಗಳೂರು, ಜೂನ್ 2 - ರಾಜ್ಯದ ರೆವಿನ್ಯೂ ಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ರಾಜೀನಾಮೆಯಿತ್ತುದುದರಿಂದ ಖಾಲಿ ಬಿದ್ದ ಲೋಕಸಭೆಯ ಸ್ಥಾನಕ್ಕೆ ತುಮಕೂರು ಕ್ಷೇತ್ರದಿಂದ ನಾಳೆ ಮತದಾನ ನಡೆಯುವುದು. ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಇದೇ ಮೊದಲನೆಯದು.<br /> <br /> ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ, ಕೇಂದ್ರ ಸರಕಾರದ ಮಾಜಿ ಸಚಿವರೂ ಆದ ಶ್ರೀ ಅಜಿತ್ ಪ್ರಸಾದ್ ಜೈನ್ರವರೂ ಮತ್ತೆ ಇಬ್ಬರೂ ಸ್ಪರ್ಧಿಸಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರದಿಂದ `ಸ್ವತಂತ್ರ ಕಾಂಗ್ರೆಸ್~ ಸ್ಪರ್ಧಿಯಾಗಿದ್ದ ಶ್ರೀ ಎಂ. ಬುದ್ಧದಾಸ್ರವರು ಈಗ ಪಿ.ಎಸ್.ಪಿ. ಅಭ್ಯರ್ಥಿಯಾಗಿರುವರಲ್ಲದೆ, ಅದೇ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸೋತಿದ್ದ ಶ್ರೀ ಕೆ. ವಿ. ಸುಬ್ರಹ್ಮಣ್ಯಸ್ವಾಮಿಯವರು ಮತ್ತೆ ಜನಸಂಘದ ಉಮೇದುವಾರರಾಗಿದ್ದಾರೆ.</p>.<p><strong>`ಪ್ರಸಕ್ತ ಕನ್ನಡ ಚಳವಳಿ ತಮಿಳರ ವಿರುದ್ಧವಲ್ಲ~</strong><br /> ಬೆಂಗಳೂರು, ಜೂನ್ 2 - ನಗರದ ಕನ್ನಡ ಸಂಘಗಳ ಸಂಯುಕ್ತ ರಂಗವು ನಡೆಸುತ್ತಿರುವುದು ಕನ್ನಡಿಗರನ್ನು ಜಾಗೃತಗೊಳಿಸುವ ಚಳವಳಿಯೇ ಹೊರತು ತಮಿಳರ ವಿರುದ್ಧ ಚಳವಳಿಯಲ್ಲವೆಂದು ರಂಗದ ಪರವಾಗಿ ಇಂದು ಇಲ್ಲಿ ಸ್ಪಷ್ಟಪಡಿಸಲಾಯಿತು.<br /> <br /> ರಂಗದ ಸಲಹಾ ಮಂಡಲಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಅ. ನ. ಕೃಷ್ಣರಾಯರು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, `ಕನ್ನಡ ಕಲಾವಿದರ ಬಾಯಿಗೆ ಮಣ್ಣು ಹಾಕುವ~ ಕೆಲವು ಸಂಸ್ಥೆಗಳ ನೀತಿಯನ್ನು ಖಂಡಿಸಿ, ಇಂತಹ ಚಳವಳಿಗೆ ತಮಿಳು ಕಲಾವಿದರೇ ಬೆಂಬಲ ನೀಡಬೇಕಾದ್ದು ಅಗತ್ಯವೆಂದೂ, ಕನ್ನಡ ಚಳವಳಿಯನ್ನು ತಮ್ಮ ವಿರುದ್ಧ ಚಳವಳಿಯೆಂದು ತಮಿಳರು ಏಕೆ ಭಾವಿಸುತ್ತಾರೆಂಬುದು ತಮಗರ್ಥವಾಗುವುದಿಲ್ಲವೆಂದೂ ಹೇಳಿದರು.<br /> <br /> ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಓದಬೇಕು, ಕನ್ನಡ ಚಿತ್ರಗಳನ್ನು ನೋಡಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶವಿರಬೇಕು. ಅಂದರೆ ಅದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.<br /> <br /> ತಮಿಳರ ಸಂಗೀತವನ್ನು ನಾವು ಕೇಳಬೇಕು, ಹೊಗಳಬೇಕು, ಅವರು ಮಾತ್ರ ಕನ್ನಡಿಗರ ಸಂಗೀತವನ್ನು ಕೇಳಬಾರದೆಂಬುದು ನ್ಯಾಯವೇ? ಎಂದು ಅವರು ಪ್ರಶ್ನಿಸಿದರು.</p>.<p><strong>ಅಮೆರಿಕದಿಂದ ಭಾರತಕ್ಕೆ 2.5 ಲಕ್ಷ ಟನ್ ಗೋಧಿ</strong><br /> ವಾಷಿಂಗ್ಟನ್, ಜೂನ್ 2 - 158 ಲಕ್ಷ ಡಾಲರ್ ಬೆಲೆಯ 2,50,000 ಟನ್ ಅಮೆರಿಕದ ಗೋಧಿಯನ್ನು ಭಾರತವು ಕೊಳ್ಳುವುದಕ್ಕೆ ಪಬ್ಲಿಕ್ ಲಾ - 480ರ ಪ್ರಕಾರ ಅವಕಾಶ ಕಲ್ಪಿಸಲಾಗಿದೆ. 1960ರ ಮೇನಲ್ಲಿ ಸಹಿ ಹಾಕಿದ ಅಮೆರಿಕ - ಭಾರತ ದೀರ್ಘಾವಧಿ ನೆರವಿನ ಒಪ್ಪಂದದ ಪ್ರಕಾರ ಗೋಧಿ ಕೊಳ್ಳುವ ಅವಕಾಶ ಕಲ್ಪಿಸಲು ಅಧಿಕಾರ ನೀಡಲಾಗಿದೆ. 1962ನೆಯ ಜೂನ್ 8 ಮತ್ತು ಜುಲೈ 31ರ ಅವಧಿಯಲ್ಲಿ ಈ ಗೋಧಿಯನ್ನು ಸರಬರಾಜು ಮಾಡುವ ಕೆಲಸ ಆರಂಭವಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>