<p><strong>ಚಿನ್ನದ ಬಾಂಡುಗಳನ್ನು ನೀಡಲು ಕೇಂದ್ರದ ನಿರ್ಧಾರ<br /> </strong>ನವದೆಹಲಿ, ನ. 3 - ದೇಶದ ವಿದೇಶಿ ವಿನಿಮಯ ದಾಸ್ತಾನನ್ನು ಹೆಚ್ಚಿಸುವುದಕ್ಕಾಗಿ ಚಿನ್ನಕ್ಕೆ ಸಾಲ ಪತ್ರಗಳನ್ನು ನೀಡಲು ಸರಕಾರ ನಿರ್ಧರಿಸಿದೆಯೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಪ್ರಕಟಪಡಿಸಿದರು.<br /> <br /> ಜನ ಉದಾರವಾಗಿ ಈ ಸಾಲಪತ್ರಗಳನ್ನು ಕೊಳ್ಳಬೇಕೆಂದು ಅವರು ಪ್ರಸಾರ ಭಾಷಣವೊಂದರಲ್ಲಿ ರಾಷ್ಟ್ರಕ್ಕೆ ಕರೆಯಿತ್ತರು. ಈ ಪತ್ರಗಳು 15 ವರ್ಷಗಳ ಅವಧಿಯದಾಗಿದ್ದು ಶೇ 6 ಬಡ್ಡಿಯುಳ್ಳದ್ದಾಗಿರುತ್ತದೆ.<br /> <br /> ಅಲ್ಲದೆ ಈ ಸಾಲಪತ್ರಗಳಿಗೆ ಸಂಪತ್ತಿನ ತೆರಿಗೆ ಮತ್ತು ಬಂಡವಾಳ ಲಾಭ ತೆರಿಗೆಗಳಿಂದ ವಿನಾಯಿತಿ ಇರುತ್ತದೆ. ಚಿನ್ನದ ಬಾಂಡುಗಳನ್ನು ಕೊಳ್ಳಲು ಚಿನ್ನ ನೀಡಬಯಸುವವರು ಆ ಚಿನ್ನ ಅವರಲ್ಲಿ ಹೇಗೆ ಬಂದಿತೆಂಬುದನ್ನು ವಿವರಿಸಬೇಕಾಗಿಲ್ಲವೆಂದು ಶ್ರೀ ದೇಸಾಯಿಯವರು ಸ್ಪಷ್ಟಪಡಿಸಿದರು.<br /> </p>.<p><strong>ನಗರದ ಚೀಣೀ ಕುಟುಂಬಗಳಿಗೆ ಪೊಲೀಸ್ ಸೂಚನೆ</strong><br /> ಬೆಂಗಳೂರು, ನ. 3 - ಚೀಣೀ ಬುಡಕಟ್ಟಿಗೆ ಸೇರಿದವರಾಗಿದ್ದು ನಗರದಲ್ಲಿ ವಾಸಿಸುತ್ತಿರುವ 36 ಚೀಣೀ ಕುಟುಂಬಗಳ ಚಲನ ವಲನದ ಮೇಲೆ ಇಂದು ಪೊಲೀಸರು ವಿದೇಶೀಯರ ಕಾನೂನಿನ ಪ್ರಕಾರ ಎಚ್ಚರಿಕೆಯ ನೋಟೀಸುಗಳನ್ನು ಜಾರಿ ಮಾಡಿದರು.<br /> <br /> ವಿದೇಶೀಯರ ಕಾನೂನಿನ 3ನೇ ವಿಧಿಯ ಪ್ರಕಾರ ನೀಡಲಾಗಿರುವ ಈ ಎಚ್ಚರಿಕೆಯ ಸೂಚನೆ ಚೀಣೀಯರು ಪೊಲೀಸರಿಗೆ ಮುನ್ಸೂಚನೆ ನೀಡದೆ 24 ಗಂಟೆಗಳಿಗೆ ಮೀರಿದಂತೆ ತಮ್ಮ ಮನೆ ಬಿಟ್ಟು ಹೋಗುವುದನ್ನು ನಿಶೇಧಿಸುತ್ತದೆ.</p>.<p><strong>ಯೋಧರ ಸಹಾಯ ನಿಧಿ</strong><br /> ಬೆಂಗಳೂರು, ನ. 3 - `ಡೆಕ್ಕನ್ ಹೆರಾಲ್ಡ್ - ಪ್ರಜಾವಾಣಿ ಯೋಧರ ಸಹಾಯ ನಿಧಿ~ಗೆ ನವೆಂಬರ್ 3ರ ವರೆಗೆ 73201 ರೂಪಾಯಿ 33 ನಯೇಪೈಸೆ ಸಂಗ್ರಹವಾಗಿದೆ. ನವೆಂಬರ್ 2ರ ವರೆಗೆ 65928 ರೂಪಾಯಿ 29 ನಯೇಪೈಸೆ ಸಂಗ್ರಹವಾಗಿತ್ತು.<br /> <br /> <strong>ಸೆಕ್ರೆಟೇರಿಯಟ್ ತ್ಯಜಿಸಲು<br /> ಸುಂದರಯ್ಯ, ಜ್ಯೋತಿ ಬಸು,<br /> ಹರಿಕಿಷನ್ ಸಿಂಗ್ ನಿರ್ಧಾರ?</strong><br /> ನವದೆಹಲಿ, ನ. 3 - ಚೀಣಾ ಆಕ್ರಮಣದ ಬಗ್ಗೆ ಅಖಿಲ ಭಾರತ ಕಮ್ಯುನಿಸ್ಟ್ ರಾಷ್ಟ್ರೀಯ ಸಮಿತಿಯು ನಿರೂಪಿಸಿದ ನೀತಿಯ ಪರಿಣಾಮವಾಗಿ ತಾವು ಕಮ್ಯುನಿಸ್ಟ್ ಪಕ್ಷದ ಸೆಕ್ರೆಟೇರಿಯಟ್ನಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ಶ್ರೀ ಜ್ಯೋತಿಬಸು, ಶ್ರೀ ಪಿ. ಸುಂದರಯ್ಯ ಮತ್ತು ಶ್ರೀ ಹರಿಕಿಷನ್ ಸಿಂಗ್ರವರು ಸೂಚಿಸಿದ್ದಾರೆಂದು ಗೊತ್ತಾಗಿದೆ.<br /> <br /> ಕಮ್ಯುನಿಸ್ಟ್ ಪಕ್ಷದಲ್ಲಿ ಈ ಮೂವರೂ ವಾಮಪಂಥಕ್ಕೆ ಸೇರಿದವರು. ಕಮ್ಯುನಿಸ್ಟ್ ಚೀಣಾವನ್ನು ಖಂಡಿಸಬಾರದೆಂಬುದು ಅವರ ಅಭಿಪ್ರಾಯ. ಈ ಮೂವರೂ ಯಾವ ಕಮ್ಯುನಿಸ್ಟ್ ರಾಷ್ಟ್ರವಾಗಲೀ ಆಕ್ರಮಣ ನಡೆಸುವುದಿಲ್ಲವೆಂಬ ಮಾರ್ಕ್ಸ್ವಾದವನ್ನು ಎತ್ತಿ ಹಿಡಿಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿನ್ನದ ಬಾಂಡುಗಳನ್ನು ನೀಡಲು ಕೇಂದ್ರದ ನಿರ್ಧಾರ<br /> </strong>ನವದೆಹಲಿ, ನ. 3 - ದೇಶದ ವಿದೇಶಿ ವಿನಿಮಯ ದಾಸ್ತಾನನ್ನು ಹೆಚ್ಚಿಸುವುದಕ್ಕಾಗಿ ಚಿನ್ನಕ್ಕೆ ಸಾಲ ಪತ್ರಗಳನ್ನು ನೀಡಲು ಸರಕಾರ ನಿರ್ಧರಿಸಿದೆಯೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಪ್ರಕಟಪಡಿಸಿದರು.<br /> <br /> ಜನ ಉದಾರವಾಗಿ ಈ ಸಾಲಪತ್ರಗಳನ್ನು ಕೊಳ್ಳಬೇಕೆಂದು ಅವರು ಪ್ರಸಾರ ಭಾಷಣವೊಂದರಲ್ಲಿ ರಾಷ್ಟ್ರಕ್ಕೆ ಕರೆಯಿತ್ತರು. ಈ ಪತ್ರಗಳು 15 ವರ್ಷಗಳ ಅವಧಿಯದಾಗಿದ್ದು ಶೇ 6 ಬಡ್ಡಿಯುಳ್ಳದ್ದಾಗಿರುತ್ತದೆ.<br /> <br /> ಅಲ್ಲದೆ ಈ ಸಾಲಪತ್ರಗಳಿಗೆ ಸಂಪತ್ತಿನ ತೆರಿಗೆ ಮತ್ತು ಬಂಡವಾಳ ಲಾಭ ತೆರಿಗೆಗಳಿಂದ ವಿನಾಯಿತಿ ಇರುತ್ತದೆ. ಚಿನ್ನದ ಬಾಂಡುಗಳನ್ನು ಕೊಳ್ಳಲು ಚಿನ್ನ ನೀಡಬಯಸುವವರು ಆ ಚಿನ್ನ ಅವರಲ್ಲಿ ಹೇಗೆ ಬಂದಿತೆಂಬುದನ್ನು ವಿವರಿಸಬೇಕಾಗಿಲ್ಲವೆಂದು ಶ್ರೀ ದೇಸಾಯಿಯವರು ಸ್ಪಷ್ಟಪಡಿಸಿದರು.<br /> </p>.<p><strong>ನಗರದ ಚೀಣೀ ಕುಟುಂಬಗಳಿಗೆ ಪೊಲೀಸ್ ಸೂಚನೆ</strong><br /> ಬೆಂಗಳೂರು, ನ. 3 - ಚೀಣೀ ಬುಡಕಟ್ಟಿಗೆ ಸೇರಿದವರಾಗಿದ್ದು ನಗರದಲ್ಲಿ ವಾಸಿಸುತ್ತಿರುವ 36 ಚೀಣೀ ಕುಟುಂಬಗಳ ಚಲನ ವಲನದ ಮೇಲೆ ಇಂದು ಪೊಲೀಸರು ವಿದೇಶೀಯರ ಕಾನೂನಿನ ಪ್ರಕಾರ ಎಚ್ಚರಿಕೆಯ ನೋಟೀಸುಗಳನ್ನು ಜಾರಿ ಮಾಡಿದರು.<br /> <br /> ವಿದೇಶೀಯರ ಕಾನೂನಿನ 3ನೇ ವಿಧಿಯ ಪ್ರಕಾರ ನೀಡಲಾಗಿರುವ ಈ ಎಚ್ಚರಿಕೆಯ ಸೂಚನೆ ಚೀಣೀಯರು ಪೊಲೀಸರಿಗೆ ಮುನ್ಸೂಚನೆ ನೀಡದೆ 24 ಗಂಟೆಗಳಿಗೆ ಮೀರಿದಂತೆ ತಮ್ಮ ಮನೆ ಬಿಟ್ಟು ಹೋಗುವುದನ್ನು ನಿಶೇಧಿಸುತ್ತದೆ.</p>.<p><strong>ಯೋಧರ ಸಹಾಯ ನಿಧಿ</strong><br /> ಬೆಂಗಳೂರು, ನ. 3 - `ಡೆಕ್ಕನ್ ಹೆರಾಲ್ಡ್ - ಪ್ರಜಾವಾಣಿ ಯೋಧರ ಸಹಾಯ ನಿಧಿ~ಗೆ ನವೆಂಬರ್ 3ರ ವರೆಗೆ 73201 ರೂಪಾಯಿ 33 ನಯೇಪೈಸೆ ಸಂಗ್ರಹವಾಗಿದೆ. ನವೆಂಬರ್ 2ರ ವರೆಗೆ 65928 ರೂಪಾಯಿ 29 ನಯೇಪೈಸೆ ಸಂಗ್ರಹವಾಗಿತ್ತು.<br /> <br /> <strong>ಸೆಕ್ರೆಟೇರಿಯಟ್ ತ್ಯಜಿಸಲು<br /> ಸುಂದರಯ್ಯ, ಜ್ಯೋತಿ ಬಸು,<br /> ಹರಿಕಿಷನ್ ಸಿಂಗ್ ನಿರ್ಧಾರ?</strong><br /> ನವದೆಹಲಿ, ನ. 3 - ಚೀಣಾ ಆಕ್ರಮಣದ ಬಗ್ಗೆ ಅಖಿಲ ಭಾರತ ಕಮ್ಯುನಿಸ್ಟ್ ರಾಷ್ಟ್ರೀಯ ಸಮಿತಿಯು ನಿರೂಪಿಸಿದ ನೀತಿಯ ಪರಿಣಾಮವಾಗಿ ತಾವು ಕಮ್ಯುನಿಸ್ಟ್ ಪಕ್ಷದ ಸೆಕ್ರೆಟೇರಿಯಟ್ನಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ಶ್ರೀ ಜ್ಯೋತಿಬಸು, ಶ್ರೀ ಪಿ. ಸುಂದರಯ್ಯ ಮತ್ತು ಶ್ರೀ ಹರಿಕಿಷನ್ ಸಿಂಗ್ರವರು ಸೂಚಿಸಿದ್ದಾರೆಂದು ಗೊತ್ತಾಗಿದೆ.<br /> <br /> ಕಮ್ಯುನಿಸ್ಟ್ ಪಕ್ಷದಲ್ಲಿ ಈ ಮೂವರೂ ವಾಮಪಂಥಕ್ಕೆ ಸೇರಿದವರು. ಕಮ್ಯುನಿಸ್ಟ್ ಚೀಣಾವನ್ನು ಖಂಡಿಸಬಾರದೆಂಬುದು ಅವರ ಅಭಿಪ್ರಾಯ. ಈ ಮೂವರೂ ಯಾವ ಕಮ್ಯುನಿಸ್ಟ್ ರಾಷ್ಟ್ರವಾಗಲೀ ಆಕ್ರಮಣ ನಡೆಸುವುದಿಲ್ಲವೆಂಬ ಮಾರ್ಕ್ಸ್ವಾದವನ್ನು ಎತ್ತಿ ಹಿಡಿಯುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>