<p><strong>ಬೆಂಗಳೂರು:</strong> ‘ಭಾರತ ಹಾಗೂ ಜಪಾನ್ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಬೇಕು’ ಎಂದು ಲೋಟಸ್ ಸಂಸ್ಥೆಯ ಮುಖ್ಯಸ್ಥೆ ಶ್ಯಾಮಲಾ ಗಣೇಶ್ ತಿಳಿಸಿದರು.<br /> <br /> ಜಪಾನ್ ಸರ್ಕಾರದ ವಿದೇಶಾಂಗ ಸಚಿವಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಜಪಾನಿನ ಭಾಷೆಯನ್ನು ಕಲಿಯಲು ಬಹಳ ಮಂದಿ ಉತ್ಸುಕರಾಗಿದ್ದಾರೆ. ಹಾಗಾಗಿ 1984ರಲ್ಲಿಯೇ ಪತಿ ಗಣೇಶ್ ಅವರ ಸಹಕಾರದೊಂದಿಗೆ ನಗರದಲ್ಲಿ ಜಪಾನ್ ಭಾಷಾ ಶಾಲೆಯನ್ನು ತೆರೆಯಲಾಯಿತು. ಭಾಷೆಯ ಮೂಲಕ ಸಂಸ್ಕೃತಿಯ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ’ ಎಂದರು.<br /> <br /> ‘ಶಾಸ್ತ್ರೀಯ ಸಂಗೀತದ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಪತಿಯು ಜಪಾನಿನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಆ ನೆಲದ ಸಂಸ್ಕೃತಿ, ಸಂಗೀತ, ಭಾಷೆ ಎಲ್ಲವನ್ನು ತಿಳಿದು-ಕೊಳ್ಳಲು ಸಾಧ್ಯವಾಯಿತು. ಪತಿಯ ಮರಣಾನಂತರವೂ ಎರಡು ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.<br /> <br /> ಜಪಾನಿನ ಭಾರತದ ರಾಯಭಾರ ಕಚೇರಿಯ ಮುಖ್ಯಸ್ಥ ನೊಬೊಕಿ ಯಾಮಾಮೊಟೊ, ‘ಭಾರತ ಹಾಗೂ ಜಪಾನಿನ ಸಂಸ್ಕೃತಿಯ ನಡುವೆ ಬಾಂಧವ್ಯ ಬೆಸೆಯಲು ಶ್ಯಾಮಲಾ ಅವರು ಹೊಸ ಮಾರ್ಗವನ್ನು ಅನುಸರಿಸಿ ವಿಶೇಷರಾಗಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾರತ ಹಾಗೂ ಜಪಾನ್ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಬೇಕು’ ಎಂದು ಲೋಟಸ್ ಸಂಸ್ಥೆಯ ಮುಖ್ಯಸ್ಥೆ ಶ್ಯಾಮಲಾ ಗಣೇಶ್ ತಿಳಿಸಿದರು.<br /> <br /> ಜಪಾನ್ ಸರ್ಕಾರದ ವಿದೇಶಾಂಗ ಸಚಿವಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಜಪಾನಿನ ಭಾಷೆಯನ್ನು ಕಲಿಯಲು ಬಹಳ ಮಂದಿ ಉತ್ಸುಕರಾಗಿದ್ದಾರೆ. ಹಾಗಾಗಿ 1984ರಲ್ಲಿಯೇ ಪತಿ ಗಣೇಶ್ ಅವರ ಸಹಕಾರದೊಂದಿಗೆ ನಗರದಲ್ಲಿ ಜಪಾನ್ ಭಾಷಾ ಶಾಲೆಯನ್ನು ತೆರೆಯಲಾಯಿತು. ಭಾಷೆಯ ಮೂಲಕ ಸಂಸ್ಕೃತಿಯ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ’ ಎಂದರು.<br /> <br /> ‘ಶಾಸ್ತ್ರೀಯ ಸಂಗೀತದ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಪತಿಯು ಜಪಾನಿನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಆ ನೆಲದ ಸಂಸ್ಕೃತಿ, ಸಂಗೀತ, ಭಾಷೆ ಎಲ್ಲವನ್ನು ತಿಳಿದು-ಕೊಳ್ಳಲು ಸಾಧ್ಯವಾಯಿತು. ಪತಿಯ ಮರಣಾನಂತರವೂ ಎರಡು ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.<br /> <br /> ಜಪಾನಿನ ಭಾರತದ ರಾಯಭಾರ ಕಚೇರಿಯ ಮುಖ್ಯಸ್ಥ ನೊಬೊಕಿ ಯಾಮಾಮೊಟೊ, ‘ಭಾರತ ಹಾಗೂ ಜಪಾನಿನ ಸಂಸ್ಕೃತಿಯ ನಡುವೆ ಬಾಂಧವ್ಯ ಬೆಸೆಯಲು ಶ್ಯಾಮಲಾ ಅವರು ಹೊಸ ಮಾರ್ಗವನ್ನು ಅನುಸರಿಸಿ ವಿಶೇಷರಾಗಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>