<p><strong>ಕಾಸರಗೋಡು: </strong>ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾಗಿದೆ.<br /> <br /> ಕಾಸರಗೋಡಿನ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರ ಸಮೀಪದ ಮಧುವಾಹಿನಿ ನದಿಯ ಪ್ರವಾಹ ಕ್ಷೇತ್ರದ ಅಂಗಣಕ್ಕೆ ನುಗ್ಗಿದೆ. ಇದರಿಂದ ದೇವರ ಪೂಜಾ ಕಾರ್ಯಗಳಿಗೆ ಅಡ್ಡಿಯಾಯಿತು. ಭಕ್ತರು ದೇವರ ದರ್ಶನ ಪಡೆಯಲು ತೊಂದರೆ ಅನುಭವಿಸಿದರು. ಮಧುವಾಹಿನಿಯ ದಡದಲ್ಲಿರುವ ಗದ್ದೆಗಳಲ್ಲಿಯೂ ನೀರು ನಿಂತಿದೆ. <br /> <br /> ತಳಂಗೆರೆ ಕಡವತ್, ಚೆಟ್ಟುಂಕುಳಿ, ಎರಿಯಾಲ್, ಕುಕ್ಕಾರ್ ಮೊದಲಾದ ಪ್ರದೇಶಗಳಲ್ಲಿ ನೆರೆ ಬಂದಿದೆ. ನೆಲ್ಲಿಕುಂಜೆ ಕಡಪ್ಪುರ, ಕೀಯೂರು, ಕುಂಬಳೆ ಕೊಯಿಪ್ಪಾಡಿ, ಉಪ್ಪಳ ಅದೀಕ, ಬಂಗ್ರಮಂಜೇಶ್ವರ, ಪಳ್ಳಿಕ್ಕೆರೆ, ಅಜಾನೂರು ತೀರ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ಸೃಷ್ಟಿಯಾಗಿದೆ.<br /> <br /> ಮಳೆಯಬ್ಬರಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನ ಆವರಣಗೋಡೆಯ ಮುಖ್ಯದ್ವಾರ ಕುಸಿದು ಬಿದ್ದಿದೆ. <br /> ಎಡನೀರು ಸಮೀಪದ ನೆಲ್ಲಿಕಟ್ಟೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು 16 ಕಂಬಗಳಿಗೆ ಹಾನಿಯಾಗಿದೆ. ಮರದಡಿ ಇದ್ದ ರತೀಶ್ ಅವರ ಆಟೊ ರಿಕ್ಷಾ ನಜ್ಜುಗುಜ್ಜಾಗಿದ್ದು, ಬೇಡಡ್ಕದ ಶ್ರೀಧರ ಗಾಯಗೊಂಡಿದ್ದಾರೆ. ವಿಷಯ ತಿಳಿದು ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ವಿಚ್ಛೇದಿಸಿ ಅಪಾಯ ತಪ್ಪಿಸಿತು. <br /> ಕಾಸರಗೋಡು ರೈಲ್ವೆನಿಲ್ದಾಣಲ್ಲೆ ನೀರು ನುಗ್ಗಿ ಪಾರ್ಸೆಲ್ ಕಚೇರಿಯಲ್ಲಿದ್ದ ಸಾಮಗ್ರಿಗಳು ಒದ್ದೆಯಾದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು: </strong>ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾಗಿದೆ.<br /> <br /> ಕಾಸರಗೋಡಿನ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರ ಸಮೀಪದ ಮಧುವಾಹಿನಿ ನದಿಯ ಪ್ರವಾಹ ಕ್ಷೇತ್ರದ ಅಂಗಣಕ್ಕೆ ನುಗ್ಗಿದೆ. ಇದರಿಂದ ದೇವರ ಪೂಜಾ ಕಾರ್ಯಗಳಿಗೆ ಅಡ್ಡಿಯಾಯಿತು. ಭಕ್ತರು ದೇವರ ದರ್ಶನ ಪಡೆಯಲು ತೊಂದರೆ ಅನುಭವಿಸಿದರು. ಮಧುವಾಹಿನಿಯ ದಡದಲ್ಲಿರುವ ಗದ್ದೆಗಳಲ್ಲಿಯೂ ನೀರು ನಿಂತಿದೆ. <br /> <br /> ತಳಂಗೆರೆ ಕಡವತ್, ಚೆಟ್ಟುಂಕುಳಿ, ಎರಿಯಾಲ್, ಕುಕ್ಕಾರ್ ಮೊದಲಾದ ಪ್ರದೇಶಗಳಲ್ಲಿ ನೆರೆ ಬಂದಿದೆ. ನೆಲ್ಲಿಕುಂಜೆ ಕಡಪ್ಪುರ, ಕೀಯೂರು, ಕುಂಬಳೆ ಕೊಯಿಪ್ಪಾಡಿ, ಉಪ್ಪಳ ಅದೀಕ, ಬಂಗ್ರಮಂಜೇಶ್ವರ, ಪಳ್ಳಿಕ್ಕೆರೆ, ಅಜಾನೂರು ತೀರ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ಸೃಷ್ಟಿಯಾಗಿದೆ.<br /> <br /> ಮಳೆಯಬ್ಬರಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನ ಆವರಣಗೋಡೆಯ ಮುಖ್ಯದ್ವಾರ ಕುಸಿದು ಬಿದ್ದಿದೆ. <br /> ಎಡನೀರು ಸಮೀಪದ ನೆಲ್ಲಿಕಟ್ಟೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು 16 ಕಂಬಗಳಿಗೆ ಹಾನಿಯಾಗಿದೆ. ಮರದಡಿ ಇದ್ದ ರತೀಶ್ ಅವರ ಆಟೊ ರಿಕ್ಷಾ ನಜ್ಜುಗುಜ್ಜಾಗಿದ್ದು, ಬೇಡಡ್ಕದ ಶ್ರೀಧರ ಗಾಯಗೊಂಡಿದ್ದಾರೆ. ವಿಷಯ ತಿಳಿದು ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ವಿಚ್ಛೇದಿಸಿ ಅಪಾಯ ತಪ್ಪಿಸಿತು. <br /> ಕಾಸರಗೋಡು ರೈಲ್ವೆನಿಲ್ದಾಣಲ್ಲೆ ನೀರು ನುಗ್ಗಿ ಪಾರ್ಸೆಲ್ ಕಚೇರಿಯಲ್ಲಿದ್ದ ಸಾಮಗ್ರಿಗಳು ಒದ್ದೆಯಾದವು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>