<p><strong>ನವದೆಹಲಿ (ಪಿಟಿಐ): </strong>ಅಭಿವೃದ್ಧಿ ಉದ್ದೇಶಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಆ ಪ್ರದೇಶದ ಶೇ 80ರಷ್ಟು ಭೂ ಮಾಲೀಕರ ಒಪ್ಪಿಗೆ ಕಡ್ಡಾಯ ಮತ್ತು ತೃಪ್ತಿಕರವಾಗಿ ಪರಿಹಾರ ನೀಡಬೇಕು ಎಂಬ ಮಹತ್ವದ ಅಂಶಗಳಿರುವ ಭೂ ಸ್ವಾಧೀನ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.<br /> <br /> ಈ ಮೊದಲಿನ ಕರಡು ಮಸೂದೆಗೆ ಕೆಲವು ಬದಲಾವಣೆ ಮಾಡಲಾದ `ಭೂ ಸ್ವಾಧೀನ ಮತ್ತು ಪುನರ್ವಸತಿ ಮಸೂದೆ- 2011~ಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಜೈರಾಂ ರಮೇಶ್ ಮಂಡಿಸಿದರು. ಭೂ ಸ್ವಾಧೀನ ಸಂದರ್ಭದಲ್ಲಿ ಭೂ ಮಾಲೀಕರ ಕುಟುಂಬದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ ಹಿನ್ನೆಲೆಯನ್ನು ಪಾರದರ್ಶಕವಾಗಿ ಪರಿಗಣಿಸಬೇಕು ಎಂದು ರಮೇಶ್ ಹೇಳಿದರು.<br /> <br /> ವಿವಿಧ ವಲಯಗಳ ಹೂಡಿಕೆದಾರರೊಂದಿಗೆ ಸಮಾಲೋಚಿಸಿದ ನಂತರ ಈ ಪರಿಷ್ಕೃತ ಮಸೂದೆಯನ್ನು ಸಿದ್ಧ ಪಡಿಸಲಾಗಿದ್ದು, ಬಹುಬೆಳೆ ಬೇಸಾಯದ ನೀರಾವರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದ್ದರೆ ಅದು ಕಟ್ಟಕಡೆಯ ಅನಿವಾರ್ಯವಾಗಬೇಕು ಎಂದು ಮಸೂದೆ ಸ್ಪಷ್ಟವಾಗಿ ಹೇಳಿದೆ.<br /> <br /> ಈ ಮೊದಲು ಸಿದ್ಧ ಪಡಿಸಿದ್ದ ಕರಡಿನಲ್ಲಿ ಬಹುಬೆಳೆ ಬೇಸಾಯದ ನೀರಾವರಿ ಆಶ್ರಿತ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಗಮನಿಸಿರಲಿಲ್ಲ. ಆಹಾರ ಭದ್ರತೆ ಖಾತರಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈ ಅಂಶವನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸಿದೆ. <br /> <br /> ನೀರಾವರಿ ಆಶ್ರಯದ ಬಹುಬೆಳೆ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಾಗ ಅಷ್ಟೇ ಪ್ರಮಾಣದಲ್ಲಿ ಕೃಷಿ ಯೋಗ್ಯವಾಗಿದ್ದರೂ ಪಾಳುಬಿದ್ದ ಜಮೀನನ್ನು ಅಭಿವೃದ್ಧಿ ಪಡಿಸಬೇಕು ಎಂಬ ಪ್ರಸ್ತಾವವು ಈ ಮಸೂದೆಯಲ್ಲಿ ಇದೆ.<br /> <br /> ಯಾವುದೇ ಉ್ದ್ದದಿಮೆಯು ಗ್ರಾಮೀಣ ಪ್ರದೇಶದಲ್ಲಿ ನೂರು ಮತ್ತು ನಗರ ಪ್ರದೇಶದಲ್ಲಿ 50 ಎಕರೆಗಳಿಂತ ಹೆಚ್ಚಿನ ಭೂಮಿ ಸ್ವಾಧೀನ ಪಡಿಸಿಕೊಂಡಾಗ ಮಾತ್ರ ಪುನರ್ವಸತಿ ಅಂಶ ಕಡ್ಡಾಯವಾಗುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.<br /> <br /> `ಸಾರ್ವಜನಿಕ ಉದ್ದೇಶ~ ಅಂಶವನ್ನು ಈ ಮಸೂದೆಯಲ್ಲಿ ಸಮಗ್ರವಾಗಿ ವಿವರಿಸಲಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವನ್ನು ರಕ್ಷಣಾ ಉದ್ದೇಶ ಮತ್ತು ಕೆಲವು ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಮಿತಗೊಳಿಸಲಾಗಿದೆ. <br /> <br /> ಸ್ವಾಧೀನ ಪಡಿಸಿಕೊಂಡ ಭೂಮಿಯು ನಿಗದಿತ ಉದ್ದೇಶಕ್ಕೆ 10 ವರ್ಷಗಳಾದರೂ ಬಳಕೆಯಾಗದಿದ್ದರೆ ಅಂತಹ ಪ್ರಕರಣಗಳ ಬಗ್ಗೆ ನಿಗಾ ಇರಿಸಲು ಭೂ ಬ್ಯಾಂಕ್ಗಳನ್ನು ಸ್ಥಾಪಿಸಬೇಕು ಎಂದು ಮಸೂದೆ ಹೇಳಿದೆ.<br /> <br /> ಮೊದಲ ಕರಡಿನಲ್ಲಿ ಸ್ವಾಧೀನಗೊಂಡ ಭೂಮಿಯು ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳಲು ವಿಫಲವಾದರೆ ಆ ಭೂಮಿಯನ್ನು ಮತ್ತೆ ಮೂಲ ಒಡೆಯರಿಗೆ ಹಿಂದಿರುಗಿಸಬೇಕು ಎಂಬ ಅಂಶವಿತ್ತು.ಇದನ್ನು 10 ವರ್ಷದೊಳಗೆ ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಅಂತಹ ಭೂಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿರುವ ಭೂ ಬ್ಯಾಂಕ್ಗೆ ವರ್ಗಾಯಿಸಬೇಕು ಎಂದು ಪರಿಷ್ಕರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಅಭಿವೃದ್ಧಿ ಉದ್ದೇಶಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಆ ಪ್ರದೇಶದ ಶೇ 80ರಷ್ಟು ಭೂ ಮಾಲೀಕರ ಒಪ್ಪಿಗೆ ಕಡ್ಡಾಯ ಮತ್ತು ತೃಪ್ತಿಕರವಾಗಿ ಪರಿಹಾರ ನೀಡಬೇಕು ಎಂಬ ಮಹತ್ವದ ಅಂಶಗಳಿರುವ ಭೂ ಸ್ವಾಧೀನ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.<br /> <br /> ಈ ಮೊದಲಿನ ಕರಡು ಮಸೂದೆಗೆ ಕೆಲವು ಬದಲಾವಣೆ ಮಾಡಲಾದ `ಭೂ ಸ್ವಾಧೀನ ಮತ್ತು ಪುನರ್ವಸತಿ ಮಸೂದೆ- 2011~ಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಜೈರಾಂ ರಮೇಶ್ ಮಂಡಿಸಿದರು. ಭೂ ಸ್ವಾಧೀನ ಸಂದರ್ಭದಲ್ಲಿ ಭೂ ಮಾಲೀಕರ ಕುಟುಂಬದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ ಹಿನ್ನೆಲೆಯನ್ನು ಪಾರದರ್ಶಕವಾಗಿ ಪರಿಗಣಿಸಬೇಕು ಎಂದು ರಮೇಶ್ ಹೇಳಿದರು.<br /> <br /> ವಿವಿಧ ವಲಯಗಳ ಹೂಡಿಕೆದಾರರೊಂದಿಗೆ ಸಮಾಲೋಚಿಸಿದ ನಂತರ ಈ ಪರಿಷ್ಕೃತ ಮಸೂದೆಯನ್ನು ಸಿದ್ಧ ಪಡಿಸಲಾಗಿದ್ದು, ಬಹುಬೆಳೆ ಬೇಸಾಯದ ನೀರಾವರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದ್ದರೆ ಅದು ಕಟ್ಟಕಡೆಯ ಅನಿವಾರ್ಯವಾಗಬೇಕು ಎಂದು ಮಸೂದೆ ಸ್ಪಷ್ಟವಾಗಿ ಹೇಳಿದೆ.<br /> <br /> ಈ ಮೊದಲು ಸಿದ್ಧ ಪಡಿಸಿದ್ದ ಕರಡಿನಲ್ಲಿ ಬಹುಬೆಳೆ ಬೇಸಾಯದ ನೀರಾವರಿ ಆಶ್ರಿತ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಗಮನಿಸಿರಲಿಲ್ಲ. ಆಹಾರ ಭದ್ರತೆ ಖಾತರಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈ ಅಂಶವನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸಿದೆ. <br /> <br /> ನೀರಾವರಿ ಆಶ್ರಯದ ಬಹುಬೆಳೆ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಾಗ ಅಷ್ಟೇ ಪ್ರಮಾಣದಲ್ಲಿ ಕೃಷಿ ಯೋಗ್ಯವಾಗಿದ್ದರೂ ಪಾಳುಬಿದ್ದ ಜಮೀನನ್ನು ಅಭಿವೃದ್ಧಿ ಪಡಿಸಬೇಕು ಎಂಬ ಪ್ರಸ್ತಾವವು ಈ ಮಸೂದೆಯಲ್ಲಿ ಇದೆ.<br /> <br /> ಯಾವುದೇ ಉ್ದ್ದದಿಮೆಯು ಗ್ರಾಮೀಣ ಪ್ರದೇಶದಲ್ಲಿ ನೂರು ಮತ್ತು ನಗರ ಪ್ರದೇಶದಲ್ಲಿ 50 ಎಕರೆಗಳಿಂತ ಹೆಚ್ಚಿನ ಭೂಮಿ ಸ್ವಾಧೀನ ಪಡಿಸಿಕೊಂಡಾಗ ಮಾತ್ರ ಪುನರ್ವಸತಿ ಅಂಶ ಕಡ್ಡಾಯವಾಗುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.<br /> <br /> `ಸಾರ್ವಜನಿಕ ಉದ್ದೇಶ~ ಅಂಶವನ್ನು ಈ ಮಸೂದೆಯಲ್ಲಿ ಸಮಗ್ರವಾಗಿ ವಿವರಿಸಲಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವನ್ನು ರಕ್ಷಣಾ ಉದ್ದೇಶ ಮತ್ತು ಕೆಲವು ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಮಿತಗೊಳಿಸಲಾಗಿದೆ. <br /> <br /> ಸ್ವಾಧೀನ ಪಡಿಸಿಕೊಂಡ ಭೂಮಿಯು ನಿಗದಿತ ಉದ್ದೇಶಕ್ಕೆ 10 ವರ್ಷಗಳಾದರೂ ಬಳಕೆಯಾಗದಿದ್ದರೆ ಅಂತಹ ಪ್ರಕರಣಗಳ ಬಗ್ಗೆ ನಿಗಾ ಇರಿಸಲು ಭೂ ಬ್ಯಾಂಕ್ಗಳನ್ನು ಸ್ಥಾಪಿಸಬೇಕು ಎಂದು ಮಸೂದೆ ಹೇಳಿದೆ.<br /> <br /> ಮೊದಲ ಕರಡಿನಲ್ಲಿ ಸ್ವಾಧೀನಗೊಂಡ ಭೂಮಿಯು ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳಲು ವಿಫಲವಾದರೆ ಆ ಭೂಮಿಯನ್ನು ಮತ್ತೆ ಮೂಲ ಒಡೆಯರಿಗೆ ಹಿಂದಿರುಗಿಸಬೇಕು ಎಂಬ ಅಂಶವಿತ್ತು.ಇದನ್ನು 10 ವರ್ಷದೊಳಗೆ ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಅಂತಹ ಭೂಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿರುವ ಭೂ ಬ್ಯಾಂಕ್ಗೆ ವರ್ಗಾಯಿಸಬೇಕು ಎಂದು ಪರಿಷ್ಕರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>