<p><strong>‘ಕೋಲ್ಕತ್ತ (ಪಿಟಿಐ): </strong>ವಿಶ್ವಸಂಸ್ಥೆಯು 2005ರಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತವು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಆಶಯವನ್ನು ಅನುಮೋದಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸುದೀರ್ಘವಾದ ಕಾನೂನು ಹೋರಾಟದ ಅಗತ್ಯವಿದೆ’ಎಂದು ಅವರು ಸೋಮವಾರ ಇಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.<br /> </p>.<p>‘ಲೋಕಪಾಲ ಮಸೂದೆಯನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲೇ ಸಂಸತ್ನಲ್ಲಿ ಮಂಡಿಸಲು ಯುಪಿಎ ಸಿದ್ಧವಿದೆ’ ಎಂದ ಅವರು, ‘ಕರಡು ಸಮಿತಿಯು ಆದಷ್ಟು ಶೀಘ್ರದಲ್ಲೇ ತನ್ನ ಕಾರ್ಯವನ್ನು ಪೂರೈಸುತ್ತದೆ’ ಎಂಬ ಆಶಯವನ್ನು ಜನ ಲೋಕಪಾಲ ಜಂಟಿ ಕರಡು ಸಮಿತಿಯ ಅಧ್ಯಕ್ಷರೂ ಆದ ಅವರು ವ್ಯಕ್ತಪಡಿಸಿದರು.<br /> </p>.<p>‘ಲೋಕಪಾಲ ಮಸೂದೆ ಕುರಿತಂತೆ ಬಿಜೆಪಿ ಈಗ ಆಕ್ಷೇಪಿಸುತ್ತಿರುವುದು ಆ ಪಕ್ಷದ ಸ್ವಭಾವಕ್ಕೆ ತಕ್ಕಂತೆಯೇ ಇದೆ. ಬಿಜೆಪಿ ಅನುಸರಿಸಿಕೊಂಡು ಬಂದಿರುವ ಧೋರಣೆಯೇ ಅಂತಹದ್ದು’ ಎಂದು ಟೀಕಿಸಿದ ಅವರು, ಆದರೂ ಈ ಮಸೂದೆ ಅಂಗೀಕಾರವಾಗಲು ಅಗತ್ಯ ಸಹಕಾರವನ್ನು ನೀಡುವುದಾಗಿ ಹೇಳಿರುವ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರ ಹೇಳಿಕೆಯನ್ನು ಸ್ವಾಗತಿಸಿದರು.<br /> </p>.<p>‘ಚಿತ್ರೀಕರಣ: ನಿರ್ಧಾರ ಸಮಿತಿಗೆ ಸೇರಿದ್ದು’ <br /> </p>.<p><strong>ನವದೆಹಲಿ ವರದಿ:</strong> ಜನ ಲೋಕಪಾಲ ಜಂಟಿ ಕರಡು ಸಮಿತಿ ಕಾರ್ಯ ಕಲಾಪಗಳ ವಿಡಿಯೊ ಚಿತ್ರೀಕರಣ ಮಾಡುವ ಕುರಿತು ಆ ಸಮಿತಿಯೇ ನಿರ್ಧರಿಸಲಿದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.<br /> </p>.<p>ಕರಡು ಸಮಿತಿ ನಡೆಸುವ ಪ್ರತಿಯೊಂದು ಕಾರ್ಯದಲ್ಲೂ ಪರಾದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ವಿಡಿಯೊ ಚಿತ್ರೀಕರಣ ಮಾಡಬೇಕು ಎಂಬ ಅಣ್ಣಾ ಹಜಾರೆ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಈ ಬಗ್ಗೆ ವೈಯಕ್ತಿಕವಾಗಿ ನಾನು ಏನೂ ಹೇಳುವುದಿಲ್ಲ. ಈ ಕುರಿತು ಸಮಿತಿಯೇ ನಿರ್ಧರಿಸಲಿದೆ. ಲೋಕಪಾಲ್ ಮಸೂದೆ ಮಂಡನೆಯು ಅತ್ಯಂತ ಅದ್ಯತೆಯ ವಿಚಾರವಾಗಿದ್ದು, ಇದರ ಕರಡು ಆದಷ್ಟು ಶೀಘ್ರದಲ್ಲೇ ಸಿದ್ಧವಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಕೋಲ್ಕತ್ತ (ಪಿಟಿಐ): </strong>ವಿಶ್ವಸಂಸ್ಥೆಯು 2005ರಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತವು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಆಶಯವನ್ನು ಅನುಮೋದಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸುದೀರ್ಘವಾದ ಕಾನೂನು ಹೋರಾಟದ ಅಗತ್ಯವಿದೆ’ಎಂದು ಅವರು ಸೋಮವಾರ ಇಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.<br /> </p>.<p>‘ಲೋಕಪಾಲ ಮಸೂದೆಯನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲೇ ಸಂಸತ್ನಲ್ಲಿ ಮಂಡಿಸಲು ಯುಪಿಎ ಸಿದ್ಧವಿದೆ’ ಎಂದ ಅವರು, ‘ಕರಡು ಸಮಿತಿಯು ಆದಷ್ಟು ಶೀಘ್ರದಲ್ಲೇ ತನ್ನ ಕಾರ್ಯವನ್ನು ಪೂರೈಸುತ್ತದೆ’ ಎಂಬ ಆಶಯವನ್ನು ಜನ ಲೋಕಪಾಲ ಜಂಟಿ ಕರಡು ಸಮಿತಿಯ ಅಧ್ಯಕ್ಷರೂ ಆದ ಅವರು ವ್ಯಕ್ತಪಡಿಸಿದರು.<br /> </p>.<p>‘ಲೋಕಪಾಲ ಮಸೂದೆ ಕುರಿತಂತೆ ಬಿಜೆಪಿ ಈಗ ಆಕ್ಷೇಪಿಸುತ್ತಿರುವುದು ಆ ಪಕ್ಷದ ಸ್ವಭಾವಕ್ಕೆ ತಕ್ಕಂತೆಯೇ ಇದೆ. ಬಿಜೆಪಿ ಅನುಸರಿಸಿಕೊಂಡು ಬಂದಿರುವ ಧೋರಣೆಯೇ ಅಂತಹದ್ದು’ ಎಂದು ಟೀಕಿಸಿದ ಅವರು, ಆದರೂ ಈ ಮಸೂದೆ ಅಂಗೀಕಾರವಾಗಲು ಅಗತ್ಯ ಸಹಕಾರವನ್ನು ನೀಡುವುದಾಗಿ ಹೇಳಿರುವ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರ ಹೇಳಿಕೆಯನ್ನು ಸ್ವಾಗತಿಸಿದರು.<br /> </p>.<p>‘ಚಿತ್ರೀಕರಣ: ನಿರ್ಧಾರ ಸಮಿತಿಗೆ ಸೇರಿದ್ದು’ <br /> </p>.<p><strong>ನವದೆಹಲಿ ವರದಿ:</strong> ಜನ ಲೋಕಪಾಲ ಜಂಟಿ ಕರಡು ಸಮಿತಿ ಕಾರ್ಯ ಕಲಾಪಗಳ ವಿಡಿಯೊ ಚಿತ್ರೀಕರಣ ಮಾಡುವ ಕುರಿತು ಆ ಸಮಿತಿಯೇ ನಿರ್ಧರಿಸಲಿದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.<br /> </p>.<p>ಕರಡು ಸಮಿತಿ ನಡೆಸುವ ಪ್ರತಿಯೊಂದು ಕಾರ್ಯದಲ್ಲೂ ಪರಾದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ವಿಡಿಯೊ ಚಿತ್ರೀಕರಣ ಮಾಡಬೇಕು ಎಂಬ ಅಣ್ಣಾ ಹಜಾರೆ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಈ ಬಗ್ಗೆ ವೈಯಕ್ತಿಕವಾಗಿ ನಾನು ಏನೂ ಹೇಳುವುದಿಲ್ಲ. ಈ ಕುರಿತು ಸಮಿತಿಯೇ ನಿರ್ಧರಿಸಲಿದೆ. ಲೋಕಪಾಲ್ ಮಸೂದೆ ಮಂಡನೆಯು ಅತ್ಯಂತ ಅದ್ಯತೆಯ ವಿಚಾರವಾಗಿದ್ದು, ಇದರ ಕರಡು ಆದಷ್ಟು ಶೀಘ್ರದಲ್ಲೇ ಸಿದ್ಧವಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>