<p>ಬೆಂಗಳೂರು: ಯುವಕರು ದೇಶದ ನಿರ್ಮಾಣದಲ್ಲಿ ಹಿಂದೆ ಉಳಿದಿದ್ದಾರೆ. ದೇಶದ ಏಳಿಗೆಯ ಬಗೆಗೆ ಅವರು ಏನೂ ಯೋಚಿಸುತ್ತಿಲ್ಲ ಎಂದು ಗೊಣಗುವವರಿಗೆ `ಹೆಮ್ಮೆಯ ಭಾರತೀಯರು~ ಸಂಘಟನೆಯ ಯುವಕರು ತಕ್ಕ ಉತ್ತರ ನೀಡಿದ್ದಾರೆ.<br /> <br /> ಹೈದರಾಬಾದಿನ ಯುವಜನರ ತಂಡವು ಕನ್ಯಾಕುಮಾರಿಯಿಂದ ನವದೆಹಲಿವರೆಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಪಾದಯಾತ್ರೆ ಆರಂಭಿಸಿದೆ.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸದಸ್ಯ ವಿವೇಕ ರೆಡ್ಡಿ ಮಾತನಾಡಿ, `ಪ್ರಾಮಾಣಿಕ ಹೆಜ್ಜೆಗಳು ಭಾರತದಾದ್ಯಂತ ನಡಿಗೆ~ ಎಂಬ ಧ್ಯೇಯ ವಾಕ್ಯದೊಂದಿಗೆ ಭ್ರಷ್ಟಾಚಾರದ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪಾದಯಾತ್ರೆಯನ್ನು ಡಿಸೆಂಬರ್ 18 ರಿಂದ ಕನ್ಯಾಕುಮಾರಿಯಿಂದ ಆರಂಭಿಸಿದ್ದೇವೆ~ ಎಂದರು.<br /> <br /> `ಪಾದಯಾತ್ರೆ ಸುಮಾರು 5000 ಕಿ.ಮೀ.ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸುವುದಾಗಿದೆ. ಎಪ್ರಿಲ್ 7 ರೊಳಗೆ ನವದೆಹಲಿಯನ್ನು ತಲುಪುವ ನಿರೀಕ್ಷೆ ಇದೆ~ ಎಂದರು.<br /> <br /> `ಯುವ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮವಾದುದನ್ನು ಒಪ್ಪಿಕೊಳ್ಳುವುದರ ಮೂಲಕ, ನೀತಿಸಂಹಿತೆಯನ್ನು ಪ್ರೋತ್ಸಾಹಿಸುವುದರ ಮೂಲಕ ಪ್ರಾಮಾಣಿಕ ರಾಜ್ಯ ಕಟ್ಟಲು ಸಾಧ್ಯ~ ಎಂದು ಹೇಳಿದರು.<br /> <br /> `ಬೆಂಗಳೂರಿನಲ್ಲಿ ಸಾರ್ವಜನಿಕ ಸಮಾರಂಭವನ್ನು ಜನವರಿ 8 ರಂದು ಕಬ್ಬನ್ ಉದ್ಯಾನದಲ್ಲಿ ಬೆಳಿಗ್ಗೆ 8 ಕ್ಕೆ ಏರ್ಪಡಿಸಲಾಗಿದೆ. ನಂತರ ಪಾದಯಾತ್ರೆಯು ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ ಮೂಲಕ ತೆರಳಲಿದೆ~ ಎಂದು ಹೇಳಿದರು. <br /> <br /> `ಯುವಕರು ಅದರಲ್ಲೂ ವಿದ್ಯಾರ್ಥಿಗಳು ಸಂಘಟಿತರಾಗಿ ಯಾವುದೇ ರಾಜಕೀಯ ಪ್ರೇರಿತವಿಲ್ಲದೆ, ಯಾವುದೇ ಉದ್ದೇಶವಿಲ್ಲದೇ ನಿಸ್ವಾರ್ಥದಿಂದ ಜನರಲ್ಲಿ ಭ್ರಷ್ಟಾಚಾರದ ಬಗೆಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಯುವಕರು ದೇಶದ ನಿರ್ಮಾಣದಲ್ಲಿ ಹಿಂದೆ ಉಳಿದಿದ್ದಾರೆ. ದೇಶದ ಏಳಿಗೆಯ ಬಗೆಗೆ ಅವರು ಏನೂ ಯೋಚಿಸುತ್ತಿಲ್ಲ ಎಂದು ಗೊಣಗುವವರಿಗೆ `ಹೆಮ್ಮೆಯ ಭಾರತೀಯರು~ ಸಂಘಟನೆಯ ಯುವಕರು ತಕ್ಕ ಉತ್ತರ ನೀಡಿದ್ದಾರೆ.<br /> <br /> ಹೈದರಾಬಾದಿನ ಯುವಜನರ ತಂಡವು ಕನ್ಯಾಕುಮಾರಿಯಿಂದ ನವದೆಹಲಿವರೆಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಪಾದಯಾತ್ರೆ ಆರಂಭಿಸಿದೆ.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸದಸ್ಯ ವಿವೇಕ ರೆಡ್ಡಿ ಮಾತನಾಡಿ, `ಪ್ರಾಮಾಣಿಕ ಹೆಜ್ಜೆಗಳು ಭಾರತದಾದ್ಯಂತ ನಡಿಗೆ~ ಎಂಬ ಧ್ಯೇಯ ವಾಕ್ಯದೊಂದಿಗೆ ಭ್ರಷ್ಟಾಚಾರದ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪಾದಯಾತ್ರೆಯನ್ನು ಡಿಸೆಂಬರ್ 18 ರಿಂದ ಕನ್ಯಾಕುಮಾರಿಯಿಂದ ಆರಂಭಿಸಿದ್ದೇವೆ~ ಎಂದರು.<br /> <br /> `ಪಾದಯಾತ್ರೆ ಸುಮಾರು 5000 ಕಿ.ಮೀ.ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸುವುದಾಗಿದೆ. ಎಪ್ರಿಲ್ 7 ರೊಳಗೆ ನವದೆಹಲಿಯನ್ನು ತಲುಪುವ ನಿರೀಕ್ಷೆ ಇದೆ~ ಎಂದರು.<br /> <br /> `ಯುವ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮವಾದುದನ್ನು ಒಪ್ಪಿಕೊಳ್ಳುವುದರ ಮೂಲಕ, ನೀತಿಸಂಹಿತೆಯನ್ನು ಪ್ರೋತ್ಸಾಹಿಸುವುದರ ಮೂಲಕ ಪ್ರಾಮಾಣಿಕ ರಾಜ್ಯ ಕಟ್ಟಲು ಸಾಧ್ಯ~ ಎಂದು ಹೇಳಿದರು.<br /> <br /> `ಬೆಂಗಳೂರಿನಲ್ಲಿ ಸಾರ್ವಜನಿಕ ಸಮಾರಂಭವನ್ನು ಜನವರಿ 8 ರಂದು ಕಬ್ಬನ್ ಉದ್ಯಾನದಲ್ಲಿ ಬೆಳಿಗ್ಗೆ 8 ಕ್ಕೆ ಏರ್ಪಡಿಸಲಾಗಿದೆ. ನಂತರ ಪಾದಯಾತ್ರೆಯು ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ ಮೂಲಕ ತೆರಳಲಿದೆ~ ಎಂದು ಹೇಳಿದರು. <br /> <br /> `ಯುವಕರು ಅದರಲ್ಲೂ ವಿದ್ಯಾರ್ಥಿಗಳು ಸಂಘಟಿತರಾಗಿ ಯಾವುದೇ ರಾಜಕೀಯ ಪ್ರೇರಿತವಿಲ್ಲದೆ, ಯಾವುದೇ ಉದ್ದೇಶವಿಲ್ಲದೇ ನಿಸ್ವಾರ್ಥದಿಂದ ಜನರಲ್ಲಿ ಭ್ರಷ್ಟಾಚಾರದ ಬಗೆಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>