<p><strong>ಬೆಂಗಳೂರು:</strong> `ಸರ್ಕಾರದ ಮಟ್ಟದಲ್ಲಿ ನಿಯಮಾವಳಿಗಳನ್ನು ರೂಪಿಸುವುದರಿಂದ ಹಿಡಿದು ಸಾಮಾನ್ಯ ಜನರ ಬದುಕಿನವರೆಗೂ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದನ್ನು ತಡೆಗಟ್ಟಲು ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಬದಲಿಗೆ ಜನರಲ್ಲಿ ಅರಿವು ಮೂಡಬೇಕು' ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅಭಿಪ್ರಾಯಪಟ್ಟರು.<br /> <br /> ಪಬ್ಲಿಕ್ ಅಫೇರ್ಸ್ ಸೆಂಟರ್ ಸಂಸ್ಥೆಯು ಶನಿವಾರ ಟೆರಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಯಾಮುಯೆಲ್ ಪೌಲ್ ಅವರ ಸಂಪಾದಿತ `ಫೈಟಿಂಗ್ ಕರಪ್ಷನ್-ದಿ ವೇ ಫಾರ್ವಡ್' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಭ್ರಷ್ಟಾಚಾರದ ವ್ಯಾಪ್ತಿಯನ್ನು ಅರಿಯಲು ಈ ಪುಸ್ತಕವು ಒಂದು ಬಗೆಯಲ್ಲಿ ವಿಶ್ವಕೋಶದಂತೆ ಸಹಕರಿಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರವನ್ನು ಈ ಪುಸ್ತಕ ಎಳೆ ಎಳೆಯಾಗಿ ತೆರೆದಿಡುತ್ತದೆ' ಎಂದು ಶ್ಲಾಘಿಸಿದರು.<br /> <br /> `ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂ ಮಾಫಿಯಾದಲ್ಲಿ ತೊಡಗಿಕೊಂಡವರು ನೇರವಾಗಿ ಆಡಳಿತದಲ್ಲಿ ಭಾಗವಹಿಸುತ್ತಿರುವುದು ಕೂಡ ಭ್ರಷ್ಟಾಚಾರ ಹೊಸ ವ್ಯಾಪ್ತಿಯನ್ನು ಪಡೆಯುತ್ತಿದೆ. ಈಚೆಗಷ್ಟೆ ಸರ್ಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು, ಆದರೆ ಈ ಅಧಿಕಾರಿಗಳಿಗೆ ವಿಚಾರಣೆಗೆ ಮುನ್ನವೇ ಸ್ವಯಂ ನಿವೃತ್ತಿ ದೊರಕಿತು. ಇದು ಈ ವ್ಯವಸ್ಥೆ' ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ನ್ಯಾಯಾಲಯದ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾಗುವ ಅಗತ್ಯ ಎದ್ದು ಕಾಣುತ್ತಿದ್ದು, ಜನರಲ್ಲಿ ನ್ಯಾಯಾಲಯದ ಬಗ್ಗೆ ನಂಬಿಕೆ ಹೆಚ್ಚುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ' ಎಂದು ಅವರು ಹೇಳಿದರು.<br /> <br /> ಸಂಪಾದಕ ಸ್ಯಾಮುಯೆಲ್ ಪೌಲ್, `ಎರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವು ಈ ಪುಸ್ತಕ ಬರೆಯುವಂತೆ ಪ್ರೇರೇಪಿಸಿತು. ಆದರೆ, ಚಳವಳಿ ಏರಿಳಿತ ಕಂಡಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಬಗೆಗಿನ ಹೋರಾಟ ಬಲಗೊಳ್ಳಬೇಕು' ಎಂದರು.<br /> <br /> ಸಾಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕೇಣಿ ಇತರರು ಉಪಸ್ಥಿತರಿದ್ದರು.<br /> <br /> <strong>`ಸುಪ್ರೀಂ'ಗೆ ಮೇಲ್ಮನವಿ</strong><br /> `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ವಿರುದ್ಧ ದಾಖಲಾದ ಲೋಕಾಯುಕ್ತ ಎಫ್ಐಆರ್ಗಳನ್ನು ಹೈಕೋರ್ಟ್ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ತಿಳಿಸಿದರು.<br /> <br /> ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಂದಿನ ರೂಪುರೇಷೆಗಳ ಬಗ್ಗೆ ಲೋಕಾಯುಕ್ತ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ' ಎಂದರು.<br /> <br /> ತಮ್ಮ ಆಸ್ತಿ ಪಾಸ್ತಿಯ ವಿವರ ನೀಡಿದ ಅವರು, `ಅನಂತಪುರ ಜಿಲ್ಲೆಯಲ್ಲಿ 1 ಎಕರೆ 33 ಗುಂಟೆ ಬಂಜರು ಭೂಮಿಯಿದ್ದು, ಆದರ್ಶನಗರದಲ್ಲಿ 1 ಮನೆ, ಎರಡು ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂಪಾಯಿ ಮೊತ್ತದ ಹಣವಿದೆ. ಈವರೆಗೆ ಸೆಂಕೆಡ್ ಹ್ಯಾಂಡ್ ಕಾರುಗಳನ್ನೆ ಬಳಸಿದ್ದೇನೆ' ಎಂದು ಘೋಷಿಸಿದರು.<br /> <br /> `ಲೋಕಾಯುಕ್ತ ವೆಬ್ಸೈಟ್ನಲ್ಲಿ ಆಸ್ತಿ ಘೋಷಣೆ ಮಾಡುವ ಅಗತ್ಯ ಕಂಡುಬರಲಿಲ್ಲ. ಆತ್ಮಶುದ್ದಿಯಾಗಿರುವುದರಿಂದ ಪದೇ ಪದೇ ಆಸ್ತಿ ಘೋಷಣೆ ಮಾಡುವ ಅಗತ್ಯವಿಲ್ಲ. ಕೇಳಿದರಷ್ಟೇ ಹೇಳುತ್ತೇನೆ' ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಸರ್ಕಾರದ ಮಟ್ಟದಲ್ಲಿ ನಿಯಮಾವಳಿಗಳನ್ನು ರೂಪಿಸುವುದರಿಂದ ಹಿಡಿದು ಸಾಮಾನ್ಯ ಜನರ ಬದುಕಿನವರೆಗೂ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದನ್ನು ತಡೆಗಟ್ಟಲು ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಬದಲಿಗೆ ಜನರಲ್ಲಿ ಅರಿವು ಮೂಡಬೇಕು' ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅಭಿಪ್ರಾಯಪಟ್ಟರು.<br /> <br /> ಪಬ್ಲಿಕ್ ಅಫೇರ್ಸ್ ಸೆಂಟರ್ ಸಂಸ್ಥೆಯು ಶನಿವಾರ ಟೆರಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಯಾಮುಯೆಲ್ ಪೌಲ್ ಅವರ ಸಂಪಾದಿತ `ಫೈಟಿಂಗ್ ಕರಪ್ಷನ್-ದಿ ವೇ ಫಾರ್ವಡ್' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಭ್ರಷ್ಟಾಚಾರದ ವ್ಯಾಪ್ತಿಯನ್ನು ಅರಿಯಲು ಈ ಪುಸ್ತಕವು ಒಂದು ಬಗೆಯಲ್ಲಿ ವಿಶ್ವಕೋಶದಂತೆ ಸಹಕರಿಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರವನ್ನು ಈ ಪುಸ್ತಕ ಎಳೆ ಎಳೆಯಾಗಿ ತೆರೆದಿಡುತ್ತದೆ' ಎಂದು ಶ್ಲಾಘಿಸಿದರು.<br /> <br /> `ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂ ಮಾಫಿಯಾದಲ್ಲಿ ತೊಡಗಿಕೊಂಡವರು ನೇರವಾಗಿ ಆಡಳಿತದಲ್ಲಿ ಭಾಗವಹಿಸುತ್ತಿರುವುದು ಕೂಡ ಭ್ರಷ್ಟಾಚಾರ ಹೊಸ ವ್ಯಾಪ್ತಿಯನ್ನು ಪಡೆಯುತ್ತಿದೆ. ಈಚೆಗಷ್ಟೆ ಸರ್ಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು, ಆದರೆ ಈ ಅಧಿಕಾರಿಗಳಿಗೆ ವಿಚಾರಣೆಗೆ ಮುನ್ನವೇ ಸ್ವಯಂ ನಿವೃತ್ತಿ ದೊರಕಿತು. ಇದು ಈ ವ್ಯವಸ್ಥೆ' ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ನ್ಯಾಯಾಲಯದ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾಗುವ ಅಗತ್ಯ ಎದ್ದು ಕಾಣುತ್ತಿದ್ದು, ಜನರಲ್ಲಿ ನ್ಯಾಯಾಲಯದ ಬಗ್ಗೆ ನಂಬಿಕೆ ಹೆಚ್ಚುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ' ಎಂದು ಅವರು ಹೇಳಿದರು.<br /> <br /> ಸಂಪಾದಕ ಸ್ಯಾಮುಯೆಲ್ ಪೌಲ್, `ಎರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವು ಈ ಪುಸ್ತಕ ಬರೆಯುವಂತೆ ಪ್ರೇರೇಪಿಸಿತು. ಆದರೆ, ಚಳವಳಿ ಏರಿಳಿತ ಕಂಡಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಬಗೆಗಿನ ಹೋರಾಟ ಬಲಗೊಳ್ಳಬೇಕು' ಎಂದರು.<br /> <br /> ಸಾಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕೇಣಿ ಇತರರು ಉಪಸ್ಥಿತರಿದ್ದರು.<br /> <br /> <strong>`ಸುಪ್ರೀಂ'ಗೆ ಮೇಲ್ಮನವಿ</strong><br /> `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ವಿರುದ್ಧ ದಾಖಲಾದ ಲೋಕಾಯುಕ್ತ ಎಫ್ಐಆರ್ಗಳನ್ನು ಹೈಕೋರ್ಟ್ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ತಿಳಿಸಿದರು.<br /> <br /> ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಂದಿನ ರೂಪುರೇಷೆಗಳ ಬಗ್ಗೆ ಲೋಕಾಯುಕ್ತ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ' ಎಂದರು.<br /> <br /> ತಮ್ಮ ಆಸ್ತಿ ಪಾಸ್ತಿಯ ವಿವರ ನೀಡಿದ ಅವರು, `ಅನಂತಪುರ ಜಿಲ್ಲೆಯಲ್ಲಿ 1 ಎಕರೆ 33 ಗುಂಟೆ ಬಂಜರು ಭೂಮಿಯಿದ್ದು, ಆದರ್ಶನಗರದಲ್ಲಿ 1 ಮನೆ, ಎರಡು ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂಪಾಯಿ ಮೊತ್ತದ ಹಣವಿದೆ. ಈವರೆಗೆ ಸೆಂಕೆಡ್ ಹ್ಯಾಂಡ್ ಕಾರುಗಳನ್ನೆ ಬಳಸಿದ್ದೇನೆ' ಎಂದು ಘೋಷಿಸಿದರು.<br /> <br /> `ಲೋಕಾಯುಕ್ತ ವೆಬ್ಸೈಟ್ನಲ್ಲಿ ಆಸ್ತಿ ಘೋಷಣೆ ಮಾಡುವ ಅಗತ್ಯ ಕಂಡುಬರಲಿಲ್ಲ. ಆತ್ಮಶುದ್ದಿಯಾಗಿರುವುದರಿಂದ ಪದೇ ಪದೇ ಆಸ್ತಿ ಘೋಷಣೆ ಮಾಡುವ ಅಗತ್ಯವಿಲ್ಲ. ಕೇಳಿದರಷ್ಟೇ ಹೇಳುತ್ತೇನೆ' ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>