<p>`ಬೊಂಬೆ ಆಡ್ಸೋನು ಮೇಲೆ ಕುಂತವ್ನೆ, ಯಾಕೆ ಇಲ್ಲಿ ನಮಗೆ, ನಿಮಗೆ ಟೆನ್ಷನ್~. `ಡ್ರಾಮಾ~ ಸಿನಿಮಾದ ಶೀರ್ಷಿಕೆ ಗೀತೆಯನ್ನು ಕೇಳುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ, ಈ ಗೀತೆಯ ಭಾವ ಅಂಬರೀಷ್ ಅವರ ವ್ಯಕ್ತಿತ್ವಕ್ಕೂ ಹೊಂದುತ್ತದೆ ಅನ್ನಿಸಿತು. ಅದೇ ಟ್ರ್ಯಾಕ್ಗೆ ಅಂಬರೀಶ್ ವ್ಯಕ್ತಿತ್ವ - ವೃತ್ತಿ ಬದುಕು ಕುರಿತು ಸಾಲು ಹೊಂದಿಸತೊಡಗಿದರು. ಹಾಡು ಮುಗಿದಾಗ ಏನೋ ಒಂಥರಾ... <br /> <br /> ಭಟ್ಟರ ಹಾಡನ್ನು ಅಂಬರೀಶ್ ಕೇಳಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಮೇ 29ರ `ಅಂಬಿ ಸಂಭ್ರಮ~ ಸಮಾರಂಭದಲ್ಲಿ ಈ ಗೀತೆಗೆ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಅಂದಹಾಗೆ, ಭಟ್ಟರ ಈ ಗೀತೆ ಷಷ್ಟ್ಯಬ್ಧಿ ಕಿಶೋರನಿಗೆ `ಡ್ರಾಮಾ~ ತಂಡದ ಉಡುಗೊರೆ.</p>.<p> ========</p>.<p>ನಮ್ಮ ನಾಡಿನ ಕೀರ್ತಿ ಪುರುಷ<br /> ಬಾಳಬೇಕಯ್ಯ ಕೋಟಿ ವರುಷ<br /> ಮಂಡ್ಯದ ಚಂದಮಾಮ ಅಂಬ್ರೀಶಣ್ಣಯ್ಯ<br /> ಕರುನಾಡ ಮಾಸ್ಟರ್ ಪೀಸು ಬ್ಯಾರೆ ಇಲ್ಲಯ್ಯ</p>.<p>ಇವ್ನ ಒಂಟಿ ಸಲಗ, ಕರ್ಣನಂಥ ಗೆಳೆಯ<br /> ದಾನ ಧರುಮದಲ್ಲೂ ತುಂಬಾ ದೊಡ್ಡ ಹೃದಯ<br /> ಕಾವೇರಿ ದಂಡೆಯಲ್ಲಿ ಮುದ್ದೆ ತಿಂದ ಹೈದ<br /> ಡೆಲ್ಲೆನ ಎಡಗೈಲೀ ಅಲ್ಲಾಡಿಸಿ ಬಂದ<br /> ಪಿಟೀಲು ಚೌಡಯ್ಯನವರ ವಂಶದ ಬಳ್ಳಿಯ `ಹೂ~ವಯ್ಯ<br /> ರೆಬಲ್ಲು ಸ್ಟಾರು ಆದ್ರು ಎಷ್ಟು ಸಿಂಪಲ್ ನೋಡಯ್ಯ<br /> ಅರವತ್ತು ಆದ್ರು ಪುಟ್ಟ ಪಾಪು ಇವನಯ್ಯ<br /> ಇವತ್ತು ಫೈಟಿಂಗ್ನಲ್ಲೂ ನಂಬರ್ ವನ್ ಇವನಯ್ಯ</p>.<p>ಚಿತ್ರ ಬ್ರಹ್ಮಾಂಡದಲ್ಲಿ ತೇಲುತ್ತಿವೆ ತಾರೆಗಳು<br /> ಅಂಬ್ರೀಶಣ್ಣ ನೆಲದ ಮೇಲಿರುವ ನಕ್ಷತ್ರ<br /> ಮಾತು ಡೈರೆಕ್ಟಪ್ಪ ಮನಸ್ಸು ಪರ್ಫೆಕ್ಟಪ್ಪ<br /> ಅದಕ್ಕಾಗಿ ಮಂದಿಗೆ ಇವರು ತುಂಬ ಹತ್ರ<br /> ಇಂಥ ಅಜಾತಶತ್ರು ಇಂಡಿಯಾದಲ್ಲೇ ಇಲ್ಲಯ್ಯ<br /> ಇನ್ನೆಷ್ಟು ಜನ್ಮ ಇದ್ರು ಕರುನಾಡಲ್ಲಿ ಹುಟ್ಟಯ್ಯ<br /> ಬೇರೇನು ಬೇಡ ನಮಗೆ ಇಲ್ಲಿ ಕೇಳಯ್ಯ<br /> ನಿನ್ನಂಥ ಅಣ್ಣ ಇದ್ರೆ ಅಷ್ಟು ಸಾಕಯ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಬೊಂಬೆ ಆಡ್ಸೋನು ಮೇಲೆ ಕುಂತವ್ನೆ, ಯಾಕೆ ಇಲ್ಲಿ ನಮಗೆ, ನಿಮಗೆ ಟೆನ್ಷನ್~. `ಡ್ರಾಮಾ~ ಸಿನಿಮಾದ ಶೀರ್ಷಿಕೆ ಗೀತೆಯನ್ನು ಕೇಳುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ, ಈ ಗೀತೆಯ ಭಾವ ಅಂಬರೀಷ್ ಅವರ ವ್ಯಕ್ತಿತ್ವಕ್ಕೂ ಹೊಂದುತ್ತದೆ ಅನ್ನಿಸಿತು. ಅದೇ ಟ್ರ್ಯಾಕ್ಗೆ ಅಂಬರೀಶ್ ವ್ಯಕ್ತಿತ್ವ - ವೃತ್ತಿ ಬದುಕು ಕುರಿತು ಸಾಲು ಹೊಂದಿಸತೊಡಗಿದರು. ಹಾಡು ಮುಗಿದಾಗ ಏನೋ ಒಂಥರಾ... <br /> <br /> ಭಟ್ಟರ ಹಾಡನ್ನು ಅಂಬರೀಶ್ ಕೇಳಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಮೇ 29ರ `ಅಂಬಿ ಸಂಭ್ರಮ~ ಸಮಾರಂಭದಲ್ಲಿ ಈ ಗೀತೆಗೆ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಅಂದಹಾಗೆ, ಭಟ್ಟರ ಈ ಗೀತೆ ಷಷ್ಟ್ಯಬ್ಧಿ ಕಿಶೋರನಿಗೆ `ಡ್ರಾಮಾ~ ತಂಡದ ಉಡುಗೊರೆ.</p>.<p> ========</p>.<p>ನಮ್ಮ ನಾಡಿನ ಕೀರ್ತಿ ಪುರುಷ<br /> ಬಾಳಬೇಕಯ್ಯ ಕೋಟಿ ವರುಷ<br /> ಮಂಡ್ಯದ ಚಂದಮಾಮ ಅಂಬ್ರೀಶಣ್ಣಯ್ಯ<br /> ಕರುನಾಡ ಮಾಸ್ಟರ್ ಪೀಸು ಬ್ಯಾರೆ ಇಲ್ಲಯ್ಯ</p>.<p>ಇವ್ನ ಒಂಟಿ ಸಲಗ, ಕರ್ಣನಂಥ ಗೆಳೆಯ<br /> ದಾನ ಧರುಮದಲ್ಲೂ ತುಂಬಾ ದೊಡ್ಡ ಹೃದಯ<br /> ಕಾವೇರಿ ದಂಡೆಯಲ್ಲಿ ಮುದ್ದೆ ತಿಂದ ಹೈದ<br /> ಡೆಲ್ಲೆನ ಎಡಗೈಲೀ ಅಲ್ಲಾಡಿಸಿ ಬಂದ<br /> ಪಿಟೀಲು ಚೌಡಯ್ಯನವರ ವಂಶದ ಬಳ್ಳಿಯ `ಹೂ~ವಯ್ಯ<br /> ರೆಬಲ್ಲು ಸ್ಟಾರು ಆದ್ರು ಎಷ್ಟು ಸಿಂಪಲ್ ನೋಡಯ್ಯ<br /> ಅರವತ್ತು ಆದ್ರು ಪುಟ್ಟ ಪಾಪು ಇವನಯ್ಯ<br /> ಇವತ್ತು ಫೈಟಿಂಗ್ನಲ್ಲೂ ನಂಬರ್ ವನ್ ಇವನಯ್ಯ</p>.<p>ಚಿತ್ರ ಬ್ರಹ್ಮಾಂಡದಲ್ಲಿ ತೇಲುತ್ತಿವೆ ತಾರೆಗಳು<br /> ಅಂಬ್ರೀಶಣ್ಣ ನೆಲದ ಮೇಲಿರುವ ನಕ್ಷತ್ರ<br /> ಮಾತು ಡೈರೆಕ್ಟಪ್ಪ ಮನಸ್ಸು ಪರ್ಫೆಕ್ಟಪ್ಪ<br /> ಅದಕ್ಕಾಗಿ ಮಂದಿಗೆ ಇವರು ತುಂಬ ಹತ್ರ<br /> ಇಂಥ ಅಜಾತಶತ್ರು ಇಂಡಿಯಾದಲ್ಲೇ ಇಲ್ಲಯ್ಯ<br /> ಇನ್ನೆಷ್ಟು ಜನ್ಮ ಇದ್ರು ಕರುನಾಡಲ್ಲಿ ಹುಟ್ಟಯ್ಯ<br /> ಬೇರೇನು ಬೇಡ ನಮಗೆ ಇಲ್ಲಿ ಕೇಳಯ್ಯ<br /> ನಿನ್ನಂಥ ಅಣ್ಣ ಇದ್ರೆ ಅಷ್ಟು ಸಾಕಯ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>