<p>ಮಂಡ್ಯ: ಸಾಮೂಹಿಕ ನೃತ್ಯ ಕಾರ್ಯಕ್ರಮದಲ್ಲಿ ಅರಳಿದ ದೇಶಭಕ್ತಿ, `ಜೈಹೋ~, `ಹಮ್ ಹೇ ಹಿಂದೂಸ್ತಾನಿ~, `ವಂದೇ ಮಾತರಂ~ ಗೀತೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು; ವಿಶಾಲ ಕ್ರೀಡಾಂಣದಲ್ಲಿ ಅರಳಿದ ಭಾರತದ ನಕಾಶೆ.<br /> -ಇವು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಚಿತ್ರಣ.<br /> <br /> ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಎನ್ಸಿಸಿ, ಎನ್ಎಸ್ಎಸ್, ಮೀಸಲು ಪೊಲೀಸ್ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರೆ, ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳ ಸಮೂಹ ನೀಡಿದ ನೃತ್ಯ ಕಾರ್ಯಕ್ರಮ ಸಭಿಕರ ಮನಗೆದ್ದಿತು.<br /> <br /> ತ್ರಿವರ್ಣ ಬಿಂಬಿಸುವ ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರಗಳನ್ನು ತೊಟ್ಟ ವಿದ್ಯಾರ್ಥಿನಿಯರು, ವಂದೇ ಮಾತರಂ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುವ ಜತೆಗೆ, ದುಪ್ಪಟಗಳನ್ನೇ ಗಾಳಿಯಲ್ಲಿ ತೇಲಿಸುತ್ತಾ ಧ್ವಜದ ಕಲ್ಪನೆ ಮೂಡಿಸಿದ್ದು ಹಾಗೂ ವಿಶಾಲ ಕ್ರೀಡಾಂಗಣದಲ್ಲಿ ಭಾರತದ ನಕಾಶೆ ಮೂಡಿಸಿದ್ದು ಗಮನ ಸೆಳೆಯಿತು.<br /> <br /> ಅಲ್ಲದೆ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದ ಕರಾಟೆ ಕಲಿಯುತ್ತಿರುವ ಮಕ್ಕಳು ಕರಾಟೆಯ ಆರಂಭಿಕ ಪಟ್ಟುಗಳನ್ನು ಪ್ರದರ್ಶಿಸಿದರು. <br /> <br /> ಕಸರತ್ತಿನ ಭಾಗವಾಗಿ ಸಾಲಾಗಿ ಮಲಗಿದ್ದ ವಿದ್ಯಾರ್ಥಿಗಳ ಹಸ್ತಗಳ ಮೇಲೆ ಬೈಕ್ಹರಿಸಿದ್ದು, ಮಲಗಿದ್ದ ವಿದ್ಯಾರ್ಥಿನಿಯ ಮೇಲೆ ಇಡಲಾದ ಹಲಗೆಯ ಮೇಲೆ ಬೈಕ್ ಏರಿಸಿದ್ದು ಗಮನ ಸೆಳೆಯಿತು. <br /> <br /> ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳು ಈ ಬಾರಿ ಯೋಗ ಪ್ರದರ್ಶಿಸಿ ಗಮನ ಸೆಳೆದರು. <br /> <br /> ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಉಸ್ತುವಾರಿ ಸಚಿವ ಅಶೋಕ್, ಶಾಸಕರಾದ ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಅಶ್ವತ್ಥನಾರಾಯಣ ಅವರು ಗೌರವಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಸಾಮೂಹಿಕ ನೃತ್ಯ ಕಾರ್ಯಕ್ರಮದಲ್ಲಿ ಅರಳಿದ ದೇಶಭಕ್ತಿ, `ಜೈಹೋ~, `ಹಮ್ ಹೇ ಹಿಂದೂಸ್ತಾನಿ~, `ವಂದೇ ಮಾತರಂ~ ಗೀತೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು; ವಿಶಾಲ ಕ್ರೀಡಾಂಣದಲ್ಲಿ ಅರಳಿದ ಭಾರತದ ನಕಾಶೆ.<br /> -ಇವು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಚಿತ್ರಣ.<br /> <br /> ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಎನ್ಸಿಸಿ, ಎನ್ಎಸ್ಎಸ್, ಮೀಸಲು ಪೊಲೀಸ್ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರೆ, ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳ ಸಮೂಹ ನೀಡಿದ ನೃತ್ಯ ಕಾರ್ಯಕ್ರಮ ಸಭಿಕರ ಮನಗೆದ್ದಿತು.<br /> <br /> ತ್ರಿವರ್ಣ ಬಿಂಬಿಸುವ ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರಗಳನ್ನು ತೊಟ್ಟ ವಿದ್ಯಾರ್ಥಿನಿಯರು, ವಂದೇ ಮಾತರಂ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುವ ಜತೆಗೆ, ದುಪ್ಪಟಗಳನ್ನೇ ಗಾಳಿಯಲ್ಲಿ ತೇಲಿಸುತ್ತಾ ಧ್ವಜದ ಕಲ್ಪನೆ ಮೂಡಿಸಿದ್ದು ಹಾಗೂ ವಿಶಾಲ ಕ್ರೀಡಾಂಗಣದಲ್ಲಿ ಭಾರತದ ನಕಾಶೆ ಮೂಡಿಸಿದ್ದು ಗಮನ ಸೆಳೆಯಿತು.<br /> <br /> ಅಲ್ಲದೆ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದ ಕರಾಟೆ ಕಲಿಯುತ್ತಿರುವ ಮಕ್ಕಳು ಕರಾಟೆಯ ಆರಂಭಿಕ ಪಟ್ಟುಗಳನ್ನು ಪ್ರದರ್ಶಿಸಿದರು. <br /> <br /> ಕಸರತ್ತಿನ ಭಾಗವಾಗಿ ಸಾಲಾಗಿ ಮಲಗಿದ್ದ ವಿದ್ಯಾರ್ಥಿಗಳ ಹಸ್ತಗಳ ಮೇಲೆ ಬೈಕ್ಹರಿಸಿದ್ದು, ಮಲಗಿದ್ದ ವಿದ್ಯಾರ್ಥಿನಿಯ ಮೇಲೆ ಇಡಲಾದ ಹಲಗೆಯ ಮೇಲೆ ಬೈಕ್ ಏರಿಸಿದ್ದು ಗಮನ ಸೆಳೆಯಿತು. <br /> <br /> ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳು ಈ ಬಾರಿ ಯೋಗ ಪ್ರದರ್ಶಿಸಿ ಗಮನ ಸೆಳೆದರು. <br /> <br /> ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಉಸ್ತುವಾರಿ ಸಚಿವ ಅಶೋಕ್, ಶಾಸಕರಾದ ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಅಶ್ವತ್ಥನಾರಾಯಣ ಅವರು ಗೌರವಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>