<p><strong>ಹುಣಸಗಿ:</strong> ಅನಾದಿಕಾಲದಿಂದಲೂ ಇದ್ದ ಪೌರಾಣಿಕ ಕಥೆಗಳನ್ನು ಜೀವಂತವಾಗಿ ಇರುವಂತೆ ತೋರಿಸುವ ಕಲೆ ತಲೆ ತಲಾಂತರದಿಂದ ಬುಹುರೂಪಿ, ಬೇಡಜಂಗಮರಿಗೆ ಕರಗತವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ನರಸಿಂಹನಾಯಕ ನುಡಿದರು. <br /> <br /> ಹುಣಸಗಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಲೆಮಾರಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಮಟ್ಟದ ಕಲೆ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ಕಾಲಕ್ಕೆ ತಕ್ಕಂತೆ ನೀವೂ ಬದಲಾಗಿ ನಿಮ್ಮ ನಿತ್ಯ ಕಲೆಯನ್ನು ಜೀವಂತವಾಗಿಸುವುದಕ್ಕಿಂತ ಪೂರ್ವ ನಿಮ್ಮ ಬದುಕನ್ನು ಹಸನಾಗಿಸಿಕೊಳ್ಳಿ ನಂತರ ಕಲೆಯನ್ನು ಪೋಷಿಸಿ ಎಂದು ಸಲಹೆ ನೀಡಿದರು. <br /> <br /> ಇಂದು ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಯಾವುದೇ ಕಾರಣಕ್ಕೂ ಬಿಕ್ಷಾಟಣೆಗೆ ತಳ್ಳಬೇಡಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಮುಂದಿನ ದಿನಮಾನದಲ್ಲಿ ನೀವು ಒಂದೇ ಗ್ರಾಮದಲ್ಲಿ ವಾಸ ಮಾಡಿದರೇ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರತಾಪ ಬಹುರೂಪಿ ಮತ್ತು ವಿ. ಶ್ರೀನಿವಾಸ ಮಾತನಾಡಿದರು. ಅಧ್ಯಕ್ಷತೆಯನ್ನು ಕೃಷಿಕ ಸಮಾಜದ ಅಧ್ಯಕ್ಷ ನಾಗಣ್ಣಸಾಹು ದಂಡಿನ್ ವಹಿಸಿದ್ದರು.<br /> ವೇದಿಕೆ ಮೇಲೆ ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ.ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಯಲ್ಲಪ್ಪ ಕುರಕುಂದಿ, ಚಂದ್ರಶೇಖರ ದಂಡಿನ್,ವಿರೇಶ ಚಿಂಚೋಳಿ, ಅಧ್ಯಕ್ಷೆ ಹನುಮವ್ವ ಬಾಲಗೌಡ್ರ, ಸಿರವಾಟಿ ನರಸಿಂಹಲು, ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು. <br /> ರಾಜಬಾಬು ದೊಡ್ಡಮನಿ ಸ್ವಾಗತಿಸಿದರು. ಭೀಮರಾಯ ವಂದಿಸಿದರು. ಗುರುರಾಠೋಡ ಕಾರ್ಯಕ್ರಮ ನಿರೂಪಿಸಿದರು. <br /> <br /> ಕಾರ್ಯಕ್ರಮಕ್ಕೂ ಮುನ್ನು ಎಪಿಎಂಸಿ ಗೇಟ್ನಿಂದ ಗ್ರಾಮ ಪಂಚಾಯಿತಿವರೆಗೆ ವಿವಿಧ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು. ನೂರಾರು ಕಲಾವಿದರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ಅನಾದಿಕಾಲದಿಂದಲೂ ಇದ್ದ ಪೌರಾಣಿಕ ಕಥೆಗಳನ್ನು ಜೀವಂತವಾಗಿ ಇರುವಂತೆ ತೋರಿಸುವ ಕಲೆ ತಲೆ ತಲಾಂತರದಿಂದ ಬುಹುರೂಪಿ, ಬೇಡಜಂಗಮರಿಗೆ ಕರಗತವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ನರಸಿಂಹನಾಯಕ ನುಡಿದರು. <br /> <br /> ಹುಣಸಗಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಲೆಮಾರಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಮಟ್ಟದ ಕಲೆ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ಕಾಲಕ್ಕೆ ತಕ್ಕಂತೆ ನೀವೂ ಬದಲಾಗಿ ನಿಮ್ಮ ನಿತ್ಯ ಕಲೆಯನ್ನು ಜೀವಂತವಾಗಿಸುವುದಕ್ಕಿಂತ ಪೂರ್ವ ನಿಮ್ಮ ಬದುಕನ್ನು ಹಸನಾಗಿಸಿಕೊಳ್ಳಿ ನಂತರ ಕಲೆಯನ್ನು ಪೋಷಿಸಿ ಎಂದು ಸಲಹೆ ನೀಡಿದರು. <br /> <br /> ಇಂದು ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಯಾವುದೇ ಕಾರಣಕ್ಕೂ ಬಿಕ್ಷಾಟಣೆಗೆ ತಳ್ಳಬೇಡಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಮುಂದಿನ ದಿನಮಾನದಲ್ಲಿ ನೀವು ಒಂದೇ ಗ್ರಾಮದಲ್ಲಿ ವಾಸ ಮಾಡಿದರೇ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರತಾಪ ಬಹುರೂಪಿ ಮತ್ತು ವಿ. ಶ್ರೀನಿವಾಸ ಮಾತನಾಡಿದರು. ಅಧ್ಯಕ್ಷತೆಯನ್ನು ಕೃಷಿಕ ಸಮಾಜದ ಅಧ್ಯಕ್ಷ ನಾಗಣ್ಣಸಾಹು ದಂಡಿನ್ ವಹಿಸಿದ್ದರು.<br /> ವೇದಿಕೆ ಮೇಲೆ ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ.ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಯಲ್ಲಪ್ಪ ಕುರಕುಂದಿ, ಚಂದ್ರಶೇಖರ ದಂಡಿನ್,ವಿರೇಶ ಚಿಂಚೋಳಿ, ಅಧ್ಯಕ್ಷೆ ಹನುಮವ್ವ ಬಾಲಗೌಡ್ರ, ಸಿರವಾಟಿ ನರಸಿಂಹಲು, ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು. <br /> ರಾಜಬಾಬು ದೊಡ್ಡಮನಿ ಸ್ವಾಗತಿಸಿದರು. ಭೀಮರಾಯ ವಂದಿಸಿದರು. ಗುರುರಾಠೋಡ ಕಾರ್ಯಕ್ರಮ ನಿರೂಪಿಸಿದರು. <br /> <br /> ಕಾರ್ಯಕ್ರಮಕ್ಕೂ ಮುನ್ನು ಎಪಿಎಂಸಿ ಗೇಟ್ನಿಂದ ಗ್ರಾಮ ಪಂಚಾಯಿತಿವರೆಗೆ ವಿವಿಧ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು. ನೂರಾರು ಕಲಾವಿದರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>