<p><strong>ಮದ್ದೂರು: </strong>ಪಟ್ಟಣದ ಹೊಳೆಬೀದಿಯಲ್ಲಿರುವ ಶಕ್ತಿದೇವತೆ ರೇಣುಕಾ ಎಲ್ಲಮ್ಮದೇವಿ ದೇಗುಲದಲ್ಲಿ ಏ.24ರ ಮಂಗಳವಾರ ಅಕ್ಷಯ ತೃತೀಯ ವಿಶೇಷ ದಿನದ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. <br /> ರಾಜ್ಯದಲ್ಲಿ ವಿಶೇಷ ಭಕ್ತ ಸಮೂಹ ಒಳಗೊಂಡಿರುವ ರೇಣುಕಾ ಎಲ್ಲಮ್ಮದೇವಿಯ ಈ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. <br /> <br /> ದೇಗುಲದ ಪ್ರಧಾನ ಆರ್ಚಕ ನಿರಂಜನಾಚಾರ್ಯ ಅವರ ನೇತೃತ್ವದಲ್ಲಿ ಏ.24ರ ಬೆಳಿಗ್ಗೆ 8.30ರಿಂದ ದೇವಿಗೆ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 11.30ರೊಳಗೆ ಲೋಕ ಕಲ್ಯಾಣಾರ್ಥವಾಗಿ ರೇಣುಕಾ ದೇವಿಗೆ ಸುವರ್ಣ ಮಾಂಗಲ್ಯ ಹರಕೆ ಅರ್ಪಿಸುವ ಕಾರ್ಯ ನಡೆಯಲಿದೆ. <br /> <br /> ಮಧ್ಯಾಹ್ನದ ವೇಳೆಗೆ ದೇವಿಗೆ ವಿಶೇಷ ಹೂವಿನ ಅಲಂಕಾರ ನೆರವೇರಲಿದ್ದು, ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಷಯ ತೃತೀಯ ವಿಶೇಷ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸುಮಂಗಲಿಯರಿಗೆ ಹೂವು, ಬಳೆ, ಅರಿಶಿಣ-ಕುಂಕುಮ ವಿತರಿಸಲಾಗುತ್ತಿದೆ. ಮಾಂಗಲ್ಯ ಹರಕೆ ಅರ್ಪಿಸುವ ಭಕ್ತಾದಿಗಳು ಹೆಚ್ಚಿನ ವಿವರಗಳಿಗೆ ಟಿ.ಶ್ರೀನಿವಾಸ್, ಧರ್ಮದರ್ಶಿ (ಮೊ.9844259632) ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು: </strong>ಪಟ್ಟಣದ ಹೊಳೆಬೀದಿಯಲ್ಲಿರುವ ಶಕ್ತಿದೇವತೆ ರೇಣುಕಾ ಎಲ್ಲಮ್ಮದೇವಿ ದೇಗುಲದಲ್ಲಿ ಏ.24ರ ಮಂಗಳವಾರ ಅಕ್ಷಯ ತೃತೀಯ ವಿಶೇಷ ದಿನದ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. <br /> ರಾಜ್ಯದಲ್ಲಿ ವಿಶೇಷ ಭಕ್ತ ಸಮೂಹ ಒಳಗೊಂಡಿರುವ ರೇಣುಕಾ ಎಲ್ಲಮ್ಮದೇವಿಯ ಈ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. <br /> <br /> ದೇಗುಲದ ಪ್ರಧಾನ ಆರ್ಚಕ ನಿರಂಜನಾಚಾರ್ಯ ಅವರ ನೇತೃತ್ವದಲ್ಲಿ ಏ.24ರ ಬೆಳಿಗ್ಗೆ 8.30ರಿಂದ ದೇವಿಗೆ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 11.30ರೊಳಗೆ ಲೋಕ ಕಲ್ಯಾಣಾರ್ಥವಾಗಿ ರೇಣುಕಾ ದೇವಿಗೆ ಸುವರ್ಣ ಮಾಂಗಲ್ಯ ಹರಕೆ ಅರ್ಪಿಸುವ ಕಾರ್ಯ ನಡೆಯಲಿದೆ. <br /> <br /> ಮಧ್ಯಾಹ್ನದ ವೇಳೆಗೆ ದೇವಿಗೆ ವಿಶೇಷ ಹೂವಿನ ಅಲಂಕಾರ ನೆರವೇರಲಿದ್ದು, ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಷಯ ತೃತೀಯ ವಿಶೇಷ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸುಮಂಗಲಿಯರಿಗೆ ಹೂವು, ಬಳೆ, ಅರಿಶಿಣ-ಕುಂಕುಮ ವಿತರಿಸಲಾಗುತ್ತಿದೆ. ಮಾಂಗಲ್ಯ ಹರಕೆ ಅರ್ಪಿಸುವ ಭಕ್ತಾದಿಗಳು ಹೆಚ್ಚಿನ ವಿವರಗಳಿಗೆ ಟಿ.ಶ್ರೀನಿವಾಸ್, ಧರ್ಮದರ್ಶಿ (ಮೊ.9844259632) ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>