<p>ಮಧುರೆ (ಪಿಟಿಐ): ಕ್ರಿ.ಶ. 1216ರಷ್ಟು ಹಳೆಯದಾದ ಮಧುರೆಯ ಖ್ಯಾತ ಮೀನಾಕ್ಷಿ ದೇವಾಲಯದ ಪೂರ್ವದ ಬದಿಯ ರಾಜಗೋಪುರಕ್ಕೆ ಮಿಂಚಿನ ಹೊಡೆತದಿಂದ ಧಕ್ಕೆ ಉಂಟಾಗಿದೆ ಎಂದು ದೇವಾಲಯ ಮೂಲಗಳು ಶುಕ್ರವಾರ ಇಲ್ಲಿ ತಿಳಿಸಿವೆ.<br /> <br /> ಗೋಪುರದ ತುತ್ತ ತುದಿಯ ಅಲಂಕಾರಿಕ 'ಯಾಳಿ ಮುಖಂ'ಗೆ (ಒಂದು ಪೌರಾಣಿಕ ಪ್ರಾಣಿಯ ಮುಖ) ಗುರುವಾರ ರಾತ್ರಿ ಮಿಂಚಿನ ಹೊಡೆತದಿಂದ ಹಾನಿಯಾಗಿದೆ ಎಂದು ದೇವಾಲಯದ ಜಂಟಿ ಆಯುಕ್ತ ಜಯರಾಮನ್ ಹೇಳಿದರು.<br /> <br /> ಎಲ್ಲ ನಾಲ್ಕೂ ಗೋಪುರಗಳಿಗೆ ಎರಡು ವರ್ಷಗಳ ಹಿಂದೆ ಮಿಂಚು ತಪ್ಪಿಸುವ ವ್ಯವಸ್ಥೆ ಅಳವಡಿಸಲಾಗಿತ್ತು. ಈ ಉಪಕರಣ ಅಳವಡಿಸಿದ ಬಳಿಕ ನಾಲ್ಕು ಬಾರಿ ಮಿಂಚು ಹೊಡೆದ್ದುದನ್ನು ಅದು ದಾಖಲಿಸಿತ್ತು ಎಂದು ಅವರು ನುಡಿದರು.<br /> <br /> 150 ಅಡಿ ಎತ್ತರದ ಈ ಗೋಪುರದಲ್ಲಿ ಶಿವಪುರದ ಅಪರೂಪದ ಶಿಲೆಗಳನ್ನು ಬಳಸಿ ನಿರ್ಮಿಸಲಾದ ಅಪೂರ್ವ ಶಿಲ್ಪಗಳಿವೆ. ಮಿಂಚಿನ ಹೊಡೆತದಿಂದ ಯಾಳಿಯ ಕೊಂಬಿಗೆ ಧಕ್ಕೆಯಾಗಿದೆ. 'ಇದು ಸರಿಪಡಿಸಲಾಗದಷ್ಟು ದೊಡ್ಡದಾದ ಹಾನಿ' ಎಂದು ಅವರು ಹೇಳಿದರು.<br /> <br /> ಗಾರೆಯಿಂದ ನಿರ್ಮಿಸಲಾಗಿದ್ದ ಶಿಲ್ಪವು ಕೆಳಕ್ಕೆ ಉರುಳಿ ಬಿದ್ದಿದೆ. ಅದನ್ನು ಶೀಘ್ರವೇ ಪುನಃ ಪ್ರತಿಷ್ಠಾಪಿಸಲಾಗುವುದು ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧುರೆ (ಪಿಟಿಐ): ಕ್ರಿ.ಶ. 1216ರಷ್ಟು ಹಳೆಯದಾದ ಮಧುರೆಯ ಖ್ಯಾತ ಮೀನಾಕ್ಷಿ ದೇವಾಲಯದ ಪೂರ್ವದ ಬದಿಯ ರಾಜಗೋಪುರಕ್ಕೆ ಮಿಂಚಿನ ಹೊಡೆತದಿಂದ ಧಕ್ಕೆ ಉಂಟಾಗಿದೆ ಎಂದು ದೇವಾಲಯ ಮೂಲಗಳು ಶುಕ್ರವಾರ ಇಲ್ಲಿ ತಿಳಿಸಿವೆ.<br /> <br /> ಗೋಪುರದ ತುತ್ತ ತುದಿಯ ಅಲಂಕಾರಿಕ 'ಯಾಳಿ ಮುಖಂ'ಗೆ (ಒಂದು ಪೌರಾಣಿಕ ಪ್ರಾಣಿಯ ಮುಖ) ಗುರುವಾರ ರಾತ್ರಿ ಮಿಂಚಿನ ಹೊಡೆತದಿಂದ ಹಾನಿಯಾಗಿದೆ ಎಂದು ದೇವಾಲಯದ ಜಂಟಿ ಆಯುಕ್ತ ಜಯರಾಮನ್ ಹೇಳಿದರು.<br /> <br /> ಎಲ್ಲ ನಾಲ್ಕೂ ಗೋಪುರಗಳಿಗೆ ಎರಡು ವರ್ಷಗಳ ಹಿಂದೆ ಮಿಂಚು ತಪ್ಪಿಸುವ ವ್ಯವಸ್ಥೆ ಅಳವಡಿಸಲಾಗಿತ್ತು. ಈ ಉಪಕರಣ ಅಳವಡಿಸಿದ ಬಳಿಕ ನಾಲ್ಕು ಬಾರಿ ಮಿಂಚು ಹೊಡೆದ್ದುದನ್ನು ಅದು ದಾಖಲಿಸಿತ್ತು ಎಂದು ಅವರು ನುಡಿದರು.<br /> <br /> 150 ಅಡಿ ಎತ್ತರದ ಈ ಗೋಪುರದಲ್ಲಿ ಶಿವಪುರದ ಅಪರೂಪದ ಶಿಲೆಗಳನ್ನು ಬಳಸಿ ನಿರ್ಮಿಸಲಾದ ಅಪೂರ್ವ ಶಿಲ್ಪಗಳಿವೆ. ಮಿಂಚಿನ ಹೊಡೆತದಿಂದ ಯಾಳಿಯ ಕೊಂಬಿಗೆ ಧಕ್ಕೆಯಾಗಿದೆ. 'ಇದು ಸರಿಪಡಿಸಲಾಗದಷ್ಟು ದೊಡ್ಡದಾದ ಹಾನಿ' ಎಂದು ಅವರು ಹೇಳಿದರು.<br /> <br /> ಗಾರೆಯಿಂದ ನಿರ್ಮಿಸಲಾಗಿದ್ದ ಶಿಲ್ಪವು ಕೆಳಕ್ಕೆ ಉರುಳಿ ಬಿದ್ದಿದೆ. ಅದನ್ನು ಶೀಘ್ರವೇ ಪುನಃ ಪ್ರತಿಷ್ಠಾಪಿಸಲಾಗುವುದು ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>