<p>ಮಗ ಮತ್ತು ಅವನ ಗೆಳೆಯನ ಆಸೆಯನ್ನು ಈಡೇರಿಸಲು ಹಣ ಹೂಡಿದ ನಿರ್ಮಾಪಕರು ಜಿ.ರಾಮಕೃಷ್ಣ. ಅವರ ಮಗ ‘ನೆನಪಿನಂಗಳ’ ಚಿತ್ರದ ನಾಯಕ. ಗೆಳೆಯ ಧನುಚಂದ್ರ ಚಿತ್ರದ ನಿರ್ದೇಶಕ.<br /> <br /> ‘ಪ್ರೀತಿಸುವ ನಾಯಕ-ನಾಯಕಿ. ನಾಯಕಿಗೆ ಮನೆಯಲ್ಲಿ ಪ್ರೀತಿ ವಿಷಯ ಹೇಳಲು ಧೈರ್ಯ ಸಾಲದು. ಅವಳು ಹಾಗೆಯೇ ತನ್ನ ಪ್ರೀತಿಯನ್ನು ಕೊಂದುಕೊಂಡರೆ. ಅವಳ ನೆನಪಿನಲ್ಲಿಯೇ ಬದುಕಲು ನಿರ್ಧರಿಸುವ ನಾಯಕನ ಕತೆಯೇ ತಮ್ಮ ‘ನೆನಪಿನಂಗಳ’ ಎನ್ನುತ್ತಾರೆ ನಿರ್ದೇಶಕ. ಇದು ದೊಡ್ಡಬಳ್ಳಾಪುರದಲ್ಲಿ ನಡೆದ ನೈಜ ಘಟನೆ ಎಂಬುದು ಅವರ ಮಾತೇ.<br /> <br /> ದೊಡ್ಡಬಳ್ಳಾಪುರ, ಸಕಲೇಶಪುರ, ಬೆಂಗಳೂರು ಮುಂತಾದ ಕಡೆ ಹಾಡುಗಳು ಮತ್ತು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಎರಡು ಹಾಡು ಮತ್ತು ಕ್ಲೈಮ್ಯಾಕ್ಸ್ ಬಾಕಿ ಇದೆ.<br /> <br /> ದೊಡ್ಡಬಳ್ಳಾಪುರ ನಗರಸಭೆಯ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, ‘ಚಿತ್ರದ ಬಜೆಟ್ ಈಗಾಗಲೇ ಒಂದು ಕೋಟಿ ದಾಟಿದೆ. ಇನ್ನೂ ಹಾಡುಗಳು ಹಾಗೂ ಪೋಸ್ಟ್ ಪ್ರೊಡಕ್ಷನ್ಸ್ ಬಾಕಿ ಇದೆ’ ಎಂದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ನಾಯಕ ಹೇಮಂತ್, ನಾಯಕಿ ಸುಪ್ರಿತಾ, ನಿರ್ಮಾಪಕ ಜಿ.ರಾಮಕೃಷ್ಣ, ಸಂಗೀತ ನಿರ್ದೇಶಕಿ ಸಿ.ಆರ್.ಬಾಬಿ, ಛಾಯಾಗ್ರಾಹಕ ರೇಣುಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಗ ಮತ್ತು ಅವನ ಗೆಳೆಯನ ಆಸೆಯನ್ನು ಈಡೇರಿಸಲು ಹಣ ಹೂಡಿದ ನಿರ್ಮಾಪಕರು ಜಿ.ರಾಮಕೃಷ್ಣ. ಅವರ ಮಗ ‘ನೆನಪಿನಂಗಳ’ ಚಿತ್ರದ ನಾಯಕ. ಗೆಳೆಯ ಧನುಚಂದ್ರ ಚಿತ್ರದ ನಿರ್ದೇಶಕ.<br /> <br /> ‘ಪ್ರೀತಿಸುವ ನಾಯಕ-ನಾಯಕಿ. ನಾಯಕಿಗೆ ಮನೆಯಲ್ಲಿ ಪ್ರೀತಿ ವಿಷಯ ಹೇಳಲು ಧೈರ್ಯ ಸಾಲದು. ಅವಳು ಹಾಗೆಯೇ ತನ್ನ ಪ್ರೀತಿಯನ್ನು ಕೊಂದುಕೊಂಡರೆ. ಅವಳ ನೆನಪಿನಲ್ಲಿಯೇ ಬದುಕಲು ನಿರ್ಧರಿಸುವ ನಾಯಕನ ಕತೆಯೇ ತಮ್ಮ ‘ನೆನಪಿನಂಗಳ’ ಎನ್ನುತ್ತಾರೆ ನಿರ್ದೇಶಕ. ಇದು ದೊಡ್ಡಬಳ್ಳಾಪುರದಲ್ಲಿ ನಡೆದ ನೈಜ ಘಟನೆ ಎಂಬುದು ಅವರ ಮಾತೇ.<br /> <br /> ದೊಡ್ಡಬಳ್ಳಾಪುರ, ಸಕಲೇಶಪುರ, ಬೆಂಗಳೂರು ಮುಂತಾದ ಕಡೆ ಹಾಡುಗಳು ಮತ್ತು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಎರಡು ಹಾಡು ಮತ್ತು ಕ್ಲೈಮ್ಯಾಕ್ಸ್ ಬಾಕಿ ಇದೆ.<br /> <br /> ದೊಡ್ಡಬಳ್ಳಾಪುರ ನಗರಸಭೆಯ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, ‘ಚಿತ್ರದ ಬಜೆಟ್ ಈಗಾಗಲೇ ಒಂದು ಕೋಟಿ ದಾಟಿದೆ. ಇನ್ನೂ ಹಾಡುಗಳು ಹಾಗೂ ಪೋಸ್ಟ್ ಪ್ರೊಡಕ್ಷನ್ಸ್ ಬಾಕಿ ಇದೆ’ ಎಂದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ನಾಯಕ ಹೇಮಂತ್, ನಾಯಕಿ ಸುಪ್ರಿತಾ, ನಿರ್ಮಾಪಕ ಜಿ.ರಾಮಕೃಷ್ಣ, ಸಂಗೀತ ನಿರ್ದೇಶಕಿ ಸಿ.ಆರ್.ಬಾಬಿ, ಛಾಯಾಗ್ರಾಹಕ ರೇಣುಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>